![Traffic Jam: ಮರ ಬಿದ್ದು ಮೈಸೂರು – ಮಾಣಿ ರಾಷ್ಟ್ರೀಯ ಹೆದ್ದಾರಿ ಬಂದ್…](https://www.udayavani.com/wp-content/uploads/2024/07/mara-415x247.jpg)
Under-19 ವಿಶ್ವಕಪ್ ಕ್ರಿಕೆಟ್: ಅಜೇಯ ಭಾರತಕ್ಕೆ ಆತಿಥೇಯರ ಸವಾಲು
Team Udayavani, Feb 6, 2024, 6:30 AM IST
![1-sadsad](https://www.udayavani.com/wp-content/uploads/2024/02/1-sadsad-3-620x349.jpg)
ಬೆನೋನಿ (ದಕ್ಷಿಣ ಆಫ್ರಿಕಾ): ಉದಯ್ ಸಹಾರಣ್ ನಾಯಕತ್ವದ ಅಜೇಯ ಭಾರತ ತಂಡ ಮಂಗಳವಾರದ ಅಂಡರ್-19 ವಿಶ್ವಕಪ್ ಪಂದ್ಯಾವಳಿಯ ಸೆಮಿಫೈನಲ್ನಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ಗುರುವಾರದ ಇನ್ನೊಂದು ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯ-ಪಾಕಿಸ್ಥಾನ ಸೆಣಸಲಿವೆ.
ಹಾಲಿ ಚಾಂಪಿಯನ್, ಅತ್ಯಧಿಕ 5 ಸಲ ಕಪ್ ಎತ್ತಿರುವ, ಈ ಕೂಟದ ಐದೂ ಪಂದ್ಯಗಳನ್ನು ಗೆದ್ದಿರುವ ಭಾರತ ಖಂಡಿತವಾಗಿಯೂ ಉಪಾಂತ್ಯದ ನೆಚ್ಚಿನ ತಂಡ. ಆದರೆ ದಕ್ಷಿಣ ಆಫ್ರಿಕಾ ಆತಿ ಥೇಯ ತಂಡವಾಗಿರುವ ಕಾರಣ ಹೆಚ್ಚು ಎಚ್ಚರಿಕೆಯಿಂದ ಇರಬೇಕಾಗುತ್ತದೆ.
ಭಾರತ ಲೀಗ್ ಹಂತದ 3 ಹಾಗೂ ಸೂಪರ್ ಸಿಕ್ಸ್ ವಿಭಾಗದ ಎರಡೂ ಪಂದ್ಯಗಳನ್ನು ಅಧಿಕಾರಯುತವಾಗಿ ಜಯಿಸಿತ್ತು. ಇನ್ನೊಂದೆಡೆ ದಕ್ಷಿಣ ಆಫ್ರಿಕಾ ಲೀಗ್ ಹಂತದಲ್ಲಿ ಒಂದು ಪಂದ್ಯದಲ್ಲಿ ಸೋಲಿನ ಆಘಾತಕ್ಕೆ ಸಿಲುಕಿದೆ.
ವಿಶ್ವಕಪ್ ಪಂದ್ಯಾವಳಿಗೂ ಮೊದಲು ಆಡಲಾದ ತ್ರಿಕೋನ ಸರಣಿಯ ಎರಡೂ ಏಕದಿನ ಪಂದ್ಯಗಳಲ್ಲಿ ಭಾರತ ತಂಡ ದಕ್ಷಿಣ ಆಫ್ರಿಕಾವನ್ನು ಮಣಿಸಿತ್ತು. ಸೆಮಿಫೈನಲ್ನಲ್ಲಿ ಭಾರತಕ್ಕೆ ಇದು ಸ್ಫೂರ್ತಿ ಆಗಬೇಕಿದೆ. ತ್ರಿಕೋನ ಸರಣಿಯ ಫೈನಲ್ನಲ್ಲಿ ಮತ್ತೆ ಭಾರತ-ದಕ್ಷಿಣ ಆಫ್ರಿಕಾ ಎದುರಾದರೂ ಮಳೆಯಿಂದಾಗಿ ಈ ಪಂದ್ಯ ನಡೆಯಲಿಲ್ಲ.
ಅಮೋಘ ಪ್ರದರ್ಶನ
ಭಾರತ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಭಾಗಗಳೆರಡರಲ್ಲೂ ಅಮೋಘ ಪ್ರದರ್ಶನ ಕಾಯ್ದುಕೊಂಡು ಬಂದಿದೆ. 2 ಶತಕ ಹಾಗೂ ಒಂದು ಅರ್ಧ ಶತಕ ಹೊಡೆದಿರುವ ಮುಶೀರ್ ಖಾನ್ ಕಿರಿಯರ ತಂಡದ ರನ್ಯಂತ್ರವಾಗಿ ಮಾರ್ಪಟ್ಟಿದ್ದಾರೆ. 334 ರನ್ ಗಳಿಸಿದ ಹೆಗ್ಗಳಿಕೆ ಇವರದು. ನಾಯಕ ಉದಯ್ ಸಹಾರಣ್ ಕೂಡ ಸೆಂಚುರಿ ಬಾರಿಸಿದ್ದಾರೆ. ಜತೆಗೆ 2 ಅರ್ಧ ಶತಕ ಸೇರಿದೆ. 304 ರನ್ ಬಾರಿಸಿದ ಹಿರಿಮೆ ಇವರದು. ನೇಪಾಲ ವಿರುದ್ಧದ ಸೂಪರ್ ಸಿಕ್ಸ್ ಪಂದ್ಯದಲ್ಲಿ 116 ರನ್ ಬಾರಿಸಿದ ಸಚಿನ್ ದಾಸ್ ಕೂಡ ಬ್ಯಾಟಿಂಗ್ ಸರದಿಯ ಬೆನ್ನೆಲುಬಾಗಿದ್ದಾರೆ.
ಆರಂಭ: ಅ. 1.30
ಪ್ರಸಾರ: ಸ್ಟಾರ್ ಸ್ಪೋರ್ಟ್ಸ್
ಟಾಪ್ ನ್ಯೂಸ್
![Traffic Jam: ಮರ ಬಿದ್ದು ಮೈಸೂರು – ಮಾಣಿ ರಾಷ್ಟ್ರೀಯ ಹೆದ್ದಾರಿ ಬಂದ್…](https://www.udayavani.com/wp-content/uploads/2024/07/mara-415x247.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![ICC T20I Rankings: ವಿಶ್ವಕಪ್ನಲ್ಲಿ ಶ್ರೇಷ್ಠ ಸಾಧನೆ; ನಂ.1 ಆಲ್ ರೌಂಡರ್ ಆದ ಪಾಂಡ್ಯ](https://www.udayavani.com/wp-content/uploads/2024/07/13-1-150x90.jpg)
ICC T20I Rankings: ವಿಶ್ವಕಪ್ನಲ್ಲಿ ಶ್ರೇಷ್ಠ ಸಾಧನೆ; ನಂ.1 ಆಲ್ ರೌಂಡರ್ ಆದ ಪಾಂಡ್ಯ
![1-asddasdsa](https://www.udayavani.com/wp-content/uploads/2024/07/1-asddasdsa-1-150x100.jpg)
Hurricane; ಯಾವುದೇ ವಿಳಂಬಗಳಾಗದಿದ್ದಲ್ಲಿ ನಾಳೆ ಬೆಳಗ್ಗೆ ದಿಲ್ಲಿಗೆ ಟೀಮ್ ಇಂಡಿಯಾ
![Barbados](https://www.udayavani.com/wp-content/uploads/2024/07/huricanbe-150x83.jpg)
Barbados; ಮತ್ತೊಂದು ಚಂಡಮಾರುತದ ಸೂಚನೆ; ಭಾರತ ತಂಡ ಇಂದು ರಾತ್ರಿ ಆಗಮನ?
![India will play 34 matches till 2026 T20 World Cup](https://www.udayavani.com/wp-content/uploads/2024/07/t20-150x83.jpg)
T20 Cricket; 2026ರ ಟಿ20 ವಿಶ್ವಕಪ್ ತನಕ ಭಾರತ ಆಡಲಿದೆ 34 ಪಂದ್ಯ
![david miller gave clarification on his retirement news](https://www.udayavani.com/wp-content/uploads/2024/07/miller-150x83.jpg)
South Africa; ಟಿ20ಯಿಂದ ನಿವೃತ್ತಿ? ಸ್ಪಷ್ಟನೆ ನೀಡಿದ ಡೇವಿಡ್ ಮಿಲ್ಲರ್
MUST WATCH
ಹೊಸ ಸೇರ್ಪಡೆ
![Traffic Jam: ಮರ ಬಿದ್ದು ಮೈಸೂರು – ಮಾಣಿ ರಾಷ್ಟ್ರೀಯ ಹೆದ್ದಾರಿ ಬಂದ್…](https://www.udayavani.com/wp-content/uploads/2024/07/mara-150x89.jpg)
Traffic Jam: ದೇವರಕೊಲ್ಲಿ ಬಳಿ ಮರ ಬಿದ್ದು ಮೈಸೂರು – ಮಾಣಿ ರಾಷ್ಟ್ರೀಯ ಹೆದ್ದಾರಿ ಬಂದ್…
![Sandalwood: ಖುಷಿಯ ಜೊತೆಗೊಂದು ಬೇಸರ!; ಗೆಲುವಿನ ಹಾದಿಯಲ್ಲಿ ಪ್ರೇಕ್ಷಕರ ಕೊರತೆ](https://www.udayavani.com/wp-content/uploads/2024/07/17-1-150x90.jpg)
Sandalwood: ಖುಷಿಯ ಜೊತೆಗೊಂದು ಬೇಸರ!; ಗೆಲುವಿನ ಹಾದಿಯಲ್ಲಿ ಪ್ರೇಕ್ಷಕರ ಕೊರತೆ
![Vijayapura ತೆಪ್ಪ ದುರಂತ ಪ್ರಕರಣ: ರಕ್ಷಕರ ಮೊಬೈಲ್ ಸಮೇತ ಪರಾರಿಯಾದರೆ ಪೊಲೀಸರು ?](https://www.udayavani.com/wp-content/uploads/2024/07/vijayapura-3-150x90.jpg)
Vijayapura ತೆಪ್ಪ ದುರಂತ ಪ್ರಕರಣ: ರಕ್ಷಕರ ಮೊಬೈಲ್ ಸಮೇತ ಪರಾರಿಯಾದರೆ ಪೊಲೀಸರು ?
![Jharkhand: ಚಂಪೈ ಸೊರೇನ್ ರಾಜೀನಾಮೆ…ಹೇಮಂತ್ ಸೊರೇನ್ ಮತ್ತೆ ಜಾರ್ಖಂಡ್ ಸಿಎಂ?](https://www.udayavani.com/wp-content/uploads/2024/07/Hemanth-150x86.jpg)
Jharkhand: ಚಂಪೈ ಸೊರೇನ್ ರಾಜೀನಾಮೆ…ಹೇಮಂತ್ ಸೊರೇನ್ ಮತ್ತೆ ಜಾರ್ಖಂಡ್ ಸಿಎಂ?
![ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಕಾನ್ಸ್ ಸ್ಟೇಬಲ್ ಬೆಂಗಳೂರಿಗೆ ವರ್ಗಾವಣೆ?](https://www.udayavani.com/wp-content/uploads/2024/07/16-1-150x90.jpg)
ಕಂಗನಾಗೆ ಕಪಾಳಮೋಕ್ಷ ಮಾಡಿದ್ದ CISF ಮಹಿಳಾ ಕಾನ್ಸ್ ಸ್ಟೇಬಲ್ ಬೆಂಗಳೂರಿಗೆ ವರ್ಗಾವಣೆ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.