WPL: ಗೆಲುವಿನ ಖಾತೆ ತೆರೆದ ಯುಪಿ ವಾರಿಯರ್
Team Udayavani, Feb 28, 2024, 11:39 PM IST
ಬೆಂಗಳೂರು: ವನಿತಾ ಪ್ರೀಮಿಯರ್ ಲೀಗ್ನಲ್ಲಿ ಯುಪಿ ವಾರಿಯರ್ ಸತತ 2 ಸೋಲುಗಳ ಬಳಿಕ ಗೆಲುವಿನ ಖಾತೆ ತೆರೆದಿದೆ. ಬುಧವಾರದ ಪಂದ್ಯದಲ್ಲಿ ಅದು ಮುಂಬೈ ಇಂಡಿಯನ್ಸ್ಗೆ 7 ವಿಕೆಟ್ಗಳ ಆಘಾತವಿಕ್ಕಿತು.
ಮೊದಲು ಬ್ಯಾಟಿಂಗ್ ನಡೆಸಿದ ಮುಂಬೈ 6 ವಿಕೆಟಿಗೆ 161 ರನ್ ಪೇರಿಸಿದರೆ, ಯುಪಿ 16.3 ಓವರ್ಗಳಲ್ಲಿ 3 ವಿಕೆಟಿಗೆ 163 ರನ್ ಬಾರಿಸಿತು. ಇದು ಮುಂಬೈಗೆ ಎದುರಾದ ಮೊದಲ ಸೋಲು.
ಅಲಿಸ್ಸಾ ಹೀಲಿ-ಕಿರಣ್ ನವಿYರೆ ಯುಪಿಗೆ ಪ್ರಚಂಡ ಆರಂಭ ಒದಗಿಸಿದರು. 9.1 ಓವರ್ಗಳಲ್ಲಿ 94 ರನ್ ಪೇರಿಸಿದರು. ಇದರಲ್ಲಿ ಕಿರಣ್ ಕೊಡುಗೆ 57 ರನ್. ಕೇವಲ 31 ಎಸೆತ ಎದುರಿಸಿದ ಅವರು 6 ಫೋರ್, 4 ಸಿಕ್ಸರ್ ಸಿಡಿಸಿ ಅಬ್ಬರಿಸಿದರು. ಹೀಲಿ ಗಳಿಕೆ 33 ರನ್. ಆದರೆ 4 ರನ್ ಅಂತರದಲ್ಲಿ 3 ವಿಕೆಟ್ ಕಳೆದುಕೊಂಡ ಯುಪಿ ಒತ್ತಡಕ್ಕೆ ಸಿಲುಕಿತು. ಆದರೆ 4ನೇ ವಿಕೆಟಿಗೆ ಜತೆಗೂಡಿದ ಗ್ರೇಸ್ ಹ್ಯಾರಿಸ್ (ಅಜೇಯ 38) ಮತ್ತು ದೀಪ್ತಿ ಶರ್ಮ (ಅಜೇಯ 27) ಸೇರಿಕೊಂಡು ತಂಡವನ್ನು ದಡ ಮುಟ್ಟಿಸಿದರು.
ಹ್ಯಾಲಿ ಅರ್ಧ ಶತಕ
ಮುಂಬೈ ಇಂಡಿಯನ್ಸ್ನ ಸವಾಲಿನ ಮೊತ್ತಕ್ಕೆ ಕಾರಣ ರಾದವರು ಆರಂಭಿಕ ಆಟಗಾರ್ತಿ, ವೆಸ್ಟ್ ಇಂಡೀಸ್ನ ಹ್ಯಾಲಿ ಮ್ಯಾಥ್ಯೂಸ್. 15ನೇ ಓವರ್ ತನಕ ಕ್ರೀಸ್ ಆಕ್ರಮಿಸಿಕೊಂಡ ಅವರು 55 ರನ್ ಬಾರಿಸಿದರು (47 ಎಸೆತ, 9 ಬೌಂಡರಿ, 1 ಸಿಕ್ಸರ್). ಇವರ ಜತೆಗಾರ್ತಿ ಯಾಸ್ತಿಕಾ ಭಾಟಿಯಾ 26 ರನ್ ಕೊಡುಗೆ ಸಲ್ಲಿಸಿದರು (22 ಎಸೆತ, 3 ಬೌಂಡರಿ, 1 ಸಿಕ್ಸರ್). ಸ್ಕಿವರ್ ಬ್ರಂಟ್ 19, ಅಮೇಲಿಯಾ ಕೆರ್ರ 23, ಪೂಜಾ ವಸ್ತ್ರಾಕರ್ 18, ಐಸ್ಸಿ ವೋಂಗ್ ಅಜೇಯ 15 ರನ್ ಮಾಡಿದರು.
ಮ್ಯಾಥ್ಯೂಸ್-ಯಾಸ್ತಿಕಾ ಜೋಡಿಯಿಂದ ಮೊದಲ ವಿಕೆಟಿಗೆ 8 ಓವರ್ಗಳಿಂದ 50 ರನ್ ಒಟ್ಟುಗೂಡಿತು. ಯುಪಿ ಪರ ಬೌಲಿಂಗ್ ನಡೆಸಿದ ಎಲ್ಲ 5 ಮಂದಿ ತಲಾ ಒಂದು ವಿಕೆಟ್ ಉರುಳಿಸಿದರು.
ಗಾಯಾಳಾದ ನಾಯಕಿ ಹರ್ಮನ್ಪ್ರೀತ್ ಕೌರ್ ಮತ್ತು ಪ್ರಧಾನ ವೇಗಿ ಶಬಿ°ಮ್ ಇಸ್ಮಾಯಿಲ್ ಅವರ ಸೇವೆಯಿಂದ ಮುಂಬೈ ವಂಚಿತವಾಗಿತ್ತು. ಹೀಗಾಗಿ ನ್ಯಾಟ್ ಸ್ಕಿವರ್ ಬ್ರಂಟ್ ತಂಡವನ್ನು ಮುನ್ನಡೆಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Womens T20 World Cup: ಪಾಕ್ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಸೋತ ಭಾರತ
INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್ ಯಾರು?
T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್
Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್ ಸವಾಲು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bantwala: ಕೇಪು, ಅಳಿಕೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ
Railway: ಶೀಘ್ರವೇ ಬೆಂಗಳೂರು-ಮೈಸೂರು, ತುಮಕೂರು ನಮೋ ರ್ಯಾಪಿಡ್ ರೈಲು: ರೈಲ್ವೆ ಸಚಿವ
Padubidri: ರಸ್ತೆ ಅಪಘಾತ; ಗಾಯಾಳು ಸಾವು
Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ
PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.