T20 Worldcup: ಮೊದಲ ಸುತ್ತಲ್ಲೇ 4 ದೊಡ್ಡ ತಂಡಗಳ ಖೇಲ್ ಖತಂ?
Team Udayavani, Jun 11, 2024, 9:18 AM IST
ಈ ಬಾರಿ ಟಿ20 ವಿಶ್ವಕಪ್ನಲ್ಲಿ ನೂತನ ತಂಡಗಳಿಗೆ ಅವಕಾಶ ನೀಡಿದ್ದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗಿತ್ತು. ಮೊದಲ ಬಾರಿ ಪಂದ್ಯಾವಳಿಯಲ್ಲಿ 20 ತಂಡಗಳು ಭಾಗಿಯಾಗಿದ್ದು, 3 ತಂಡಗಳು ಪದಾರ್ಪಣೆ ಮಾಡಿವೆ. ಬಹುತೇಕ ತಂಡಗಳು ಮೊದಲ ಸುತ್ತಿನಲ್ಲೇ ಹೊರ ಬೀಳಲಿವೆ, ಐಸಿಸಿ ಸಮಯ ವ್ಯರ್ಥ ಮಾಡುತ್ತಿವೆ ಎಂದು ಮಾಜಿ ಕ್ರಿಕೆಟಿಗರು ಹೇಳಿದ್ದರು. ಆದರೆ ಇದೀಗ ಕ್ರಿಕೆಟ್ ಶಿಶುಗಳು ಭರ್ಜರಿ ಪ್ರದರ್ಶನ ನೀಡುತ್ತಿದ್ದು, ದಿಗ್ಗಜ ತಂಡಗಳೇ ಟೂರ್ನಿಯಿಂದ ಹೊರ ಬೀಳುವಂತಾಗಿದೆ. ಸಾಮಾನ್ಯ ತಂಡಗಳ ಉತ್ತಮ ಆಟದಿಂದಾಗಿ ಪಾಕಿಸ್ಥಾನ, ಇಂಗ್ಲೆಂಡ್, ನ್ಯೂಜಿಲ್ಯಾಂಡ್ ಮತ್ತು ಶ್ರೀಲಂಕಾ ತಂಡಗಳ ಭವಿಷ್ಯ ತೂಗುಯ್ನಾಲೆಯಲ್ಲಿದೆ.
ಇಂಗ್ಲೆಂಡ್ನ ಹಾದಿಗೆ ಅಡ್ಡಿಯಾದ ಮಳೆ!
ಇಂಗ್ಲೆಂಡ್ ಹಾಲಿ ಚಾಂಪಿಯನ್. ಆದರೆ ಈ ಬಾರಿ ಮೊದಲ ಸುತ್ತಿನಲ್ಲೇ ಪಂದ್ಯಾವಳಿಯಿಂದ ಹೊರ ಬೀಳುವ ಭೀತಿಯನ್ನು ಎದುರಿಸುತ್ತಿದೆ. “ಬಿ’ ಗುಂಪಿನ ಇಂಗ್ಲೆಂಡ್-ಸ್ಕಾಟ್ಲೆಂಡ್ ನಡುವಿನ ಮೊದಲ ಪಂದ್ಯ ಮಳೆ ಯಿಂದ ರದ್ದಾಗಿತ್ತು. ಹೀಗಾಗಿ ಒಂದು ಅಂಕ ಹಂಚಿಕೊಂಡಿತ್ತು. ಆಸ್ಟ್ರೇ ಲಿಯ ವಿರುದ್ಧ 36 ರನ್ಸೋಲು ಅನುಭವಿಸಿತು. ಇಂಗ್ಲೆಂಡ್ 4ನೇ ಸ್ಥಾನದಲ್ಲಿದೆ.
ಸ್ಕಾಟ್ಲೆಂಡ್ 3 ಪಂದ್ಯ ವಾಡಿದ್ದು, 2ರಲ್ಲಿ ಜಯ ಗಳಿಸಿ 5 ಅಂಕ ಪಡೆದು ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯ 2ನೇ ಸ್ಥಾನದಲ್ಲಿದ್ದು, ಎರಡೂ ಪಂದ್ಯ ಗೆದ್ದು 4 ಅಂಕ ಸಂಪಾದಿಸಿದೆ. ಇಂಗ್ಲೆಂಡ್ಗೆ 2 ಪಂದ್ಯ ಬಾಕಿಯಿದ್ದು, ಒಮಾನ್ ಮತ್ತು ನಮೀಬಿಯಾದ ವಿರುದ್ಧ ಆಡಲಿದೆ. ಇದರಲ್ಲಿ ಇಂಗ್ಲೆಂಡ್ ಜಯ ಸಾಧಿಸಿದರೆ ಒಟ್ಟು ಅಂಕ 5ಕ್ಕೆ ಏರಿಲಿದೆ. ಆದರೆ ಈಗಾಗಲೇ 5 ಅಂಕ ಪಡೆದಿರುವ ಸ್ಕಾಟ್ಲೆಂಡ್ನ ರನ್ರೇಟ್ ಉತ್ತಮವಾಗಿದ್ದು, ಇದನ್ನು ಇಂಗ್ಲೆಂಡ್ ಮೀರಬೇಕಾಗಿದೆ. ಸ್ಕಾಟ್ಲೆಂಡ್ ಮತ್ತು ನಮೀಬಿಯಾ ವಿರುದ್ಧ ಆಸ್ಟ್ರೇಲಿಯ ಸೋಲುವ ಸಾಧ್ಯತೆ ಕಡಿಮೆ ಇರುವುದರಿಂದ ಇಂಗ್ಲೆಂಡ್ ಹಾದಿ ಬಹುತೇಕ ಮುಚ್ಚಿದೆ ಎನ್ನಬಹುದು.
ನ್ಯೂಜಿಲ್ಯಾಂಡ್ಗೆ ಸಂಕಷ್ಟ
ತಂದೊಡ್ಡಿದ ಅಫ್ಘಾನ್ ಸ್ಪಿನ್!
ನ್ಯೂಜಿಲ್ಯಾಂಡ್ “ಸಿ’ ಗುಂಪಿನಿಂದ ಹೊರ ಬೀಳುವ ಆತಂಕಕ್ಕೆ ಸಿಲುಕಿರುವುದಕ್ಕೆ ಕಾರಣ, ಅಫ್ಘಾನಿಸ್ಥಾನದ ಸ್ಪಿನ್ ಮೋಡಿ. ಇದರಿಂದ ಕಿವೀಸ್ 84 ರನ್ಗಳ ಭಾರೀ ಸೋಲನುಭವಿಸಿತು. ಹೀಗಾಗಿ ತಂಡದ ರನ್ರೇಟ್ -4.200ಕ್ಕೆ ಇಳಿದಿದೆ. ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಇನ್ನೂ 3 ಪಂದ್ಯ ಉಳಿದಿದ್ದರೂ ಒಂದು ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ಎದುರಾಗಲಿದೆ. .
ಲಂಕೆಯ ಬಾಗಿಲು ಬಂದ್?
“ಡಿ’ ಗುಂಪಿನ ಶ್ರೀಲಂಕಾ ಸ್ಥಿತಿಯೂ ಚಿಂತಾ ಜನಕವಾಗಿದೆ. ಅದು ಈಗಾಗಲೇ ದಕ್ಷಿಣ ಆಫ್ರಿಕಾ ಹಾಗೂ ಬಾಂಗ್ಲಾದೇಶದ ವಿರುದ್ಧ ಸೋಲು ಕಂಡಿದೆ. ಗುಂಪಿನಲ್ಲಿ ಕೊನೆಯ ಸ್ಥಾನಕ್ಕೆ ಕುಸಿದಿದ್ದು, -0.777 ರನ್ರೇಟ್ ಹೊಂದಿದೆ. ಲಂಕಾಗೆ 2 ಪಂದ್ಯಗಳು ಬಾಕಿ ಇವೆ. ಎರಡನ್ನೂ ಗೆದ್ದರೂ ಮುಂದಿನ ಸುತ್ತಿಗೆ ಏರುವುದು ಉಳಿದ ತಂಡಗಳ ಫಲಿತಾಂಶದ ಮೇಲೆ ನಿರ್ಧಾರವಾಗಲಿದೆ. ಸದ್ಯದ ಮಟ್ಟಿಗೆ ಲಂಕೆಯ ಬಾಗಿಲು ಬಂದ್ ಆಗಿದೆ.
ಇದನ್ನೂ ಓದಿ: Mumbai: ಎಂಸಿಎ ಅಧ್ಯಕ್ಷ ಅಮೋಲ್ ಕಾಳೆ ನ್ಯೂಯಾರ್ಕ್ನಲ್ಲಿ ನಿಧನ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL retention: ಚೆನ್ನೈ-ಮುಂಬೈಗೆ ಗುಡ್ ನ್ಯೂಸ್ ನೀಡಿದ ಐಪಿಎಲ್ ಹೊಸ ನಿಯಮ
Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್ ಖಾನ್
Kanpur Test: ಪಂದ್ಯ ಬಿಟ್ಟು ಹೋಟೆಲ್ ಗೆ ತೆರಳಿದ ಭಾರತೀಯ ಆಟಗಾರರು
ENGvsAUS: ಇಂಗ್ಲೆಂಡ್ ಆಟಕ್ಕೆ ಸೋತ ಆಸೀಸ್; ಸರಣಿ ಸಮಗೊಳಿಸಿದ ಬ್ರೂಕ್ ಪಡೆ
Test ವಿವಾದ : ಹಲ್ಲೆಯಾಗಿಲ್ಲ, ಬಾಂಗ್ಲಾ ಹುಲಿ ‘ಅಸ್ವಸ್ಥ’
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.