Sumit Antil; ಸುಮಿತ್‌ ಮುಟ್ಟಿದ್ದೆಲ್ಲ ಚಿನ್ನ: ವಿಶ್ವ ಮಟ್ಟದ ಐದೂ ಕೂಟಗಳಲ್ಲಿ ಚಿನ್ನದ ಪದಕ


Team Udayavani, Sep 4, 2024, 6:59 AM IST

sumit antil

ಪ್ಯಾರಿಸ್‌: ಜಾವೆಲಿನ್‌ ಎಸೆತಗಾರ ಸುಮಿತ್‌ ಅಂತಿಲ್‌ “ತಾನು ಚಿನ್ನವನ್ನಲ್ಲದೇ ಬೇರೆನನ್ನೂ ಜಯಿಸಲಾರೆ’ ಎಂದು ಪಣತೊಟ್ಟಂತಿದೆ. ಅವರು ಮುಟ್ಟಿದ್ದೆಲ್ಲ ಸ್ವರ್ಣವಾಗುತ್ತಿದೆ. ಪ್ಯಾರಿಸ್‌ ಪ್ಯಾರಾಲಿಂಪಿಕ್ಸ್‌ ಇದನ್ನು ಸಾಬೀತುಪಡಿಸಿದೆ. ಸೋಮವಾರ ತಡರಾತ್ರಿಯ ಎಫ್-64 ವಿಭಾಗದಲ್ಲಿ ಅವರು ಚಿನ್ನದ ಪದಕವನ್ನೇ ಗೆದ್ದರು. ಈ ಮೂಲಕ ಆ್ಯತ್ಲೆಟಿಕ್ಸ್‌ ವಿಭಾಗದಲ್ಲಿ ಸತತ 2 ಚಿನ್ನದ ಪದಕ ಗೆದ್ದ ಮೊದಲ ಭಾರತೀಯನೆಂಬ ಹಿರಿಮೆಗೆ ಪಾತ್ರರಾದರು. ಅವರು ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲೂ ಬಂಗಾರದೊಂದಿಗೆ ಹೊಳೆದಿದ್ದರು.

ಜಾಗತಿಕ ಮಟ್ಟದಲ್ಲಿ ಸುಮಿತ್‌ ಅಂತಿಲ್‌ ಗೆದ್ದ 5ನೇ ಚಿನ್ನ ಇದಾಗಿದೆ. ಇದಕ್ಕೂ ಮುನ್ನ ಏಷ್ಯನ್‌ ಗೇಮ್ಸ್‌, ಕೋಬೆ ವಿಶ್ವ ಚಾಂಪಿಯನ್‌ಶಿಪ್‌, ಪ್ಯಾರಿಸ್‌ ವಿಶ್ವ ಚಾಂಪಿಯನ್‌ಶಿಪ್‌ನಲ್ಲೂ ಬಂಗಾರಕ್ಕೆ ಕೊರಳೊಡ್ಡಿದ್ದರು. ಹೀಗೆ ವಿಶ್ವ ಮಟ್ಟದ ಸ್ಪರ್ಧೆಗಳಲ್ಲೆಲ್ಲ ಸುಮಿತ್‌ಗೆ ಸ್ವರ್ಣವೇ ಸಂಗಾತಿ ಆಗುತ್ತಿರುವುದೊಂದು ವಿಶೇಷ.

ಪ್ಯಾರಾಲಿಂಪಿಕ್ಸ್‌ ದಾಖಲೆ

ಪ್ಯಾರಿಸ್‌ ಫೈನಲ್‌ನಲ್ಲಿ ಸುಮಿತ್‌ 70.59 ಮೀ. ದೂರ ಎಸೆಯುವ ಮೂಲಕ ನೂತನ ಪ್ಯಾರಾಲಿಂಪಿಕ್ಸ್‌ ದಾಖಲೆ ನಿರ್ಮಿಸಿದರು. ತಮ್ಮದೇ ದಾಖಲೆಯನ್ನು 2 ಸಲ ಮುರಿದದ್ದು ವಿಶೇಷ. 2ನೇ ಪ್ರಯತ್ನದಲ್ಲೇ ಈ ಸಾಧನೆಗೈದು ಚಿನ್ನವನ್ನು ತಮ್ಮ ಹೆಸರಿಗೆ ಬರೆದುಕೊಂಡರು. ಬೇರೆ ಯಾರು ಕೂಡ 70 ಮೀ. ಗಡಿ ದಾಟಲಿಲ್ಲ.

67.03 ಮೀ. ದೂರ ಎಸೆದ ಶ್ರೀಲಂಕಾದ ದುಲನ್‌ ಕೊಡಿತುವಾಕ್ಕು ಬೆಳ್ಳಿ ಗೆದ್ದರೆ, 64.89 ಮೀ. ದೂರಕ್ಕೆ ಎಸೆದ ಆಸ್ಟ್ರೇಲಿಯದ ಮೈಕಲ್‌ ಬುರಿಯನ್‌ ಕಂಚು ಗೆದ್ದರು. ಭಾರತದ ಮತ್ತೂಬ್ಬ ಸ್ಪರ್ಧಿ ಸಂದೀಪ್‌ ಚೌಧರಿ 62.80 ಮೀ. ದೂರ ಎಸೆಯುವ ಮೂಲಕ 4ನೇ ಸ್ಥಾನ ಪಡೆದುಕೊಂಡರು.

ಸುಮಿತ್‌ ಅಂತಿಲ್‌ ಮೊದಲ ಪ್ರಯತ್ನದಲ್ಲೇ 69.11 ಮೀ. ದೂರಕ್ಕೆ ಜಾವೆಲಿನ್‌ ಎಸೆದು ನೂತನ ಪ್ಯಾರಾಲಿಂಪಿಕ್ಸ್‌ ದಾಖಲೆ ಸ್ಥಾಪಿಸಿದರು. ಟೋಕಿಯೊದಲ್ಲಿ ನಿರ್ಮಿಸಿದ್ದ ತಮ್ಮ 68.55 ಮೀ. ದಾಖಲೆಯನ್ನು ಮುರಿದರು. 2ನೇ ಸುತ್ತಿನಲ್ಲಿ ಇದು 70.59 ಮೀ.ಗೆ ಏರಿತು. ದಾಖಲೆ ಇನ್ನಷ್ಟು ಉತ್ತಮಗೊಂಡಿತು. 3ನೇ ಸುತ್ತಿನಲ್ಲಿ 66.66 ಮೀ. ದಾಖಲಾಯಿತು. ನಾಲ್ಕನೆಯದು ಫೌಲ್‌. ಬಳಿಕ 69.04 ಹಾಗೂ 66.57 ಮೀ. ದಾಖಲಿಸಿದರು.

ವಿಶ್ವದಾಖಲೆಯ ವೀರ

ಪ್ಯಾರಾ ಜಾವೆಲಿನ್‌ ವಿಶ್ವದಾಖಲೆ ಕೂಡ ಸುಮಿತ್‌ ಅಂತಿಲ್‌ ಹೆಸರಿನಲ್ಲಿದೆ. 2022ರಲ್ಲಿ ಹ್ಯಾಂಗ್‌ಝೂನಲ್ಲಿ ನಡೆದ ಏಷ್ಯನ್‌ ಗೇಮ್ಸ್‌ ನಲ್ಲಿ 73.29 ಮೀ. ದೂರ ಎಸೆಯುವ ಮೂಲಕ ಈ ದಾಖಲೆ ನಿರ್ಮಿಸಿದ್ದರು. ಹೀಗಾಗಿ ಪ್ಯಾರಿಸ್‌ನಲ್ಲಿ ಇವರು ಚಿನ್ನದ ಭರವಸೆ ಮೂಡಿಸಿದ್ದರು. ಇದನ್ನು ಸಾಕಾರ ಗೊಳಿಸುವಲ್ಲಿ ಯಶಸ್ವಿಯಾದರು.

ನಿತ್ಯಶ್ರೀಗೆ ಕಂಚಿನ ಪದಕ

ಸೋಮವಾರ ರಾತ್ರಿಯ ಪ್ಯಾರಾ ಬ್ಯಾಡ್ಮಿಂಟನ್‌ ಮಹಿಳಾ ಸಿಂಗಲ್ಸ್‌ ಎಸ್‌ಎಚ್‌6 ವಿಭಾಗದ ಪಂದ್ಯದಲ್ಲಿ ಭಾರತದ ನಿತ್ಯಶ್ರೀ ಶಿವನ್‌ ಕಂಚಿನ ಪದಕದೊಂದಿಗೆ ಖುಷಿಯನ್ನಾಚರಿಸಿದರು.

ಒಂದೇ ದಿನ ಗರಿಷ್ಠ 8 ಪದಕ

ಪ್ಯಾರಾಲಿಂಪಿಕ್ಸ್‌ನಲ್ಲಿ ಸೋಮವಾರ ಒಂದೇ ದಿನ ಭಾರತದ ಆ್ಯತ್ಲೀಟ್‌ಗಳು 8 ಪದಕ ಬೇಟೆಯಾಡಿದ್ದು, ಇದು ಭಾರತದ ಪರ ದೈನಂದಿನ ಗರಿಷ್ಠ ಸಾಧನೆ ಎನಿಸಿದೆ. ಕಳೆದ ಟೋಕಿಯೊ ಪ್ಯಾರಾ ಒಲಿಂಪಿಕ್ಸ್‌ನಲ್ಲಿ ಭಾರತ ಒಂದೇ ದಿನ 5 ಪದಕ ಜಯಿಸಿದ್ದು ಈವರೆಗಿನ ದಾಖಲೆಯಾಗಿತ್ತು. ಸೋಮವಾರ ಭಾರತದ ಕ್ರೀಡಾಳುಗಳು 2 ಚಿನ್ನ, 3 ಬೆಳ್ಳಿ, 3 ಕಂಚಿನ ಪದಕಗಳನ್ನು ಗೆದ್ದರು. ಇದರಲ್ಲಿ 5 ಪದಕಗಳು ಬ್ಯಾಡ್ಮಿಂಟನ್‌ನಲ್ಲಿ ಸಿಕ್ಕರೆ, ಆರ್ಚರಿ, ಡಿಸ್ಕಸ್‌ ತ್ರೊ ಮತ್ತು ಜಾವೆಲಿನ್‌ ಎಸೆತದಲ್ಲಿ ತಲಾ ಒಂದು ಪದಕ ಒಲಿಯಿತು.

ಭಾಗ್ಯಶ್ರೀ, ಅವನಿ ವಿಫ‌ಲ

ಮಂಗಳವಾರದ ಪ್ಯಾರಾಲಿಂಪಿಕ್ಸ್‌ ಮಹಿಳೆಯರ ಸ್ಪರ್ಧೆಗಳಲ್ಲಿ ಭಾರತ ಪದಕ ಗೆಲ್ಲಲು ವಿಫ‌ಲವಾಯಿತು. ಶಾಟ್‌ಪುಟ್‌ ಎಫ್34 ವಿಭಾಗದಲ್ಲಿ ಭಾಗ್ಯಶ್ರೀ ಜಾಧವ್‌ 5ನೇ ಸ್ಥಾನದಲ್ಲಿ ಸ್ಪರ್ಧೆ ಮುಗಿಸಿದರು. 50 ಮೀ. ರೈಫ‌ಲ್‌ ತ್ರಿ ಪೊಸಿಶನ್‌ ಎಸ್‌ಎಚ್‌1 ವಿಭಾಗದಲ್ಲಿ ಮೋನಾ ಅಗರ್ವಾಲ್‌ 13ನೇ ಸ್ಥಾನ ಪಡೆದು ಫೈನಲ್‌ಗೇರಲು ವಿಫ‌ಲರಾದರು. ಅವನಿ ಲೇಖರಾ 50 ಮೀ. ರೈಫ‌ಲ್‌ 3 ಪೊಸಿಶನ್‌ನಲ್ಲಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟರು (420.6 ಅಂಕ).

ಟಾಪ್ ನ್ಯೂಸ್

Democracy-day

Democracy Day: ಕೊಡಗು: 72.2 ಕಿ.ಮೀ. ಅಂತರದ ಮಾನವ ಸರಪಳಿ

Traffic-Jam

Democracy Day: ಮಾನವ ಸರಪಳಿ; ಉಭಯ ಜಿಲ್ಲೆಗಳಲ್ಲಿ ವಾಹನ ಚಾಲಕರು, ಸಾರ್ವಜನಿಕರು ಹೈರಾಣು!

Udupi1

International Democracy Day: ಉಡುಪಿ ಜಿಲ್ಲೆಯಲ್ಲಿ 1 ಲಕ್ಷಕ್ಕೂ ಮಿಕ್ಕಿ ಮಂದಿ ಭಾಗಿ

DK-Human-Chian

Democracy Day: ದಕ್ಷಿಣ ಕನ್ನಡ: 130 ಕಿ.ಮೀ. ವ್ಯಾಪ್ತಿಯಲ್ಲಿ 84,200 ಮಂದಿ

1-mmmm

PM Modi ಕಿಡಿ ; ರೊಹಿಂಗ್ಯಾ ಜತೆ ಜೆಎಂಎಂ ಶಾಮೀಲಾಗಿದೆ

1-weewqeqwe

Bihar;ಹೊಲಕ್ಕೆ ನುಗ್ಗಿದ ರೈಲು ಎಂಜಿನ್‌: ನೆಟ್ಟಿಗರ ಕಟು ಟೀಕೆ

Malpe

Holiday: ಮಲ್ಪೆ ಬೀಚ್‌ನಲ್ಲಿ ಜನಸಂದಣಿ; ತಡೆಬೇಲಿ ದಾಟಿ ನೀರಿನಾಟದಲ್ಲಿ ನಿರತ ಪ್ರವಾಸಿಗರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-reee

Test; ಹೆಚ್ಚುವರಿ ಆತ್ಮವಿಶ್ವಾಸದೊಂದಿಗೆ ಚೆನ್ನೈಗೆ ಬಂದ ಬಾಂಗ್ಲಾ ತಂಡ

1-acd

Duleep Trophy ಕ್ರಿಕೆಟ್‌ : ಅಗರ್ವಾಲ್‌ ಬಳಗಕ್ಕೆ ಜಯ

1-frrr

England-Australia 3ನೇ ಟಿ20 ಪಂದ್ಯ ರದ್ದು

Champions Trophy: Former Pakistani cricketer warned the Indian cricket team

Champions Trophy: ಭಾರತ ತಂಡಕ್ಕೆ ಎಚ್ಚರಿಕೆ ನೀಡಿದ ಪಾಕಿಸ್ತಾನದ ಮಾಜಿ ಕ್ರಿಕೆಟಿಗ

Diamond League Final: Neeraj Chopra missed the first place by just 1 cm

Diamond League Final: ಕೇವಲ 1 ಸೆಂ.ಮೀಟರ್‌ ನಿಂದ ನೀರಜ್‌ ಚೋಪ್ರಾಗೆ ತಪ್ಪಿತು ಮೊದಲ ಸ್ಥಾನ

MUST WATCH

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

ಹೊಸ ಸೇರ್ಪಡೆ

train-track

Landslide: ತುರ್ತು ಬ್ರೇಕ್‌ ಹಾಕಿದ ಕಾರಣ ತಪ್ಪಿದ ರೈಲು ದುರಂತ

Democracy-day

Democracy Day: ಕೊಡಗು: 72.2 ಕಿ.ಮೀ. ಅಂತರದ ಮಾನವ ಸರಪಳಿ

1-ghhh

ಹೃದಯಾಘಾತ: ಶಾಲೆಯಲ್ಲೇ 3ನೇ ತರಗತಿ ವಿದ್ಯಾರ್ಥಿನಿ ಸಾ*ವು

Traffic-Jam

Democracy Day: ಮಾನವ ಸರಪಳಿ; ಉಭಯ ಜಿಲ್ಲೆಗಳಲ್ಲಿ ವಾಹನ ಚಾಲಕರು, ಸಾರ್ವಜನಿಕರು ಹೈರಾಣು!

CBI

Trainee doctor ಹ*ತ್ಯೆ ಕೇಸು: ಮಾಜಿ ಪ್ರಿನ್ಸಿ ಸಂದೀಪ್‌ 17ರ ವರೆಗೆ ಸಿಬಿಐ ವಶಕ್ಕೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.