ಸೆರಾನಾ, ಬ್ರಾಡಿ ಔಟ್; ಅಮೆರಿಕನ್ನರ ಆಟ ಖತಂ: ಕಿರೀಟಕ್ಕೆ ಒಸಾಕಾ-ಅಜರೆಂಕಾ ಸ್ಪರ್ಧೆ
Team Udayavani, Sep 11, 2020, 7:00 PM IST
ನ್ಯೂಯಾರ್ಕ್: ಯುಎಸ್ ಓಪನ್ “ಆಲ್ ಅಮೆರಿಕನ್ ಫೈನಲ್’ಗೆ ಸಾಕ್ಷಿ ಆಗಬಹುದೆಂಬ ತವರಿನ ಟೆನಿಸ್ ಅಭಿಮಾನಿಗಳ ನಿರೀಕ್ಷೆ ತಲೆಕೆಳಗಾಗಿದೆ. ಸೆಮಿಫೈನಲ್ನಲ್ಲಿ ಅಮೆರಿಕದ ಜೆನ್ನಿಫರ್ ಬ್ರಾಡಿ ಮತ್ತು ಸೆರೆನಾ ವಿಲಿಯಮ್ಸ್ ಇಬ್ಬರೂ ಉದುರಿ ಹೋಗಿದ್ದಾರೆ. ಜಪಾನಿನ ನವೋಮಿ ಒಸಾಕಾ ಮತ್ತು ಬೆಲರೂಸ್ನ ವಿಕ್ಟೋರಿಯಾ ಅಜರೆಂಕಾ ರವಿವಾರದ ಪ್ರಶಸ್ತಿ ಸಮರಕ್ಕೆ ಸಜ್ಜಾಗಿದ್ದಾರೆ.
ಅವಳಿ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ವಿಜೇತೆ ನವೋಮಿ ಒಸಾಕಾ ಮೊದಲ ಸೆಮಿಫೈನಲ್ ಅದೃಷ್ಟ ಪರೀಕ್ಷೆಯಲ್ಲಿ ಗೆದ್ದು ಬಂದರು. ಇದೊಂದು “ಥ್ರಿಲ್ಲಿಂಗ್ ಫೈಟ್’ ಆಗಿತ್ತು. ಮೊದಲ ಸೆಟ್ ಅನ್ನು ಬ್ರಾಡಿ ಟೈ-ಬ್ರೇಕರ್ನಲ್ಲಿ ಕಳೆದುಕೊಳ್ಳದೇ ಹೋಗಿದ್ದರೆ ಬಹುಶಃ ಒಸಾಕಾ ಆಟ ಮುಗಿದೇ ಹೋಗುತ್ತಿತ್ತು. ಅವರು ಜೆನ್ನಿಫರ್ ಬ್ರಾಡಿ ಆಟವನ್ನು 7-6 (7-1), 3-6, 6-3ರಿಂದ ಕೊನೆಗಾಣಿಸುವಲ್ಲಿ ಯಶಸ್ವಿಯಾದರು. ಕೂಟದಲ್ಲಿ ಒಂದೂ ಸೆಟ್ ಕಳೆದುಕೊಳ್ಳದೆ ಸೆಮಿಫೈನಲ್ ತನಕ ಬಂದಿದ್ದ 28ನೇ ಶ್ರೇಯಾಂಕದ ಬ್ರಾಡಿ ಅವರ ಮೊದಲ ಗ್ರ್ಯಾನ್ಸ್ಲಾಮ್ ಫೈನಲ್ ಕನಸು ಛಿದ್ರಗೊಂಡಿತು.
ಪಂದ್ಯದ ವೇಳೆ ಮಳೆ ಸುರಿದ ಕಾರಣ “ಆರ್ಥರ್ ಆ್ಯಶ್ ಸ್ಟೇಡಿಯಂ ಛಾವಣಿಯನ್ನು ಮುಚ್ಚಿ ಆಟ ಮುಂದುವರಿಸಲಾಯಿತು. “ಇಂಥ ವಾತಾವರಣದಲ್ಲಿ ಆಡಲು ನಾನು ತುಂಬ ಇಷ್ಟಪಡುತ್ತೇನೆ. ಬೇಸರವೆಂದರೆ, ವೀಕ್ಷಕರಿಲ್ಲದಿರುವುದು…’ ಎಂದು 3ನೇ ಗ್ರ್ಯಾನ್ಸ್ಲಾಮ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಒಸಾಕಾ ಹೇಳಿದರು.
2018ರ ಯುಎಸ್ ಓಪನ್ ಫೈನಲ್ನಲ್ಲಿ ಸೆರೆನಾ ವಿಲಿಯಮ್ಸ್ ಅವರನ್ನು ಮಣಿಸುವ ಮೂಲಕ ಒಸಾಕಾ ಮೊದಲ ಗ್ರ್ಯಾನ್ಸ್ಲಾಮ್ ಜಯಿಸಿದ್ದರು. ಬಳಿಕ ಕಳೆದ ವರ್ಷದ ಆಸ್ಟ್ರೇಲಿಯನ್ ಓಪನ್ನಲ್ಲೂ ಚಾಂಪಿಯನ್ ಆಗಿ ಮೂಡಿಬಂದರು. ಇನ್ನೊಂದೆಡೆ ಬ್ರಾಡಿಗೆ ಇದು ಮೊದಲ ಗ್ರ್ಯಾನ್ಸ್ಲಾಮ್ ಸೆಮಿಫೈನಲ್ ಆಗಿತ್ತು.
ಸೆರೆನಾಗೆ ತವರಿನ ಶಾಪ!
ಬಹುಶಃ ಸೆರೆನಾ ವಿಲಿಯಮ್ಸ್ ತವರಿನ ಶಾಪಕ್ಕೆ ತುತ್ತಾಗಿರಬಹುದು. 24ನೇ ಗ್ರ್ಯಾನ್ಸ್ಲಾಮ್ ದಾಖಲೆಯನ್ನು ಸರಿದೂಗಿಸಲು 2017ರಿಂದಲೂ ಪ್ರಯತ್ನಿಸುತ್ತಿದ್ದ ಅವರಿಗೆ ಮತ್ತೂಮ್ಮೆ ಹಿನ್ನಡೆಯಾಗಿದೆ. ಅವರನ್ನು ವಿಕ್ಟೋರಿಯಾ ಅಜರೆಂಕಾ 1-6, 6-3, 6-3ರಿಂದ ಹಿಮ್ಮೆಟ್ಟಿಸಿದರು.
ಮೊದಲ ಸೆಟ್ನಲ್ಲಿ ಸುಲಭ ಜಯ ಸಾಧಿಸಿದಾಗ ಸೆರೆನಾರ ಫೈನಲ್ ಓಟ ಖಚಿತ ಎಂಬ ನಿರೀಕ್ಷೆ ಗರಿಗೆದರಿತ್ತು. ಆದರೆ ಅಜರೆಂಕಾ ಫೀನಿಕ್ಸ್ನಂತೆ ಎದ್ದು ಬಂದರು. ಸೆರೆನಾ ವಿರುದ್ಧ ಆಡಿದ 11 ಗ್ರ್ಯಾನ್ಸ್ಲಾಮ್ ಪಂದ್ಯಗಳಲ್ಲಿ ಮೊದಲ ಬಾರಿಗೆ ಗೆಲುವಿನ ಸಂಭ್ರಮ ಆಚರಿಸಿದರು. 7 ವರ್ಷಗಳ ಬಳಿಕ ಗ್ರ್ಯಾನ್ಸ್ಲಾಮ್ ಫೈನಲ್ಗೆ ಲಗ್ಗೆ ಇರಿಸಿದರು.
ಅಜರೆಂಕಾ 2012 ಮತ್ತು 2013ರ ಆಸ್ಟ್ರೇಲಿಯನ್ ಓಪನ್ ಚಾಂಪಿಯನ್ ಆಗಿದ್ದಾರೆ. ಈ ಎರಡು ವರ್ಷ ಯುಎಸ್ ಓಪನ್ ಫೈನಲ್ ತಲುಪಿಯೂ ಸೆರೆನಾಗೆ ಶರಣಾಗಿ ಪ್ರಶಸ್ತಿಯಿಂದ ದೂರವೇ ಉಳಿದಿದ್ದರು. ಈ ಬಾರಿ ಸೆರೆನಾ ವಿರುದ್ಧ ಸೆಮಿಫೈನಲ್ನಲ್ಲೇ ಸೇಡು ತೀರಿಸಿಕೊಂಡರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN; ಅʼಸ್ಪಿನ್ʼಗೆ ಬಾಂಗ್ಲಾ ತತ್ತರ: ಚೆನ್ನೈ ಪಂದ್ಯದಲ್ಲಿ ಭಾರತಕ್ಕೆ ಭರ್ಜರಿ ಗೆಲುವು
Duleep trophy: ಇಂಡಿಯಾ ಸಿ, ಬಿ ಮಧ್ಯೆ ಪ್ರಶಸ್ತಿಗೆ ಪೈಪೋಟಿ; ಯಾರಿಗೆ ಸಿಗಲಿದೆ ಟ್ರೋಫಿ?
IPL 2025: ಡೆಲ್ಲಿ ತಂಡದಲ್ಲೇ ಉಳಿಯಲಿದ್ದಾರೆ ಪಂತ್
Hardik Pandya: ರಣಜಿ ಕ್ರಿಕೆಟ್ ಆಡಲು ಹಾರ್ದಿಕ್ ಪಾಂಡ್ಯ ಸಿದ್ಧತೆ
Harmanpreet Singh: ವರ್ಷದ ಆಟಗಾರ ಪ್ರಶಸ್ತಿಗೆ ಹರ್ಮನ್ಪ್ರೀತ್ ಹೆಸರು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Ayodhya: ಭಾಗಶಃ ನಿರ್ಮಿಸಿದ ರಾಮ ಮಂದಿರದಲ್ಲಿ ಪ್ರಾರ್ಥನೆ ಸಲ್ಲಿಸಲು ಸಾಧ್ಯವಿಲ್ಲ!
Hiriydaka: ಹೃದಯಾಘಾತದಿಂದ ಗ್ರಾಮ ಪಂಚಾಯತ್ ಸದಸ್ಯ ಮೃತ್ಯು
Udupi: ಚೆಕ್ ಅಮಾನ್ಯ ಪ್ರಕರಣ; ಆರೋಪಿ ಖುಲಾಸೆ
Congress: ತುಷ್ಟೀಕರಣದಿಂದ ಮತಾಂಧ ಶಕ್ತಿಗಳಿಗೆ ಶಕ್ತಿ; ಜೋಶಿ ಕಿಡಿ
Thirupathi Laddu: ತಿರುಪತಿಗೆ ತೆರಳುವ ನಂದಿನಿ ತುಪ್ಪದ ಟ್ಯಾಂಕರ್ಗೆ ಜಿಪಿಎಸ್ ಕಣ್ಗಾವಲು!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.