ಕ್ರಿಕೆಟಿಗ ಬದರೀನಾಥ್ ವಿದಾಯ ಸೂಚನೆ
Team Udayavani, May 11, 2018, 6:30 AM IST
ಚೆನ್ನೈ: ಸುದೀರ್ಘ ಕ್ರಿಕೆಟ್ ಬದುಕಿಗೆ ವಿದಾಯ ಹೇಳಲು ತಮಿಳುನಾಡು ಕ್ರಿಕೆಟಿಗ ಎಸ್. ಬದರೀನಾಥ್ ನಿರ್ಧರಿಸಿದ್ದಾರೆ ಎನ್ನಲಾಗಿದೆ. ಬದರೀನಾಥ್ಗೆ ಪ್ರಸ್ತುತ ಸಾಲಿನ ಐಪಿಎಲ್ನಲ್ಲಿ ಯಾವ ತಂಡವನ್ನೂ ಪ್ರತಿನಿಧಿಸುವ ಅವಕಾಶ ಸಿಗಲಿಲ್ಲ. ಇದರಿಂದಾಗಿ ಅವರು ಕ್ರಿಕೆಟ್ ಬದುಕಿಗೆ ನಿವೃತ್ತಿ ಹೇಳಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.
37ರ ಹರೆಯದ ಸುಬ್ರಹ್ಮಣ್ಯಂ ಬದರೀನಾಥ್ ಭಾರತದ ಪರ 2 ಟೆಸ್ಟ್ ಪಂದ್ಯ ಆಡಿದ್ದಾರೆ. ಒಂದು ಅರ್ಧ ಶತಕ ಗಳಿಸಿದ್ದಾರೆ. ಉಳಿದಂತೆ 7 ಏಕದಿನ ಕ್ರಿಕೆಟ್ನಲ್ಲಿ ಆಡಿರುವ ಅವರು ಒಟ್ಟಾರೆ 79 ರನ್ ಗಳಿಸಿದ್ದಾರೆ. ಒಂದು ಟಿ20 ಪಂದ್ಯವನ್ನೂ ಆಡಿದ್ದಾರೆ. ಐಪಿಎಲ್ನಲ್ಲಿ ಪ್ರಮುಖ ತಂಡಗಳಾದ ಚೆನ್ನೈ ಸೂಪರ್ ಕಿಂಗ್ಸ್, ರಾಯಲ್ ಚಾಲೆಂಜರ್ ಬೆಂಗಳೂರು ತಂಡಗಳನ್ನು ಪ್ರತಿನಿಧಿಸಿದ್ದಾರೆ.
ತಮಿಳುನಾಡು ರಣಜಿ ತಂಡದ ಸ್ಟಾರ್ ಆಟಗಾರನಾಗಿರುವ ಬದರೀನಾಥ್ ಒಟ್ಟು 145 ಪಂದ್ಯ ಆಡಿದ್ದಾರೆ. 32 ಶತಕ, 45 ಅರ್ಧ ಶತಕ ಸೇರಿದಂತೆ ಒಟ್ಟಾರೆ 10,245 ರನ್ ಗಳಿಸಿದ ಸಾಧನೆ ಮಾಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
US Open 2024: ಅರಿನಾ ಸಬಲೆಂಕಾಗೆ ಯು.ಎಸ್.ಓಪನ್ ಕಿರೀಟ
Paris Paralympics: ಮುಂದುವರಿದ ಪದಕ ಬೇಟೆ; ಬಂಗಾರ ಗೆದ್ದ ನವದೀಪ್, ಸಿಮ್ರನ್ ಗೆ ಕಂಚು
Diamond League: ಡೈಮಂಡ್ ಲೀಗ್ ಋತು ಫೈನಲಿಗೆ ನೀರಜ್ ಚೋಪ್ರಾ ಅರ್ಹತೆ
Paralympics: ಸಮಾರೋಪ ಸಮಾರಂಭದಲ್ಲಿ ಹರ್ವಿಂದರ್ ಸಿಂಗ್, ಪ್ರೀತಿ ಪಾಲ್ ಧ್ವಜಧಾರಿಗಳು
US Open: ಯುಎಸ್ ಓಪನ್ ಟೆನಿಸ್ ಗ್ರ್ಯಾನ್ ಸ್ಲಾಮ್: ಪೆಗುಲಾ-ಸಬಲೆಂಕಾ ನಡುವೆ ಫೈನಲ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.