ಐಪಿಎಲ್‌ ಕೆಲಸದ ಒತ್ತಡ ಯುವ ಪ್ರತಿಭೆಗಳ ರಕ್ಷಿಸಲು ಬಿಸಿಸಿಐ ಯತ್ನ


Team Udayavani, Apr 18, 2018, 7:30 AM IST

BCCI-iPL-2018.jpg

ಹೊಸದಿಲ್ಲಿ: ಐಪಿಎಲ್‌ನಲ್ಲಿ ಆಡುತ್ತಿರುವ ಭಾರತೀಯ ಕ್ರಿಕೆಟ್‌ನ ಭವಿಷ್ಯದ ಪ್ರತಿಭೆಗಳನ್ನು ರಕ್ಷಿಸಲು ಬಿಸಿಸಿಐ ಮುಂದಾಗಿದೆ. ಐಪಿಎಲ್‌ನಲ್ಲಿ ವೇಳಾಪಟ್ಟಿ ಬಿಗುವಿನಿಂದ ಕೂಡಿರುತ್ತದೆ. ಬಿಡುವು ಕಡಿಮೆಯಿರುತ್ತದೆ. ಸಹಜವಾಗಿ ಯುವ ಪ್ರತಿಭೆಗಳ ಮೇಲೆ ಕಾರ್ಯದೊತ್ತಡ ಇರುತ್ತದೆ. ಇದರಿಂದ ಈ ಆಟಗಾರರು ಸಮಸ್ಯೆಗೊಳಗಾಗುವುದನ್ನು ತಪ್ಪಿಸಲು ಬಿಸಿಸಿಐ ಇಂತಹ ತೀರ್ಮಾನ ತೆಗೆದುಕೊಂಡಿದ್ದು, ಅದಕ್ಕಾಗಿ 23 ಪ್ರತಿಭೆಗಳ ಮೂರು ಹಂತದ ಪಟ್ಟಿ ತಯಾರಿಸಿದೆ.

ಉದಾಹರಣೆಗೆ ಕೋಲ್ಕತಾ ನೈಟ್‌ ರೈಡರ್ಸ್‌ ತಂಡದಲ್ಲಿ ಆಡುತ್ತಿರುವ ವೇಗಿ ಶಿವಂ ಮವಿಗೆ ತಂಡದ ತರಬೇತುದಾರರು ಅಭ್ಯಾಸದ ವೇಳೆ 60ರಿಂದ 100 ಎಸೆತಗಳನ್ನು ಎಸೆಯುವಂತೆ ಹೇಳಬಹುದು. ಆರ್‌ಸಿಬಿಯಲ್ಲಿ ಆಡುತ್ತಿರುವ ವೇಗಿ ನವದೀಪ್‌ ಸೈನಿಗೂ ಹೀಗೆಯೇ ಹೇಳಬಹುದು. ಇಂತಹ ಸಂದರ್ಭದಲ್ಲಿ ಬಿಸಿಸಿಐ ಮಧ್ಯಪ್ರವೇಶಿಸಿ ಈ ಪ್ರತಿಭೆಗಳು ನಮ್ಮ ಆಸ್ತಿ, ಅವರಿಗೆ ಹೆಚ್ಚಿನ ಒತ್ತಡ ಹೇರಬೇಡಿ ಎಂದು ಎಚ್ಚರಿಸುತ್ತದೆ. ಭುವನೇಶ್ವರ್‌ ಕುಮಾರ್‌ನಂತ ಬೌಲರ್‌ಗಳು ಅವರ ದೇಹಸ್ಥಿತಿ ಮತ್ತು ಕೆಲಸದ ಒತ್ತಡವನ್ನು ಅರಿತಿರಬಹುದು. ಆದರೆ ಮವಿ, ನವದೀಪ್‌ ಅಥವಾ ಅವೇಶ್‌ ಖಾನ್‌ ಅವರಂಥ ಬೌಲರ್‌ಗಳ ಬಗ್ಗೆ ನಾವು ಎಚ್ಚರ ವಹಿಸಬೇಕಾಗಿದೆ. ನಾವು ಅವರ ರಕ್ಷಣೆಗೆ ಬರಬೇಕಾಗಿದೆ. ಭಾರತೀಯ ಕ್ರಿಕೆಟ್‌ನ ಹಿತದೃಷ್ಟಿಯಿಂದ ನಾವು ಈ ಕ್ರಮ ಕೈಗೊಳ್ಳಲಿದ್ದೇವೆ ಎಂದು ಭಾರತೀಯ ಕ್ರಿಕೆಟ್‌ ಮಂಡಳಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇಂತಹ ಬೌಲರ್‌ಗಳ ತರಬೇತಿ ಕಾರ್ಯಕ್ರಮವನ್ನು ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿ (ಎನ್‌ಸಿಎ)ಯ ತರಬೇತುದಾರರು ಮತ್ತು ಫಿಸಿಯೋ ಗಮನಿಸಲಿದ್ದಾರೆ ಅಲ್ಲದೇ ಪ್ರತಿ ಫ್ರಾಂಚೈಸಿಗಳ ದೈಹಿಕ ತರಬೇತುದಾರರು ಮತ್ತು ಫಿಸಿಯೋಗಳು ಪ್ರತಿ ಆಟಗಾರರ ಮೇಲಿರುವ ಕಾರ್ಯದೊತ್ತಡದ ಕುರಿತು ಆಗಾಗ್ಗೆ ಮಾಹಿತಿ ನೀಡುವಂತೆ ಸೂಚಿಸಿದೆ.

ಬಿಸಿಸಿಐಯ ಕೇಂದ್ರೀಯ ಗುತ್ತಿಗೆಯಲ್ಲಿ ಇರದ 23 ಭರವಸೆಯ ಆಟಗಾರರ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಭವಿಷ್ಯದಲ್ಲಿ ರಾಷ್ಟ್ರೀಯ ಅಥವಾ “ಎ’ ತಂಡದಲ್ಲಿ ಸ್ಥಾನ ಪಡೆಯಲು ಯೋಗ್ಯರಾದ ಆಟಗಾರರು ಇದರಲ್ಲಿ ಸೇರಿದ್ದಾರೆ. ಈ ಆಟಗಾರರ ಪಟ್ಟಿಯನ್ನು ಮೂರು ಬಣಗಳಲ್ಲಿ ವಿಂಗಡಿಸಲಾಗಿದೆ. ಮೊದಲ ಬಣದಲ್ಲಿ ಹಾಲಿ ಅಂಡರ್‌-19 ಆಟಗಾರರು ಇರಲಿದ್ದಾರೆ. ಅಂಡರ್‌-19ನ ಹಳೆಯ ಆಟಗಾರರು ಎರಡನೇ ಬಣದಲ್ಲಿದ್ದಾರೆ. ಕಳೆದ ಮೂರರಿಂದ ನಾಲ್ಕು ವರ್ಷ ಅಂಡರ್‌ 19ರಲ್ಲಿ ಆಡಿದ ಆಟಗಾರರು ಈ ಬಣದಲ್ಲಿ ಇರಲಿದ್ದಾರೆ. ಹಾಲಿ ಭಾರತ “ಎ’ ತಂಡದ ಆಟಗಾರರು ಮೂರನೇ ಬಣದಲ್ಲಿರಲಿದ್ದಾರೆ.

ಹಾಲಿ ಅಂಡರ್‌-19 ಆಟಗಾರರು: ಪೃಥ್ವಿ ಶಾ, ಶುಭ ಗಿಲ್‌, ಶಿವಂ ಮವಿ ಮತ್ತು ಕಮಲೇಶ್‌ ನಗರ್‌ಕೋಟಿ.ಹಳೇ ಅಂಡರ್‌-19: ಇಶಾನ್‌ ಕಿಶನ್‌, ರಿಷಬ್‌ ಪಂತ್‌, ಅವೇಶ್‌ ಖಾನ್‌, ಖಲೀಲ್‌ ಅಹ್ಮದ್‌, ಸಂಜು ಸ್ಯಾಮ್ಸನ್‌ ಭಾರತ  “ಎ’: ಶ್ರೇಯಸ್‌ ಅಯ್ಯರ್‌, ವಾಷಿಂಗ್ಟನ್‌ ಸುಂದರ್‌, ವಿಜಯ್‌ ಶಂಕರ್‌, ಜಯದೇವ್‌ ಉನಾದ್ಕತ್‌, ಬಾಸಿಲ್‌ ಥಂಪಿ, ದೀಪಕ್‌ ಹೂಡ, ಮಯಾಂಕ್‌ ಅಗರ್ವಾಲ್‌, ರವಿಕುಮಾರ್‌ ಸಮರ್ಥ್, ನವದೀಪ್‌ ಸೈನಿ, ಸಿದ್ಧಾರ್ಥ್ ಕೌಲ್‌, ಹನುಮ ವಿಹಾರಿ, ಅಂಕಿತ್‌ ಭಾವೆ°.

ಟಾಪ್ ನ್ಯೂಸ್

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Arrest

Davanagere: ಪೂಜೆಯಿಂದ ಕಷ್ಟ ಪರಿಹರಿಸುವ ನೆಪದಲ್ಲಿ ಮನೆಯಿಂದ ಕಳವು: ಇಬ್ಬರ ಬಂಧನ

Kodagu-Polcie

Madikeri: ವಿವಿಧ ಕಳವು ಪ್ರಕರಣ: ಕೊಡಗು ಪೊಲೀಸರಿಂದ ಮೂವರ ಸೆರೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Sulya-1

Sulya: ಪೈಪ್‌ಲೈನ್‌ ಕಾಮಗಾರಿಯಿಂದ ರಸ್ತೆಗೆ ಹಾನಿ ಬಗ್ಗೆ ಚರ್ಚಿಸಿ ಕ್ರಮ: ಸತೀಶ್‌ ಜಾರಕಿಹೊಳಿ

Arebashe-Academy

Madikeri: ಆರು ಮಂದಿಗೆ ಅರೆಭಾಷೆ ಅಕಾಡೆಮಿ ಗೌರವ ಪ್ರಶಸ್ತಿ ಪ್ರಕಟ; ಫೆ.28ಕ್ಕೆ ಪ್ರದಾನ

Santhe-last

Manipal: ಕಡೇ ದಿನವೂ ಉತ್ತಮ ಸ್ಪಂದನೆ; ಹಾಡು, ನೃತ್ಯದೊಂದಿಗೆ ʼನಮ್ಮ ಸಂತೆʼಗೆ ತೆರೆ

kambala2

Kambala: ದಾಖಲೆ ಬರೆದ ವಾಮಂಜೂರು ತಿರುವೈಲುಗುತ್ತು ಕಂಬಳ

Suside-Boy

Sulya: ಪಯಸ್ವಿನಿ ನದಿಯಲ್ಲಿ ಯುವಕನ ಶವ ಪತ್ತೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.