T20 World Cup;ಸೋಲಿನೊಂದಿಗೆ ನ್ಯೂಜಿಲ್ಯಾಂಡ್‌ ಹೊರಕ್ಕೆ:ವೆಸ್ಟ್‌ ಇಂಡೀಸ್‌ ಸೂಪರ್‌ 8ಕ್ಕೆ


Team Udayavani, Jun 14, 2024, 12:13 AM IST

1-wi

ಟರೂಬ: ಶೆರ್ಫಾನೆ ರುಥರ್‌ಫೋರ್ಡ್‌ ಮತ್ತು ಅಲ್ಜಾರಿ ಜೊಸೆಫ್ ಅವರ ಅಮೋಘ ಆಟದಿಂದಾಗಿ ಆತಿಥೇಯ ವೆಸ್ಟ್‌ ಇಂಡೀಸ್‌ ತಂಡವು ಗುರುವಾರದ ಟಿ20 ವಿಶ್ವಕಪ್‌ನ ಪಂದ್ಯದಲ್ಲಿ ನ್ಯೂಜಿಲ್ಯಾಂಡ್‌ ತಂಡವನ್ನು 13 ರನ್ನುಗಳಿಂದ ಸೋಲಿಸಿ ಸೂಪರ್‌ 8 ಹಂತಕ್ಕೇರಿತು.

ರುಥರ್‌ಫೋರ್ಡ್‌ ಅವರ ಅವಿಸ್ಮರಣೀಯ ಆಟದಿಂದಾಗಿ ವೆಸ್ಟ್‌ಇಂಡೀಸ್‌ ತಂಡವು 9 ವಿಕೆಟಿಗೆ 149 ರನ್ನುಗಳ ಸವಾಲೆಸೆಯುವ ಮೊತ್ತ ಪೇರಿಸುವಲ್ಲಿ ಯಶಸ್ವಿಯಾಯಿತು. ಇದಕ್ಕುತ್ತರವಾಗಿ ಅಲ್ಜಾರಿ ಜೊಸೆಫ್ ಅವರ ದಾಳಿಗೆ ಕುಸಿದ ನ್ಯೂಜಿಲ್ಯಾಂಡ್‌ ನಿಗದಿತ ಓವರ್‌ಗಳಲ್ಲಿ 9 ವಿಕೆಟಿಗೆ 136 ರನ್‌ ಗಳಿಸಲಷ್ಟೇ ಶಕ್ತವಾಗಿ ಶರಣಾಯಿತು.
ಈ ಕೂಟದಲ್ಲಿ ಸತತ ಮೂರನೇ ಗೆಲುವು ದಾಖ ಲಿಸಿದ ವೆಸ್ಟ್‌ಇಂಡೀಸ್‌ ಆರಂಕದೊಂದಿಗೆ ಸೂಪರ್‌ 8ಕ್ಕೇರಿತು. ಸತತ ಎರಡು ಪಂದ್ಯಗಳಲ್ಲಿ ಸೋತ ನ್ಯೂಜಿಲ್ಯಾಂಡ್‌ ಕೂಟದಿಂದ ಹೊರಬಿತ್ತು. ನ್ಯೂಜಿ ಲ್ಯಾಂಡ್‌ ಇನ್ನೆರಡು ಪಂದ್ಯಗಳಲ್ಲಿ ಗೆದ್ದರೂ ನಾಲ್ಕಂಕ ಪಡೆಯಬಹುದು. ಅಷ್ಟೇ ಅಂಕವನ್ನು ಇದೀಗ ಅಫ್ಘಾನಿಸ್ಥಾನ ಹೊಂದಿದೆ. ಅಫ್ಘಾನಿಸ್ಥಾನಕ್ಕೂ ಇನ್ನೆರಡು ಪಂದ್ಯ ಆಡಲಿಕ್ಕಿದೆ ಮಾತ್ರವಲ್ಲದೇ ಈಗಾಗಲೇ ಪ್ಲಸ್‌ 5.225 ರನ್‌ಧಾರಣೆಯನ್ನು ಕೂಡ ಹೊಂದಿದೆ.

2021ರ ರನ್ನರ್‌ ಅಪ್‌ ತಂಡವಾಗಿದ್ದ ನ್ಯೂಜಿ ಲ್ಯಾಂಡ್‌ ವಿಶ್ವಕಪ್‌ ಕೂಟಗಳಲ್ಲಿ ಅತ್ಯಂತ ಸ್ಥಿರ ನಿರ್ವಹಣೆ ನೀಡಿದ ತಂಡಗಳಲ್ಲಿ ಒಂದಾಗಿತ್ತು. 2015, 2019 ಮತ್ತು 2023ರ ಏಕದಿನ ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ತಲುಪಿದ್ದ ನ್ಯೂಜಿಲ್ಯಾಂಡ್‌ ತಂಡವು 2016, 2021 ಮತ್ತು 2022ರ ಟಿ20 ವಿಶ್ವಕಪ್‌ನಲ್ಲಿ ಕೂಡ ಅಂತಿಮ ನಾಲ್ಕರ ಹಂತ ತಲುಪಿತ್ತು. ಆದರೆ ಈ ಬಾರಿ ಮೊದಲ ಸುತ್ತಿನಲ್ಲಿಯೇ ನಿರ್ಗಮಿಸಿದೆ.

ಆರಂಭಿಕ ಕುಸಿತ
ವೆಸ್ಟ್‌ಇಂಡೀಸ್‌ನ ಆರಂಭ ಉತ್ತಮವಾಗಿರಲಿಲ್ಲ. ಟ್ರೆಂಟ್‌ ಬೌಲ್ಟ್, ಟಿಮ್‌ ಸೌಥಿ ದಾಳಿಗೆ ಕುಸಿದ ವೆಸ್ಟ್‌ ಇಂಡೀಸ್‌ 12.3 ಓವರ್‌ ಮುಗಿದಾಗ 7 ವಿಕೆಟಿಗೆ ಕೇವಲ 76 ರನ್‌ ಗಳಿಸಿ ಒದ್ದಾಡುತ್ತಿತ್ತು. ಆದರೆ ಶೆರ್ಫಾನೆ ರುಥರ್‌ಫೋರ್ಡ್‌ ಅವರ ಅದ್ಭುತ ಆಟದಿಂದಾಗಿ ತಂಡ ತಿರುಗೇಟು ನೀಡಿತಲ್ಲದೇ ಉತ್ತಮ ಮೊತ್ತ ಪೇರಿಸಲು ಯಶಸ್ವಿಯಾಯಿತು. ನ್ಯೂಜಿಲ್ಯಾಂಡ್‌ ದಾಳಿಯನ್ನು ಸಮರ್ಥವಾಗಿ ಎದುರಿಸಿದ ಅವರು 39 ಎಸೆತ ಎದುರಿಸಿ 68 ರನ್‌ ಗಳಿಸಿ ಅಜೇಯರಾಗಿ ಉಳಿದರು. ಎರಡು ಬೌಂಡರಿ ಮತ್ತು ಆರು ಸಿಕ್ಸರ್‌ ಬಾರಿಸಿದರು. ಅವರ ಸಾಹಸದ ಬ್ಯಾಟಿಂಗ್‌ನಿಂದಾಗಿ ವೆಸ್ಟ್‌ಇಂಡೀಸ್‌ 9 ವಿಕೆಟಿಗೆ 149 ರನ್‌ ಗಳಿಸುವಂತಾಯಿತು.

ಮಿಂಚಿದ ಜೊಸೆಫ್
ವಿಂಡೀಸ್‌ನಂತೆ ನ್ಯೂಜಿಲ್ಯಾಂಡ್‌ ಕೂಡ ರನ್‌ ಗಳಿಸಲು ಬಹಳಷ್ಟು ಒದ್ದಾಟ ನಡೆಸಿತು. ಬ್ಯಾಟಿಂಗಿಗೆ ಕಠಿನವೆನಿಸಿದ ಈ ಪಿಚ್‌ನಲ್ಲಿ ಪ್ರಮುಖ ಆಟಗಾರರೂ ಕೂಡ ರನ್‌ ಗಳಿಸಲು ಕಷ್ಟಪಟ್ಟರು. ಡೆವೋನ ಕಾನ್ವೆ, ಕೇನ್‌ ವಿಲಿಯಮ್ಸನ್‌, ರಚಿನ್‌ ರವೀಂದ್ರ ಅಲ್ಪ ಮೊತ್ತಕ್ಕೆ ಔಟಾದರು. ಗ್ಲೆನ್‌ ಫಿಲಿಪ್ಸ್‌ ಮಾತ್ರ ಸ್ವಲ್ಪಮಟ್ಟಿಗೆ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದರು. ಅವರು 33 ಎಸೆತ ಎದುರಿಸಿ 40 ರನ್‌ ಗಹೊಡೆದರು.

ನ್ಯೂಜಿಲ್ಯಾಂಡ್‌ ಗೆಲ್ಲಲು ಅಂತಿಮ ಓವರಿನಲ್ಲಿ 33 ರನ್‌ ಗಳಿಸಬೇಕಾಗಿತ್ತು. ಮೊದಲ ನಾಲ್ಕು ಎಸೆತಗಳಲ್ಲಿ ಮಿಚೆಲ್‌ ಸ್ಯಾಂಟ್ನರ್‌ ಮೂರು ಸಿಕ್ಸರ್‌ ಬಾರಿಸಿದರು. ಮುಂದಿನೆರಡು ಎಸೆತಗಳಲ್ಲಿ ಒಂಟಿ ರನ್‌ ಮಾತ್ರ ಬಂತು. ಅಂತಿಮವಾಗಿ ತಂಡ 13 ರನ್ನುಗಳಿಂದ ಸೋಲನ್ನು ಕಂಡಿತು.

ಸಂಕ್ಷಿಪ್ತ ಸ್ಕೋರು
ವೆಸ್ಟ್‌ಇಂಡೀಸ್‌ 9 ವಿಕೆಟಿಗೆ 149 (ಶೆರ್ಫಾನೆ ರುಥರ್‌ಫೋರ್ಡ್‌ 68 ಔಟಾಗದೆ, ಟ್ರೆಂಟ್‌ ಬೌಲ್ಟ್ 16ಕ್ಕೆ 3, ಟಿಮ್‌ ಸೌಥಿ 21ಕ್ಕೆ 2, ಲೂಕಿ ಫೆರ್ಗ್ಯುಸನ್‌ 27ಕ್ಕೆ 2); ನ್ಯೂಜಿಲ್ಯಾಂಡ್‌ 9 ವಿಕೆಟಿಗೆ 136 (ಗ್ಲೆನ್‌ ಫಿಲಿಪ್ಸ್‌ 40, ಅಲ್ಜಾರಿ ಜೊಸೆಫ್ 19ಕ್ಕೆ 4, ಗುಡಕೇಶ್‌ ಮೋಟಿ 25ಕ್ಕೆ 3).
ಪಂದ್ಯಶ್ರೇಷ್ಠ: ರುಥರ್‌ಫೋರ್ಡ್‌

ಟಾಪ್ ನ್ಯೂಸ್

7-belthangady

Belthangady: ಬಸ್-ಬೈಕ್ ಢಿಕ್ಕಿ; ನಡ ಗ್ರಾಮದ ಗ್ರಾಮ ಕರಣಿಕರ ಕಚೇರಿ ಸಹಾಯಕ ಸಾವು

Rohit Sharma backs Virat kohli in T20 World Cup

T20 World Cup; ವಿರಾಟ್ ಫಾರ್ಮ್ ಬಗ್ಗೆ ಚಿಂತೆಯಿಲ್ಲ…: ಕ್ಯಾಪ್ಟನ್ ಶರ್ಮಾ ಹೀಗಂದಿದ್ಯಾಕೆ?

Udupi: ಜೂನ್‌ 29ರಂದು “ದೊಡ್ಡ ಸಾಮಗರ ನಾಲ್ಮೊಗ” ಪುಸ್ತಕ ಬಿಡುಗಡೆ, ಯಕ್ಷಗಾನ ತಾಳಮದ್ದಳೆ

Udupi: ಜೂನ್‌ 29ರಂದು “ದೊಡ್ಡ ಸಾಮಗರ ನಾಲ್ಮೊಗ” ಪುಸ್ತಕ ಬಿಡುಗಡೆ, ಯಕ್ಷಗಾನ ತಾಳಮದ್ದಳೆ

DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?

DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?

Sandalwood: ಜುಲೈ ತಿಂಗಳ ಪೂರ್ತಿ ಹೊಸಬರ ಮೆರವಣಿಗೆ; 20+ ಸಿನಿಮಾ ರಿಲೀಸ್

Sandalwood: ಜುಲೈ ತಿಂಗಳ ಪೂರ್ತಿ ಹೊಸಬರ ಮೆರವಣಿಗೆ; 20+ ಸಿನಿಮಾ ರಿಲೀಸ್

Kampli: ಅರಣ್ಯ ಇಲಾಖೆಯ ಬಲೆಗೆ ಬೀಳದ ಮೊಸಳೆ ಮಿನುಗಾರರ ಬಲೆಗೆ ಬಿತ್ತು… ನಿಟ್ಟುಸಿರು ಬಿಟ್ಟ ಜನ

Kampli: ಅರಣ್ಯ ಇಲಾಖೆಯ ಬಲೆಗೆ ಬೀಳದ ಮೊಸಳೆ ಮಿನುಗಾರರ ಬಲೆಗೆ ಬಿತ್ತು…

Heavy Rain: ಕಳಸ ತಾಲೂಕಿನ ಶಾಲೆಗಳಿಗೆ ರಜೆ… ಶಾಲೆಗೆ ಹೋಗಿ ವಾಪಸ್ಸಾದ ವಿದ್ಯಾರ್ಥಿಗಳು

Kalasa: ತಡವಾಗಿ ಘೋಷಣೆಯಾದ ರಜೆ… ಶಾಲೆಗೆ ಹೋಗಿ ವಾಪಸ್ಸಾದ ವಿದ್ಯಾರ್ಥಿಗಳು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Rohit Sharma backs Virat kohli in T20 World Cup

T20 World Cup; ವಿರಾಟ್ ಫಾರ್ಮ್ ಬಗ್ಗೆ ಚಿಂತೆಯಿಲ್ಲ…: ಕ್ಯಾಪ್ಟನ್ ಶರ್ಮಾ ಹೀಗಂದಿದ್ಯಾಕೆ?

IND-W vs SA-W: ಇಂದಿನಿಂದ ಭಾರತ-ದ.ಆಫ್ರಿಕಾ ಮಹಿಳಾ ಟೆಸ್ಟ್‌ ಆರಂಭ

IND-W vs SA-W: ಇಂದಿನಿಂದ ಭಾರತ-ದ.ಆಫ್ರಿಕಾ ಮಹಿಳಾ ಟೆಸ್ಟ್‌ ಆರಂಭ

1-india

Semi Final 2; ಇಂಗ್ಲೆಂಡ್ ವಿರುದ್ಧ ಅಮೋಘ ಜಯ ಸಾಧಿಸಿದ ಭಾರತ ಫೈನಲ್ ಗೆ ಲಗ್ಗೆ

31

Kiran Pahal: ವನಿತೆಯರ 400 ಮೀ.; ಕಿರಣ್‌ ಪಹಲ್‌ ಒಲಿಂಪಿಕ್ಸ್‌ ಗೆ ಅರ್ಹತೆ

Ajinkya Rahane: ಲೀಸೆಸ್ಟರ್‌ ಶೈರ್‌ ಪರ ಕೌಂಟಿ ಆಡಲಿದ್ದಾರೆ ರಹಾನೆ

Ajinkya Rahane: ಲೀಸೆಸ್ಟರ್‌ ಶೈರ್‌ ಪರ ಕೌಂಟಿ ಆಡಲಿದ್ದಾರೆ ರಹಾನೆ

MUST WATCH

udayavani youtube

ಮಾತು ಬರದ ಮಗುವಿಗೆ ಮಾತು ಬರಿಸಿದ ಕಾಪು ಮಾರಿಯಮ್ಮ | ಕಾಪುವಿನ ಅಮ್ಮನ ಪವಾಡ

udayavani youtube

ಡಿಸಿಎಂ ವಿಚಾರ ಇನ್ನೊಮ್ಮೆ ಮಾತನಾಡೋಣ; ಕುಕ್ಕೆಯಲ್ಲಿ ಡಿ.ಕೆ.ಶಿವಕುಮಾರ್

udayavani youtube

ಆನೆಗುಡ್ಡೆ ಶ್ರೀ ವಿನಾಯಕ ದೇಗುಲದಲ್ಲಿ ಅಂಗಾರ ಸಂಕಷ್ಟಹರ ಚತುರ್ಥಿ|

udayavani youtube

ಬಸ್ಸೇರಿ ಸಮಸ್ಯೆ ಆಲಿಸಿದ ಶಾಸಕ ರೈ

udayavani youtube

ಹರ್ನಿಯಾ ಸಮಸ್ಯೆಗೆ ಕಾರಣವೇನು?ಚಿಕಿತ್ಸಾ ವಿಧಾನಗಳು ಯಾವುವು?

ಹೊಸ ಸೇರ್ಪಡೆ

7-belthangady

Belthangady: ಬಸ್-ಬೈಕ್ ಢಿಕ್ಕಿ; ನಡ ಗ್ರಾಮದ ಗ್ರಾಮ ಕರಣಿಕರ ಕಚೇರಿ ಸಹಾಯಕ ಸಾವು

Rohit Sharma backs Virat kohli in T20 World Cup

T20 World Cup; ವಿರಾಟ್ ಫಾರ್ಮ್ ಬಗ್ಗೆ ಚಿಂತೆಯಿಲ್ಲ…: ಕ್ಯಾಪ್ಟನ್ ಶರ್ಮಾ ಹೀಗಂದಿದ್ಯಾಕೆ?

Udupi: ಜೂನ್‌ 29ರಂದು “ದೊಡ್ಡ ಸಾಮಗರ ನಾಲ್ಮೊಗ” ಪುಸ್ತಕ ಬಿಡುಗಡೆ, ಯಕ್ಷಗಾನ ತಾಳಮದ್ದಳೆ

Udupi: ಜೂನ್‌ 29ರಂದು “ದೊಡ್ಡ ಸಾಮಗರ ನಾಲ್ಮೊಗ” ಪುಸ್ತಕ ಬಿಡುಗಡೆ, ಯಕ್ಷಗಾನ ತಾಳಮದ್ದಳೆ

DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?

DNA Test: ಐಸ್ ಕ್ರೀಮ್ ನಲ್ಲಿ ಮಾನವನ ಬೆರಳು ಪತ್ತೆ ಪ್ರಕರಣ… DNA ವರದಿ ಹೇಳಿದ್ದೇನು?

Sandalwood: ಜುಲೈ ತಿಂಗಳ ಪೂರ್ತಿ ಹೊಸಬರ ಮೆರವಣಿಗೆ; 20+ ಸಿನಿಮಾ ರಿಲೀಸ್

Sandalwood: ಜುಲೈ ತಿಂಗಳ ಪೂರ್ತಿ ಹೊಸಬರ ಮೆರವಣಿಗೆ; 20+ ಸಿನಿಮಾ ರಿಲೀಸ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.