Virat Kohli; ದಾಖಲೆ ಬರೆಯಿತು ವಿರಾಟ್ ಕೊಹ್ಲಿ ಅವರ ಈ ಇನ್ಸ್ಟಾಗ್ರಾಮ್ ಪೋಸ್ಟ್
Team Udayavani, Jul 1, 2024, 2:51 PM IST
ಮುಂಬೈ: ಭಾರತ ತಂಡ ಟಿ20 ವಿಶ್ವಕಪ್ ಗೆದ್ದ ಬೆನ್ನಲ್ಲೇ ರನ್ ಮಷೀನ್ ಕೊಹ್ಲಿ, ಇಡೀ ತಂಡ ಟ್ರೋಫಿ ಹಿಡಿದು ಸಂಭ್ರಮಾಚರಿಸುತ್ತಿರುವ ಒಂದು ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಭಾರಿ ಲೈಕ್ ಬಂದಿದೆ.
ಇದರ ಜೊತೆಗೆ, ಈ ದಿನಕ್ಕಿಂತಲೂ ಉತ್ತಮ ದಿನಕ್ಕೆ ನಾನೆಂದೂ ಕನಸು ಕಂಡಿರಲಿಲ್ಲ. ದೇವರು ದೊಡ್ಡವರು. ನಾನೀಗ ಕೃತಜ್ಞತೆಯಿಂದ ತಲೆ ತಗ್ಗಿಸುತ್ತಿದ್ದೇನೆ. ಕೊನೆಗೂ ನಾವಿದನ್ನು ಸಾಧಿಸಿಬಿಟ್ಟೆವು. ಜೈ ಹಿಂದ್ ಎಂದು ಒಂದು ಸಾಲನ್ನೂ ಬರೆದುಕೊಂಡಿದ್ದರು. ಈ ಚಿತ್ರಕ್ಕೆ ಬರೋಬ್ಬರಿ 18 ಮಿಲಿಯನ್ಗೂ ಹೆಚ್ಚು ಲೈಕ್ಸ್ ಬಂದಿದೆ.
ಅಲ್ಲದೆ ಭಾರತ ಕ್ರಿಕೆಟ್ ತಂಡ ಟಿ20 ವಿಶ್ವಕಪ್ ಟ್ರೋಫಿಯನ್ನು ಎತ್ತಿ ಹಿಡಿದಿರುವ ವಿರಾಟ್ ಅವರ ಪೋಸ್ಟ್ ಇನ್ಸ್ಟಾಗ್ರಾಮ್ ನಲ್ಲಿ ಹೆಚ್ಚು ಇಷ್ಟಪಟ್ಟ ಭಾರತದ ಪೋಸ್ಟ್ ಆಗಿದೆ.
View this post on Instagram
ಈ ಹಿಂದೆ ಸಿದ್ದಾರ್ಥ್ ಮಲ್ಹೋತ್ರಾ – ಕಿಯಾರಾ ಅಡ್ವಾಣಿ ಅವರ ಮದುವೆಯ ಫೋಟೋ ಇನ್ಸ್ಟಾಗ್ರಾಮ್ ನಲ್ಲಿ ಅತಿ ಹೆಚ್ಚು ಲೈಕ್ ಪಡೆದ ಫೋಟೋ ಆಗಿತ್ತು. ಅವರ ಫೋಟೊ 16 ಮಿಲಿಯನ್ ಲೈಕ್ಸ್ ಪಡೆದಿತ್ತು. ಆದರೆ ಇದೀಗ ವಿರಾಟ್ ಪೋಸ್ಟ್ ಅದನ್ನು ಮೀರಿ 18 ಮಿಲಿಯನ್ ಲೈಕ್ಸ್ ಪಡೆದಿದೆ.
ತೆರೆದ ಬಸ್ನಲ್ಲಿ ಭಾರತ ತಂಡದಿಂದ ಸಂಭ್ರಮಾಚರಣೆ?
ಟಿ20 ವಿಶ್ವಕಪ್ ಗೆಲುವಿನ ಜೋಶ್ನಲ್ಲಿರುವ ಟೀಮ್ ಇಂಡಿಯಾ ಆಟಗಾರರು, ಶೀಘ್ರವೇ ವೆಸ್ಟ್ ಇಂಡೀಸ್ನಿಂದ ಭಾರತಕ್ಕೆ ವಾಪಸ್ಸಾಗಲಿದ್ದಾರೆ. ತವರಿಗೆ ಆಗಮಿಸಿದ ಬಳಿಕ ರೋಹಿತ್ ಶರ್ಮ ಪಡೆ, ವಿಜಯದ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ ಎಂದು ವರದಿಗಳು ಹೇಳಿವೆ. 2007ರಲ್ಲಿ ಎಂ.ಎಸ್.ಧೋನಿ ನಾಯಕತ್ವದ ತಂಡ ಟಿ20 ವಿಶ್ವಕಪ್ ಗೆದ್ದು ಬಂದಿದ್ದಾಗ, ಮುಂಬೈಯಲ್ಲಿ ಅದ್ದೂರಿ ಬಸ್ ಪರೇಡ್ ನಡೆದಿತ್ತು. ಈ ಬಾರಿಯೂ ಹೀಗೆ ಭಾರತೀಯ ತಂಡ ಮೆರವಣಿಗೆಯಲ್ಲಿ ಪಾಲ್ಗೊಳ್ಳಲಿದೆ ಎನ್ನಲಾಗಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಇನ್ನೂ ಲಭ್ಯವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hurricane; ಯಾವುದೇ ವಿಳಂಬಗಳಾಗದಿದ್ದಲ್ಲಿ ನಾಳೆ ಬೆಳಗ್ಗೆ ದಿಲ್ಲಿಗೆ ಟೀಮ್ ಇಂಡಿಯಾ
Barbados; ಮತ್ತೊಂದು ಚಂಡಮಾರುತದ ಸೂಚನೆ; ಭಾರತ ತಂಡ ಇಂದು ರಾತ್ರಿ ಆಗಮನ?
T20 Cricket; 2026ರ ಟಿ20 ವಿಶ್ವಕಪ್ ತನಕ ಭಾರತ ಆಡಲಿದೆ 34 ಪಂದ್ಯ
South Africa; ಟಿ20ಯಿಂದ ನಿವೃತ್ತಿ? ಸ್ಪಷ್ಟನೆ ನೀಡಿದ ಡೇವಿಡ್ ಮಿಲ್ಲರ್
T20 WC; ಪಿಚ್ ಮಣ್ಣು ತಿನ್ನಲು ಆ ಕ್ಷಣದ ಭಾವನೆಗಳೇ ಕಾರಣ: ರೋಹಿತ್
MUST WATCH
ಹೊಸ ಸೇರ್ಪಡೆ
NEET ವಿಚಾರ; ಯುವಕರ ಭವಿಷ್ಯದ ಜತೆ ಆಟವಾಡುವವರನ್ನು ನಾವು ಬಿಡುವುದಿಲ್ಲ ಎಂದ ಪ್ರಧಾನಿ
SSMB29: ರಾಜಮೌಳಿ – ಮಹೇಶ್ ಬಾಬು ಚಿತ್ರದಲ್ಲಿ ವಿಲನ್ ಆಗಲಿದ್ದಾರೆ ಪೃಥ್ವಿರಾಜ್
Mangaluru; ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ: ಸಿಲುಕಿದ ಕಾರ್ಮಿಕರು
ದೇವಮಾನವರ ದರ್ಶನ..ಧಾರ್ಮಿಕ ಕಾರ್ಯಕ್ರಮದ ವೇಳೆ ನಡೆದ ದೇಶದ ಪ್ರಮುಖ ಕಾಲ್ತುಳಿತ ಘಟನೆಗಳಿವು
Rajya Sabha: ಪ್ರಧಾನಿ ರಿಮೋಟ್ ಹೇಳಿಕೆಗೆ ರೊಚ್ಚಿಗೆದ್ದ ವಿಪಕ್ಷಗಳು!…ಕಲಾಪಕ್ಕೆ ಬಹಿಷ್ಕಾರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.