ಈಡನ್‌ನಲ್ಲಿ ಟೀಮ್‌ ಇಂಡಿಯಾ ಜಯಭೇರಿ


Team Udayavani, Feb 16, 2022, 10:50 PM IST

ಈಡನ್‌ನಲ್ಲಿ ಟೀಮ್‌ ಇಂಡಿಯಾ ಜಯಭೇರಿ

ಕೋಲ್ಕತಾ: ಪ್ರವಾಸಿ ವೆಸ್ಟ್‌ ಇಂಡೀಸ್‌ ಎದುರಿನ ಏಕದಿನ ಸರಣಿಯನ್ನು ಕ್ಲೀನ್‌ಸಿÌàಪ್‌ ಆಗಿ ವಶಪಡಿಸಿಕೊಂಡ ಭಾರತವೀಗ ಟಿ20 ಮುಖಾಮುಖಿಯಲ್ಲೂ ಗೆಲುವಿನ ಆರಂಭ ಪಡೆದಿದೆ. ಬುಧವಾರ “ಈಡನ್‌ ಗಾರ್ಡನ್ಸ್‌’ನಲ್ಲಿ ನಡೆದ ಮೊದಲ ಪಂದ್ಯವನ್ನು 6 ವಿಕೆಟ್‌ಗಳಿಂದ ತನ್ನದಾಗಿಸಿಕೊಂಡಿದೆ.

ಬ್ಯಾಟಿಂಗಿಗೆ ಇಳಿಸಲ್ಪಟ್ಟ ವೆಸ್ಟ್‌ ಇಂಡೀಸ್‌ ನಿಕೋಲಸ್‌ ಪೂರಣ್‌ ಅವರ ಸಿಡಿಲಬ್ಬರದ ಆಟದ ಹೊರತಾಗಿಯೂ ಪರಿಪೂರ್ಣ ಬ್ಯಾಟಿಂಗ್‌ ತೋರ್ಪಡಿಸುವಲ್ಲಿ ವಿಫಲವಾಯಿತು. 7 ವಿಕೆಟಿಗೆ 157 ರನ್ನುಗಳ ಸಾಮಾನ್ಯ ಮೊತ್ತ ಪೇರಿಸಿತು. ಇದರಲ್ಲಿ ಪೂರಣ್‌ ಪಾಲು 61 ರನ್‌. ಜವಾಬಿತ್ತ ಭಾರತ 18.5 ಓವರ್‌ಗಳಲ್ಲಿ 4 ವಿಕೆಟಿಗೆ 162 ರನ್‌ ಬಾರಿಸಿ ಗೆದ್ದು ಬಂದಿತು.

ರೋಹಿತ್‌ ಶರ್ಮ-ಇಶಾನ್‌ ಕಿಶನ್‌ ಪ್ರಚಂಡ ಆರಂಭ ಭಾರತದ ಸರದಿಯ ಆಕರ್ಷಣೆ ಆಗಿತ್ತು. 7.3 ಓವರ್‌ಗಳಿಂದ 64 ರನ್‌ ಹರಿದು ಬಂತು. ಪವರ್‌ ಪ್ಲೇ ಅವಧಿಯಲ್ಲಿ ಒಟ್ಟುಗೂಡಿದ್ದು 58 ರನ್‌. ಇದರೊಂದಿಗೆ ಕಳೆದ 7 ಪಂದ್ಯಗಳ ಪವರ್‌ ಪ್ಲೇ ಅವಧಿಯಲ್ಲಿ ಭಾರತ ಆರರಲ್ಲಿ 50 ಪ್ಲಸ್‌ ರನ್‌ ಪೇರಿಸಿದಂತಾಯಿತು. ಆದರೆ 6 ಓವರ್‌ಗಳ ಬಳಿಕ ಭಾರತದ ಆಟ ಕುಂಟಿತಗೊಂಡಿತು. ವಿಕೆಟ್‌ಗಳೂ ಉರುಳತೊಡಗಿದವು; ಬೌಂಡರಿಗೂ ಬರಗಾಲ ಬಂತು. ಮಿಡ್ಲ್ ಆರ್ಡರ್‌ ಕ್ಲಿಕ್‌ ಆಗಲಿಲ್ಲ.

ಆದರೆ ಸೂರ್ಯಕುಮಾರ್‌ ಯಾದವ್‌ ಮತ್ತು ವೆಂಕಟೇಶ್‌ ಅಯ್ಯರ್‌ ಸೇರಿಕೊಂಡು ತಂಡವನ್ನು ದಡ ಮುಟ್ಟಿಸಿದರು. ಯಾದವ್‌ ಕೊಡುಗೆ 18 ಎಸೆತಗಳಿಂದ ಅಜೇಯ 34 ರನ್‌ (5 ಬೌಂಡರಿ, 1 ಸಿಕ್ಸರ್‌). ಗೆಲುವಿನ ಸಿಕ್ಸರ್‌ ಸಿಡಿಸಿದ ಅಯ್ಯರ್‌ 13 ಎಸೆತಗಳಿಂದ ಅಜೇಯ 24 ರನ್‌ ಮಾಡಿದರು.

ಕೇವಲ 19 ಎಸೆತಗಳಿಂದ 40 ರನ್‌ ಮಾಡಿದ ರೋಹಿತ್‌ (4 ಫೋರ್‌, 3 ಸಿಕ್ಸರ್‌) ಭಾರತದ ಟಾಪ್‌ ಸ್ಕೋರರ್‌. ಇಶಾನ್‌ ಕಿಶನ್‌ 35 ರನ್ನಿಗೆ 42 ಎಸೆತ ತೆಗೆದುಕೊಂಡರು (4 ಬೌಂಡರಿ). ಕೊಹ್ಲಿ 17 ರನ್‌ ಮಾಡಿದರೆ, ಪಂತ್‌ 8 ರನ್ನಿಗೆ ಆಟ ಮುಗಿಸಿದರು.

ವಿಂಡೀಸಿಗೆ ಕಡಿವಾಣ
ಮೊದಲು ಬೌಲಿಂಗ್‌ ಆಯ್ದುಕೊಂಡ ರೋಹಿತ್‌ ಶರ್ಮ ಅವರ ನಿರ್ಧಾ ರವನ್ನು ಬೌಲರ್‌ಗಳೆಲ್ಲ ಸೇರಿ ಭರ್ಜರಿಯಾಗಿಯೇ ಸಮರ್ಥಿಸಿದರು. ಒಂದು ಓವರ್‌ ಎಸೆದ ವೆಂಕಟೇಶ್‌ ಅಯ್ಯರ್‌ ಹೊರತುಪಡಿಸಿ ಉಳಿದ ಐದೂ ಬೌಲರ್‌ಗಳು ವಿಕೆಟ್‌ ಕೀಳುವಲ್ಲಿ ಯಶಸ್ವಿಯಾದರು. ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯವಾಡಿದ ರವಿ ಬಿಷ್ಣೋಯಿ 4 ಓವರ್‌ಗಳಲ್ಲಿ ಕೇವಲ 17 ರನ್ನಿಗೆ 2 ವಿಕೆಟ್‌ ಉರುಳಿಸಿ ಉತ್ತಮ ಯಶಸ್ಸು ಸಾಧಿಸಿದರು. ಹರ್ಷಲ್‌ ಪಟೇಲ್‌ 37ಕ್ಕೆ 2 ವಿಕೆಟ್‌ ಕಿತ್ತರು.

ಬಿಷ್ಣೋಯಿ ಪದಾರ್ಪಣ ಪಂದ್ಯದಲ್ಲೇ 3ನೇ ಅತ್ಯುತ್ತಮ ಬೌಲಿಂಗ್‌ ಪ್ರದರ್ಶಿಸಿದ ಭಾರತದ ಸ್ಪಿನ್ನರ್‌ ಎನಿಸಿದರು. ಪ್ರಗ್ಯಾನ್‌ ಓಜಾ 21ಕ್ಕೆ 4, ಅಕ್ಷರ್‌ ಪಟೇಲ್‌ 17ಕ್ಕೆ 3 ವಿಕೆಟ್‌ ಕೆಡವಿ ಮೊದಲೆರಡು ಸ್ಥಾನದಲ್ಲಿದ್ದಾರೆ.

ಭುವನೇಶ್ವರ್‌ ಅರ್ಲಿ ಬ್ರೇಕ್‌
ಭುವನೇಶ್ವರ್‌ ಕುಮಾರ್‌ ಮೊದಲ ಓವರ್‌ನಲ್ಲೇ ಕಿಂಗ್‌ (4) ವಿಕೆಟ್‌ ಕಿತ್ತು ಅರ್ಲಿ ಬ್ರೇಕ್‌ ಒದಗಿಸಿದರು. ಆದರೆ ಕೈಲ್‌ ಮೇಯರ್ (31) ಮತ್ತು ನಿಕೋಲಸ್‌ ಪೂರಣ್‌ (61) ದ್ವಿತೀಯ ವಿಕೆಟಿಗೆ 6 ಓವರ್‌ಗಳಿಂದ 47 ರನ್‌ ಪೇರಿಸಿ ಆಧರಿಸಿದರು. ಈ ಜೋಡಿಯನ್ನು ಚಹಲ್‌ ಬೇರ್ಪಡಿಸಿದ ಬಳಿಕ ವಿಂಡೀಸ್‌ ಓಟ ನಿಯಂತ್ರಣಕ್ಕೆ ಬಂತು. ರೋಸ್ಟನ್‌ ಚೇಸ್‌ (4) ಮತ್ತು ಅಪಾಯಕಾರಿ ರೋವ¾ನ್‌ ಪೊವೆಲ್‌ (2) ಅವರನ್ನು ಅಗ್ಗಕ್ಕೆ ಉರುಳಿಸಿದ್ದರಿಂದ ಭಾರತ ಹಿಡಿತ ಸಾಧಿಸಿತು. 14 ಓವರ್‌ ಅಂತ್ಯಕ್ಕೆ 90 ರನ್ನಿಗೆ ಅರ್ಧದಷ್ಟು ಮಂದಿ ಆಟ ಮುಗಿಸಿದರು. ಆದರೆ ಪೂರಣ್‌ ಮಾತ್ರ ಒಂದೆಡೆ ಕ್ರೀಸ್‌ ಆಕ್ರಮಿಸಿಕೊಂಡು ಇನ್ನಿಂಗ್ಸ್‌ ಬೆಳೆಸಲು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತಿದ್ದರು. 18ನೇ ಓವರ್‌ ತನಕ ಇನ್ನಿಂಗ್ಸ್‌ ಬೆಳೆಸಿದ ಅವರು 43 ಎಸೆತಗಳಿಂದ 61 ರನ್‌ ಬಾರಿಸಿದರು. 5 ಪ್ರಚಂಡ ಸಿಕ್ಸರ್‌ ಮತ್ತು 4 ಬೌಂಡರಿಗಳನ್ನು ಇದು ಒಳಗೊಂಡಿತ್ತು. ನಾಯಕ ಕೈರನ್‌ ಪೊಲಾರ್ಡ್‌ 7ರಷ್ಟು ಕೆಳ ಕ್ರಮಾಂಕದಲ್ಲಿ ಬ್ಯಾಟಿಂಗಿಗೆ ಬಂದು ಅಜೇಯ 24 ರನ್‌ ಮಾಡಿದರು (2 ಬೌಂಡರಿ, 1 ಸಿಕ್ಸರ್‌).

ಸ್ಕೋರ್‌ ಪಟ್ಟಿ
ವೆಸ್ಟ್‌ ಇಂಡೀಸ್‌
ಬ್ರ್ಯಾಂಡನ್‌ ಕಿಂಗ್‌ ಸಿ ಸೂರ್ಯಕುಮಾರ್‌ ಬಿ ಭುವನೇಶ್ವರ್‌ 4
ಕೈಲ್‌ ಮೇಯರ್ ಎಲ್‌ಬಿಡಬ್ಲ್ಯು ಚಹಲ್‌ 31
ನಿಕೋಲಸ್‌ ಪೂರಣ್‌ ಸಿ ಕೊಹ್ಲಿ ಬಿ ಹರ್ಷಲ್‌ 61
ರೋಸ್ಟನ್‌ ಚೇಸ್‌ ಎಲ್‌ಬಿಡಬ್ಲ್ಯು ಬಿಷ್ಣೋಯಿ 4
ಪೊವೆಲ್‌ ಸಿ ಅಯ್ಯರ್‌ ಬಿ ಬಿಷ್ಣೋಯಿ 2
ಅಖೀಲ್‌ ಹೊಸೇನ್‌ ಸಿ ಮತ್ತು ಬಿ ಚಹರ್‌ 10
ಕೈರನ್‌ ಪೊಲಾರ್ಡ್‌ ಔಟಾಗದೆ 24
ಓಡಿನ್‌ ಸ್ಮಿತ್‌ ಸಿ ರೋಹಿತ್‌ ಬಿ ಹರ್ಷಲ್‌ 4
ಇತರ 17
ಒಟ್ಟು (7 ವಿಕೆಟಿಗೆ) 157
ವಿಕೆಟ್‌ ಪತನ:1-4, 2-51, 3-72, 4-74, 5-90, 6-135, 7-157.
ಬೌಲಿಂಗ್‌;
ಭುವನೇಶ್ವರ್‌ ಕುಮಾರ್‌ 4-0-31-1
ದೀಪಕ್‌ ಚಹರ್‌ 3-0-28-1
ಹರ್ಷಲ್‌ ಪಟೇಲ್‌ 4-0-37-2
ಯಜುವೇಂದ್ರ ಚಹಲ್‌ 4-0-34-1
ರವಿ ಬಿಷ್ಣೊಯಿ 4-0-17-2
ವೆಂಕಟೇಶ್‌ ಅಯ್ಯರ್‌ 1-0-4-0
ಭಾರತ
ರೋಹಿತ್‌ ಶರ್ಮ ಸಿ ಸ್ಮಿತ್‌ ಬಿ ಚೇಸ್‌ 40
ಇಶಾನ್‌ ಕಿಶನ್‌ ಸಿ ಅಲೆನ್‌ ಬಿ ಚೇಸ್‌ 35
ವಿರಾಟ್‌ ಕೊಹ್ಲಿ ಸಿ ಪೊಲಾರ್ಡ್‌ ಬಿ ಅಲೆನ್‌ 17
ರಿಷಭ್‌ ಪಂತ್‌ ಸಿ ಸ್ಮಿತ್‌ ಬಿ ಕಾಟ್ರೆಲ್‌ 8
ಸೂರ್ಯಕುಮಾರ್‌ ಔಟಾಗದೆ 34
ವೆಂಕಟೇಶ್‌ ಅಯ್ಯರ್‌ ಔಟಾಗದೆ 24
ಇತರ 4
ಒಟ್ಟು (18.5 ಓವರ್‌ಗಳಲ್ಲಿ 4 ವಿಕೆಟಿಗೆ) 162
ವಿಕೆಟ್‌ ಪತನ: 1-64, 2-93, 3-95, 4-114.
ಬೌಲಿಂಗ್‌;
ಶೆಲ್ಡನ್‌ ಕಾಟ್ರೆಲ್‌ 4-0-35-1
ರೊಮಾರಿಯೊ ಶೆಫರ್ಡ್‌ 3-0-24-0
ಓಡಿನ್‌ ಸ್ಮಿತ್‌ 2-0-31-0
ಅಖೀಲ್‌ ಹೊಸೇನ್‌ 4-0-34-0
ರೋಸ್ಟನ್‌ ಚೇಸ್‌ 4-0-14-2
ಫ್ಯಾಬಿಯನ್‌ ಅಲೆನ್‌ 1.5-0-23-1

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

1-tengu-dsdsa

Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.