Paralympics; ಅಂಗವೈಕಲ್ಯಕ್ಕೆ ಸವಾಲೊಡ್ಡಿ ಗೆದ್ದ ಶ್ರೀಹರ್ಷ


Team Udayavani, Aug 21, 2024, 6:18 AM IST

sri harsha devareddy

ಬೆಂಗಳೂರು: ಛಲವೊಂದಿದ್ದರೆ ಬದುಕಿನಲ್ಲಿ ಏನನ್ನಾದರೂ ಸಾಧಿಸಬಹುದು ಎನ್ನುವುದಕ್ಕೆ ಹುಬ್ಬಳ್ಳಿಯ ಪ್ಯಾರಾ ಶೂಟರ್‌ ಶ್ರೀಹರ್ಷ ದೇವರೆಡ್ಡಿ ಉತ್ತಮ ಉದಾಹರಣೆ. 11 ವರ್ಷಗಳಿಗೆ ಹಿಂದೆ ಅಪಘಾತವೊಂದರಲ್ಲಿ ಕೈಕಾಲುಗಳು ಸ್ವಾಧೀನ ಕಳೆದುಕೊಂಡು, ಕನಸು ಗಳು ಮಣ್ಣುಪಾಲಾದರೂ ಎದೆ ಗುಂದದೆ, ಮತ್ತೂಂದು ಕನಸನ್ನು ಬೆನ್ನು ಹತ್ತಿದ್ದಾರೆ. ಅವರೀಗ ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ವರೆಗೆ ತಲುಪಿದ್ದಾರೆ. ಪ್ಯಾರಾ ಶೂಟಿಂಗ್‌ನಲ್ಲಿ ಪದಕ ಗೆಲ್ಲಲು ಸಜ್ಜಾಗಿದ್ದಾರೆ.

ರಸ್ತೆ ಅಪಘಾತದಲ್ಲಿ ಬೆನ್ನುಮೂಳೆಗೆ ಗಾಯ

44 ವರ್ಷದ ಶ್ರೀಹರ್ಷ ದೇವರೆಡ್ಡಿಯ ಮೂಲ, ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ರಂಜಿಣಿಗಿ. ಹೆಂಡತಿ, ಮಗ, ಅಪ್ಪ-ಅಮ್ಮನೊಂದಿಗೆ ಹುಬ್ಬಳ್ಳಿಯಲ್ಲಿ ವಾಸವಾಗಿದ್ದಾರೆ. ಇನ್ಶೂರೆನ್ಸ್‌ ಕಂಪೆನಿಯಲ್ಲಿ ಏರಿಯಾ ಮ್ಯಾಜೇಜರ್‌ ಆಗಿ ಕೆಲಸ ಮಾಡುತ್ತಿದ್ದ ಶ್ರೀಹರ್ಷ, ಬೈಕ್‌ನಲ್ಲಿ ವಾಪಸಾಗುತ್ತಿದ್ದಾಗ ಜಲ್ಲಿಕಲ್ಲಿನ ರಸ್ತೆಯಲ್ಲಿ ಬೈಕ್‌ ಮಗುಚಿ ಬಿತ್ತು. ಬೆನ್ನುಮೂಳೆ, ಕುತ್ತಿಗೆ ಭಾಗಕ್ಕೆ ಗಂಭೀರ ಗಾಯವಾಯಿತು. ಪ್ರಜ್ಞೆ ತಪ್ಪಿ ಬಿದ್ದಿದ್ದ ಅವರಿಗೆ ಧಾರವಾಡದ ಎಸ್‌ಡಿಎಂ ಮೆಡಿಕಲ್‌ ಕಾಲೇಜು ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಿಸಲಾಯಿತು. ಆದರೆ ಅಷ್ಟರಲ್ಲಿ ಎರಡೂ ಕೈ ಮತ್ತು ಎರಡೂ ಕಾಲುಗಳು ಸ್ವಾಧೀನ ಕಳೆದುಕೊಂಡವು. ಚೇತರಿಸಿಕೊಳ್ಳಲು ಒಂದು ವರ್ಷ ಆಸ್ಪತ್ರೆಯಲ್ಲೇ ಕಳೆಯಬೇಕಾಯಿತು. ಶೇ.75ರಷ್ಟು ಡಿಸೇಬಲ್ಡ್‌ ಎಂದು ವೈದ್ಯರು ಘೋಷಣೆ ಕೂಡ ಮಾಡಿದರು.

ಕುಟುಂಬಕ್ಕೆ ಆರ್ಥಿಕ ಸಂಕಷ್ಟ ಎದುರಾಯಿತು. ಹಳೆ ಕಂಪೆನಿಯಲ್ಲಿ ಮತ್ತೆ ಉದ್ಯೋಗ ಕೊಡುವುದಾಗಿ ಹೇಳಿದರು. ಆದರೆ ಕಂಪ್ಯೂಟರ್‌ ವಿಭಾಗದಲ್ಲಿ ಕೆಲಸ ಮಾಡಲು ಕೈ ಬೆರಳುಗಳು ಶಕ್ತವಾಗಿರಲಿಲ್ಲ. ಹೀಗಾಗಿ ಶ್ರೀಹರ್ಷ ಕಂಪೆನಿ ತೊರೆಯಬೇಕಾಯಿತು.

ಬ್ಯಾಡ್ಮಿಂಟನ್‌ ಬದಲು ಕೈ ಹಿಡಿದ ಶೂಟಿಂಗ್‌

“ಜೆಎಸ್‌ಎಸ್‌ ಕಾಲೇಜಿನಲ್ಲಿ ಪದವಿ ಕಲಿಯುತ್ತಿದ್ದಾಗ ನಾನು ಕರ್ನಾಟಕ ವಿವಿ ಮಟ್ಟದ ಬ್ಯಾಡ್ಮಿಂಟನ್‌ ಆಟಗಾರ. ಆದರೆ ಅಪಘಾತದ ಬಳಿಕವೂ ಕ್ರೀಡೆಯಲ್ಲಿ ಏನಾದರೂ ಸಾಧಿಸಬೇಕೆಂದುಕೊಂಡು ಪ್ಯಾರಾ ಕ್ರೀಡಾಕೂಟಗಳ ಬಗ್ಗೆ ಯೂಟ್ಯೂಬ್‌, ಅಲ್ಲಿಲ್ಲಿಂದ ಮಾಹಿತಿ ಕಲೆಹಾಕಿದೆ. ಆರಂಭದಲ್ಲಿ ಬ್ಯಾಡ್ಮಿಂಟನ್‌ಗೆ ಯತ್ನಿಸಿದೆ. ಆದರೆ ಶಕ್ತಿ ಇರಲಿಲ್ಲ. ಬಳಿಕ ಹುಬ್ಬಳ್ಳಿ ಶೂಟಿಂಗ್‌ ರೇಂಜ್‌ನಲ್ಲಿ ಶೂಟಿಂಗ್‌ ಅಭ್ಯಾಸ ನಡೆಸಿದೆ. ಅಮ್ಮ ಸಾಲ ಮಾಡಿ ರೈಫ‌ಲ್‌ ಕೊಡಿಸಿದರು. 2017ರಲ್ಲಿ ನಾನು ಕ್ರೀಡೆಗೆ ಬಂದೆ. 2019ರಲ್ಲಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿ ಅಲ್ಲಿಂದ ರಾಷ್ಟ್ರೀಯ ತಂಡದಲ್ಲೇ ಇದ್ದೇನೆ’ ಎಂದು ಶ್ರೀಹರ್ಷ ತನ್ನ ಬದುಕಿನ ಕ್ಷಣಗಳನ್ನು ಹರವಿಕೊಂಡರು.

0.3 ಅಂಕ ಅಂತರದಲ್ಲಿ ಟೋಕಿಯೊ ಅವಕಾಶ ತಪ್ಪಿತು

ದೇವರೆಡ್ಡಿಗೆ 2019ರಿಂದಲೂ ರಾಷ್ಟ್ರೀಯ ಮಟ್ಟದಲ್ಲಿ ಚಿನ್ನದ ಪದಕ ಲಭಿಸಿದೆ. 2020ರಲ್ಲಿ ಅಮೆರಿಕದ ಲಿಮಾ ವಿಶ್ವಕಪ್‌ನಲ್ಲಿ ಕಂಚು ಲಭಿಸಿತು. ಆದರೆ 0.3 ಅಂತರದಲ್ಲಿ ಪ್ಯಾರಾಲಿಂಪಿಕ್ಸ್‌ ಅವಕಾಶ ತಪ್ಪಿತು. 2020ರಲ್ಲಿ ದುಬಾೖ ವಿಶ್ವಪ್‌ನಲ್ಲಿ ಕಂಚು ಗೆದ್ದರು. ಆದರೆ ಟೋಕಿಯೊ ಅವಕಾಶ ತಪ್ಪಿದ್ದನ್ನೇ ಸವಾಲಾಗಿ ಸ್ವೀಕರಿಸಿ ಅಭ್ಯಾಸ ನಡೆಸಿದರು. 2022ರಲ್ಲಿ ಫ್ರಾನ್ಸ್‌ ಪ್ಯಾರಾ ಶೂಟಿಂಗ್‌ ವಿಶ್ವಕಪ್‌ನಲ್ಲಿ ಬಂಗಾರ ಗೆದ್ದು ಪ್ಯಾರಿಸ್‌ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡರು.

ಪತ್ನಿಯೇ ನನಗೆ ಬೆನ್ನುಮೂಳೆ

ವೀಲ್‌ ಚೇರ್‌ನಲ್ಲಿ ಕುಳಿತೇ ಸ್ಪರ್ಧಿಸುವ ಬಗ್ಗೆಯೂ ಶ್ರೀಹರ್ಷ ವಿಚಾರಗಳನ್ನು ಹಂಚಿಕೊಂಡರು. ನಮ್ಮ ಅಂಗವೈಕಲ್ಯಕ್ಕೆ ತಕ್ಕಂಕೆ ಸ್ಪರ್ಧೆಗೆ ಅವಕಾಶವಿರುತ್ತದೆ. ಅಂದರೆ ಅವಶ್ಯವಿದ್ದರೆ ನಮಗೆ ಕೈ, ಕಾಲುಗಳಿಗೆ ಸಪೋರ್ಟ್‌ ಬಳಸಹುದು. ನಮಗೆ ಒಬ್ಬರು ಲೋಡರ್‌ ಇರುತ್ತಾರೆ. ಸದ್ಯ ನನಗೆ ನನ್ನ ಪತ್ನಿ ಶೋಭಾ ದೇವರೆಡ್ಡಿಯೇ ಲೋಡರ್‌, ಎಸ್ಕಾರ್ಟ್‌ ಆಗಿ ಜತೆಗಿದ್ದು ಬೆಂಬಸುತ್ತಾರೆ. ಕೋಚ್‌ ಜೆ.ಪಿ. ನೌಟಿಯಾಲ್‌, ಪ್ರಜಕ್ತ ಹೊಸೂರ್‌ ತರಬೇತುದಾರರಾಗಿ ಸದಾ ಬೆಂಬಲಿಸುತ್ತಿದ್ದಾರೆ ಎಂದು ಶ್ರೀಹರ್ಷ ತನಗೆ ನೆರವು ನೀಡುವ ಕೈಗಳನ್ನು ಸ್ಮರಿಸಿಕೊಂಡರು.

ಎಸ್‌. ಸದಾಶಿವ

ಟಾಪ್ ನ್ಯೂಸ್

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

akhilesh

Akhilesh Yadav ಗಂಭೀರ ಆರೋಪ: ಅಯೋಧ್ಯೆಯಲ್ಲಿ ಭಾರೀ ಭೂ ಹಗರಣ

1-sadsadasd

Ganesh festival; ಡೋಲು-ತಾಸೆಯವರ ಸಂಖ್ಯೆಗೆ NGT ನಿರ್ಬಂಧಕ್ಕೆ ಸುಪ್ರೀಂ ತಡೆ

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಶಾರುಖ್‌ – ಅಟ್ಲಿ ʼಜವಾನ್‌ʼ

Jawan‌ Movie: ಜಪಾನ್‌ನಲ್ಲಿ ಈ ದಿನ ರಿಲೀಸ್‌ ಆಗಲಿದೆ ಸೂಪರ್‌ ಹಿಟ್ ʼಜವಾನ್‌ʼ

Good News: ಶೀಘ್ರದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಸಾಧ್ಯತೆ? ಪಂಕಜ್‌ ಜೈನ್

Good News: ಶೀಘ್ರದಲ್ಲಿ ಪೆಟ್ರೋಲ್‌, ಡೀಸೆಲ್‌ ಬೆಲೆ ಇಳಿಕೆ ಸಾಧ್ಯತೆ? ಪಂಕಜ್‌ ಜೈನ್

1-ffsdf

Chikkaballapur ನಗರಸಭೆ ಕೋಲಾಹಲ; ಡಾ.ಸುಧಾಕರ್ ಮೇಲುಗೈ: ಸವಾಲು ಹಾಕಿದ ಪ್ರದೀಪ್ ಈಶ್ವರ್!

HDK

Nagamangala Riots: ಗಲಭೆಗೆ ಕಾಂಗ್ರೆಸ್‌ ಸರಕಾರದ ತುಷ್ಟೀಕರಣ ನೀತಿಯೇ ಕಾರಣ: ಎಚ್‌ಡಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದೇಶದಲ್ಲಿ ಬರೀ ಮೂವರು ನೈಸರ್ಗಿಕ ದೇಹದಾರ್ಡ್ಯ ಪಟುಗಳು: ರಘು ರಾಮಪ್ಪ

Raghu Ramappa; ದೇಶದಲ್ಲಿ ಬರೀ ಮೂವರು ನೈಸರ್ಗಿಕ ದೇಹದಾರ್ಢ್ಯ ಪಟುಗಳು: ರಘು ರಾಮಪ್ಪ

INDvsBAN: Bangladesh announce squad for Test series against India

INDvsBAN: ಭಾರತ ವಿರುದ್ದದ ಟೆಸ್ಟ್‌ ಸರಣಿಗೆ ತಂಡ ಪ್ರಕಟಿಸಿದ ಬಾಂಗ್ಲಾದೇಶ

World Cup 2023: ಭಾರತಕ್ಕೆ 11,367 ಕೋಟಿ ರೂ. ಲಾಭ

World Cup 2023: ಭಾರತಕ್ಕೆ 11,367 ಕೋಟಿ ರೂ. ಲಾಭ

Women’s T20 World Cup 2024: ನ್ಯೂಜಿಲ್ಯಾಂಡ್‌ ತಂಡ ಪ್ರಕಟ

Women’s T20 World Cup 2024: ನ್ಯೂಜಿಲ್ಯಾಂಡ್‌ ತಂಡ ಪ್ರಕಟ

Diamond League Final: ನೀರಜ್‌ ಚೋಪ್ರಾ, ಅವಿನಾಶ್‌ ಸಾಬ್ಲೆ ಭರವಸೆ

Diamond League Final: ನೀರಜ್‌ ಚೋಪ್ರಾ, ಅವಿನಾಶ್‌ ಸಾಬ್ಲೆ ಭರವಸೆ

MUST WATCH

udayavani youtube

ಕೃಷ್ಣ ಮಠದ ಗಣಪತಿ ವಿಸರ್ಜನೆ ವೇಳೆ ತಾಸೆಯ ಪೆಟ್ಟಿಗೆ ಕುಣಿದು ಕುಪ್ಪಳಿಸಿದ ಭಕ್ತರು|

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

ಹೊಸ ಸೇರ್ಪಡೆ

1-baghi

Hombale Films ಬಹು ನಿರೀಕ್ಷಿತ ಬಘೀರ ಚಿತ್ರದ ರಿಲೀಸ್ ಡೇಟ್ ಘೋಷಣೆ

Road Mishap: ಸ್ಕೂಟಿಗೆ ಬೈಕ್‌ ಡಿಕ್ಕಿ; ಬೈಕ್ ಸವಾರ ಮೃತ್ಯು

Road Mishap: ಸ್ಕೂಟಿಗೆ ಬೈಕ್‌ ಡಿಕ್ಕಿ; ಬೈಕ್ ಸವಾರ ಮೃತ್ಯು

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Udayavani.com “ನಮ್ಮನೆ ಕೃಷ್ಣ”: ಮೆಚ್ಚುಗೆ ಗಳಿಸಿದ 10ನೇ ರೀಲ್ಸ್ ಪ್ರಸಾರ

Ronny actress Samikshaa

Ronny ಗೆಲ್ಲುವ ಸಿನಿಮಾ: ನಟಿ ಸಮೀಕ್ಷಾ

akhilesh

Akhilesh Yadav ಗಂಭೀರ ಆರೋಪ: ಅಯೋಧ್ಯೆಯಲ್ಲಿ ಭಾರೀ ಭೂ ಹಗರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.