![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
![mohan bhagwat](https://www.udayavani.com/wp-content/uploads/2025/02/mohan-bhagwat-415x249.jpg)
Team Udayavani, Nov 10, 2017, 7:05 AM IST
ಮುಂಬಯಿ: ರಣಜಿ ಟ್ರೋಫಿ ಕ್ರಿಕೆಟ್ ಕೂಟದ ಐತಿಹಾಸಿಕ 500ನೇ ಪಂದ್ಯದಲ್ಲಿ ಭಾರೀ ನಿರೀಕ್ಷೆಗಳೊಂದಿಗೆ ಆಡಲಿಳಿದ ಮುಂಬಯಿ ತಂಡವು ಬರೋಡ ತಂಡದ ಅತಿತ್ ಸೇs… ಮತ್ತು ಲುಕ್ಮಣ್ ಮೆರಿವಾಲ ಅವರ ದಾಳಿಗೆ ತತ್ತರಿಸಿತಲ್ಲದೇ ಕೇವಲ 171 ರನ್ನಿಗೆ ಆಲೌಟಾಗಿದೆ.
ಇದಕ್ಕುತ್ತರವಾಗಿ ಬರೋಡ ತಂಡವು ಮೊದಲ ದಿನದಾಟದ ಅಂತ್ಯಕ್ಕೆ 26 ಓವರ್ ಆಡಿದ್ದು ಒಂದು ವಿಕೆಟಿಗೆ 63 ರನ್ ಗಳಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ ಮುನ್ನಡೆ ಪಡೆಯಲು ಬರೋಡ ಇನ್ನು 108 ರನ್ ಗಳಿಸಬೇಕಾಗಿದೆ. ಇದೇ ಪಂದ್ಯದ ಮೂಲಕ ರಣಜಿಗೆ ಪಾದಾರ್ಪಣೆಗೈದ ಎಡಗೈ ಆರಂಭಿಕ ಅಹ್ಮದ್ ನೂರ್ ಪಠಾಣ್ ಅವರನ್ನು ತಂಡ ಕಳೆದುಕೊಂಡಿದೆ. 24 ಎಸೆತ ಎದುರಿಸಿದ್ದ ಅವರು 14 ರನ್ ಗಳಿಸಿದ್ದರು. ಆಫ್ ಸ್ಪಿನ್ನರ್ ಕಾರ್ತಿಕ್ ಕಾಕಡೆ ರಣಜಿಗೆ ಪಾದಾರ್ಪಣೆಗೈದ ಇನ್ನೋರ್ವ ಆಟಗಾರ ಆಗಿದ್ದಾರೆ.
ವಾಂಖೇಡೆ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗಿಗೆ ಇಳಿಸಲ್ಪಟ್ಟ ಮುಂಬಯಿ ಆರಂಭದಲ್ಲಿಯೇ ಎಡವಿತು. ಮೂರನೇ ಓವರಿನಲ್ಲಿ 5 ರನ್ ಗಳಿಸುವಷ್ಟರಲ್ಲಿ ತಂಡ ಎರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಬಿತ್ತು. ಉತ್ತಮ ಫಾರ್ಮ್ನಲ್ಲಿದ್ದ ಪೃಥ್ವಿ ಶಾ ಮತ್ತು ಅಜಿಂಕ್ಯ ರಹಾನೆ ಅವರನ್ನು ಶೂನ್ಯಕ್ಕೆ ಔಟ್ ಮಾಡಿಸಿದ ಸೇs… ಮುಂಬಯಿಗೆ ಪ್ರಬಲ ಹೊಡೆತ ನೀಡಿದರು. ಈ ಹೊಡೆತದಿಂದ ಮುಂಬಯಿ ಕೊನೆಯತನಕವೂ ಜೇತರಿಸಿಕೊಳ್ಳಲಿಲ್ಲ.
ನಾಯಕ ಆದಿತ್ಯ ತಾರೆ ಅವರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರ ಬರೋಡ ದಾಳಿಯನ್ನು ಎದುರಿಸಲು ವಿಫಲರಾದರು. ತಾರೆ ಐದನೆಯವರಾಗಿ ಔಟಾಗುವ ಮೊದಲು 50 ರನ್ ಹೊಡೆದಿದ್ದರು. ಅಂತಿಮವಾಗಿ ಮುಂಬಯಿ 171 ರನ್ನಿಗೆ ಆಲೌಟಾಯಿತು.ಅತಿತ್ ಸೇs… 50 ರನ್ನಿಗೆ 5 ಮತ್ತು ಮೆರಿವಾಲ 52 ರನ್ನಿಗೆ 5 ವಿಕೆಟ್ ಕಿತ್ತರು.
ಸಂಕ್ಷಿಪ್ತ ಸ್ಕೋರು: ಮುಂಬಯಿ ಪ್ರಥಮ ಇನ್ನಿಂಗ್ಸ್ 171 (ಆದಿತ್ಯ ತಾರೆ 50, ಶ್ರೇಯಸ್ ಅಯ್ಯರ್ 28, ಸಿದ್ದೇಶ್ ಲಾಡ್ 21, ಅತಿತ್ ಸೇs… 50ಕ್ಕೆ 5, ಲುಕ್ಮಣ್ ಮೆರಿವಾಲ 52ಕ್ಕೆ 5); ಬರೋಡ ಒಂದು ವಿಕೆಟಿಗೆ 63 (ಆದಿತ್ಯ ವಾಗೊ¾àಡೆ 15 ಬ್ಯಾಟಿಂಗ್, ವಿಷ್ಣು ಸೋಲಂಕಿ 32 ಬ್ಯಾಟಿಂಗ್).
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್
Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ
Pariksha Pe Charcha: ಸ್ಮಾರ್ಟ್ ಫೋನ್ಗಿಂತಲೂ ನೀವು ಸ್ಮಾರ್ಟ್ ಆಗಬೇಕು:ಸದ್ಗುರು
You seem to have an Ad Blocker on.
To continue reading, please turn it off or whitelist Udayavani.