IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌


Team Udayavani, Apr 25, 2024, 6:00 AM IST

IPL: ಮತ್ತೂಂದು ದೊಡ್ಡ ಮೊತ್ತಕ್ಕೆ ಎಸ್‌ಆರ್‌ಎಚ್‌ ಸ್ಕೆಚ್‌

ಹೈದರಾಬಾದ್‌: ಹೈದರಾಬಾದ್‌ ಮ್ಯಾಚ್‌ ಎನ್ನುವಾಗ ಎದುರಾಳಿಗಳಿಗೆ ಢವಢವ ಆಗುವುದು ಈ ಐಪಿಎಲ್‌ನ ವಿಶೇಷ. ಈಗಾಗಲೇ 3 ಸಲ 250 ರನ್‌ ಗಡಿ ದಾಟಿ, ಐಪಿಎಲ್‌ನ ಅತ್ಯಧಿಕ ಮೊತ್ತದ ದಾಖಲೆಯನ್ನು 2 ಸಲ ಮುರಿದಿರುವ ಎಸ್‌ಆರ್‌ಎಚ್‌ ಬ್ಯಾಟಿಂಗ್‌ “ಶಕ್ತಿ ಕಣಜ’ವಾಗಿದೆ. ಇದರಲ್ಲಿ ಅತ್ಯಧಿಕ ರನ್ನಿನ ದಾಖಲೆ ನಿರ್ಮಾಣವಾದದ್ದು ಆರ್‌ಸಿಬಿ ವಿರುದ್ಧ ಎಂಬುದನ್ನು ಮರೆಯಲು ಸಾಧ್ಯವಿಲ್ಲ. ಇದೀಗ ಇತ್ತಂಡಗಳು ದ್ವಿತೀಯ ಸುತ್ತಿನ ಸ್ಪರ್ಧೆಗೆ ಅಣಿಯಾಗಿವೆ.

“ಹೊಸ ಅಧ್ಯಾಯ’ದ ಭರವಸೆಯನ್ನು ಈಡೇರಿ ಸಲು ಸಂಪೂರ್ಣ ವಿಫ‌ಲವಾಗಿರುವ ಆರ್‌ಸಿಬಿ ಪಾಲಿಗೆ ಈ ಋತು ಈಗಾಗಲೇ “ಮುಗಿದ ಅಧ್ಯಾಯ’ ಆಗಿದೆ. ಎಂಟರಲ್ಲಿ ಕೇವಲ ಒಂದು ಪಂದ್ಯ ಗೆದ್ದು, -1.046ರಷ್ಟು ಕಳಪೆ ರನ್‌ರೇಟ್‌ ಹೊಂದಿರುವ ಬೆಂಗಳೂರು ತಂಡ ಪವಾಡ ಸಂಭವಿಸಿದರೂ ಅಗ್ರ ನಾಲ್ಕಕ್ಕೆ ನೆಗೆಯದು. ಹೀಗಾಗಿ ಉಳಿದೆಲ್ಲವೂ ಆರ್‌ಸಿಬಿ ಪಾಲಿಗೆ ಲೆಕ್ಕದ ಭರ್ತಿಯ ಪಂದ್ಯಗಳಾಗಿವೆ. ಆದರೆ ಒಂದಿಷ್ಟು ಅಮೋಘ ಗೆಲುವು, ಅಸಾಮಾನ್ಯ ಸಾಧನೆ, ಅದ್ಭುತ ನಿರ್ವಹಣೆಯಿಂದ ತನ್ನ ಪ್ರತಿಷ್ಠೆಯನ್ನು ಮರಳಿ ಗಳಿಸಲು ಇನ್ನೂ ಅವಕಾಶ ಇದೆ.

ಕಳೆದ ಪಂದ್ಯದಲ್ಲಿ ತನ್ನೆದುರು ದಾಖಲೆಯ ಮೊತ್ತ ಪೇರಿಸಿದ ಹೈದರಾಬಾದ್‌ ವಿರುದ್ಧವೇ ಇಂಥದೊಂದು ಪರಾಕ್ರಮ ಮೆರೆದರೆ ಆರ್‌ಸಿಬಿಯ ಅಷ್ಟೂ ಹೀನಾಯ ಪ್ರದರ್ಶನವನ್ನು ಸ್ವಲ್ಪ ಕಾಲ ವಾದರೂ ಮರೆಯ ಬಹು ದಾಗಿದೆ. ತನ್ನ ತವರಿನ ಅಂಗಳದಲ್ಲಿ ಹೈದರಾ ಬಾದ್‌ಗೆ 287 ರನ್‌ ಬಿಟ್ಟು ಕೊಟ್ಟ ಆರ್‌ಸಿಬಿ, ಅವರ ತವರಿನಲ್ಲಿ ದೊಡ್ಡ ಮಟ್ಟ ದಲ್ಲಿ ಸೇಡು ತೀರಿಸಿಕೊಂಡರೆ ಇದಕ್ಕಿಂತ ಮಿಗಿಲಾದ ಖುಷಿ ಬೇರೇನಿದೆ?!

ಟಾರ್ಗೆಟ್‌ 300?!
ಆರ್‌ಸಿಬಿಯ ದೊಡ್ಡ ದೌರ್ಬಲ್ಯ ಇರುವುದೇ ಬೌಲಿಂಗ್‌ ವಿಭಾಗದಲ್ಲಿ. ಆದರೆ ಹೈದರಾಬಾದ್‌ಗೆ ಯಾವ ಬೌಲಿಂಗ್‌ ಯೂನಿಟ್‌ ಆದರೂ ಒಂದೇ. ಮುಂಬೈ, ಡೆಲ್ಲಿ ಬೌಲರ್‌ಗಳನ್ನೂ ಅದು ಚೆಂಡಾಡಿತ್ತು. ಡೆಲ್ಲಿ ವಿರುದ್ಧವಂತೂ ಪವರ್‌ ಪ್ಲೇಯಲ್ಲೇ ನೋಲಾಸ್‌ 125 ರನ್‌ ಪೇರಿಸಿ ಎಲ್ಲರನ್ನೂ ಬೆಚ್ಚಿಬೀಳಿಸಿತ್ತು. ಹೀಗಾಗಿ ಆರ್‌ಸಿಬಿ ವಿರುದ್ಧ ಪುನಃ ಮೊದಲು ಬ್ಯಾಟಿಂಗ್‌ ನಡೆಸುವ ಅವಕಾಶ ಪಡೆದರೆ ಹೈದರಾಬಾದ್‌ ಮತ್ತೂಂದು ಬೃಹತ್‌ ಮೊತ್ತ ಪೇರಿಸುವ ಎಲ್ಲ ಸಾಧ್ಯತೆ ಇದೆ. ತನ್ನ ಟಾರ್ಗೆಟ್‌ 300 ರನ್‌ ಎಂದು ಹೇಳಿಕೊಂಡಿರುವ ಹೈದರಾಬಾದ್‌, ಇಂಥದೊಂದು ಸಾಮರ್ಥ್ಯವುಳ್ಳ ತಂಡವಂತೂ ಹೌದು. ಹೆಡ್‌, ಅಭಿಷೇಕ್‌ ಶರ್ಮ, ಕ್ಲಾಸೆನ್‌-ಈ ತ್ರಿಮೂರ್ತಿಗಳನ್ನು ನಿಯಂತ್ರಿಸುವುದು ಸುಲಭವಲ್ಲ.

ಹೈದರಾಬಾದ್‌ ಈವರೆಗೆ ತವರಲ್ಲಿ ಆಡಿದ್ದು 2 ಪಂದ್ಯ ಮಾತ್ರ. ಎರಡನ್ನೂ ಗೆದ್ದಿದೆ. ಮುಂಬೈ ಮತ್ತು ಚೆನ್ನೈ ವಿರುದ್ಧ ಈ ಗೆಲುವು ಸಾಧಿಸಿದೆ.

ಆರ್‌ಸಿಬಿ ಬ್ಯಾಟಿಂಗ್‌ ಬಲ
ಒಂದು ವೇಳೆ ಆರ್‌ಸಿಬಿಗೆ ಮೊದಲು ಬ್ಯಾಟಿಂಗ್‌ ಅವಕಾಶ ಲಭಿಸಿದರೆ ಅದು ಬೃಹತ್‌ ಮೊತ್ತವನ್ನು ಪೇರಿಸಿ ಸವಾಲೊಡ್ಡಬೇಕಿದೆ. ಬೌಲಿಂಗ್‌ ದುರ್ಬಲ ವಾದರೂ, ಆರ್‌ಸಿಬಿಯ ಬ್ಯಾಟಿಂಗ್‌ ವಿಭಾಗಕ್ಕೆ ಇಂಥದೊಂದು ತಾಕತ್ತು ಇದ್ದೇ ಇದೆ. ಇಲ್ಲಿ ಇನ್ನೊಂದು ಸಂಗತಿಯನ್ನು ಗಮನಿಸಬೇಕಿದೆ, ಚೇಸಿಂಗ್‌ ನಲ್ಲಿ ಹೈದರಾಬಾದ್‌ ತುಸು ಹಿಂದೆ. ಹಾಗೆಯೇ ಬೌಲಿಂಗ್‌ ಕೂಡ ಬಲಿಷ್ಠವಲ್ಲ.

ಮೊದಲ ಸುತ್ತಿನಲ್ಲಿ…
ಸರಿಯಾಗಿ 10 ದಿನಗಳ ಹಿಂದೆ ಇತ್ತಂಡಗಳು ಬೆಂಗಳೂರಿನಲ್ಲಿ ಮುಖಾಮುಖೀ ಆದಾಗ ರನ್‌ ಪ್ರವಾಹವೇ ಹರಿದಿತ್ತು. ಹೈದರಾಬಾದ್‌ 3ಕ್ಕೆ 287 ರನ್‌ ಪೇರಿಸಿ ಐಪಿಎಲ್‌ನಲ್ಲಿ ಸಾರ್ವಕಾಲಿಕ ಮೊತ್ತದ ದಾಖಲೆ ನಿರ್ಮಿಸಿತ್ತು. ಇದೇ ಸೀಸನ್‌ನಲ್ಲಿ ಮುಂಬೈ ವಿರುದ್ಧ ತಾನೇ ನಿರ್ಮಿಸಿದ 3ಕ್ಕೆ 277 ರನ್ನುಗಳ ದಾಖಲೆಯನ್ನು ಮುರಿದು ಮತ್ತೂಂದು ಎತ್ತರ ತಲುಪಿತ್ತು.

ಆರ್‌ಸಿಬಿ ಕೂಡ ದಿಟ್ಟ ಜವಾಬು ನೀಡಿ 7ಕ್ಕೆ 262 ರನ್‌ ಪೇರಿಸಿತ್ತು. ಈ ಹೈ ಸ್ಕೋರಿಂಗ್‌ ಪಂದ್ಯದಲ್ಲಿ ಸೋಲಿನ ಅಂತರ ಬರೀ 25 ರನ್‌ ಎಂಬುದು ಉಲ್ಲೇಖನೀಯ.

ಟಾಪ್ ನ್ಯೂಸ್

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Central Govt; ಏಕ ಚುನಾವಣೆಗೆ ನಾನಾ ಪ್ರಶ್ನೆ: ಹಲವು ಪ್ರಶ್ನೆಗಳಿಗೆ ಇಲ್ಲಿವೆ ಉತ್ತರ

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!

Karnataka ರಾಜ್ಯದಲ್ಲಿ ಆರ್‌ಟಿಇ ಸೀಟಿಗಿಲ್ಲ ಕಿಮ್ಮತ್ತು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Duleep Trophy Cricket: ಇಂದಿನಿಂದ 3ನೇ ಸುತ್ತಿನ ಸ್ಪರ್ಧೆ

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Athletics: ದ.ಕ. ಜಿಲ್ಲೆ ಸಮಗ್ರ ಚಾಂಪಿಯನ್‌

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

Cricket: ಒಂದೇ ಫ್ರೇಮ್‌ನಲ್ಲಿ ಗಂಭೀರ್‌- ಕೊಹ್ಲಿ; ಹಳೆ ದಿನಗಳನ್ನು ಸ್ಮರಿಸಿದ ಸ್ನೇಹಿತರು

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

T20 world cup 2024; ವನಿತೆಯರ ವಿಶ್ವಕಪ್‌ ನಿಧಿಯಲ್ಲಿ ಭಾರೀ ಏರಿಕೆ, ಸಮಾನ ಬಹುಮಾನ: ಐಸಿಸಿ

Ranji Trophy: Samit Dravid in possible squad

Ranji Trophy: ಸಂಭಾವ್ಯ ತಂಡದಲ್ಲಿ ಸಮಿತ್‌ ದ್ರಾವಿಡ್‌

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Monkey-Pox

Health Department: ಮಂಗನ ಕಾಯಿಲೆ ಆತಂಕ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಶೇಷ ನಿಗಾ

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

Karnataka; ರಾಜ್ಯಪಾಲರ ಅಧಿಕಾರಕ್ಕೆ ರಾಜ್ಯ ಸರಕಾರ ಅಂಕುಶ?

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

BJP MLA ಮುನಿರತ್ನ ಜಾಮೀನು ಭವಿಷ್ಯ ಇಂದು ನಿರ್ಧಾರ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Chandrayaan-4ಕ್ಕೆ 2100 ಕೋಟಿ ರೂ.; ಕೇಂದ್ರದಿಂದ ಅನುದಾನ

Drug ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು; ಬೆಂಗಳೂರು,ಮಂಗಳೂರಲ್ಲಿ ಡ್ರಗ್ಸ್‌ ಹಾವಳಿ ಹೆಚ್ಚಳ

Karnataka Govt.,; ಡ್ರಗ್‌ ಪೆಡ್ಲರ್‌ಗಳಿಗೆ ಇನ್ನು ಆಜೀವ ಜೈಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.