![Bharamasagara: ಡೆಂಗ್ಯೂ ಜ್ವರಕ್ಕೆ ಯುವಕ ಬಲಿ](https://www.udayavani.com/wp-content/uploads/2024/07/man-a-1-415x304.jpg)
Team India; ರಾಹುಲ್ ಬಳಿಕ ಕೋಚಿಂಗ್ ಜವಾಬ್ದಾರಿ ವಿವಿಎಸ್ ಲಕ್ಷ್ಮಣ್ ಗೆ; ಏನಿದು ಟ್ವಿಸ್ಟ್
Team Udayavani, Jun 21, 2024, 4:05 PM IST
![Team India; ರಾಹುಲ್ ಬಳಿಕ ಕೋಚಿಂಗ್ ಜವಾಬ್ದಾರಿ ವಿವಿಎಸ್ ಲಕ್ಷ್ಮಣ್ ಗೆ; ಏನಿದು ಟ್ವಿಸ್ಟ್](https://www.udayavani.com/wp-content/uploads/2024/06/laxman-620x342.jpg)
ಮುಂಬೈ: ಸದ್ಯ ಕೆರಿಬಿಯನ್ ನಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ ಕೂಟದ ಟೀಂ ಇಂಡಿಯಾದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅಧಿಕಾರವಧಿ ಮುಕ್ತಾಯವಾಗಲಿದೆ. ಹೀಗಾಗಿ ವಿಶ್ವಕಪ್ ಬಳಿಕ ಟೀಂ ಇಂಡಿಯಾಗೆ ಹೊಸ ಕೋಚ್ ಬರಲಿದ್ದಾರೆ. ಈಗಾಗಲೇ ಸುದ್ದಿಯಾಗಿರುವಂತೆ ಮಾಜಿ ಆಟಗಾರ, ಇತ್ತೀಚೆಗಷ್ಟೇ ಕೋಲ್ಕತ್ತಾ ನೈಟ್ ರೈಡರ್ಸ್ ತಂಡ ಐಪಿಎಲ್ ಗೆಲುವು ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಗೌತಮ್ ಗೌಂಭೀರ್ ಅವರು ಮುಂದಿನ ಕೋಚ್ ಆಗುವ ಸಿದ್ದತೆಯಲ್ಲಿದ್ದಾರೆ.
ಬಿಸಿಸಿಐ ಮೂಲಗಳ ಪ್ರಕಾರ ಗೌತಿ ಅವರು ರಾಹುಲ್ ದ್ರಾವಿಡ್ ಸ್ಥಾನಕ್ಕೆ ಬರುವುದು ಬಹುತೇಕ ಖಚಿತ. ಕೆಲವೇ ದಿನಗಳ ಹಿಂದೆ ಅವರ ಸಂದರ್ಶನವೂ ನಡೆದಿತ್ತು. ಗೌತಮ್ ಗಂಭೀರ್ ಅವರು ಕೆಲವು ನಿಬಂಧನೆಗಳನ್ನು ಕೂಡಾ ಬಿಸಿಸಿಐ ಮುಂದಿಟ್ಟಿದ್ದಾರೆ ಎಂಬ ವರದಿಗಳು ಬಂದಿದ್ದವು.
ಆದರೆ ಇದೀಗ ವಿಶ್ವಕಪ್ ಮುಗಿದ ಬಳಿಕದ ಸರಣಿಗೆ ಮುಖ್ಯ ಕೋಚ್ ಆಗಿ ಗೌತಿ ಬದಲಿಗೆ ವಿವಿಎಸ್ ಲಕ್ಷ್ಮಣ್ ಹೆಸರು ಕೇಳಿಬಂದಿದೆ. ಟಿ20 ವಿಶ್ವಕಪ್ ಮುಗಿದ ಬಳಿಕ ಟೀಂ ಇಂಡಿಯಾ ಜಿಂಬಾಬ್ವೆ ಪ್ರವಾಸ ಕೈಗೊಳ್ಳಲಿದೆ. ಐದು ಪಂದ್ಯಗಳ ಟಿ20 ಸರಣಿ ಜುಲೈ 6 ರಿಂದ ಆರಂಭವಾಗಲಿದೆ. ಇದಕ್ಕೆ ವಿವಿಎಸ್ ಲಕ್ಷ್ಮಣ್ ಅವರು ಮುಖ್ಯ ಕೋಚ್ ಆಗಿರಲಿದ್ದಾರೆ ಎಂದು ವರದಿಯಾಗಿದೆ.
ಜಿಂಬಾಬ್ವೆ ಸರಣಿಗೆ ಸೀನಿಯರ್ ಆಟಗಾರರಿಗೆ ವಿರಾಮ ನೀಡಿ ಹೊಸ ಹುಡುಗರಿಗೆ ಅವಕಾಶ ನೀಡುವ ಸಾಧ್ಯತೆಯಿದೆ. ಹಾರ್ದಿಕ್ ಪಾಂಡ್ಯ ವಿರಾಮ ಬಯಸಿದರೆ ಸೂರ್ಯಕುಮಾರ್ ಯಾದವ್ ಅವರು ತಂಡವನ್ನು ಮುನ್ನಡೆಸಬಹುದು. ಐಪಿಎಲ್ ನಲ್ಲಿ ಮಿಂಚಿದ ಪ್ರತಿಭೆಗಳಾದ ರಿಯಾನ್ ಪರಾಗ್, ಅಭಿಷೇಕ್ ಶರ್ಮಾ, ನಿತೀಶ್ ರೆಡ್ಡಿ ಮುಂತಾದವರು ಅವಕಾಶ ಪಡೆಯುವ ಸಾಧ್ಯತೆಯಿದೆ.
🚨VVS Laxman, along with NCA coaches,is expected to travel with the Indian team to Zimbabwe for a five-match T20I series starting July 6.
Gautam Gambhir is likely to begin his coaching tenure from the Sri Lanka tour in mid-July.🚨 pic.twitter.com/u5srGMC2yZ
— Sujeet Suman (@sujeetsuman1991) June 21, 2024
ಅದಾದ ಬಳಿಕದ ಶ್ರೀಲಂಕಾ ಸರಣಿಯಿಂದ ಮುಂದಿನ ಮುಖ್ಯ ಕೋಚ್ ಜವಾಬ್ದಾರಿ ವಹಿಸುವ ಸಾಧ್ಯತೆಯಿದೆ. ಹೀಗಾಗಿ ಜಿಂಬಾಬ್ವೆ ಸರಣಿಗೆ ಎನ್ ಸಿಎ ಮುಖ್ಯಸ್ಥ ಲಕ್ಷ್ಮಣ್ ಮತ್ತು ಅವರ ತಂಡ ಕೋಚಿಂಗ್ ಮಾಡಲಿದೆ. ಜೂನ್ 22 ಅಥವಾ 23ರಂದು ತಂಡ ಪ್ರಕಟವಾಗಬಹುದು.
ಟಾಪ್ ನ್ಯೂಸ್
![Bharamasagara: ಡೆಂಗ್ಯೂ ಜ್ವರಕ್ಕೆ ಯುವಕ ಬಲಿ](https://www.udayavani.com/wp-content/uploads/2024/07/man-a-1-415x304.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![NDWvsSAW; ಚೆನ್ನೈನಲ್ಲಿ ಹರಿಣಗಳ ಬೇಟೆಯಾಡಿದ ಟೀಂ ಇಂಡಿಯಾ; ಏಕೈಕ ಟೆಸ್ಟ್ ನಲ್ಲಿ ಭರ್ಜರಿ ಜಯ](https://www.udayavani.com/wp-content/uploads/2024/07/ind-w-150x83.jpg)
INDWvsSAW; ಚೆನ್ನೈನಲ್ಲಿ ಹರಿಣಗಳ ಬೇಟೆಯಾಡಿದ ಟೀಂ ಇಂಡಿಯಾ; ಏಕೈಕ ಟೆಸ್ಟ್ ನಲ್ಲಿ ಭರ್ಜರಿ ಜಯ
![ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್](https://www.udayavani.com/wp-content/uploads/2024/07/virat-150x83.jpg)
Virat Kohli; ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್
![rohit sharma](https://www.udayavani.com/wp-content/uploads/2024/07/rohit-150x83.jpg)
Team India; ಟಿ20 ಗೆ ವಿದಾಯ ಹೇಳುವ ಯೋಚನೆ ಇರಲಿಲ್ಲ, ಆದರೆ…: ರೋಹಿತ್ ಶರ್ಮಾ
![DK; ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದ ಕಾರ್ತಿಕ್; ಈ ಬಾರಿ ಬೇರೆ ಜವಾಬ್ದಾರಿ](https://www.udayavani.com/wp-content/uploads/2024/07/dines-150x83.jpg)
DK; ಮತ್ತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸೇರಿದ ಕಾರ್ತಿಕ್; ಈ ಬಾರಿ ಬೇರೆ ಜವಾಬ್ದಾರಿ
![1-isl](https://www.udayavani.com/wp-content/uploads/2024/07/1-isl-150x89.jpg)
2026 T20 World Cup; ಭಾರತ-ಶ್ರೀಲಂಕಾ ಆತಿಥ್ಯ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.