ಐಪಿಎಲ್‌ ಗೀತೆಯಲ್ಲಿ ಕನ್ನಡಿಗನ ಝಲಕ್‌


Team Udayavani, Mar 16, 2018, 6:10 AM IST

Sugumar-14-3.jpg

ಬೆಂಗಳೂರು: ಐಪಿಎಲ್‌ ಕಾವು ನಿಧಾನಕ್ಕೆ ಏರುತ್ತಿದೆ. ಚುಟುಕು ಕ್ರಿಕೆಟಿನ ಸಿಕ್ಸರ್‌, ಬೌಂಡರಿ ಸೇರಿ ರೋಚಕ ಕ್ಷಣಗಳಿಗೆ ಸಾಕ್ಷಿಯಾಗುವ ತವಕ ಅಭಿಮಾನಿಗಳಲ್ಲಿ ಗೂಡು ಕಟ್ಟಿಕೊಳ್ಳುತ್ತಿದೆ. ಈ ನಡುವೆ ಐಪಿಎಲ್‌ ಆಡಳಿತ ಮಂಡಳಿ ಕೂಟದ ಪ್ರಚಾರಕ್ಕೆ ಸಿದ್ಧಪಡಿಸಿದ ಗೀತೆಯೊಂದನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಚುಟುಕು ಕ್ರಿಕೆಟಿನ ಅಪ್ಪಟ ಅಭಿಮಾನಿ ಕನ್ನಡಿಗ ಡಾ| ಸುಗುಮಾರ್‌ ಕುಮಾರ್‌ ಆಕರ್ಷಕ ವೇಷಭೂಷಣಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಐಪಿಎಲ್‌ ಮೊದಲ ಆವೃತ್ತಿಯಿಂದಲೂ ಮೈದಾನದಲ್ಲಿ ಅಭಿಮಾನಿಗಳ ನಡುವೆ ರೋಚಕ ಕ್ಷಣಗಳಲ್ಲಿ ಕುಣಿದು ಕುಪ್ಪಳಿಸಿ ಆನಂದಿಸುವ ಅಪ್ಪಟ ಕ್ರಿಕೆಟ್‌ ಅಭಿಮಾನಿ ಸುಗುಮಾರ್‌ ಕುಮಾರ್‌. ವಿಮಾನ ನಿಲ್ದಾಣದಲ್ಲಿರುವ ಲಾಜಿಸ್ಟಿಕ್‌ ಕಂಪೆನಿಯೊಂದರ ನಿರ್ವಹಣಾ ವಿಭಾಗದಲ್ಲಿ ಹಿರಿಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿರುವ ಸುಗುಮಾರ್‌ ಅವರ ಆನಂದದ ಕ್ಷಣಗಳನ್ನು ಹಾಡಿಗಾಗಿ ಸಿದ್ಧಪಡಿಸಲಾದ ವೀಡಿಯೋದಲ್ಲಿ ಬಳಸಿಕೊಳ್ಳಲಾಗಿದೆ. ತಮ್ಮ ಖುಷಿಯ ಕ್ಷಣಗಳನ್ನು ‘ಉದಯವಾಣಿ’ ಜತೆ ಸುಗುಮಾರ್‌ ಹಂಚಿಕೊಂಡಿದ್ದಾರೆ.

‘ವಿಶ್ವದ ಗಮನ ಸೆಳೆಯುವ ಪ್ರತಿಷ್ಠಿತ ಟೂರ್ನಿ ಐಪಿಎಲ್‌ನ ಅಧಿಕೃತ ಗೀತೆಯಲ್ಲಿ ನಾನು ಕೂಡ ಇದ್ದೇನೆಂದು ಹೇಳಿಕೊಳ್ಳುವುದೇ ಬಹಳ ಖುಷಿಯ ವಿಚಾರ. ಈಗಾಗಲೇ ಅನೇಕ ವೀಡಿಯೋ ಚಾನಲ್‌ಗ‌ಳಲ್ಲಿ ಪ್ರಸಾರಗೊಳ್ಳುತ್ತಿದೆ. ಕಳೆದ ಮೂರ್‍ನಾಲ್ಕು ದಿನಗಳಿಂದ ಅನೇಕರು ದೂರವಾಣಿ ಕರೆ ಮಾಡಿ ಅಭಿನಂದಿಸುತ್ತಿದ್ದಾರೆ. ಕ್ರೀಡಾ ಅಭಿಮಾನಿಯೊಬ್ಬನಿಗೂ ಈ ಮಟ್ಟದಲ್ಲಿ ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ ಎನ್ನುವುದೇ ನನ್ನಲ್ಲಿ ಸಾಕಷ್ಟು ಅಚ್ಚರಿ ಮೂಡಿಸಿದೆ’ ಎನ್ನುತ್ತಾರೆ ಸುಗುಮಾರ್‌ ಕುಮಾರ್‌. ಸುಗುಮಾರ್‌ ಕೇವಲ ಕ್ರಿಕೆಟ್‌ ಮಾತ್ರವಲ್ಲ, ಫ‌ುಟ್‌ಬಾಲ್‌ ಲೀಗ್‌, ಇಂಡಿಯನ್‌ ಸೂಪರ್‌ ಲೀಗ್‌ನಲ್ಲಿಯೂ ಬೆಂಗಳೂರು ಎಫ್ಸಿ ಪರ ಚಿಯರ್‌ ಮಾಡುತ್ತಿದ್ದಾರೆ.

ಮೇಕಪ್‌ ದುಬಾರಿ, ಆದರೂ ಬೇಕು
ಪಂದ್ಯದ ವೇಳೆ ಮೇಕಪ್‌ಗೆಂದೇ ಮೂರ್‍ನಾಲ್ಕು ಸಾವಿರ ಖರ್ಚು ಮಾಡುತ್ತೇನೆ ಎನ್ನುವ ಸುಗುಮಾರ್‌, ಕಳೆದ 10 ಆವೃತ್ತಿಗಳಲ್ಲಿ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡದ ಒಂದೇ ಒಂದು ಪಂದ್ಯಕ್ಕೂ ಗೈರು ಹಾಜರಾಗಿದ್ದಿಲ್ಲ. ಆರ್‌ಸಿಬಿಯ ಅಪ್ಪಟ ಅಭಿಮಾನಿ ಆಗಿರುವ ಸುಗುಮಾರ್‌ ಈಗಾಗಲೇ “ಆರ್‌ಸಿಬಿ ಸೂಪರ್‌ ಫ್ಯಾನ್‌’ ಎಂದೇ ಜನಪ್ರಿಯರಾಗಿದ್ದಾರೆ. ಮೇಕಪ್‌, ಡ್ರೆಸ್‌ಗೆ ತಗಲುವ ವೆಚ್ಚವನ್ನೆಲ್ಲ ತಾವೇ ಭರಿಸಿಕೊಳ್ಳುವ ಇವರು ಈ ಹಿಂದೆ ದುಬೈನಲ್ಲಿ ಐಪಿಎಲ್‌, ದಕ್ಷಿಣ ಆಫ್ರಿಕಾದಲ್ಲಿ ಟೂರ್ನಿ ನಡೆದಾಗಲೂ ಹಾಜರಿದ್ದರು.

ಸೇನೆ ಸೇರಲು ಅಪ್ಪ ಬಿಡಲಿಲ್ಲ
ಪದವೀಧರರಾಗಿರುವ ಸುಗುಮಾರ್‌ ಕುಮಾರ್‌ ಇಂಡಿಯನ್‌ ಆರ್ಮಿ ಸೇರಿಕೊಳ್ಳುವ ಕನಸು ಕಂಡಿದ್ದರು. ಆದರೆ ಅವರ ಸೋದರ ಇವರಿಗಿಂತ ಮೊದಲು ಆರ್ಮಿ ಸೇರಿಕೊಂಡಿದ್ದರಿಂದ ತಂದೆ ಇದಕ್ಕೆ ಅವಕಾಶ ನೀಡಲಿಲ್ಲ. ಆದರೆ ಅಣ್ಣ ಆರ್ಮಿಯಲ್ಲಿದ್ದಾರೆ ಎಂದು ಖುಷಿಯಿಂದ ಹೇಳಿಕೊಳ್ಳುವ ಸುಗುಮಾರ್‌, “ಅಣ್ಣ ಯೋಧ, ಅವರಂತೆ ನಾನೂ ಸಮಾಜಸೇವೆ ಮಾಡಬೇಕೆನ್ನುವ ತುಡಿತ ನನ್ನಲ್ಲಿತ್ತು. ಕ್ರಿಕೆಟ್‌ ಆಟಗಾರನಾಗಿದ್ದ ಸಮಯದಲ್ಲಿ ಐಪಿಎಲ್‌ ನನ್ನನ್ನು ಆಕರ್ಷಿಸಿತು. ಆಗ ನಾನು ಹುಟ್ಟಿಬೆಳೆದ ಕರ್ನಾಟಕದ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಉದ್ದೇಶದೊಂದಿಗೆ ಅಭಿಮಾನಿಯಾಗಿ ಕಾಣಿಸಿಕೊಳ್ಳಬೇಕೆನಿಸಿತು. ಇದಕ್ಕೆ ಐಪಿಎಲ್‌ ಒಳ್ಳೆಯ ವೇದಿಕೆಯೂ ಆಯಿತು. ಹೊರದೇಶ, ಹೊರ ರಾಜ್ಯದ ಅನೇಕ ಮಂದಿ ನನ್ನ ಬಳಿ ವೇಷಭೂಷಣಗಳ ಬಗ್ಗೆ ಕೇಳುತ್ತಾರೆ. ಆಗ ಕನ್ನಡನಾಡಿನ ಇತಿಹಾಸವನ್ನು ಸಂಕ್ಷಿಪ್ತವಾಗಿ ಹೇಳುತ್ತೇನೆ’ ಎನ್ನುತ್ತಾರೆ. ಐಪಿಎಲ್‌ ಟೂರ್ನಿಯ ವೇಳೆ ನನ್ನ ಈ ಪ್ರಯತ್ನಗಳಿಗೆ ಮನೆಯವರ ಹಾಗೂ ಪತ್ನಿ ಸುಮಾ ಸಹಕಾರ ಮರೆಯಲಾಗದ್ದು ಎಂದು ಹೇಳುತ್ತಾರೆ.

ವಿರಾಟ್‌ ನೆಚ್ಚಿನ ಆಟಗಾರ
ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿ ನೆಚ್ಚಿನ ಆಟಗಾರ ಎನ್ನುವ ಸುಗುಮಾರ್‌ ಕುಮಾರ್‌, 2016ರಲ್ಲಿ ನಡೆದ ಟೂರ್ನಿಯ ಗೋ ಗ್ರೀನ್‌ ಪಂದ್ಯದಲ್ಲಿ ವಿರಾಟ್‌ ಕೊಹ್ಲಿ ಹಾಗೂ ಎಬಿ ಡಿ ವಿಲಿಯರ್ ಸಿಡಿಸಿರುವ ಶತಕ ಸಂಭ್ರಮದ ಕ್ಷಣಗಳನ್ನು ಮೆಲುಕು ಹಾಕಿಕೊಳ್ಳುವಾಗ, ಅದು ಜೀವನದ ಮರೆಯಲಾಗದ ಕ್ಷಣ ಎನ್ನುತ್ತಾರೆ. ಆ ಪಂದ್ಯದಲ್ಲಿ ಕೊಹ್ಲಿ 109, ಎಬಿಡಿ 129 ರನ್‌ ಸಿಡಿಸಿದ್ದರು.

ರೆಡ್‌ ಇಂಡಿಯನ್‌ ಡ್ರೆಸ್‌ ಉಡುಗೊರೆ
ಸುಗುಮಾರ್‌ ಅವರ ಕ್ರಿಕೆಟ್‌ ಅಭಿಮಾನ ಕಂಡು ಅನಿವಾಸಿ ಭಾರತೀಯ ಹರೀಶ್‌ ಪೈ ಅಮೆರಿಕದಿಂದ ಆರ್‌ಸಿಬಿಯ ಅಧಿಕೃತ ಬಣ್ಣಕ್ಕೆ ಹೋಲುವ ರೆಡ್‌ ಇಂಡಿಯನ್‌ ಉಡುಪೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈ ಉಡುಪಿನ ಮೇಲೆ ಆರ್‌ಸಿಬಿ ಚಿಹ್ನೆಯನ್ನು ಕಲಾತ್ಮಕವಾಗಿ ನೂಲಿನಿಂದಲೇ ಬರೆಯಲಾಗಿದೆ.

ಸುಗುಮಾರ್‌ ಯಾಕೆ ಸ್ಪೆಷಲ್‌?
ಸುಗುಮಾರ್‌ ಕುಮಾರ್‌ ಅವರು ಶಿಸ್ತಿನ ಅಭಿಮಾನಿ. ಕ್ರಿಕೆಟ್‌ ಅಭಿಮಾನದ ಜತೆ ಜತೆಗೆ ಕನ್ನಡನಾಡಿನ ಸಂಸ್ಕೃತಿಯನ್ನೂ ಪ್ರತಿಬಿಂಬಿಸುವ ಉದ್ದೇಶವನ್ನೂ ಹೊಂದಿದ್ದಾರೆ. ಸ್ಟೇಡಿಯಂನಲ್ಲಿ ಕ್ರಿಕೆಟ್‌ ಅಭಿಮಾನಿಯಾಗಿ ಗುರುತಿಸಿಕೊಳ್ಳುವುದರ ಜತೆಗೆ ಅವರ ವೇಷಭೂಷಣ ನೋಡಿಯೇ ಅವರ ಮೇಲೆ ಅಭಿಮಾನ ಬೆಳೆಸಿಕೊಂಡವರು ಲೆಕ್ಕವಿಲ್ಲದಷ್ಟು ಮಂದಿ. ಮೈಸೂರು ರಾಜ, ಕೆಂಪೇಗೌಡ ಸೇರಿ ಅನೇಕ ವೇಷದಲ್ಲಿ ಕಾಣಿಸಿಕೊಳ್ಳುವ ಸುಗುಮಾರ್‌ ಈ ಮೂಲಕ ನಾಡಿನ ಸಂಸ್ಕೃತಿಯನ್ನೂ ಪ್ರತಿಬಿಂಬಿಸುವ ತಮ್ಮ ಉದ್ದೇಶಕ್ಕೆ ಐಪಿಎಲ್‌ ಟೂರ್ನಿಗಳನ್ನೇ ವೇದಿಕೆಯಾಗಿಸಿಕೊಳ್ಳುತ್ತಾರೆ.

– ಜಿಎಸ್‌ಬಿ ಅಗ್ನಿಹೋತ್ರಿ

ಟಾಪ್ ನ್ಯೂಸ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್‌ ಅಭಿಮಾನಿಗಳು ಕರೆ

Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್‌ ಅಭಿಮಾನಿಗಳು ಕರೆ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

Actor Darshan: ಪ್ರೇಮ್‌ – ದರ್ಶನ್‌ ಸಿನಿಮಾ ಬರುವುದು ಪಕ್ಕಾ.. ಸ್ಪೆಷೆಲ್‌ ಪೋಸ್ಟರ್‌ ಔಟ್

16

Uv Fusion: ಪೆನ್ನಿಗೊಂದು ಕಥೆ

1-jama

Yakshagana; ಮೇಳದ ಯಜಮಾನಿಕೆ ಎಂದರೆ ಆನೆ ಸಾಕಿದ ಹಾಗೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.