T20 World Cup: ಭಾರತ-ಪಾಕ್‌ ನ್ಯೂಯಾರ್ಕ್‌ ಫೈಟ್‌


Team Udayavani, Jun 9, 2024, 7:30 AM IST

T20 World Cup: ಭಾರತ-ಪಾಕ್‌ ನ್ಯೂಯಾರ್ಕ್‌ ಫೈಟ್‌

ನ್ಯೂಯಾರ್ಕ್‌: ಸಾಂಪ್ರ ದಾಯಿಕ ಎದುರಾಳಿಗಳಾದ ಭಾರತ ಮತ್ತು ಪಾಕಿಸ್ಥಾನ ತಂಡಗಳು ಟಿ20 ವಿಶ್ವಕಪ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ 8ನೇ ಸಲ ಮುಖಾಮುಖೀಯಾಗಲಿವೆ. ರವಿವಾರ ನ್ಯೂಯಾರ್ಕ್‌ ಅಂಗಳದಲ್ಲಿ ಈ ಹೈ ವೋಲ್ಟೆàಜ್‌ ಪಂದ್ಯ ಸಾಗಲಿದ್ದು, ಈಗಾಗಲೇ ಎರಡೂ ದೇಶಗಳ ಅಭಿಮಾನಿಗಳು ರೋಚಕ ಕ್ಷಣವನ್ನು ಕಣ್ತುಂಬಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

ಐರ್ಲೆಂಡ್‌ ವಿರುದ್ಧ ಮೊದಲ ಪಂದ್ಯ ಗೆದ್ದಿರುವ ಟೀಮ್‌ ಇಂಡಿಯಾ ತುಂಬು ಆತ್ಮವಿಶ್ವಾಸದಲ್ಲಿದೆ. ಆದರೆ ಪಾಕ್‌ ಸ್ಥಿತಿ ಇದಕ್ಕೆ ತದ್ವಿರುದ್ಧ. ಆತಿಥೇಯ ಅಮೆರಿಕ ವಿರುದ್ಧ ಸೂಪರ್‌ ಓವರ್‌ನಲ್ಲಿ ಮುಗ್ಗರಿಸಿ ಮೈ ತುಂಬ ಗಾಯ ಮಾಡಿಕೊಂಡಿದೆ. ಈ ಅವಮಾನಕರ ಸೋಲಿಗೆ ತವರಿನ ಮಾಜಿಗಳೇ ಬಾಬರ್‌ ಪಡೆಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದು ಕೊಂಡಿದ್ದಾರೆ. ಇದು ಪಾಕ್‌ ತಂಡಕ್ಕೆ ಬಿದ್ದಿರುವ ದೊಡ್ಡ ಹೊಡೆತ.

ವಿಶ್ವಕಪ್‌ನಲ್ಲಿ ಭಾರತದೆದುರು ಸದಾ ಮುಗ್ಗರಿಸುವುದನ್ನೇ ಕಾಯಕವಾಗಿಸಿ ಕೊಂಡಿರುವ ಪಾಕಿಸ್ಥಾನ, ಈ ಬಾರಿ ಇನ್ನಷ್ಟು ಒತ್ತಡದಲ್ಲಿ ಆಡಬೇಕಿದೆ. ಕಾರಣ, ರೋಹಿತ್‌ ಪಡೆಯೆದರು ಎಡವಿದರೆ ಪಾಕಿಸ್ಥಾನ ಕೂಟದಿಂದಲೇ ಹೊರಬೀಳುವ ಸಾಧ್ಯತೆ ಇದೆ. ಇನ್ನೊಂ ದೆಡೆ ಅಮೆರಿಕ ಒಂದೊಂದೇ ಮೆಟ್ಟಿಲು ಮೇಲೇರುತ್ತಿರುವುದರಿಂದ ಪಾಕ್‌ ಹಾದಿಗೆ ಮುಳ್ಳಾಗಿ ಪರಿಣಮಿಸಿದೆ.

ನಿಧಾನ ಗತಿಯ ಟ್ರ್ಯಾಕ್‌:

ಭಾರತ-ಪಾಕಿಸ್ಥಾನ ಪಂದ್ಯವೆಂದರೆ ಸದಾ ಜೋಶ್‌ ತುಂಬಿರುತ್ತದೆ. ಆದರೆ ರವಿವಾರದ ಪಂದ್ಯ ನ್ಯೂಯಾರ್ಕ್‌ನ ನಿಧಾನ ಗತಿಯ ಟ್ರ್ಯಾಕ್‌ನಲ್ಲಿ ನಡೆಯುವುದರಿಂದ ಇಲ್ಲಿ ರನ್‌ ಪ್ರವಾಹ ಹರಿದು ಬರುವ ಸಾಧ್ಯತೆ ತೀರಾ ಕಡಿಮೆ. ಈವರೆಗೆ ಇಲ್ಲಿ ಆಡಲಾದ 3 ಪಂದ್ಯಗಳ 6 ಇನ್ನಿಂಗ್ಸ್‌

ಗಳಲ್ಲಿ ತಂಡಗಳು 100 ರನ್‌ ಗಡಿ ದಾಟಿದ್ದು 2 ಸಲ ಮಾತ್ರ. ಕಳೆದ ಎಪ್ರಿಲ್‌ನಲ್ಲಿ “ಅಡಿಲೇಡ್‌ ಓವಲ್‌’ನ ಗ್ರೌಂಡ್ಸ್‌ಮ್ಯಾನ್‌ ಡೇಮಿಯನ್‌ ಹ್ಯೂಗ್‌ ಅವರ ಉಸ್ತುವಾರಿಯಲ್ಲಿ ಇಲ್ಲಿನ ಟ್ರ್ಯಾಕ್‌ ನಿರ್ಮಾಣಗೊಂಡರೂ ಇದು ನಿರೀಕ್ಷಿತ ಯಶಸ್ಸು ಕಂಡಿಲ್ಲ. ಅನಿರೀಕ್ಷಿತ ಬೌನ್ಸ್‌ ಬ್ಯಾಟರ್‌ಗಳ ಪಾಲಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.

ಭಾರತ ತನ್ನ ಮೊದಲ ಪಂದ್ಯವನ್ನು ಐರ್ಲೆಂಡ್‌ ವಿರುದ್ಧ ಇದೇ ಅಂಗಳದಲ್ಲಿ ಆಡಿತ್ತು. ಐರಿಷ್‌ ಪಡೆ 16 ಓವರ್‌ಗಳಲ್ಲಿ 96ಕ್ಕೆ ಕುಸಿದ ಬಳಿಕ, 12.2 ಓವರ್‌ಗಳಲ್ಲಿ ರೋಹಿತ್‌ ಪಡೆ ಗುರಿ ತಲುಪಿತ್ತು. ಬಾಂಗ್ಲಾ ಎದುರಿನ ಅಭ್ಯಾಸ ಪಂದ್ಯವನ್ನೂ ಭಾರತ ಇಲ್ಲೇ ಆಡಿತ್ತು. ಆದರೆ ಪಾಕಿಸ್ಥಾನಕ್ಕೆ ಇದು ನ್ಯೂಯಾರ್ಕ್‌ನಲ್ಲಿ ಮೊದಲ ಪಂದ್ಯ. ಗುರುವಾರ ರಾತ್ರಿಯಷ್ಟೇ ಬಾಬರ್‌ ಪಡೆ ಇಲ್ಲಿಗೆ ಆಗಮಿಸಿತ್ತು.

ಕುಲದೀಪ್‌ ಸೇರ್ಪಡೆ?:

ಭಾರತ ಈ ಪಂದ್ಯಕ್ಕಾಗಿ ಒಂದು ಬದಲಾವಣೆ ಮಾಡಿಕೊಳ್ಳುವ ಸಾಧ್ಯತೆ ಇದೆ. ರಿಸ್ಟ್‌ ಸ್ಪಿನ್ನರ್‌ ಕುಲದೀಪ್‌ ಯಾದವ್‌ ಅವರನ್ನು ಆಡುವ ಬಳಗಕ್ಕೆ ಸೇರಿಸಿಕೊಳ್ಳುವ ಯೋಜನೆಯಲ್ಲಿದೆ. ಆಗ ಅಕ್ಷರ್‌ ಪಟೇಲ್‌ ಅಥವಾ ರವೀಂದ್ರ ಜಡೇಜ ಹೊರಗುಳಿಯಬೇಕಾದೀತು.

ಉಳಿದಂತೆ ಬ್ಯಾಟಿಂಗ್‌ ಸರದಿ ಯಲ್ಲಿ ಯಾವುದೇ ಬದಲಾವಣೆ ಸಂಭವವಿಲ್ಲ. ರೋಹಿತ್‌-ಕೊಹ್ಲಿ ಇನ್ನಿಂಗ್ಸ್‌ ಆರಂಭಿ ಸುವು ದರಿಂದ ಜೈಸ್ವಾಲ್‌ಗೆ ಅವಕಾಶ ಸಿಗದು. ಇದರಿಂದ ಲಾಭವಾದದ್ದು ಶಿವಂ ದುಬೆ ಅವರಿಗೆ.

ಪಾಕ್‌ ಸಾಲು ಸಾಲು ವೈಫ‌ಲ್ಯ :

ಎಲ್ಲ ವಿಭಾಗಗಳಲ್ಲೂ ಸುಧಾರಣೆ ಕಂಡರಷ್ಟೇ ಪಾಕಿಸ್ಥಾನಕ್ಕಿಲ್ಲಿ ಉಳಿಗಾಲ. ಅಮೆರಿಕ ವಿರುದ್ಧ ಪಾಕಿಸ್ಥಾನದ ಬೌಲಿಂಗ್‌ ಹಾಗೂ ಫೀಲ್ಡಿಂಗ್‌ ತೀರಾ ಕಳಪೆಯಾಗಿತ್ತು. ಆಮಿರ್‌ ಎಸೆದ ಸೂಪರ್‌ ಓವರ್‌ನಲ್ಲಿ 7 ವೈಡ್‌ಗಳಿದ್ದವು! ಕ್ಷೇತ್ರರಕ್ಷಣೆಯಲ್ಲಿ ಪಾಕ್‌ ಆಟಗಾರರು ತೀರಾ ಸೋಮಾರಿಗಳಂತೆ ಕಂಡಿದ್ದರು.

ಬಿಗಿ ಭದ್ರತೆಯಲ್ಲಿ ಪಂದ್ಯ:

ಐಸಿಸಿ ಉಗ್ರರ ಬೆದರಿಕೆ ಹಿನ್ನೆಲೆಯಲ್ಲಿ ಈ ಪಂದ್ಯ ಅತ್ಯಂತ ಬಿಗಿ ಭದ್ರತೆಯಲ್ಲಿ ನಡೆಯಲಿದೆ. ನಾಸಾವು ಕೌಂಟಿ ಪೊಲೀಸ್‌ ಮಹಾನಿರ್ದೇಶಕ ಪ್ಯಾಟ್ರಿಕ್‌ ರೈಡರ್‌ ಈ ಕುರಿತು ಹೇಳಿಕೆ ನೀಡಿದ್ದು, “ನಮಗೆ ಕ್ರಿಕೆಟ್‌ ಹೊಸತೇ ಆಗಿರಬಹುದು. ಆದರೆ ಭದ್ರತೆಯ ಯೋಜನೆ ಹೊಸತಲ್ಲ. ಅಂದು ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ಒದಗಿಸಿದ ಭದ್ರತೆಗಿಂತಲೂ ಹೆಚ್ಚಿನ ಭದ್ರತೆ ಈ ಪಂದ್ಯಕ್ಕೆ ಇರಲಿದೆ’ ಎಂದಿದ್ದಾರೆ.

ಸಚಿನ್‌ ಆಗಮನ:

ಈ ಹೈ ವೋಲ್ಟೆàಜ್‌ ಪಂದ್ಯ ವೀಕ್ಷಿಸಲು ಮಾಸ್ಟರ್‌ ಬ್ಲಾಸ್ಟರ್‌ ಖ್ಯಾತಿಯ ಸಚಿನ್‌ ತೆಂಡುಲ್ಕರ್‌ ಈಗಾಗಲೇ ನ್ಯೂಯಾರ್ಕ್‌ಗೆ

ಆಗಮಿಸಿದ್ದಾರೆ. ಈ ಪಂದ್ಯವನ್ನು ಕಣ್ತುಂಬಿಸಿ ಕೊಳ್ಳುವುದರ ಜತೆಗೆ ಭಾರತ ತಂಡವನ್ನು ಹುರಿದುಂಬಿಸಲಿದ್ದಾರೆ.

ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ಥಾನ:

ವರ್ಷ  ಸ್ಥಳ     ಫ‌ಲಿತಾಂಶ

2007    ಡರ್ಬನ್‌            ಭಾರತಕ್ಕೆ “ಬಾಲೌಟ್‌’ ಜಯ

2007    ಜೊಹಾನ್ಸ್‌ಬರ್ಗ್‌          ಭಾರತಕ್ಕೆ 5 ರನ್‌ ಜಯ

2012    ಕೊಲಂಬೊ     ಭಾರತಕ್ಕೆ 8 ವಿಕೆಟ್‌ ಜಯ

2014    ಮಿರ್ಪುರ್‌         ಭಾರತಕ್ಕೆ 7 ವಿಕೆಟ್‌ ಜಯ

2016    ಕೋಲ್ಕತಾ        ಭಾರತಕ್ಕೆ 6 ವಿಕೆಟ್‌ ಜಯ

2021    ದುಬಾೖ               ಪಾಕಿಸ್ಥಾನಕ್ಕೆ 10 ವಿಕೆಟ್‌ ಜಯ

2022    ಮೆಲ್ಬರ್ನ್         ಭಾರತಕ್ಕೆ 4 ವಿಕೆಟ್‌ ಜಯ

ನ್ಯೂಯಾರ್ಕ್‌ ಪಿಚ್‌ ವಿರುದ್ಧ  ದೂರು

ನ್ಯೂಯಾರ್ಕ್‌ ಪಿಚ್‌ ವಿರುದ್ಧ ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ ಐಸಿಸಿಗೆ ಅನಧಿಕೃತ ದೂರು ನೀಡಿದೆ ಎಂದು ವರದಿಯಾಗಿದೆ. ಅಪಾಯಕಾರಿ ಪಿಚ್‌ನಲ್ಲಿ ತಂಡದ ನಾಯಕ ರೋಹಿತ್‌ ಶರ್ಮ ಗಾಯಕ್ಕೀಡಾದ ಬಳಿಕ, ಈ ಬೆಳವಣಿಗೆ ಸಂಭವಿಸಿದೆ. ಪಾಕಿಸ್ಥಾನ ವಿರುದ್ಧದ ಪಂದ್ಯಕ್ಕಾಗಿ ಅಭ್ಯಾಸ ನಡೆಸುವಾಗ ರೋಹಿತ್‌ ಅವರ ಹೆಬ್ಬೆರಳಿಗೆ ಚೆಂಡು ಬಡಿದಿದೆ. ಇದಕ್ಕೂ ಮುನ್ನ ಐರ್ಲೆಂಡ್‌ ವಿರುದ್ಧದ ಪಂದ್ಯದಲ್ಲೂ ರೋಹಿತ್‌ ಭುಜಕ್ಕೆ ಚೆಂಡು ಬಡಿದಿತ್ತು.  ಇಲ್ಲಿನ ಡ್ರಾಪ್‌ ಇನ್‌ ಪಿಚ್‌ನಲ್ಲಿ ಬಿರುಕುಗಳಿವೆ. ಇಲ್ಲಿ ಬೌನ್ಸ್‌ ಕೂಡ ಜಾಸ್ತಿ. ಇದೇ ಕಾರಣಕ್ಕೆ ಈ ಪಿಚ್‌ ಅನ್ನು ಹಲವಾರು ಮಾಜಿ ಕ್ರಿಕೆಟಿಗರು ಟೀಕಿಸಿದ್ದರು. ಇದನ್ನು ಪರಿಶೀಲಿಸುವುದಾಗಿ ಐಸಿಸಿ ಭರವಸೆ ನೀಡಿದೆ.

ಟಾಪ್ ನ್ಯೂಸ್

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!

001

BBK11: ಬಿಗ್‌ ಬಾಸ್‌ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Manorama-Bhat

Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ

Rajiv-Kumar

Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ

033

Urmila Matondkar To Jayam Ravi.. ಈ ವರ್ಷ ವಿಚ್ಛೇದನ ಪಡೆದ ಸೆಲೆಬ್ರಿಟಿಗಳು ಜೋಡಿಗಳಿವು..

Basangouda Patil Yatnal

BJP: ಹೈಕಮಾಂಡ್ ಅನುಮತಿಸಿದರೆ ಬಸವಕಲ್ಯಾಣದಿಂದ ಬೆಂಗಳೂರಿಗೆ ಪಾದಯಾತ್ರೆ: ಶಾಸಕ ಯತ್ನಾಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Musheer Khan

Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್‌ ಖಾನ್‌

Kanpura Test: Indian players left the match and went to the hotel due to rain

Kanpur Test: ಪಂದ್ಯ ಬಿಟ್ಟು ಹೋಟೆಲ್‌ ಗೆ ತೆರಳಿದ ಭಾರತೀಯ ಆಟಗಾರರು

ENGvsAUS: ಇಂಗ್ಲೆಂಡ್‌ ಆಟಕ್ಕೆ ಸೋತ ಆಸೀಸ್;‌ ಸರಣಿ ಸಮಗೊಳಿಸಿದ ಬ್ರೂಕ್‌ ಪಡೆ

ENGvsAUS: ಇಂಗ್ಲೆಂಡ್‌ ಆಟಕ್ಕೆ ಸೋತ ಆಸೀಸ್;‌ ಸರಣಿ ಸಮಗೊಳಿಸಿದ ಬ್ರೂಕ್‌ ಪಡೆ

1-bevas

Test ವಿವಾದ : ಹಲ್ಲೆಯಾಗಿಲ್ಲ, ಬಾಂಗ್ಲಾ ಹುಲಿ ‘ಅಸ್ವಸ್ಥ’

1-kamindu

Test; ಬ್ರಾಡ್‌ಮನ್‌ ದಾಖಲೆ ಸರಿದೂಗಿಸಿದ ಮೆಂಡಿಸ್‌

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Food-1

Food Adulteration: ನೀವೇ ಮನೆಯಲ್ಲಿ ಆಹಾರ ಕಲಬೆರಕೆಯನ್ನು ಪತ್ತೆ ಹಚ್ಚಿ!

001

BBK11: ಬಿಗ್‌ ಬಾಸ್‌ ಕನ್ನಡ-11ರ ಮೊದಲ ಅಧಿಕೃತ ಸ್ಪರ್ಧಿ ಇವರೇ ನೋಡಿ..

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Dharwad; ಸಿದ್ದರಾಮಯ್ಯ ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು: ಪ್ರಹ್ಲಾದ ಜೋಶಿ

Manorama-Bhat

Theater, Stage Artist: ನಗುವಿನ ಸವಿ ಹಂಚಿದ ಅಮ್ಮ ಮನೋರಮಾ

Rajiv-Kumar

Maharashtra ವಿಧಾನಸಭಾ ಚುನಾವಣೆ: ಸಿದ್ಧತೆ ಪರಿಶೀಲಿಸಿದ ಚುನಾವಣ ಆಯೋಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.