![One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?](https://www.udayavani.com/wp-content/uploads/2024/12/Election1-415x249.jpg)
Under-19 ಏಷ್ಯಾ ಕಪ್:ಅಫ್ಘಾನ್ಗೆ ಆಘಾತವಿಕ್ಕಿದ ಭಾರತ
Team Udayavani, Dec 8, 2023, 10:58 PM IST
![1-dsdsadasd](https://www.udayavani.com/wp-content/uploads/2023/12/1-dsdsadasd-620x414.jpg)
ದುಬಾೖ: ಅಂಡರ್-19 ಏಷ್ಯಾ ಕಪ್ ಕ್ರಿಕೆಟ್ ಪಂದ್ಯಾವಳಿ ಯಲ್ಲಿ ಭಾರತ ಗೆಲುವಿನ ಆರಂಭ ಪಡೆದಿದೆ. ಶುಕ್ರವಾರದ ಮೊದಲ ಮುಖಾಮುಖಿಯಲ್ಲಿ ಅಫ್ಘಾನಿಸ್ಥಾನ ವನ್ನು 7 ವಿಕೆಟ್ಗಳಿಂದ ಕೆಡವಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಅಫ್ಘಾನಿಸ್ಥಾನ ಸರಿಯಾಗಿ 50 ಓವರ್ಗಳಲ್ಲಿ 173 ರನ್ನಿಗೆ ಆಲೌಟ್ ಆಯಿತು. ಭಾರತ 37.3 ಓವರ್ಗಳಲ್ಲಿ 3 ವಿಕೆಟಿಗೆ 174 ರನ್ ಬಾರಿಸಿ ಗೆಲುವು ಸಾಧಿಸಿತು. ದಿನದ ಇನ್ನೊಂದು ಪಂದ್ಯದಲ್ಲಿ ಪಾಕಿಸ್ಥಾನ 7 ವಿಕೆಟ್ಗಳಿಂದ ನೇಪಾಲವನ್ನು ಮಣಿಸಿತು.
ಸೊಲ್ಲಾಪುರದ ಅರ್ಷಿನ್ ಕುಲಕರ್ಣಿ ಅವರ ಆಲ್ರೌಂಡ್ ಪ್ರದರ್ಶನ ಭಾರತದ ಸರದಿಯ ಪ್ರಮುಖ ಆಕರ್ಷಣೆಯಾಗಿತ್ತು. ಲೆಗ್ಸ್ಪಿನ್ ದಾಳಿಯಲ್ಲಿ 3 ವಿಕೆಟ್ ಉರುಳಿಸಿದ ಬಳಿಕ ಚೇಸಿಂಗ್ ವೇಳೆ ಆರಂಭಿಕನಾಗಿ ಇಳಿದು ಅಜೇಯ 70 ರನ್ ಬಾರಿಸಿದರು. 105 ಎಸೆತಗಳ ಈ ಜವಾಬ್ದಾರಿಯುತ ಆಟದ ವೇಳೆ ಅವರು ಹೊಡೆದದ್ದು 4 ಬೌಂಡರಿ ಮಾತ್ರ. ಮುಶೀರ್ ಖಾನ್ ಅಜೇಯ 48 ಮತ್ತು ನಾಯಕ ಉದಯ್ ಸಹಾರಣ್ 20 ರನ್ ಮಾಡಿದರು.
ಭಾರತದ ಬೌಲಿಂಗ್ ಸರದಿಯಲ್ಲಿ ಮಿಂಚಿದ ಇತರರೆಂದರೆ ರಾಜ್ ಲಿಂಬಾನಿ (3 ವಿಕೆಟ್) ಮತ್ತು ನಮನ್ ತಿವಾರಿ (2 ವಿಕೆಟ್). ಅಫ್ಘಾನ್ ಪರ ಆರಂಭಕಾರ ಜಮ್ಶಿದ್ ಜದ್ರಾನ್ ಸರ್ವಾಧಿಕ 43 ರನ್, ಮೊಹಮ್ಮದ್ ಯೂಸುಫ್ ಜದ್ರಾನ್ 26 ರನ್ ಮಾಡಿದರು. ರವಿವಾರ ಭಾರತ-ಪಾಕಿಸ್ಥಾನ ಮುಖಾಮುಖಿ ಆಗಲಿವೆ.
ಸಂಕ್ಷಿಪ್ತ ಸ್ಕೋರ್
ಅಫ್ಘಾನಿಸ್ಥಾನ-50 ಓವರ್ಗಳಲ್ಲಿ 173 (ಜಮಿÏದ್ ಜದ್ರಾನ್ 43, ಮೊಹಮ್ಮದ್ ಯೂಸುಫ್ ಜದ್ರಾನ್ 26, ನುಮಾನ್ ಶಾಹ 25, ಅರ್ಷಿನ್ ಕುಲಕರ್ಣಿ 29ಕ್ಕೆ 3, ರಾಜ್ ಲಿಂಬಾನಿ 46ಕ್ಕೆ 3, ನಮನ್ ತಿವಾರಿ 30ಕ್ಕೆ 2). ಭಾರತ-37.3 ಓವರ್ಗಳಲ್ಲಿ 3 ವಿಕೆಟಿಗೆ 174 (ಅರ್ಷಿನ್ ಕುಲಕರ್ಣಿ ಔಟಾಗದೆ 70, ಮುಶೀರ್ ಖಾನ್ ಔಟಾಗದೆ 48, ಉದಯ್ ಸಹಾರಣ್ 20).
ಟಾಪ್ ನ್ಯೂಸ್
![One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?](https://www.udayavani.com/wp-content/uploads/2024/12/Election1-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![1-prathvi](https://www.udayavani.com/wp-content/uploads/2024/12/1-prathvi-150x104.jpg)
Shaw left out; ಓ ದೇವರೇ, ನಾನು ಇನ್ನೇನೆಲ್ಲ ನೋಡಬೇಕು..; ಪೃಥ್ವಿ ಶಾ ನೋವು
![Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್](https://www.udayavani.com/wp-content/uploads/2024/12/5-34-150x90.jpg)
Ravichandran Ashwin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ ಆರ್.ಅಶ್ವಿನ್
![1-crick](https://www.udayavani.com/wp-content/uploads/2024/12/1-crick-150x84.jpg)
Brisbane Test; ವರುಣನ ಅಡ್ಡಿ: ಕೂತೂಹಲ ಮೂಡಿಸಿದ್ದ ಪಂದ್ಯ ಡ್ರಾದಲ್ಲಿ ಅಂತ್ಯ
![1-eqeeqwe](https://www.udayavani.com/wp-content/uploads/2024/12/1-eqeeqwe-150x89.jpg)
Brisbane Test; ರೋಚಕ.. ಭಾರತ ಗೆಲ್ಲಲು 54 ಓವರ್ಗಳಲ್ಲಿ 275 ರನ್ ಅಗತ್ಯ
![KLR](https://www.udayavani.com/wp-content/uploads/2024/12/KLR-150x90.jpg)
Australia vs India: ಬ್ರಿಸ್ಬೇನ್ ಟೆಸ್ಟ್ನಲ್ಲಿ ಫಾಲೋಆನ್ ತೂಗುಗತ್ತಿಯಿಂದ ಪಾರಾದ ಭಾರತ
MUST WATCH
ಹೊಸ ಸೇರ್ಪಡೆ
![Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ](https://www.udayavani.com/wp-content/uploads/2024/12/16-2-150x90.jpg)
Adhipatra Movie: ರೂಪೇಶ್ ಅಧಿಪತ್ರ ಫೆ.7ಕ್ಕೆ ಬಿಡುಗಡೆ
![One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?](https://www.udayavani.com/wp-content/uploads/2024/12/Election1-150x90.jpg)
One Nation, One Election;ಹಣ, ಸಮಯ ಉಳಿಯಬಹುದು…ಮುಂದಾಗುವ ಸಮಸ್ಯೆಗಳಿಗೆ ಪರಿಹಾರ ಇದೆಯಾ?
![15](https://www.udayavani.com/wp-content/uploads/2024/12/15-5-150x90.jpg)
Bollywood: ಬಾಲಿವುಡ್ ನಟ ಶಾಹಿದ್ ಕಪೂರ್ ಜತೆ ರಶ್ಮಿಕಾ ರೊಮ್ಯಾನ್ಸ್: ಯಾವ ಸಿನಿಮಾ?
![15-uv-fusion](https://www.udayavani.com/wp-content/uploads/2024/12/15-uv-fusion-150x90.jpg)
Water: ನಾನು ನೀರು ನಾನಿಲ್ಲದೇ ಜಗತ್ತಿಲ್ಲ
![Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 30 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು](https://www.udayavani.com/wp-content/uploads/2024/12/boat-2-150x83.jpg)
Mumbai: ಗೇಟ್ವೇ ಆಫ್ ಇಂಡಿಯಾ ಬಳಿ ಮುಳುಗಿದ 67 ಪ್ರಯಾಣಿಕರಿದ್ದ ಬೋಟ್… ರಕ್ಷಣಾ ತಂಡ ದೌಡು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.