Sri Lanka Cricket; ಸನತ್ ಜಯಸೂರ್ಯ ಪೂರ್ಣಾವಧಿಗೆ ಕೋಚ್
Team Udayavani, Oct 8, 2024, 6:21 AM IST
ಕೊಲಂಬೊ: ಮಾಜಿ ನಾಯಕ ಸನತ್ ಜಯಸೂರ್ಯ ಅವರನ್ನು ಶ್ರೀಲಂಕಾ ಕ್ರಿಕೆಟ್ ತಂಡದ ಪೂರ್ಣಾವಧಿಯ ಪ್ರಧಾನ ಕೋಚ್ ಆಗಿ ನೇಮಿಸಲಾಗಿದೆ. ಈ ತಿಂಗಳ ಆರಂಭದಿಂದ 2026ರ ಟಿ20 ವಿಶ್ವಕಪ್ ತನಕ ಅವರ ಒಡಂಬಡಿಕೆ ಜಾರಿಯಲ್ಲಿರಲಿದೆ.
ಕಳೆದ ಜುಲೈಯಲ್ಲಿ ಸನತ್ ಜಯಸೂರ್ಯ ಅವರನ್ನು ಶ್ರೀಲಂಕಾ ತಂಡದ ಉಸ್ತುವಾರಿ ಕೋಚ್ ಆಗಿ ನೇಮಿಸಲಾಗಿತ್ತು. ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ಪರಿಣಾಮಕಾರಿ ನಿರ್ವಹಣೆ ತೋರಿದ ಕಾರಣ ಅವರನ್ನು ಪೂರ್ಣಾವಧಿಗೆ ಮುಂದುವರಿಸಲು ನಿರ್ಧರಿಸಲಾಯಿತು ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಜಯಸೂರ್ಯ ಉಸ್ತುವಾರಿ ಕೋಚ್ ಆಗಿದ್ದ ವೇಳೆ ಶ್ರೀಲಂಕಾ ತಂಡ 27 ವರ್ಷಗಳ ಬಳಿಕ ಭಾರತದ ವಿರುದ್ಧ ದ್ವಿಪಕ್ಷೀಯ ಏಕದಿನ ಸರಣಿಯನ್ನು ಜಯಿಸಿತ್ತು. ಹಾಗೆಯೇ 10 ವರ್ಷಗಳಲ್ಲಿ ಮೊದಲ ಸಲ ಇಂಗ್ಲೆಂಡ್ಗೆ ಅವರದೇ ಅಂಗಳದಲ್ಲಿ ಟೆಸ್ಟ್ ಸೋಲಿನ ರುಚಿ ತೋರಿಸಿತ್ತು. ಮೊನ್ನೆಯಷ್ಟೇ ನ್ಯೂಜಿಲ್ಯಾಂಡ್ ಎದುರಿನ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್ಸಿÌàಪ್ ಆಗಿ ವಶಪಡಿಸಿಕೊಂಡದ್ದು ಮತ್ತೂಂದು ಅಮೋಘ ಸಾಧನೆ.
ಅ. 13ರಂದು ಡಂಬುಲದಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿ ಮೂಲಕ ಜಯಸೂರ್ಯ ಅವರ ಪೂರ್ಣಾವಧಿಯ ತರಬೇತಿ ಮೊದಲ್ಗೊಳ್ಳಲಿದೆ. ಕೊಲಂಬೊ, ಅ. 7: ಮಾಜಿ ನಾಯಕ ಸನತ್ ಜಯಸೂರ್ಯ ಅವರನ್ನು ಶ್ರೀಲಂಕಾ ಕ್ರಿಕೆಟ್ ತಂಡದ ಪೂರ್ಣಾವಧಿಯ ಪ್ರಧಾನ ಕೋಚ್ ಆಗಿ ನೇಮಿಸಲಾಗಿದೆ. ಈ ತಿಂಗಳ ಆರಂಭದಿಂದ 2026ರ ಟಿ20 ವಿಶ್ವಕಪ್ ತನಕ ಅವರ ಒಡಂಬಡಿಕೆ ಜಾರಿಯಲ್ಲಿರಲಿದೆ.
ಕಳೆದ ಜುಲೈಯಲ್ಲಿ ಸನತ್ ಜಯಸೂರ್ಯ ಅವರನ್ನು ಶ್ರೀಲಂಕಾ ತಂಡದ ಉಸ್ತುವಾರಿ ಕೋಚ್ ಆಗಿ ನೇಮಿಸಲಾಗಿತ್ತು. ಭಾರತ ಮತ್ತು ಇಂಗ್ಲೆಂಡ್ ವಿರುದ್ಧ ಪರಿಣಾಮಕಾರಿ ನಿರ್ವಹಣೆ ತೋರಿದ ಕಾರಣ ಅವರನ್ನು ಪೂರ್ಣಾವಧಿಗೆ ಮುಂದುವರಿಸಲು ನಿರ್ಧರಿಸಲಾಯಿತು ಎಂದು ಶ್ರೀಲಂಕಾ ಕ್ರಿಕೆಟ್ ಮಂಡಳಿ ತಿಳಿಸಿದೆ.
ಜಯಸೂರ್ಯ ಉಸ್ತುವಾರಿ ಕೋಚ್ ಆಗಿದ್ದ ವೇಳೆ ಶ್ರೀಲಂಕಾ ತಂಡ 27 ವರ್ಷಗಳ ಬಳಿಕ ಭಾರತದ ವಿರುದ್ಧ ದ್ವಿಪಕ್ಷೀಯ ಏಕದಿನ ಸರಣಿಯನ್ನು ಜಯಿಸಿತ್ತು. ಹಾಗೆಯೇ 10 ವರ್ಷಗಳಲ್ಲಿ ಮೊದಲ ಸಲ ಇಂಗ್ಲೆಂಡ್ಗೆ ಅವರದೇ ಅಂಗಳದಲ್ಲಿ ಟೆಸ್ಟ್ ಸೋಲಿನ ರುಚಿ ತೋರಿಸಿತ್ತು. ಮೊನ್ನೆಯಷ್ಟೇ ನ್ಯೂಜಿಲ್ಯಾಂಡ್ ಎದುರಿನ ಟೆಸ್ಟ್ ಸರಣಿಯನ್ನು 2-0 ಅಂತರದಿಂದ ಕ್ಲೀನ್ಸಿÌàಪ್ ಆಗಿ ವಶಪಡಿಸಿಕೊಂಡದ್ದು ಮತ್ತೂಂದು ಅಮೋಘ ಸಾಧನೆ.
ಅ. 13ರಂದು ಡಂಬುಲದಲ್ಲಿ ಆರಂಭವಾಗಲಿರುವ ವೆಸ್ಟ್ ಇಂಡೀಸ್ ಎದುರಿನ ಟಿ20 ಸರಣಿ ಮೂಲಕ ಜಯಸೂರ್ಯ ಅವರ ಪೂರ್ಣಾವಧಿಯ ತರಬೇತಿ ಮೊದಲ್ಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Result 2024:ಜಮ್ಮು-ಕಾಶ್ಮೀರದಲ್ಲಿ ಕೈ ಮೈತ್ರಿ ಗದ್ದುಗೆಯತ್ತ,ಹರ್ಯಾಣದಲ್ಲಿ ತೀವ್ರ ಪೈಪೋಟಿ
Ocean Pearl: ಅ.9: ಉಡುಪಿಯ ದಿ ಓಷಿಯನ್ ಪರ್ಲ್ ಟೈಮ್ಸ್ ಸ್ಕ್ವೇರ್ ಹೊಟೇಲ್ ಉದ್ಘಾಟನೆ
Thirthahalli; ಆಯತಪ್ಪಿ ಬಾವಿಗೆ ಬಿದ್ದ ಮಹಿಳೆ… ಅಗ್ನಿಶಾಮಕ ಸಿಬ್ಬಂದಿಗಳಿಂದ ರಕ್ಷಣೆ
Dhruva Sarja: ಮಾರ್ಟಿನ್ ನನ್ನ ಕೆರಿಯರ್ನ ಬೆಸ್ಟ್ ಆ್ಯಕ್ಷನ್
Lokayukta Raids: ಹುಮನಾಬಾದ್ ಆರ್.ಟಿ.ಓ ಕಚೇರಿ ಮೇಲೆ ಲೋಕಾಯುಕ್ತ ದಾಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.