Tennis news; ಚೆನ್ನೈ ಓಪನ್‌: ಸುಮಿತ್‌ ಚಾಂಪಿಯನ್‌


Team Udayavani, Feb 11, 2024, 11:59 PM IST

1-sdsdsads

ಚೆನ್ನೈ: ಭಾರತದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ ಸುಮಿತ್‌ ನಾಗಲ್‌ “ಚೆನ್ನೈ ಓಪನ್‌’ ಟೆನಿಸ್‌ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಮೂಡಿಬಂದರು. ಇದರೊಂದಿಗೆ ಮೊದಲ ಸಲ ಟಾಪ್‌-100 ರ್‍ಯಾಂಕಿಂಗ್‌ ಯಾದಿಯನ್ನು ಅಲಂಕರಿಸಿದರು.

ರವಿವಾರದ ಸಿಂಗಲ್ಸ್‌ ಫೈನಲ್‌ನಲ್ಲಿ ಸುಮಿತ್‌ ಇಟಲಿಯ ಲುಕಾ ನಾರ್ಡಿ ಅವರನ್ನು 6-1, 6-4 ಅಂತರದಿಂದ ಸುಲಭದಲ್ಲಿ ಮಣಿಸಿದರು. ಅವರು ಒಂದೂ ಸೆಟ್‌ ಕಳೆದುಕೊಳ್ಳದೆ ಜಯಿಸಿದ್ದು ವಿಶೇಷವಾಗಿತ್ತು. ಈ ಗೆಲುವಿನೊಂದಿಗೆ ಸುಮಿತ್‌ ರ್‍ಯಾಂಕಿಂಗ್‌ ಯಾದಿಯಲ್ಲಿ 98ನೇ ಸ್ಥಾನಕ್ಕೆ ಏರಿದರು.

ಬೆಂಗಳೂರು ಓಪನ್‌ : ಟೆನಿಸ್‌ ಡ್ರಾ ಪ್ರಕಟ
ಬೆಂಗಳೂರು: ಸೋಮವಾರ ಆರಂಭವಾಗಲಿರುವ “ಬೆಂಗಳೂರು ಓಪನ್‌’ ಟೆನಿಸ್‌ ಪಂದ್ಯಾವಳಿಯ ಡ್ರಾ ಪ್ರಕಟಗೊಂಡಿದೆ. ಇದರಂತೆ ಭಾರತದ ಸ್ಟಾರ್‌ ಸಿಂಗಲ್‌ ಆಟಗಾರ ಸುಮಿತ್‌ ನಾಗಲ್‌ ಫ್ರಾನ್ಸ್‌ನ ಜೆಫ್ರಿ ಬ್ಲಾಂಕೆನಾಕ್ಸ್‌ ವಿರುದ್ಧ ಮೊದಲ ಸುತ್ತಿನ ಪಂದ್ಯ ಆಡಲಿದ್ದಾರೆ.

ವೈಲ್ಡ್‌ಕಾರ್ಡ್‌ ಮೂಲಕ ಪ್ರವೇಶ ಪಡೆದ ರಾಮ್‌ಕುಮಾರ್‌ ರಾಮನಾಥನ್‌ ಫ್ರಾನ್ಸ್‌ನ ಮತ್ತೋರ್ವ ಆಟಗಾರ ಮ್ಯಾಕ್ಸಿಮ್‌ ಜಾನ್ವೀರ್‌ ವಿರುದ್ಧ ಆಡಲಿದ್ದಾರೆ.

ವಿಶ್ವ ರ್‍ಯಾಂಕಿಂಗ್‌ನಲ್ಲಿ 121ನೇ ಸ್ಥಾನದಲ್ಲಿರುವ ಸುಮಿತ್‌ ನಾಗಲ್‌ ಈಗಾಗಲೇ ಬ್ಲಾಂಕೆನಾಕ್ಸ್‌ ವಿರುದ್ಧ 3 ಗೆಲುವು ಕಂಡಿದ್ದಾರೆ. ಇದರಲ್ಲೊಂದು ಜಯ ಕಳೆದ ಆಸ್ಟ್ರೇಲಿಯನ್‌ ಓಪನ್‌ ಅರ್ಹತಾ ಸುತ್ತಿನಲ್ಲಿ ಒಲಿದಿತ್ತು.

1-1 ಸಮಬಲ ಸಾಧನೆ
ಭಾರತದ ನಂ.1 ಆಟಗಾರನಾಗಿರುವ ರಾಮ್‌ಕುಮಾರ್‌ ರಾಮನಾಥನ್‌ ಮತ್ತು ಮ್ಯಾಕ್ಸಿಮ್‌ ಜಾನ್ವೀರ್‌ 2 ಸಲ ಮುಖಾಮುಖೀ ಆಗಿದ್ದು, 1-1 ಸಮಬಲದ ಸಾಧನೆ ದಾಖಲಿಸಿದ್ದಾರೆ. ರಾಮ್‌ಕುಮಾರ್‌ ಮೊದಲ ಸುತ್ತು ದಾಟಿದರೆ ಅಗ್ರ ಶ್ರೇಯಾಂಕದ ಇಟಲಿ ಟೆನಿಸಿಗ ಲುಕಾ ನಾರ್ಡಿ ಅವರನ್ನು ಎದುರಿಸುವ ಸಾಧ್ಯತೆ ಇದೆ.

ಡಲ್ಲಾಸ್‌ ಓಪನ್‌ : ಅಮೆರಿಕನ್ನರ ಫೈನಲ್‌
ಡಲ್ಲಾಸ್‌, ಫೆ. 11: “ಡಲ್ಲಾಸ್‌ ಓಪನ್‌’ ಟೆನಿಸ್‌ ಪಂದ್ಯಾವಳಿಯಲ್ಲಿ ಅಮೆರಿಕದ ಟೆನಿಸಿಗರೇ ಪ್ರಶಸ್ತಿ ಕಾಳಗದಲ್ಲಿ ಕಾಣಿಸಿಕೊಂಡಿದ್ದಾರೆ. ಇವರೆಂದರೆ ಟಾಮಿ ಪೌಲ್‌ ಮತ್ತು ಮಾರ್ಕಸ್‌ ಗಿರೋನ್‌.
ದ್ವಿತೀಯ ಸೆಮಿಫೈನಲ್‌ನಲ್ಲಿ ಟಾಮಿ ಪೌಲ್‌ ಅಮೆರಿಕದವರೇ ಆದ ಬೆನ್‌ ಶೆಲ್ಟನ್‌ ಅವರನ್ನು 6-2, 6-4 ಅಂತರದಿಂದ ಪರಾಭವಗೊಳಿಸಿದರು. ಇದಕ್ಕೂ ಮೊದಲು ಮಾರ್ಕಸ್‌ ಗಿರೋನ್‌ ಫ್ರಾನ್ಸ್‌ನ ಅಡ್ರಿಯನ್‌ ಮನ್ನಾರಿನೊ ವಿರುದ್ಧ 6-1, 6-3ರಿಂದ ಗೆಲುವು ಸಾಧಿಸಿದ್ದರು.

ಟಾಪ್ ನ್ಯೂಸ್

RadhaMohan-das

BJP Incharge: ರಾಜ್ಯ ಬಿಜೆಪಿಗೆ ಉಸ್ತುವಾರಿ, ಸಹ ಉಸ್ತುವಾರಿ ನೇಮಕ

ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್

RJD: ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್

Bajaj

Bajaj Freedom: ಬಜಾಜ್‌ ಫ್ರೀಡಂ 125 CNG ಬೈಕ್‌ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು?

1-aaaa

Mumbai; ಟೀಮ್ ಇಂಡಿಯಾ ಸ್ವಾಗತ ಮೆರವಣಿಗೆ ಬಳಿಕ ಭಾರೀ ಕಸ ಸಂಗ್ರಹ

pune

Pune Porsche crash; 300 ಪದಗಳ ಪ್ರಬಂಧ ಬರೆದು ಸಲ್ಲಿಸಿದ ಬಾಲಾಪರಾಧಿ

ತನಗೆ ಕಚ್ಚಿದ ಹಾವಿಗೆ ಎರಡು ಬಾರಿ ಕಚ್ಚಿದ ವ್ಯಕ್ತಿ… ಹಾವು ಸತ್ತಿತು, ವ್ಯಕ್ತಿ ಬದುಕಿದ

Snake: ಹಾವು ಕಚ್ಚಿತೆಂದು ಹಾವಿಗೆ ಎರಡು ಬಾರಿ ಕಚ್ಚಿದ… ಹಾವು ಸತ್ತಿತು, ವ್ಯಕ್ತಿ ಬದುಕಿದ

18-uv-fusion

Blood Group: ಚಿನ್ನದ ರಕ್ತದ ಗುಂಪಿನ ಬಗ್ಗೆ ನಿಮಗಿದು ಗೊತ್ತೆ?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-dasdas-das

India-South Africa; ವನಿತೆಯರ ಟಿ20 ಸರಣಿ ಇಂದಿನಿಂದ

Rohan Bopanna

Wimbledon tennis match: ಬೋಪಣ್ಣ-ಎಬ್ಡೆನ್‌ ಮುನ್ನಡೆ

1-athli

Paris Olympics; ಆ್ಯತ್ಲೀಟ್‌ ಗಳಿಂದ ಶ್ರೇಷ್ಠ ನಿರ್ವಹಣೆ: ಮೋದಿ ವಿಶ್ವಾಸ

1-jock

Wimbledon ಟೆನಿಸ್‌ : ಜೊಕೋವಿಕ್‌ 3ನೇ ಸುತ್ತಿಗೆ

INdia-team

Team India: ಮುಂಬೈಯಲ್ಲಿ ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ!

MUST WATCH

udayavani youtube

ಕಮಲಶಿಲೆ ದುರ್ಗೆಯ ಪಾದ ಸ್ಪರ್ಶಿಸಿದ ಕುಬ್ಜಾ ನದಿ

udayavani youtube

ಅಬ್ಬಬ್ಬಾ ನೀವೆಂದೂ ಕಂಡಿರದ Coin Collection ನೋಡಿ

udayavani youtube

ಹತ್ರಾಸ್‌ನಲ್ಲಿ ಸತ್ಸಂಗದ ವೇಳೆ ಕಾಲ್ತುಳಿತ ಸಾವಿನ ಸಂಖ್ಯೆ 121 ಕ್ಕೆ ಏರಿಕೆ

udayavani youtube

ಕರ್ನಾಟಕ ಪ್ರವಾಸೋದ್ಯಮದ ಕುರಿತು ರಾಜ್ಯಸಭೆಯಲ್ಲಿ ಸುಧಾಮೂರ್ತಿ ಹೇಳಿದ್ದೇನು

udayavani youtube

ಹದಗೆಟ್ಟ ರಸ್ತೆಯಲ್ಲಿ ಜೀವ ಕೈಯಲ್ಲಿ ಹಿಡಿದು ಓಡಾಡುವ ವಾಹನ ಸವಾರರು!|

ಹೊಸ ಸೇರ್ಪಡೆ

RadhaMohan-das

BJP Incharge: ರಾಜ್ಯ ಬಿಜೆಪಿಗೆ ಉಸ್ತುವಾರಿ, ಸಹ ಉಸ್ತುವಾರಿ ನೇಮಕ

ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್

RJD: ಚುನಾವಣೆಗೆ ಸಿದ್ದರಾಗಿ… ಕೇಂದ್ರ ಸರ್ಕಾರ ಪತನವಾಗಲಿದೆ…: ಲಾಲು ಪ್ರಸಾದ್ ಯಾದವ್

ಕರ್ಮಫ‌ಲ ಶಿಕಣದಿಂದ ಆತ್ಮೋನ್ನತಿ; ಬ್ರಹ್ಮಕುಮಾರೀಸ್‌ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ಕರುಣ

ಕರ್ಮಫ‌ಲ ಶಿಕಣದಿಂದ ಆತ್ಮೋನ್ನತಿ; ಬ್ರಹ್ಮಕುಮಾರೀಸ್‌ ಈಶ್ವರೀಯ ವಿಶ್ವವಿದ್ಯಾಲಯದ ಬಿ.ಕೆ. ಕರುಣ

Bajaj

Bajaj Freedom: ಬಜಾಜ್‌ ಫ್ರೀಡಂ 125 CNG ಬೈಕ್‌ ಭಾರತದಲ್ಲಿ ಬಿಡುಗಡೆ; ಬೆಲೆ ಎಷ್ಟು?

Nanna Devru; ದೇವ್ರ ನಂಬಿ ಬಂದ ಮಯೂರಿ

Nanna Devru; ದೇವ್ರ ನಂಬಿ ಬಂದ ಮಯೂರಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.