Thailand Open Super 500: ಸಾತ್ವಿಕ್ – ಚಿರಾಗ್ ಕ್ವಾರ್ಟರ್ಫೈನಲಿಗೆ
Team Udayavani, May 16, 2024, 10:49 PM IST
ಬ್ಯಾಂಕಾಕ್: ಥಾಯ್ಲೆಂಡ್ ಓಪನ್ ಸೂಪರ್ 500 ಬ್ಯಾಡ್ಮಿಂಟನ್ ಕೂಟದಲ್ಲಿ ಭಾರತದ ಯುವ ಶಟ್ಲರ್ ಮೈರಾಬ ಲುವಾಂಗ್ ಮೈಸ್ನಾಮ್ ಮತ್ತು ಸ್ಟಾರ್ ಡಬಲ್ಸ್ ಆಟಗಾರರಾದ ಸಾತ್ವಿಕ್ಸಾಯಿರಾಜ್ ರಾಂಕಿರೆಡ್ಡಿ ಮತ್ತು ಚಿರಾಗ್ ಶೆಟ್ಟಿ ಅವರ ಶ್ರೇಷ್ಠ ನಿರ್ವಹಣೆ ಮುಂದುವರಿದಿದ್ದು ಕ್ವಾರ್ಟರ್ಫೈನಲ್ ಹಂತಕ್ಕೇರಿದ್ದಾರೆ.
ತನ್ನ ದೇಶದವರೇ ಆದ ಎಚ್.ಎಸ್. ಪ್ರಣಯ್ ವಿರುದ್ಧ ಅಮೋಘ ಗೆಲುವು ದಾಖಲಿಸಿ ಅಚ್ಚರಿಯ ಫಲಿತಾಂಶಕ್ಕೆ ಕಾರಣರಾಗಿದ್ದ 21ರ ಹರೆಯದ ಮೈರಾಬ ಅವರು ದ್ವಿತೀಯ ಸುತ್ತಿನಲ್ಲಿ ಡೆನ್ಮಾರ್ಕ್ನ ಮ್ಯಾಡ್ಸ್ ಕ್ರಿಸ್ಟೋಪರ್ಸನ್ ಅವರನ್ನು 21-14, 22-20 ಗೇಮ್ಗಳಿಂದ ಉರುಳಿಸಿ ಕ್ವಾರ್ಟರ್ಫೈನಲ್ ಹಂತಕ್ಕೇರಿದರು. ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಮೈರಾಬ ಅವರು ಈ ಹಿಂದೆ 2022ರಲ್ಲಿ ಇರಾನ್ ಫಜ್ರ್ ಇಂಟರ್ನ್ಯಾಶನಲ್ ಮತ್ತು ಇಂಡಿಯಾ ಇಂಟರ್ನ್ಯಾಶನಲ್ ಕೂಟದ ಪ್ರಶಸ್ತಿ ಜಯಿಸಿದ್ದರು. ಮುಂದಿನ ಸುತ್ತಿನಲ್ಲಿ ಅವರು ಸ್ಥಳೀಯ ಹೀರೊ ಮತ್ತು ವಿಶ್ವ ಚಾಂಪಿಯನ್ ಕುನ್ಲಾವುಟ್ ವಿಟಿಡ್ಸಾಮ್ ಅವರನ್ನು ಎದುರಿಸಲಿದ್ದಾರೆ.
ಸಾತ್ವಿಕ್-ಚಿರಾಗ್ ಮುನ್ನಡೆ :
ವಿಶ್ವದ ಮೂರನೇ ರ್ಯಾಂಕಿನ ಭಾರತದ ಸಾತ್ವಿಕ್-ಚಿರಾಗ್ ಅವರು ಕ್ಸೀ ಸಾವೊ ನಾನ್ ಮತ್ತು ಜೆಂಗ್ ವೆಯಿ ಹಾನ್ ಅವರನ್ನು 21-16, 21-11 ಗೇಮ್ಗಳಿಂದ ಉರುಳಿಸಿ ಕ್ವಾರ್ಟರ್ಫೈನಲ್ ತಲುಪಿದರು. ಅವರು ಮುಂದಿನ ಸುತ್ತಿನಲ್ಲಿ ಮಲೇಷ್ಯಾದ ಜುನೈದಿ ಆರಿಫ್ ಮತ್ತು ರಾಯ್ ಕಿಂಗ್ ಯಾಪ್ ಅವರನ್ನು ಎದುರಿಸಲಿದ್ದಾರೆ.
ಇನ್ನೊಂದು ಸಿಂಗಲ್ಸ್ ಪಂದ್ಯದಲ್ಲಿ ಅಸ್ಮಿತಾ ಚಲಿಹಾ ಅವರು ತೀವ್ರ ಪೈಪೋಟಿ ನೀಡಿದರೂ ಅಂತಿಮವಾಗಿ ಅಗ್ರ ಶ್ರೇಯಾಂಕದ ಚೀನದ ಹಾನ್ ಯುಯಿ ಅವರಿಗೆ 15-21, 21-12, 12-21 ಗೇಮ್ಗಳಿಂದ ಶರಣಾಗಿ ಹೊರಬಿದ್ದರು.
ಮಿಕ್ಸೆಡ್ ಡಬಲ್ಸ್ನಲ್ಲಿ ಸತೀಶ್ ಕರುಣಾಕರನ್ ಮತ್ತು ಆದ್ಯ ವರಿಯತ್ ಅವರು ರಿನೋವ್ ರಿವಾಲ್ಡಿ ಮತ್ತು ಪಿಥ ಹನಿಂಗ್ತ್ಯಾಸ್ ಮೆಂತರಿ ಅವರಿಗೆ 10-21, 17-21 ಗೇಮ್ಗಳಿಂದ ಸೋತು ಹೊರಬಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Development: ಸಂಪರ್ಕ ಸಾರಿಗೆಗಳಿಂದ ದೇಶದ ಆರ್ಥಿಕತೆ ಹೆಚ್ಚಳ: ಸಚಿವ ರಾಮಲಿಂಗಾರೆಡ್ಡಿ
SAFF U-17 Championship: ಭಾರತ-ಬಾಂಗ್ಲಾ ಫೈನಲ್
Gulveer Singh: ನೂತನ ರಾಷ್ಟ್ರೀಯ ದಾಖಲೆ ಸ್ಥಾಪಿಸಿದ ಗುಲ್ವೀರ್
ICC Women’s T20 World Cup: ವನಿತಾ ಟಿ20 ವಿಶ್ವಕಪ್; ಅಂಪಾಯರ್ಸ್ ಆಯ್ಕೆ
T20I series: ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿ: ಸೂರ್ಯಕುಮಾರ್ ಯಾದವ್ ನಾಯಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.