ಇಂದು ಮಿನಿ ಐಪಿಎಲ್‌ ಹರಾಜು: ಆಟಗಾರರ ಖರೀದಿಗೆ ಫ್ರಾಂಚೈಸಿಗಳ ಪೈಪೋಟಿ

ಗರಿಷ್ಠ ಬೇಡಿಕೆ ಹೊಂದಿರುವ ಆಟಗಾರರು ಯಾರ್ಯಾರು? ಭಾರಿ ಮೊತ್ತಕ್ಕೆ ಖರೀದಿ ಸಾಧ್ಯತೆ

Team Udayavani, Dec 23, 2022, 8:00 AM IST

1-sa-dasdad

ಕೊಚ್ಚಿ: 2023ರ ಐಪಿಎಲ್‌ 2023ರ ಹೋರಾಟಕ್ಕಾಗಿ ಸಣ್ಣ ಪ್ರಮಾಣದ ಹರಾಜು ಪ್ರಕ್ರಿಯೆ ಶುಕ್ರವಾರ ಕೇರಳದ ಕೊಚ್ಚಿಯಲ್ಲಿ ನಡೆಯಲಿದೆ. 10 ಫ್ರಾಂಚೈಸಿಗಳಿಗೆ ಬೇಕಿರುವುದು ಒಟ್ಟು 87 ಆಟಗಾರರು ಮಾತ್ರ. ಪಟ್ಟಿಯಲ್ಲಿ 405 ಆಟಗಾರರಿದ್ದಾರೆ. ಇದರಲ್ಲಿ 132 ವಿದೇಶಿ, 273 ಸ್ವದೇಶಿ ಆಟಗಾರರಿದ್ದಾರೆ.

ಗಮನಿಸಬೇಕಾದ ಸಂಗತಿಯೆಂದರೆ ಆರಂಭದ 86 ಆಟಗಾರರ ಹರಾಜು ಸ್ವಲ್ಪ ತಡವಾಗಬಹುದು. 87ರಿಂದ ಪ್ರಕ್ರಿಯೆ ಜೋರಾಗಲಿದೆ. ಅಷ್ಟರಲ್ಲಾಗಲೇ ಬಹುತೇಕ ಫ್ರಾಂಚೈಸಿಗಳು ತಮ್ಮ ಖರೀದಿ ಪ್ರಕ್ರಿಯೆ ಮುಗಿಸಿರುತ್ತವೆ. ಕೆಲವು ಆಟಗಾರರನ್ನಷ್ಟೇ ಖರೀದಿಸಬೇಕಿರುವುದರಿಂದ, ಫ್ರಾಂಚೈಸಿಗಳು ಬಯಸುವ ಆಟಗಾರರನ್ನೇ ಅಗ್ರಪಟ್ಟಿಗೆ ತರಲಾಗುತ್ತದೆ. ಒಂದು ವೇಳೆ ಖರೀದಿ ಬೇಗ ಮುಗಿದರೆ, ಇತರ ಆಟಗಾರರ ಹೆಸರು ಕೇವಲ ಪಟ್ಟಿಯಲ್ಲಿರುತ್ತದೆ ಅಷ್ಟೇ!

ಈ ಬಾರಿ ಕೋಲ್ಕತಾ ನೈಟ್‌ರೈಡರ್ಸ್‌ ತಂಡಕ್ಕೆ ಮಾತ್ರ ಹೆಚ್ಚು ಆಟಗಾರರನ್ನು ಕೊಳ್ಳಬೇಕಾದ ಒತ್ತಡವಿದೆ. ಆ ತಂಡದ ಬಳಿ ಹಣವೂ ಹೆಚ್ಚಿಲ್ಲ. ಈ ಒತ್ತಡವನ್ನು ಅದು ಹೇಗೆ ನಿಭಾಯಿಸುತ್ತದೆ ಎಂದು ಕಾದು ನೋಡಬೇಕು. ಅದರ ಬಳಿ ಇರುವುದು ಕೇವಲ 7.05 ಕೋಟಿ ರೂ. ಅಗತ್ಯವಿರುವ ಆಟಗಾರರು 11!

ಗರಿಷ್ಠ ಬೇಡಿಕೆ ಹೊಂದಿರುವ ಆಟಗಾರರು

ಬೆನ್‌ ಸ್ಟೋಕ್ಸ್‌: ಇಂಗ್ಲೆಂಡ್‌ ಟೆಸ್ಟ್‌ ತಂಡದ ನಾಯಕ, ಇತ್ತೀಚೆಗಷ್ಟೇ ಪಾಕಿಸ್ಥಾನವನ್ನು ಅದರ ನೆಲದಲ್ಲಿ ಐತಿಹಾಸಿಕವಾಗಿ 3-0ಯಿಂದ ಸೋಲಿಸಿ ಸಂತೋಷದಲ್ಲಿರುವ ಬೆನ್‌ ಸ್ಟೋಕ್ಸ್‌ಗೆ ಭಾರೀ ಬೇಡಿಕೆಯಿದೆ. ಇವರು ಬ್ಯಾಟಿಂಗ್‌, ಬೌಲಿಂಗ್‌ನಲ್ಲಿ ಯಾವುದೇ ತಂಡಕ್ಕೆ ಅದ್ಭುತ ಆಸ್ತಿ ಎನ್ನುವುದು ಗಮನಾರ್ಹ. ಹಾಗೆಯೇ ನಾಯಕನಾಗಿಯೂ ಮಹತ್ವದ ಪಾತ್ರ ವಹಿಸಬಲ್ಲರು. 2019ರ ಏಕದಿನ, 2022ರ ಟಿ20 ವಿಶ್ವಕಪ್‌ನಲ್ಲಿ ಇಂಗ್ಲೆಂಡನ್ನು ಗೆಲ್ಲಿಸಿದ್ದು ಇವರೇ.

ಸ್ಯಾಮ್‌ ಕರನ್‌: ಇಂಗ್ಲೆಂಡಿನ ಕೇವಲ 24 ವರ್ಷದ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಯಾವುದೇ ತಂಡಕ್ಕೂ ಅನಿವಾರ್ಯ ಆಟಗಾರ. ಇದುವರೆಗೆ 32 ಐಪಿಎಲ್‌ ಪಂದ್ಯಗಳನ್ನಾಡಿದ್ದಾರೆ. 32 ವಿಕೆಟ್‌ ಪಡೆದು, 337 ರನ್‌ ಬಾರಿಸಿದ್ದಾರೆ.

ಆದಿಲ್‌ ರಶೀದ್‌: ಇವರೂ ಕೂಡ ಇಂಗ್ಲೆಂಡ್‌ ಆಟಗಾರ, ಇದುವರೆಗೆ ಒಮ್ಮೆ ಮಾತ್ರ ಪಂದ್ಯವಾಡಿದ್ದಾರೆ. ಲೆಗ್‌ ಸ್ಪಿನ್ನರ್‌ ಆಗಿರುವ ಇವರ ಖರೀದಿಗೆ ಹಲವು ತಂಡಗಳು ಖಚಿತವಾಗಿ ಯತ್ನಿಸಲಿವೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಇಂಗ್ಲೆಂಡ್‌ನ‌ ಪ್ರಮುಖ ಆಟಗಾರರೂ ಹೌದು.

ಕ್ಯಾಮರೂನ್‌ ಗ್ರೀನ್‌: ಆಸ್ಟ್ರೇಲಿಯದ 23 ವರ್ಷದ ಆಲ್‌ರೌಂಡರ್‌ ಆಗಿರುವ ಗ್ರೀನ್‌, ತಮ್ಮ ವೇಗದ ಬೌಲಿಂಗ್‌ ಮೂಲಕವೂ ನೆರವಾಗಬಲ್ಲರು. ಇವರ ಟಿ20 ದಾಖಲೆಗಳು ಆಕರ್ಷಕವಾಗಿವೆ.

ಮಾಯಾಂಕ್‌ ಅಗರ್ವಾಲ್‌: ಕಳೆದ ಬಾರಿ ಪಂಜಾಬ್‌ ಕಿಂಗ್ಸ್‌ ನಾಯಕರಾಗಿದ್ದ ಮಾಯಾಂಕ್‌ ಅಗರ್ವಾಲ್‌ ಈ ಬಾರಿ ಎಲ್ಲ ತಂಡಗಳಿಂದ ಬೇಡಿಕೆ ಹೊಂದುವುದು ಖಚಿತ. ಇವರ ಸ್ಫೋಟಕ ಆಟವೇ ಅದಕ್ಕೆ ಕಾರಣ. ಸದ್ಯ ಬ್ಯಾಟಿಂಗ್‌ನಲ್ಲಿ ಹೇಳಿಕೊಳ್ಳುವ ಲಯ ಹೊಂದಿಲ್ಲ. ಅದೊಂದೇ ಚಿಂತೆಯ ವಿಚಾರ.

ಲಿಟನ್‌ ಮತ್ತು ಸಿಕಂದರ್‌: ಬಾಂಗ್ಲಾ ಏಕದಿನ ನಾಯಕ ಲಿಟನ್‌ ದಾಸ್‌, ಜಿಂಬಾಬ್ವೆಯ ಆಲ್‌ರೌಂಡರ್‌ ಸಿಕಂದರ್‌ ರಝಾ ಖರೀದಿ ಬಗ್ಗೆಯೂ ತಂಡಗಳು ಆಸಕ್ತಿ ವಹಿಸಬಹುದು.

ಹರಾಜು ಸಮಯ: ಮಧ್ಯಾಹ್ನ 2.30ಕ್ಕೆ
ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್, ಜಿಯೋ ಸಿನೆಮಾ
ಸ್ಥಳ: ಕೊಚ್ಚಿ, ಕೇರಳ

ಟಾಪ್ ನ್ಯೂಸ್

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

1-sj

EAM Jaishankar; ರಷ್ಯಾ ಮತ್ತು ಉಕ್ರೇನ್ ನಡುವೆ ಮಾತುಕತೆ ಮೋದಿಯಂತ ನಾಯಕರಿಂದ ಸಾಧ್ಯ

GP-Protest

Udupi: ಗ್ರಾ.ಪಂ. ನೌಕರರ ಮುಷ್ಕರಕ್ಕೆ ಸ್ಪಂದಿಸದ ಸರಕಾರ; ನಾಳೆಯಿಂದ ಪ್ರತಿಭಟನೆ ಮುಂದುವರಿಕೆ

farukh abdulla

J&K ; ಬಿಜೆಪಿ ವಿರುದ್ಧ ಜಾತ್ಯತೀತ ಸರಕಾರ ರಚಿಸಲು ಒಂದಾಗುತ್ತೇವೆ ಎಂದ ಪಿಡಿಪಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

Womens T20 World Cup: ಪಾಕ್‌ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್‌ ಸೋತ ಭಾರತ

INDvsBAN: New openers for India in T20; Who is the opener with Sharma?

INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್‌ ಯಾರು?

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್‌ 

Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್‌ ಸವಾಲು

Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್‌ ಸವಾಲು

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

1-ind-a

ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ

11(1)

Ambewadi ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ಬೀಟೆ ಮರ ಕಡಿಯುತ್ತಿದ್ದ ಓರ್ವನ ಬಂಧನ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

Cycle Ride: ಸಾಗುತ  ದೂರ ದೂರ… ಬೆಂಗಳೂರು ಟು ಗೋವಾ ಸೈಕಲ್‌ ಸವಾರಿ

15

Kamanur village: ದಾರಿ ತೋರುವ ಮಾದರಿ ಗ್ರಾಮ 

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Bigg Boss: ಬಿಗ್‌ ಬಾಸ್‌ ಮಾಜಿ ಸ್ಪರ್ಧಿ ಪ್ರಯಾಣಿಸುತ್ತಿದ್ದ ಕಾರು ಅಪಘಾತ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.