IND vs ZIM; ಟೀಮ್‌ ಇಂಡಿಯಾ ಹೆಚ್ಚು ಬಲಿಷ್ಠ: ಜೈಸ್ವಾಲ್‌, ಸ್ಯಾಮ್ಸನ್‌, ದುಬೆ ಆಗಮನ

ಇಂದು 3ನೇ ಟಿ20 ; ಸರಣಿ ಮುನ್ನಡೆ ನಿರೀಕ್ಷೆಯಲ್ಲಿ ಭಾರತ

Team Udayavani, Jul 10, 2024, 7:15 AM IST

IND vs ZIM; ಟೀಮ್‌ ಇಂಡಿಯಾ ಹೆಚ್ಚು ಬಲಿಷ್ಠ: ಜೈಸ್ವಾಲ್‌, ಸ್ಯಾಮ್ಸನ್‌, ದುಬೆ ಆಗಮನ

ಹರಾರೆ: ಆತಿಥೇಯ ಜಿಂಬಾಬ್ವೆ ಮೇಲೆ ಒಂದೇ ದಿನದಲ್ಲಿ ತಿರುಗಿ ಬಿದ್ದು ಸರಣಿಯನ್ನು ಸಮಬಲಕ್ಕೆ ತಂದ ಭಾರತ, ಬುಧವಾರ 3ನೇ ಟಿ20 ಪಂದ್ಯದಲ್ಲಿ ಹೆಚ್ಚು ಬಲಿಷ್ಠವಾಗಿ ಕಣಕ್ಕಿಳಿಯಲಿದೆ.

ಟಿ20 ವಿಶ್ವಕಪ್‌ ಕೂಟದ ಪ್ರಮುಖ ಆಟಗಾರರಾದ ಯಶಸ್ವಿ ಜೈಸ್ವಾಲ್‌, ಸಂಜು ಸ್ಯಾಮ್ಸನ್‌ ಮತ್ತು ಶಿವಂ ದುಬೆ ತಂಡವನ್ನು ಸೇರಿಕೊಂಡಿರುವುದೇ ಇದಕ್ಕೆ ಕಾರಣ. ಇದರಿಂದ ಗೆಲುವಿನ ಲಯದಲ್ಲಿ ಸಾಗಿ ಸರಣಿ ಮುನ್ನಡೆ ಸಾಧಿಸುವ ಭಾರತದ ಯೋಜನೆಗೆ ಹೆಚ್ಚಿನ ಬಲ ಬಂದಿದೆ.

ಈ ಮೂವರಲ್ಲಿ ಶಿವಂ ದುಬೆ ಹೊರತುಪಡಿಸಿ ಉಳಿದಿಬ್ಬರಿಗೆ ಟಿ20 ವಿಶ್ವಕಪ್‌ ಆಡುವ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಹೀಗಾಗಿ ಜಿಂಬಾಬ್ವೆಯಲ್ಲಿ ಇವರು ತಮ್ಮ ಸಾಮರ್ಥ್ಯವನ್ನು ತೆರೆದಿಡಲು ಹಾತೊರೆಯುವುದು ಖಂಡಿತ.

ಬ್ಯಾಟಿಂಗ್‌ ಕ್ರಮಾಂಕ ಹೇಗೆ?
ಈ ಮೂವರ ಆಗಮನದಿಂದ ತಂಡದ ಕಾಂಬಿನೇ ಶನ್‌ನಲ್ಲಿ, ಮುಖ್ಯವಾಗಿ ಅಗ್ರ ಕ್ರಮಾಂಕದಲ್ಲಿ ಬದಲಾ ವಣೆ ಅನಿವಾರ್ಯವಾಗಿದೆ. ಹಾಗೆಯೇ ಇದು ತುಸು ಜಟಿಲವೂ ಹೌದು. ಏಕೆಂದರೆ, ಟೀಮ್‌ ಇಂಡಿಯಾ ದಲ್ಲೀಗ ಬರೋಬ್ಬರಿ ನಾಲ್ವರು ಓಪನರ್ ಇದ್ದಾರೆ!

ಮೊದಲ ಆಯ್ಕೆಯ ಓಪನರ್‌ ಆಗಿರುವ ಯಶಸ್ವಿ ಜೈಸ್ವಾಲ್‌ ಮತ್ತು 2ನೇ ಪಂದ್ಯದಲ್ಲಿ ಸೆಂಚುರಿ ಬಾರಿಸಿ ಭಾರೀ ಸಂಚಲನ ಮೂಡಿಸಿದ ಅಭಿಷೇಕ್‌ ಶರ್ಮ ನಡುವೆ ಪೈಪೋಟಿ ಇದೆ. ಜೈಸ್ವಾಲ್‌ ಅವರನ್ನು ಓಪನಿಂಗ್‌ ಸ್ಥಾನಕ್ಕೆ ತಂದರೆ ನಾಯಕ ಶುಭಮನ್‌ ಗಿಲ್‌ ವನ್‌ಡೌನ್‌ನಲ್ಲಿ ಬರಬಹುದು. ಜೈಸ್ವಾಲ್‌-ಅಭಿಷೇಕ್‌, ಇಬ್ಬರೂ ಸ್ಫೋಟಕ ಹಾಗೂ ಎಡಗೈ ಬ್ಯಾಟರ್. ಇವರನ್ನು ಒಟ್ಟಿಗೆ ಕಳುಹಿಸಬಹುದೇ ಎಂಬ ಪ್ರಶ್ನೆಯೂ ಇದೆ.

ಹೀಗೆ ಜೈಸ್ವಾಲ್‌, ಅಭಿಷೇಕ್‌ ಮತ್ತು ಗಿಲ್‌ ಅವರಿಂದ ಮೊದಲ 3 ಸ್ಥಾನ ಭರ್ತಿಯಾದ ಬಳಿಕ ಋತುರಾಜ್‌ ಗಾಯಕ್ವಾಡ್‌ 4ನೇ ಕ್ರಮಾಂಕಕ್ಕೆ ಇಳಿಯಬೇಕಾಗುತ್ತದೆ. ಸಾಮಾನ್ಯವಾಗಿ ರಾಜಸ್ಥಾನ್‌ ರಾಯಲ್ಸ್‌ ಪರ 3ನೇ ಕ್ರಮಾಂಕದಲ್ಲಿ ಬರುವ ಸಂಜು ಸ್ಯಾಮ್ಸನ್‌ ಇಲ್ಲಿ 5ನೇ ಸ್ಥಾನದಲ್ಲಿ ಆಗಮಿಸಬೇಕಾಗುತ್ತದೆ. ಜೈಸ್ವಾಲ್‌ ಮತ್ತು ಸ್ಯಾಮ್ಸನ್‌ಗಾಗಿ ಬಿ. ಸಾಯಿ ಸುದರ್ಶನ್‌ ಮತ್ತು ಧ್ರುವ ಜುರೆಲ್‌ ಹೊರಗುಳಿಯಬೇಕಾಗುತ್ತದೆ. ಇವರಲ್ಲಿ ಸಾಯಿ ಸುದರ್ಶನ್‌ ಮೊದಲೆರಡು ಪಂದ್ಯಗಳಿಗಷ್ಟೇ ಆಯ್ಕೆಯಾಗಿದ್ದರು. ಶಿವಂ ದುಬೆ ಅವರನ್ನು ಹನ್ನೊಂದರ ಬಳಗಕ್ಕೆ ಸೇರಿಸಬೇಕಾದರೆ ರಿಯಾನ್‌ ಪರಾಗ್‌ ಅವರನ್ನು ಕೈಬಿಡಬೇಕಾಗುತ್ತದೆ.

ಅಭಿಷೇಕ್‌ ಹೊರಗೆ?
ಇದೇ ವೇಳೆ ಅನುಭವಿ ಜೈಸ್ವಾಲ್‌ಗಾಗಿ ಅಭಿಷೇಕ್‌ ಶರ್ಮ ಅವರನ್ನು ಕೈಬಿಡಲಾಗುತ್ತದೆ ಎಂಬ ಸುದ್ದಿಯೂ ಹರಿದಾಡುತ್ತಿದೆ. ಶತಕ ಬಾರಿಸಿ, ಪಂದ್ಯಶ್ರೇಷ್ಠರೆನಿಸಿದ ಮರುಪಂದ್ಯದಲ್ಲೇ ಆಡಳಿತ ಮಂಡಳಿ ಇಂಥದೊಂದೊಂದು ಕಠಿನ ನಿರ್ಧಾರ ತೆಗೆದುಕೊಂಡೀತೇ ಎಂಬುದೊಂದು ಪ್ರಶ್ನೆ.

ಭಾರತದಲ್ಲಿ ಹಿಂದೆ ಇಂಥ ನಿದರ್ಶನ ಕಂಡುಬಂದದ್ದಿದೆ. 2011ರಲ್ಲಿ ವೆಸ್ಟ್‌ ಇಂಡೀಸ್‌ ವಿರುದ್ಧ ಮನೋಜ್‌ ತಿವಾರಿ ಚೊಚ್ಚಲ ಏಕದಿನ ಶತಕ ಬಾರಿಸಿದ ಬೆನ್ನಲ್ಲೇ ತಂಡದಿಂದ ಬೇರ್ಪಟ್ಟಿದ್ದರು. ಇಂಗ್ಲೆಂಡ್‌ ವಿರುದ್ಧ 2016ರ ಟೆಸ್ಟ್‌ನಲ್ಲಿ ತ್ರಿಶತಕ ಬಾರಿಸಿದ ಮರು ಪಂದ್ಯದಲ್ಲೇ ಕರುಣ್‌ ನಾಯರ್‌ ಅವರನ್ನು ಹೊರಗಿರಿಸಲಾಗಿತ್ತು. ಆದರೆ ಅಂಡರ್‌-14 ಕಾಲದಿಂದಲೂ ಶುಭಮನ್‌ ಗಿಲ್‌ ಅವರ ದೋಸ್ತಿ ಆಗಿರುವುದು ಅಭಿಷೇಕ್‌ಗೆ ಲಾಭವಾಗುವ ಎಲ್ಲ ಸಾಧ್ಯತೆ ಇದೆ.

ಬೌಲಿಂಗ್‌ ಬದಲಾವಣೆ ಅಸಂಭವ
ಭಾರತದ ಬೌಲಿಂಗ್‌ ವಿಭಾಗದಲ್ಲಿ ಹೆಚ್ಚಿನ ಬದಲಾವಣೆಯ ಸಾಧ್ಯತೆ ಕಾಣಿಸದು. ಮಧ್ಯಮ ವೇಗಿ ತುಷಾರ್‌ ದೇಶಪಾಂಡೆ ಒಬ್ಬರು ಆಡಲು ಬಾಕಿ ಇದೆ. ಆದರೆ ಹರಾರೆ ಟ್ರ್ಯಾಕ್‌ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡುತ್ತಿದೆ. ಬಿಷ್ಣೋಯಿ, ವಾಷಿಂಗ್ಟನ್‌ ಇದರ ಪ್ರಯೋಜನ ಪಡೆಯುತ್ತ ಬಂದಿದ್ದಾರೆ. ಬಿಷ್ಣೋಯಿ ತಮ್ಮ 4 ಓವರ್‌ಗಳ ಕೋಟಾದಲ್ಲಿ 20-22 ಗೂಗ್ಲಿ ಎಸೆಯುವುದು ಉತ್ತಮ ಪರಿಣಾಮ ಬೀರುತ್ತಿದೆ.

13 ರನ್‌ ಸೋಲನ್ನು ಸವಾಲು ಹಾಗೂ ಎಚ್ಚರಿಕೆಯ ಗಂಟೆಯಾಗಿ ಸ್ವೀಕರಿಸಿದ ಭಾರತವನ್ನು ಇನ್ನು ನಿಯಂತ್ರಿಸುವುದು ಸುಲಭವಲ್ಲ. ಜಿಂಬಾಬ್ವೆ ಮೇಲುಗೈ ಸಾಧಿಸಬೇಕಾದರೆ ಎಲ್ಲ ವಿಭಾಗಗಳಲ್ಲಿ ಸಾಮರ್ಥ್ಯಕ್ಕೂ ಮಿಗಿಲಾದ ಪ್ರದರ್ಶನ ನೀಡಬೇಕಾದುದು ಅಗತ್ಯ.

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.