ವಿಜಯ್‌ ಹಜಾರೆ: ಕರ್ನಾಟಕಕ್ಕೆ ಸತತ 4ನೇ ಜಯ


Team Udayavani, Mar 4, 2017, 3:45 AM IST

Mahesh-kar-JU.jpg

ಕೋಲ್ಕತ್ತಾ: ಸ್ಥಿರ ಪ್ರದರ್ಶನ ನೀಡುತ್ತಿರುವ ಕರ್ನಾಟಕ ತಂಡ ವಿಜಯ್‌ ಹಜಾರೆ ಟ್ರೋಫಿಯಲ್ಲಿ ಜಮ್ಮು ಕಾಶ್ಮೀರ ವಿರುದ್ಧ 7 ವಿಕೆಟ್‌ ಜಯ ಸಾಧಿಸಿದೆ. ಈ ಮೂಲಕ ಕೂಟದಲ್ಲಿ ಸೋಲಿಲ್ಲದೇ ಸತತ 4ನೇ ಜಯ ಪಡೆದಿದೆ. ಎಲ್ಲಾ ಪಂದ್ಯಗಳನ್ನು ಗೆದ್ದ ಕರ್ನಾಟಕ 16 ಅಂಕ ಸಂಪಾದಿಸಿ “ಡಿ’ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ.

ಶುಕ್ರವಾರ ನಡೆದ ಪಂದ್ಯದಲ್ಲಿ ಜಮ್ಮು ಕಾಶ್ಮೀರ 28.4 ಓವರ್‌ಗೆ 108 ರನ್‌ ಬಾರಿಸಿ ಆಲೌಟ್‌ ಆಗಿತ್ತು. ಸುಲಭ ಗುರಿ ಪಡೆದ ಕರ್ನಾಟಕ 6 ರನ್‌ ಆಗಿರುವಾಗ ಮಾಯಂಕ್‌ ಅಗರ್ವಾಲ್‌ ವಿಕೆಟ್‌ ಕಳೆದುಕೊಂಡಿತು. ತಂಡದ ಮೊತ್ತ 21 ಆಗಿರುವಾಗ ಮತ್ತೂಬ್ಬ ಬಲಾಡ್ಯ ಬ್ಯಾಟ್ಸ್‌ಮನ್‌ ಆರ್‌.ಸಮರ್ಥ್ ವಿಕೆಟ್‌ ಅನ್ನು ಕರ್ನಾಟಕ ಕಳೆದುಕೊಂಡಿತು. ಈ ಎರಡು ವಿಕೆಟ್‌ ಅನ್ನು ಮೊಹಮ್ಮದ್‌ ಮುಧಸರ್‌ ಕಬಳಿಸಿದರು. ನಂತರ ಜತೆಯಾದ ಕೆ.ಗೌತಮ್‌ ಮತ್ತು ದೇಶಪಾಂಡೆ ತಂಡದ ಮೊತ್ತವನ್ನು 52ಕ್ಕೆ ತೆಗೆದುಕೊಂಡು ಹೋದರು. ಈ ಸಮಯದಲ್ಲಿ ದೇಶಪಾಂಡೆ (12) ಮುಧಸರ್‌ ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು.

ಈ ಸಮಯದಲ್ಲಿ ಜತೆಯಾದ ಕೆ.ಗೌತಮ್‌ ಮತ್ತು ನಾಯಕ ಮನೀಶ್‌ ಪಾಂಡೆ ಪಂದ್ಯವನ್ನು ಅಂತ್ಯಕಾಣಿಸಿದರು. ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶನ ನೀಡಿದ ಈ ಜೋಡಿ 58 ರನ್‌ ಬಾರಿಸಿದರು. ಹೀಗಾಗಿ ಕರ್ನಾಟಕ ಕೇವಲ 17.4 ಓವರ್‌ನಲ್ಲೇ 3 ವಿಕೆಟ್‌ ಕಳೆದುಕೊಂಡು ಜಯ ದಾಖಲಿಸಿತು. ಕೆ.ಗೌತಮ್‌ 46 ಎಸೆತದಲ್ಲಿ 9 ಬೌಂಡರಿ 1 ಸಿಕ್ಸರ್‌ ಸೇರಿದಂತೆ ಅಜೇಯ 57 ರನ್‌ ಬಾರಿಸಿದರು. ಮನೀಶ್‌ ಪಾಂಡೆ 23 ಎಸೆತದಲ್ಲಿ 23 ರನ್‌ ಬಾರಿಸಿದರು. ಇದರಲ್ಲಿ 4 ಬೌಂಡರಿ ಸೇರಿದೆ. ಜಮ್ಮು ಕಾಶ್ಮೀರ ಪರ ಮುಧರಸ್‌ 53ಕ್ಕೆ 3 ವಿಕೆಟ್‌ ಪಡೆದರು.

ಪ್ರಸಿದ್ಧ್ ಕೃಷ್ಣ ಭರ್ಜರಿ ದಾಳಿ:
ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಜಮ್ಮು ಕಾಶ್ಮೀರ ಬ್ಯಾಟ್ಸ್‌ಮನ್‌ಗಳು ಕರ್ನಾಟಕದ ಪ್ರಸಿದ್ಧ್ ಕೃಷ್ಣ ಸೇರಿದಂತೆ ಬೌಲರ್‌ಗಳ ಚುರುಕಿನ ದಾಳಿಗೆ ಪೆವಿಲಿಯನ್‌ ಸೇರಿದತು. ಜಮ್ಮು ಕಾಶ್ಮೀರ ಪರ ಮುನ್ಸೂರ್‌ ದಾರ್‌ (20) ಬಾರಿಸಿದ್ದೆ ದೊಡ್ಡ ಮೊತ್ತವಾಗಿತ್ತು. ಕರ್ನಾಟಕದ ಪರ ಪ್ರಸಿದ್ಧ್ ಕೃಷ್ಣ 4, ಸ್ಟುವರ್ಟ್‌ ಬಿನ್ನಿ 3 ವಿಕೆಟ್‌ ಪಡೆದರೆ, ಎಸ್‌.ಅರವಿಂದ್‌ ಮತ್ತು ರೋನಿತ್‌ ಮೋರೆ ತಲಾ 1 ವಿಕೆಟ್‌ ಪಡೆದರು.

ಸಂಕ್ಷಿಪ್ತ ಸ್ಕೋರ್‌:
ಜಮ್ಮು ಕಾಶ್ಮೀರ 28.4 ಓವರ್‌ಗೆ 108/10 (ಮುನ್ಸೂರ್‌ ದಾರ್‌ 20, ರಾಮ್‌ ದಯಲ್‌ 14, ಪ್ರಸಿದ್ಧ್ ಕೃಷ್ಣ 15ಕ್ಕೆ 4), ಕರ್ನಾಟಕ 17.4 ಓವರ್‌ಗೆ 110/3 (ಕೆ.ಗೌತಮ್‌ 57, ಮನೀಶ್‌ ಪಾಂಡೆ 23, ಮುಧಸರ್‌ 53ಕ್ಕೆ 3).

ವಿಜಯ್‌ ಹಜಾರೆ ಇತರೆ ಪಂದ್ಯಗಳ ಫ‌ಲಿತಾಂಶ
-ಹೈದರಾಬಾದ್‌ಗೆ (203/8) ಜಾರ್ಖಂಡ್‌ (182/10) ವಿರುದ್ಧ 21 ರನ್‌ ಜಯ
-ಸೌರಾಷ್ಟ್ರಕ್ಕೆ (279/9) ಛತೀಸ್‌ಗಢ (187/10) ವಿರುದ್ಧ 92 ರನ್‌ ಜಯ
-ಗೋವಾ (290/8) ವಿರುದ್ಧ ಮಧ್ಯ ಪ್ರದೇಶಕ್ಕೆ (294/3) 7 ವಿಕೆಟ್‌ ಜಯ
-ಬಂಗಾಳಕ್ಕೆ (230/10) ಮುಂಬೈ (134/10) ವಿರುದ್ಧ 96 ರನ್‌ ಜಯ
-ಗುಜರಾತ್‌ಗೆ (288/7) ಆಂಧ್ರ (106/10) ವಿರುದ್ಧ 182 ರನ್‌ ಜಯ
-ಉತ್ತರ ಪ್ರದೇಶಕ್ಕೆ (370/5) ಮಹಾರಾಷ್ಟ್ರ (266/10) ವಿರುದ್ಧ 104 ರನ್‌ ಜಯ
-ಕೇರಳ (230/7) ವಿರುದ್ಧ ತಮಿಳುನಾಡಿಗೆ (231/4) 6 ವಿಕೆಟ್‌ ಜಯ
-ದೆಹಲಿಗೆ (356/5) ತ್ರಿಪುರ (286/8) ವಿರುದ್ಧ 70 ರನ್‌ ಜಯ
-ಒಡಿಶಾ (162/10) ವಿರುದ್ಧ ವಿದರ್ಭಕ್ಕೆ (163/3) 7 ವಿಕೆಟ್‌ ಜಯ
-ಹರ್ಯಾಣ (196/10) ವಿರುದ್ಧ ಪಂಜಾಬ್‌ಗ (200/5) 5 ವಿಕೆಟ್‌ ಜಯ
-ರೈಲ್ವೇಸ್‌ (215/10) ವಿರುದ್ಧ ಅಸ್ಸಾಂಗೆ (216/6) 4 ವಿಕೆಟ್‌ ಜಯ

ಟಾಪ್ ನ್ಯೂಸ್

Anand-ZP-CEO-DK

Vaccination Campaign: 6ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಅಭಿಯಾನ ಆರಂಭ: ಜಿಪಂ ಸಿಇಒ

uu-po

Police Martyrs Day: ದೇಶದ ಅಖಂಡತೆಗೆ ಹುತಾತ್ಮರ ತ್ಯಾಗ ಸಹಾಯಕ: ನ್ಯಾಯಾಧೀಶ

Police-Marter

Mangaluru: ಹುತಾತ್ಮ ಪೊಲೀಸರ ಸ್ಮರಣೆ ನಮ್ಮ ಕರ್ತವ್ಯ: ಕುಲಪತಿ ಪ್ರೊ. ಪಿ.ಎಲ್‌.ಧರ್ಮ

Kota-Vote

Council By Poll: ಉಡುಪಿ ಜಿಲ್ಲೆಯಲ್ಲಿ ಶೇ. 96.57 ಮತದಾನ; ಎಲ್ಲೂ ಶೇ.100 ಇಲ್ಲ

MNG-Chowta

Council By Poll: ಕೆಲವು ಸದಸ್ಯರ ಬಹಿಷ್ಕಾರ ನಡುವೆ ಎರಡೂ ಜಿಲ್ಲೆಯಲ್ಲಿ ಶೇ. 97.91 ಮತದಾನ

1-a-bss

Bulandshahr; ಸಿಲಿಂಡರ್ ಸ್ಫೋ*ಟಗೊಂಡು ಐವರು ಮೃ*ತ್ಯು: ಹಲವರಿಗೆ ಗಾಯ

Alvas

Alvas College: ಮೂಡುಬಿದಿರೆಯಲ್ಲಿ ನ.10ರಂದು “ಗದ್ದಿಗೆ’ ಕರಾವಳಿ ಮರಾಟಿ ಸಮಾವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

New Zealand: ಪರಾಕ್ರಮ; 5 ದಿನಗಳಲ್ಲಿ 5 ಕ್ರೀಡಾ ಸಾಧನೆ

New Zealand: ಪರಾಕ್ರಮ; 5 ದಿನಗಳಲ್ಲಿ 5 ಕ್ರೀಡಾ ಸಾಧನೆ

Ranji Trophy: ಕರ್ನಾಟಕಕ್ಕೆ ಮತ್ತೆ ಮಳೆ ಕಾಟ

Ranji Trophy: ಕರ್ನಾಟಕಕ್ಕೆ ಮತ್ತೆ ಮಳೆ ಕಾಟ

Pro Kabaddi 2024: ಯೋಧಾಸ್‌, ಪುನೇರಿ ಜಯಭೇರಿ

Pro Kabaddi 2024: ಯೋಧಾಸ್‌, ಪುನೇರಿ ಜಯಭೇರಿ

ODI Match: ವೆಸ್ಟ್‌ ಇಂಡೀಸ್‌ ವಿರುದ್ಧ ಶ್ರೀಲಂಕಾಕ್ಕೆ ಜಯ

ODI Match: ವೆಸ್ಟ್‌ ಇಂಡೀಸ್‌ ವಿರುದ್ಧ ಶ್ರೀಲಂಕಾಕ್ಕೆ ಜಯ

BAN vs SA: ಢಾಕಾ ಟೆಸ್ಟ್‌; ಮೊದಲ ದಿನವೇ 16 ವಿಕೆಟ್‌ ಪತನ

BAN vs SA: ಢಾಕಾ ಟೆಸ್ಟ್‌; ಮೊದಲ ದಿನವೇ 16 ವಿಕೆಟ್‌ ಪತನ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

Anand-ZP-CEO-DK

Vaccination Campaign: 6ನೇ ಸುತ್ತಿನ ಕಾಲುಬಾಯಿ ಜ್ವರ ಲಸಿಕಾ ಅಭಿಯಾನ ಆರಂಭ: ಜಿಪಂ ಸಿಇಒ

uu-po

Police Martyrs Day: ದೇಶದ ಅಖಂಡತೆಗೆ ಹುತಾತ್ಮರ ತ್ಯಾಗ ಸಹಾಯಕ: ನ್ಯಾಯಾಧೀಶ

Police-Marter

Mangaluru: ಹುತಾತ್ಮ ಪೊಲೀಸರ ಸ್ಮರಣೆ ನಮ್ಮ ಕರ್ತವ್ಯ: ಕುಲಪತಿ ಪ್ರೊ. ಪಿ.ಎಲ್‌.ಧರ್ಮ

Kota-Vote

Council By Poll: ಉಡುಪಿ ಜಿಲ್ಲೆಯಲ್ಲಿ ಶೇ. 96.57 ಮತದಾನ; ಎಲ್ಲೂ ಶೇ.100 ಇಲ್ಲ

MNG-Chowta

Council By Poll: ಕೆಲವು ಸದಸ್ಯರ ಬಹಿಷ್ಕಾರ ನಡುವೆ ಎರಡೂ ಜಿಲ್ಲೆಯಲ್ಲಿ ಶೇ. 97.91 ಮತದಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.