![1-havy](https://www.udayavani.com/wp-content/uploads/2024/12/1-havy-415x277.jpg)
ಅಂಡರ್ 19 ವನಿತಾ ಟಿ20 ವಿಶ್ವಕಪ್ ;ಭಾರತ ವನಿತೆಯರಿಗೆ ಭರ್ಜರಿ ಗೆಲುವು: ಯುಎಇಗೆ ಸೋಲು
Team Udayavani, Jan 16, 2023, 11:30 PM IST
![1-sadsadas](https://www.udayavani.com/wp-content/uploads/2023/01/1-sadsadas-1-620x386.jpg)
ಬೆನೋನಿ (ದಕ್ಷಿಣ ಆಫ್ರಿಕಾ): ನಾಯಕಿ ಶಫಾಲಿ ವರ್ಮ ಅವರ ಸ್ಫೋಟಕ ಆಟ ಮತ್ತು ಆರಂಭಿಕ ಆಟಗಾರ್ತಿ ಶ್ವೇತಾ ಸೆಹ್ರಾವತ್ ಅವರ ಅಮೋಘ ಆಟದಿಂದಾಗಿ ಭಾರತೀಯ ತಂಡವು ಅಂಡರ್ 19 ವನಿತಾ ಟಿ20 ವಿಶ್ವಕಪ್ನಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಯುಎಇ ತಂಡವನ್ನು 122 ರನ್ನುಗಳಿಂದ ಭರ್ಜರಿಯಾಗಿ ಸೋಲಿಸಿದೆ.
ಶಫಾಲಿ, ಶ್ವೇತಾ ಮತ್ತು ರಿಚಾ ಘೋಷ್ ಅವರ ಭರ್ಜರಿ ಆಟ ದಿಂದಾಗಿ ಭಾರತವು ಮೂರು ವಿಕೆಟಿಗೆ 219 ರನ್ನುಗಳ ಬೃಹತ್ ಮೊತ್ತ ಪೇರಿಸಿತು. ಇದಕ್ಕುತ್ತರವಾಗಿ ಭಾರತೀಯ ಬೌಲರ್ಗಳ ನಿಖರ ದಾಳಿಗೆ ರನ್ ಗಳಿಸಲು ಒದ್ದಾಡಿದ ಯುಎಇ ಆಟಗಾರ್ತಿಯರು 5 ವಿಕೆಟಿಗೆ ಕೇವಲ 97 ರನ್ ಗಳಿಸಲಷ್ಟೇ ಶಕ್ತರಾಗಿ ಶರಣಾದರು.
“ಡಿ’ ಬಣದಲ್ಲಿ ಆಡುತ್ತಿರುವ ಭಾರತಕ್ಕೆ ಇದು ಎರಡನೇ ಗೆಲುವು ಆಗಿದ್ದು ಅಗ್ರಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಭಾರತವು ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿತ್ತು.
ಶಫಾಲಿ, ಶ್ವೇತಾ ಅಮೋಘ ಆಟ
ಸೀನಿಯರ್ ತಂಡದಲ್ಲಿ ಆಡಿದ ಅನುಭವ ಹೊಂದಿರುವ ಶಫಾಲಿ ಮತ್ತೆ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು. ಬೌಂಡರಿಗಳ ಸುರಿಮಳೆಗೈದ ಅವರು ಮೊದಲ ವಿಕೆಟಿಗೆ ಶ್ವೇತಾ ಜತೆ ಕೇವಲ 8.3 ಓವರ್ಗಳಲ್ಲಿ 111 ರನ್ನುಗಳ ಜತೆಯಾಟದಲ್ಲಿ ಪಾಲ್ಗೊಂಡರು. ಕೇವಲ 34 ಎಸೆತ ಎದುರಿಸಿದ ಅವರು 12 ಬೌಂಡರಿ ಮತ್ತು 4 ಸಿಕ್ಸರ್ ನೆರವಿನಿಂದ 78 ರನ್ ಗಳಿಸಿದರು.
ಶ್ವೇತಾ ಮತ್ತು ರಿಚಾ ಘೋಷ್ ಕೂಡ ಉತ್ತಮ ಆಟದ ಪ್ರದರ್ಶನ ನೀಡಿದ್ದರಿಂದ ತಂಡದ ಮೊತ್ತ 200ರ ಗಡಿ ದಾಟುವಂತಾಯಿತು. ಅವರಿಬ್ಬರು ದ್ವಿತೀಯ ವಿಕೆಟಿಗೆ 89 ರನ್ ಪೇರಿಸಿದರು. 49 ಎಸೆತ ಎದುರಿಸಿದ ಅವರು ಶ್ವೇತಾ 10 ಬೌಂಡರಿ ನೆರವಿನಿಂದ 74 ರನ್ ಗಳಿಸಿ ಔಟಾಗದೆ ಉಳಿದರೆ ರಿಚಾ ಕೇವಲ 29 ಎಸೆತಗಳಿಂದ 5 ಬೌಂಡರಿ ಮತ್ತು 2 ಸಿಕ್ಸರ ನೆರವಿನಿಂದ 49 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರು
ಭಾರತ 3 ವಿಕೆಟಿಗೆ 219 (ಶ್ವೇತಾ ಸೆಹ್ರಾವತ್ 74 ಔಟಾಗದೆ, ಶಫಾಲಿ 78, ರಿಚಾ ಘೋಷ್ 49); ಯುಎಇ 5 ವಿಕೆಟಿಗೆ 97 (ಲಾವಣ್ಯ ಕೆನಿ 24, ಮಹಿಕಾ ಗೌರ್ 26).
ಬಾಂಗ್ಲಾಕ್ಕೆ 2ನೇ ಜಯ
ಬೆನೋನಿ: ಅಂಡರ್ 19 ವಿಶ್ವಕಪ್ನ ಇನ್ನೊಂದು ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಶ್ರೀಲಂಕಾ ತಂಡವನ್ನು 10 ರನ್ನುಗಳಿಂದ ಸೋಲಿಸಿದೆ. “ಎ’ ಬಣದಲ್ಲಿ ಆಡುತ್ತಿರುವ ಬಾಂಗ್ಲಾ ತಂಡಕ್ಕೆ ಇದು ಎರಡನೇ ಗೆಲುವು ಆಗಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾವು ಬಲಿಷ್ಠ ತಂಡಗಳಲ್ಲಿ ಒಂದಾದ ಆಸ್ಟ್ರೇಲಿಯವನ್ನು ಬಗ್ಗುಬಡಿದಿತ್ತು.
ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾ ತಂಡವು ಕೇವಲ 2 ವಿಕೆಟಿಗೆ 165 ರನ್ ಗಳಿಸಿತ್ತು. ಆರಂಭಿಕ ಆಟಗಾರ್ತಿ ಅಫಿಯಾ ಪ್ರೊಟಶಾ ಮತ್ತು ಶೋರ್ಣ ಅಕ್ತೆರ್ ಅರ್ಧಶತಕ ಹೊಡೆದಿದ್ದರು. ಇದಕ್ಕುತ್ತರವಾಗಿ ಶ್ರೀಲಂಕಾ ತಂಡವು 4 ವಿಕೆಟ್ ಕಳೆದುಕೊಂಡಿದ್ದು 155 ರನ್ ಗಳಿಸಲಷ್ಟೇ ಶಕ್ತವಾಗಿತ್ತು.
ಟಾಪ್ ನ್ಯೂಸ್
![1-havy](https://www.udayavani.com/wp-content/uploads/2024/12/1-havy-415x277.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Australian Open: ಹಿಂದೆ ಸರಿದ ಸಿಮೋನಾ ಹಾಲೆಪ್](https://www.udayavani.com/wp-content/uploads/2024/12/28-1-150x90.jpg)
Australian Open: ಹಿಂದೆ ಸರಿದ ಸಿಮೋನಾ ಹಾಲೆಪ್
![South Africa vs Pakistan 2nd Test: ಬಾಶ್ ದಾಖಲೆ: ದ. ಆಫ್ರಿಕಾ ಮುನ್ನಡೆ](https://www.udayavani.com/wp-content/uploads/2024/12/26-1-150x90.jpg)
South Africa vs Pakistan 2nd Test: ಬಾಶ್ ದಾಖಲೆ: ದ. ಆಫ್ರಿಕಾ ಮುನ್ನಡೆ
![Sachin Tendulkar: ಸಚಿನ್ ತೆಂಡುಲ್ಕರ್ಗೆಎಂಸಿಸಿ ಗೌರವ ಸದಸ್ಯತ್ವ](https://www.udayavani.com/wp-content/uploads/2024/12/24-2-150x90.jpg)
Melbourne Cricket Club; ಸಚಿನ್ ತೆಂಡುಲ್ಕರ್ಗೆ ಗೌರವ ಸದಸ್ಯತ್ವ
![Boxing: ವಿಶ್ವ ಬಾಕ್ಸಿಂಗ್ ಸಂಸ್ಥೆಯಿಂದ ಮಧ್ಯಂತರ ಏಷ್ಯನ್ ಮಂಡಳಿ](https://www.udayavani.com/wp-content/uploads/2024/12/23-1-150x90.jpg)
Boxing: ವಿಶ್ವ ಬಾಕ್ಸಿಂಗ್ ಸಂಸ್ಥೆಯಿಂದ ಮಧ್ಯಂತರ ಏಷ್ಯನ್ ಮಂಡಳಿ
![INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಏಕದಿನ ಕ್ಲೀನ್ಸ್ವೀಪ್ ಮಾಡಿದ ವನಿತೆಯರು](https://www.udayavani.com/wp-content/uploads/2024/12/de-10-150x87.jpg)
INDWvWIW: ದೀಪ್ತಿ ಶರ್ಮಾ ಆಲ್ ರೌಂಡ್ ಶೋ; ಸರಣಿ ಕ್ಲೀನ್ಸ್ವೀಪ್ ಮಾಡಿದ ವನಿತೆಯರು
MUST WATCH
![udayavani youtube](https://i.ytimg.com/vi/NdljxpTr0n8/mqdefault.jpg)
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
![udayavani youtube](https://i.ytimg.com/vi/Ge2mbEcT0j0/mqdefault.jpg)
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
![udayavani youtube](https://i.ytimg.com/vi/qW7fcwKh15I/mqdefault.jpg)
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
![udayavani youtube](https://i.ytimg.com/vi/rXflDn9gBE4/mqdefault.jpg)
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
![udayavani youtube](https://i.ytimg.com/vi/OPoFL9bnOqc/mqdefault.jpg)
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
![1-havy](https://www.udayavani.com/wp-content/uploads/2024/12/1-havy-150x100.jpg)
Havyaka Sammelana; ಅಡಿಕೆ ಬೆಳೆಗಾರರ ಹಿತ ರಕ್ಷಣೆಗೆ ಕೇಂದ್ರ ಬದ್ಧ: ಸಚಿವ ಜೋಶಿ
![puttige-4](https://www.udayavani.com/wp-content/uploads/2024/12/puttige-4-1-150x92.jpg)
Udupi; ಗೀತಾರ್ಥ ಚಿಂತನೆ 138 : ಅಭಿಮಾನತ್ಯಾಗವೇ ಮೋಕ್ಷದ ಮೊದಲ ಮೆಟ್ಟಿಲು
![Kharge (2)](https://www.udayavani.com/wp-content/uploads/2024/12/Kharge-2-1-150x87.jpg)
Manmohan Singh ಅಂತ್ಯಕ್ರಿಯೆ ಸ್ಮಾರಕ ನಿರ್ಮಿಸಬಹುದಾದ ಸ್ಥಳದಲ್ಲಿ ನಡೆಸಲು ಖರ್ಗೆ ಮನವಿ
![1](https://www.udayavani.com/wp-content/uploads/2024/12/1-53-150x80.jpg)
Kasaragod Crime News: ಅವಳಿ ಪಾಸ್ಪೋರ್ಟ್; ಕೇಸು ದಾಖಲು
![1-weqeqw](https://www.udayavani.com/wp-content/uploads/2024/12/1-weqeqw-150x78.jpg)
Traffic; ಉಡುಪಿ ನಗರದಲ್ಲಿ 5 ದಿನ ರಸ್ತೆ ಮಾರ್ಗಗಳಲ್ಲಿ ಮಾರ್ಪಾಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.