T20 WC; ಹೊಸ ರೂಪ ಪಡೆದ ಸೆಮಿ ರೇಸ್; ಭಾರತ, ಆಸೀಸ್, ಅಫ್ಘಾನ್ ಪಯಣ ಹೇಗೆ? ಇಲ್ಲಿದೆ ಮಾಹಿತಿ


Team Udayavani, Jun 23, 2024, 11:52 AM IST

T20 World Cup; A new form of semi race; How to travel to India, Aussie, Afghanistan? Here is the information

ಕಿಂಗ್ಸ್ ಟೌನ್: ಬಲಿಷ್ಠ ಆಸ್ಟ್ರೇಲಿಯಾ ವಿರುದ್ದದ ಅಫ್ಘಾನಿಸ್ತಾನ ತಂಡದ ಪ್ರಸಿದ್ದ ಗೆಲುವಿನ ಬಳಿಕ ಐಸಿಸಿ ಟಿ20 ವಿಶ್ವಕಪ್ 2024ರ ಸೂಪರ್ 8 ಕದನ ಹೊಸ ರೂಪ ಪಡೆದಿದೆ. ಅಫ್ಘಾನ್ ತಂಡದ ಅಚ್ಚರಿಯ ಗೆಲುವಿನ ಕಾರಣದಿಂದ ಸೆಮಿ ಫೈನಲ್ ಗೆ ಯಾವ ತಂಡ ಅರ್ಹತೆ ಪಡೆಯಬಹುದು ಎನ್ನುವ ಕುತೂಹಲ ಗರಿಗೆದರಿದೆ.

ಇಂದು ಕಿಂಗ್ಸ್ ಟೌನ್ ನಲ್ಲಿ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್ ಆರು ವಿಕೆಟ್ ನಷ್ಟದಲ್ಲಿ 148 ರನ್ ಗಳಿಸಿದರೆ, ಆಸ್ಟ್ರೇಲಿಯಾ ತಂಡವು 127 ರನ್ ಗಳಿಗೆ ಆಲೌಟಾಯಿತು. ಈ ಮೂಲಕ ಅಫ್ಘಾನ್ ತಂಡವು 21 ರನ್ ಅಂತರದ ಗೆಲುವು ಸಾಧಿಸಿತು.

ಸೂಪರ್ 8 ನ ಗುಂಪು 1ರಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಸುಲಭವಾಗಿ ಸೆಮಿ ಫೈನಲ್ ಗೆ ಅರ್ಹತೆ ಪಡೆಯಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಇಂದಿನ ಪಂದ್ಯದ ಫಲಿತಾಂಶದ ಬಳಿಕ ಅಫ್ಘಾನ್ ಕೂಡಾ ಸೆಮಿ ರೇಸ್ ನಲ್ಲಿ ಜೀವಂತವಾಗಿದೆ.

ಸೂಪರ್ 8 ಹಂತದ ಮೊದಲೆರಡು ಪಂದ್ಯಗಳನ್ನು ಗೆದ್ದ ಭಾರತ 2.425 ರನ್ ರೇಟ್ ನೊಂದಿಗೆ ಮೊದಲ ಸ್ಥಾನದಲ್ಲಿದೆ. ಭಾರತ ಸೆಮಿ ಫೈನಲ್ ಗೆ ತಲುಪುವ ಅವಕಾಶ ಹೆಚ್ಚು. ಸದ್ಯ ಆಸೀಸ್ ಮತ್ತು ಅಫ್ಘಾನ್ ತಲಾ ಎರಡು ಅಂಕಗಳೊಂದಿಗೆ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿದೆ.

ಭಾರತದ ಪಯಣ ಹೇಗೆ

ರೋಹಿತ್ ಬಳಗವು ಮುಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ದ ಆಡಲಿದೆ. ಈ ಪಂದ್ಯ ಗೆದ್ದರೆ ಭಾರತ ಸೆಮಿ ಫೈನಲ್ ಗೆ ಪ್ರವೇಶ ಪಡೆಯಲಿದೆ. ಒಂದು ವೇಳೆ ಸೋತರೂ ಭಾರತದ ರನ್ ರೇಟ್ ಉತ್ತಮವಾಗಿರುವ ಕಾರಣ ಭಾರತ ಬಹುತೇಕ ಸೆಮಿಗೆ ಹೋಗಲಿದೆ. ಆದರೆ ಅತಿ ದೊಡ್ಡ ಸೋಲು ಭಾರತದ ಪಯಣವನ್ನು ತಡೆಯಬಹುದು.

ಆಸ್ಟ್ರೇಲಿಯಾ

ಅಫ್ಘಾನ್ ವಿರುದ್ದದ ಸೋಲಿನಿಂದ ಆಘಾತಗೊಂಡಿರುವ ಆಸೀಸ್ ಗೆ ಮುಂದಿನ ಪಂದ್ಯವು ಮಾಡು ಇಲ್ಲವೆ ಮಡಿ ಪಂದ್ಯ. ಅದೂ ಅಜೇಯವಾಗಿರುವ ಭಾರತದ ವಿರುದ್ದ. ಈ ಪಂದ್ಯದಲ್ಲಿ ಸೋತರೆ ಆಸೀಸ್ ಪಯಣ ಬಹುತೇಕ ಮುಗಿದಂತೆ. ಆಸ್ಟ್ರೇಲಿಯವು ಭಾರತದ ವಿರುದ್ಧ ಸೋಲನ್ನು ಅನುಭವಿಸಿದರೆ ಮತ್ತು ಅಫ್ಘಾನಿಸ್ತಾನವು ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದರೆ, ಆಫ್ಘನ್ನರು ಭಾರತದ ಜೊತೆಯಲ್ಲಿ ಸೆಮಿಫೈನಲ್‌ ಗೆ ಪ್ರವೇಶಿಸುತ್ತಾರೆ ಅದೇ ವೇಳೆ ಆಸ್ಟ್ರೇಲಿಯಾ ಮನೆಗೆ ತೆರಳಬೇಕಾಗುತ್ತದೆ.

ಅಫ್ಘಾನಿಸ್ತಾನ

ಅದ್ಭುತ ಆಟದಿಂದ ಆಸೀಸ್ ಗೆ ಸೋಲುಣಿಸಿರುವ ಅಫ್ಘಾನ್ ಮೊದಲ ಬಾರಿಗೆ ವಿಶ್ವಕಪ್ ಸೆಮಿ ಫೈನಲ್ ತಲುಪುವ ಅವಕಾಶ ಹೊಂದಿದೆ. ಆಸೀಸ್ ಭಾರತ ವಿರುದ್ದ ಸೋತರೆ, ಅಫ್ಘಾನಿಸ್ತಾನವು ತನ್ನ ಮುಂದಿನ ಪಂದ್ಯದಲ್ಲಿ ಬಾಂಗ್ಲಾದೇಶವನ್ನು ಸೋಲಿಸಿದರೆ ರಶೀದ್ ಬಳಗ ಸೆಮಿಗೆ ತಲುಪಲಿದೆ. ಭಾರತ ಮತ್ತು ಆಸ್ಟ್ರೇಲಿಯಾ ಪಂದ್ಯವು ಅಫ್ಘಾನ್ ಪಂದ್ಯಕ್ಕೆ ಮೊದಲು ನಡೆಯಲಿರುವ ಕಾರಣ ಇದು ಅವರಿಗೆ ಲಾಭವಾಗಲಿದೆ.

ಟಾಪ್ ನ್ಯೂಸ್

Kundapura ಪೊಲೀಸ್‌ ಹೆಸರಿನಲ್ಲಿ ಲಕ್ಷ ದೋಚಿದರುKundapura ಪೊಲೀಸ್‌ ಹೆಸರಿನಲ್ಲಿ ಲಕ್ಷ ದೋಚಿದರು

Kundapura ಪೊಲೀಸ್‌ ಹೆಸರಿನಲ್ಲಿ ಲಕ್ಷ ದೋಚಿದರು

police crime

Jammu; ಶಿವನ ದೇವಾಲಯ ಧ್ವಂಸ: 43 ಆರೋಪಿಗಳ ಬಂಧನ

1-dssd

Heavy Rain; ಜುಲೈ 5 ರಂದು ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

1-wewqewqe

Rajasthan; ಮೋದಿಗೆ ಕೊಟ್ಟ ಭರವಸೆ ಈಡೇರದ್ದಕ್ಕೆ ಪ್ರಭಾವಿ ಸಚಿವ ರಾಜೀನಾಮೆ

Kollur: ಸೊಸೈಟಿ ಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Kollur: ಸೊಸೈಟಿಗುಡ್ಡೆ ಬಳಿ ಧರೆ ಕುಸಿದು ಮಣ್ಣಿನಡಿ ಸಿಲುಕಿ ಮಹಿಳೆ ಸಾವು

Dengue-nagendra

Hunasuru: ಡೆಂಗ್ಯೂಗೆ ಆರೋಗ್ಯಾಧಿಕಾರಿಯೇ ಮೃತ್ಯು!

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1983ರ ಕಥೆ! ಅಂದು ಅವಮಾನದಿಂದ ಬಿಸಿಸಿಐಯನ್ನು ಕಾಪಾಡಿದ್ದು ಲತಾ ಮಂಗೇಶ್ಕರ್

1-sadsadas

Victory parade; ಮುಂಬೈ ನಲ್ಲಿ T20 ಚಾಂಪಿಯನ್ನರಿಗೆ ಸಂಭ್ರಮೋಲ್ಲಾಸದ ಸ್ವಾಗತ

Special tribute to Kohli-Rohit by Vistara airlines

Team India: ಕೊಹ್ಲಿ-ರೋಹಿತ್ ಗೆ ವಿಶೇಷ ಗೌರವ ನೀಡಿದ ವಿಸ್ತಾರ ವಿಮಾನ; ಇಲ್ಲಿದೆ ವಿವರ

Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ

Team India; ಹಾರ್ದಿಕ್ ಪಾಂಡ್ಯ ಬಳಿ ಕ್ಷಮೆಯಾಚಿಸಿದ ಮುಂಬೈ ಇಂಡಿಯನ್ಸ್ ಅಭಿಮಾನಿ

Indian Cricket Team met with PM Narendra Modi

T20 World Cup ಗೆದ್ದ ಭಾರತ ತಂಡವನ್ನು ಅಭಿನಂದಿಸಿದ ಪ್ರಧಾನಿ ಮೋದಿ

MUST WATCH

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

udayavani youtube

ಎಕ್ರೆಗಟ್ಟಲೆ ಹಡಿಲು ಭೂಮಿಗೆ ಜೀವ ತುಂಬಿದ ರೈತ

udayavani youtube

ಶ್ರೀ ಕ್ಷೇ.ಧ.ಗ್ರಾ.ಯೋಜನೆ | ಅರಣ್ಯ ಸಚಿವರಿಂದ ದಶಲಕ್ಷ ಗಿಡಗಳ ನಾಟಿಗೆ ಚಾಲನೆ

ಹೊಸ ಸೇರ್ಪಡೆ

Kundapura ಪೊಲೀಸ್‌ ಹೆಸರಿನಲ್ಲಿ ಲಕ್ಷ ದೋಚಿದರುKundapura ಪೊಲೀಸ್‌ ಹೆಸರಿನಲ್ಲಿ ಲಕ್ಷ ದೋಚಿದರು

Kundapura ಪೊಲೀಸ್‌ ಹೆಸರಿನಲ್ಲಿ ಲಕ್ಷ ದೋಚಿದರು

1-asdsdas

Yakshagana; ಖ್ಯಾತ ಪ್ರಸಾಧನ ಕಲಾವಿದ ಬಾಲಕೃಷ್ಣ ನಾಯಕ್‌ ವಿಧಿವಶ

police crime

Jammu; ಶಿವನ ದೇವಾಲಯ ಧ್ವಂಸ: 43 ಆರೋಪಿಗಳ ಬಂಧನ

1-dssd

Heavy Rain; ಜುಲೈ 5 ರಂದು ಉಡುಪಿಯ 3 ತಾಲೂಕುಗಳಲ್ಲಿ ಪಿಯುಸಿವರೆಗೆ ರಜೆ

1-wewqewqe

Rajasthan; ಮೋದಿಗೆ ಕೊಟ್ಟ ಭರವಸೆ ಈಡೇರದ್ದಕ್ಕೆ ಪ್ರಭಾವಿ ಸಚಿವ ರಾಜೀನಾಮೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.