ಏಷ್ಯಾಡ್‌ ಚಿನ್ನ ಸ್ವಪ್ನಾಗೆ ಕಡೆಗೂ ಸಿಗಲಿದೆ ಸರಿಯಾದ ಶೂ


Team Udayavani, Nov 8, 2018, 6:00 AM IST

swapna-barman-shoes.jpg

ನವದೆಹಲಿ: ಈ ಬಾರಿ ಏಷ್ಯನ್‌ ಗೇಮ್ಸ್‌ನ ಹೆಪಾrಥ್ಲಾನ್‌ನಲ್ಲಿ ಬಂಗಾಳದ ಸ್ವಪ್ನಾ ಬರ್ಮನ್‌ ಚಿನ್ನ ಗೆದ್ದಿದ್ದು ಎಲ್ಲರಿಗೂ ಗೊತ್ತು. ಈ ಕ್ರೀಡೆಯಲ್ಲಿ ಭಾರತಕ್ಕೆ ಬಂದ ಮೊದಲ ಏಷ್ಯಾಡ್‌ ಪದಕವಿದು. ಆದರೆ ಸರಿಯಾದ ಶೂಗಳಿಲ್ಲದೇ ಅತ್ಯಂತ ನೋವಿನಲ್ಲಿ ಬರ್ಮನ್‌ ಸ್ಪರ್ಧಿಸಿದ್ದರೆನ್ನುವುದು ಬಹುತೇಕರಿಗೆ ಗೊತ್ತಿಲ್ಲ. ಎರಡೂ ಪಾದಗಳಲ್ಲಿ 6 ಬೆರಳು ಹೊಂದಿರುವ ಬರ್ಮನ್‌ಗೆ ಬೇಕಾದಂತಹ ರೀತಿಯಲ್ಲಿ ಶೂ ತಯಾರಿಸಿಕೊಡಲು ಯಾವ ಕಂಪನಿಯೂ ಮನಸ್ಸು ಮಾಡಿರಲಿಲ್ಲ. ಇದೀಗ ಅಡಿಡಾಸ್‌ ಕಂಪನಿ ಆ ಹೊಣೆ ಹೊತ್ತುಕೊಂಡಿದ್ದು ಬರ್ಮನ್‌ಗೆ 7 ಜೊತೆ ಶೂ ನೀಡುವುದಾಗಿ ಘೋಷಿಸಿದೆ.

ಮಾಮೂಲಿಯಾಗಿ ಉತ್ಪಾದನೆಯಾಗುವ ಶೂಗಳು ಬರ್ಮನ್‌ಗೆ ಹೊಂದುವುದಿಲ್ಲ. ಎರಡೂ ಪಾದದಲ್ಲಿ ಒಂದು ಬೆರಳು ಹೆಚ್ಚಾಗಿರುವುದರಿಂದ ಇಂತಹ ಸ್ಥಿತಿ. ಅದಕ್ಕೆ ಪ್ರತ್ಯೇಕವಾಗಿ ಬರ್ಮನ್‌ಗಾಗಿಯೇ ತಯಾರಿಸಲ್ಪಟ್ಟ ಶೂಗಳು ಬೇಕು. ಏಷ್ಯಾಡ್‌ ಮುಗಿದು ಬರ್ಮನ್‌ ಚಿನ್ನ ಗೆದ್ದ ಮೇಲೆ ಈ ಸಮಸ್ಯೆ ಮುಗಿಯುವ ಲಕ್ಷಣ ಕಂಡಿದೆ. ಬರ್ಮನ್‌ ಜರ್ಮನಿಗೆ ತೆರಳಿ ಅಡಿಡಾಸ್‌ ಲ್ಯಾಬ್‌ನಲ್ಲಿ ಪಾದ ಪರೀಕ್ಷೆ ಮಾಡಿಸಿಕೊಂಡಿದ್ದಾರೆ.

ಸ್ವಪ್ನಾ ದೇಶದ ಹೆಮ್ಮೆ. ಆಕೆಗೆ ನೆರವು ನೀಡುವುದು ನಮ್ಮ ಕರ್ತವ್ಯ ಎಂದು ಅಡಿಡಾಸ್‌ ತಿಳಿಸಿದೆ. ಹೆಪಾrಥ್ಲಾನ್‌ನಲ್ಲಿ 7 ರೀತಿಯ ಕ್ರೀಡೆಗಳಿರುತ್ತವೆ. 7ರಲ್ಲೂ ನೀಡುವ ಒಟ್ಟಾರೆ ಫ‌ಲಿತಾಂಶ ಗಮನಿಸಿ ಪದಕ ನೀಡಲಾಗುತ್ತದೆ. ಅಡಿಡಾಸ್‌ ಏಳೂ ಕ್ರೀಡೆಗೆ ಪ್ರತ್ಯೇಕವಾಗಿ ಅನುಕೂಲವಾಗುವಂತೆ 7 ಪ್ರತ್ಯೇಕ ಶೂಗಳನ್ನು ತಯಾರಿಸುತ್ತಿದೆ. ಇನ್ನಾದರೂ ಬರ್ಮನ್‌ ದುಸ್ಥಿತಿ ನಿವಾರಣೆಯಾಗುತ್ತದೆನ್ನುವುದು ಕ್ರೀಡಾಭಿಮಾನಿಗಳಿಗೆ ಸಂತಸದ ವಿಷಯ.

ಏಷ್ಯಾಡ್‌ಗೂ ಮುನ್ನ ಬರ್ಮನ್‌ ಪಾದದ ಸ್ಥಿತಿ ಸುದ್ದಿಯಾಗಿತ್ತು. ಅತ್ಯಂತ ಹಳೆಯ ಶೂಗಳಲ್ಲಿ ಅವರು ಸ್ಪರ್ಧೆ ನಡೆಸಿದ್ದರು. ಕೆಲವು ಗೆಳೆಯರು ಆಕೆಗೆ ಈ ಬೆರಳನ್ನು ಕತ್ತರಿಸಿ ತೆಗೆಯಲೂ ಸಲಹೆ ನೀಡಿದ್ದರು. ಎಲ್ಲ ಸಮಸ್ಯೆಯನ್ನು ನುಂಗಿಕೊಂಡು ಪದಕ ಗೆದ್ದ ಬರ್ಮನ್‌ ತಮ್ಮ ಬೆರಳನ್ನು ಉಳಿಸಿಕೊಳ್ಳುವುದರ ಜೊತೆಗೆ ತಮಗೆ ಬೇಕಾದ ರೀತಿಯ ಶೂ ಪಡೆಯಲು ಯಶಸ್ವಿಯಾಗಿದ್ದಾರೆ.

ಟಾಪ್ ನ್ಯೂಸ್

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

RSS

RSS ವಿಜಯದಶಮಿಗೆ ಇಸ್ರೋದ ಮಾಜಿ ಅಧ್ಯಕ್ಷ ಅತಿಥಿ

Suside-Boy

Padubidri: ಸ್ನಾನದ ಕೋಣೆಯಲ್ಲಿ ವಿಷ ಕುಡಿದು ಆತ್ಮಹತ್ಯೆ

Dhankar

CBI ಪಂಜರದ ಗಿಳಿ: ಸುಪ್ರೀಂ ಅಭಿಪ್ರಾಯಕ್ಕೆ ಉಪರಾಷ್ಟ್ರಪತಿ ಕೆಂಡ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

ಕಾಳಿಂಗ ನಾವಡ ಪ್ರಶಸ್ತಿಗೆ ಕೋಟ ಶಿವಾನಂದ ಆಯ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

1-eee

International ಕರಾಟೆ ಚಾಂಪಿಯನ್ ಶಿಪ್; ಸುಜಲ್ ಜೆ ಶೆಟ್ಟಿಗೆ ಬೆಳ್ಳಿ,ಕಂಚು

ENGvsAUS: ಏಕದಿನ ಸರಣಿಗೂ ಬಟ್ಲರ್‌ ಅಲಭ್ಯ; ಎಸ್‌ಆರ್‌ಎಚ್ ಆಟಗಾರನಿಗೆ ನಾಯಕತ್ವ

ENGvsAUS: ಏಕದಿನ ಸರಣಿಗೂ ಬಟ್ಲರ್‌ ಅಲಭ್ಯ; ಎಸ್‌ಆರ್‌ಎಚ್ ಆಟಗಾರನಿಗೆ ನಾಯಕತ್ವ

ಈತನೇ ಭಾರತದ ಮುಂದಿನ ಸೂಪರ್‌ ಸ್ಟಾರ್‌ ಎಂದ ಸ್ಟೀವ್‌ ಸ್ಮಿತ್‌, ಸ್ಟಾರ್ಕ್‌

B–G Trophy: ಈತನೇ ಭಾರತದ ಮುಂದಿನ ಸೂಪರ್‌ ಸ್ಟಾರ್‌ ಎಂದ ಸ್ಟೀವ್‌ ಸ್ಮಿತ್‌, ಸ್ಟಾರ್ಕ್‌

1-trrr

Asian Champions Trophy ಸೆಮಿಫೈನಲ್‌ : ಕೊರಿಯಾ ವಿರುದ್ಧ ಭಾರತ ಫೇವರಿಟ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

1-32

Cat; ವಿಶ್ವದ ಹಿರಿಯ ಬೆಕ್ಕು, 33 ವರ್ಷದ ರೋಸಿ ಇನ್ನಿಲ್ಲ

yogi-3

Pakistan ಕ್ಯಾನ್ಸರ್‌, ಅದರ ಹುಟ್ಟಿಗೆ ಕಾಂಗ್ರೆಸ್‌ ಕಾರಣ: ಯೋಗಿ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

Udupi ಗೀತಾರ್ಥ ಚಿಂತನೆ-37: ಕೃಷಿ, ಆರೋಗ್ಯ, ಕ್ರೀಡಾ ಕ್ಷೇತ್ರಕ್ಕೂ ಗೀತೆಯ ಪ್ರಭಾವ

kangana-2

Emergency; ಭಿಂದ್ರನ್‌ವಾಲೆ ಸಾಧುವಲ್ಲ, ಭಯೋತ್ಪಾದಕ: ಸಂಸದೆ ಕಂಗನಾ

Suside-Boy

Health Problem: ಮಲಗಿದ್ದ ವೇಳೆ ಮೃತಪಟ್ಟ ವ್ಯಕ್ತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.