![0055](https://www.udayavani.com/wp-content/uploads/2024/12/0055-415x249.jpg)
Vijay Hazare Trophy: ಪಡಿಕ್ಕಲ್ ಶತಕ; ಕರ್ನಾಟಕ ವಿಜಯ
ಉತ್ತರಾಖಂಡ ವಿರುದ್ಧ 52 ರನ್ ಗೆಲುವು
Team Udayavani, Nov 25, 2023, 11:52 PM IST
![1-sdsdads](https://www.udayavani.com/wp-content/uploads/2023/11/1-sdsdads-620x349.jpg)
ಅಹ್ಮದಾಬಾದ್: ದೇವದತ್ತ ಪಡಿಕ್ಕಲ್ ಅವರ ಶತಕ ಪರಾಕ್ರಮ ಹಾಗೂ ವಾಸುಕಿ ಕೌಶಿಕ್ ಅವರ ಘಾತಕ ಬೌಲಿಂಗ್ ನೆರವಿನಿಂದ “ವಿಜಯ್ ಹಜಾರೆ ಟ್ರೋಫಿ’ ಏಕದಿನ ಪಂದ್ಯಾವಳಿಯಲ್ಲಿ ಕರ್ನಾಟಕ ಸತತ 2ನೇ ಗೆಲುವು ಸಾಧಿಸಿದೆ. ಶನಿವಾರ ಇಲ್ಲಿನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ನಡೆದ ಪಂದ್ಯದಲ್ಲಿ ರಾಜ್ಯ ತಂಡ ಉತ್ತರಾಖಂಡವನ್ನು 52 ರನ್ನುಗಳಿಂದ ಮಣಿಸಿತು.
ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕರ್ನಾಟಕ 7 ವಿಕೆಟಿಗೆ 284 ರನ್ ಪೇರಿಸಿದರೆ, ಇದಕ್ಕೆ ದಿಟ್ಟ ಉತ್ತರ ನೀಡುವಲ್ಲಿ ವಿಫಲವಾದ ಉತ್ತರಾಖಂಡ 9 ವಿಕೆಟ್ ನಷ್ಟಕ್ಕೆ 232 ರನ್ ಬಾರಿಸಿ ಶರಣಾಯಿತು.
“ಸಿ’ ವಿಭಾಗದ ಮೊದಲ ಪಂದ್ಯದಲ್ಲಿ ಕರ್ನಾಟಕ 222 ರನ್ನುಗಳ ಬೃಹತ್ ಅಂತರದಿಂದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಮಣಿಸಿತ್ತು. ಇನ್ನೊಂದೆಡೆ ಉತ್ತರಾಖಂಡ ಮೊದಲ ಲೀಗ್ ಪಂದ್ಯದಲ್ಲಿ ಹರ್ಯಾಣಕ್ಕೆ 6 ವಿಕೆಟ್ಗಳಿಂದ ಶರಣಾಗಿತ್ತು.
ಪಡಿಕ್ಕಲ್ ಶತಕ ಪರಾಕ್ರಮ
ವನ್ಡೌನ್ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರ 117 ರನ್ ಸಾಹಸ ಕರ್ನಾಟಕ ಸರದಿಯ ಆಕರ್ಷಣೆ ಆಗಿತ್ತು. ನಿಕಿನ್ ಜೋಸ್ (72) ಮತ್ತು ಮನೀಷ್ ಪಾಂಡೆ (56) ಅರ್ಧ ಶತಕದ ಕೊಡುಗೆ ಸಲ್ಲಿಸಿದರು.
ಜಮ್ಮು ಮತ್ತು ಕಾಶ್ಮೀರ ವಿರುದ್ಧ ಅಮೋಘ ಶತಕ ಬಾರಿಸಿ ಮೊದಲ ವಿಕೆಟಿಗೆ 267 ರನ್ ಪೇರಿಸಿದ್ದ ಆರ್. ಸಮರ್ಥ್ (11) ಮತ್ತು ನಾಯಕ ಮಾಯಾಂಕ್ ಅಗರ್ವಾಲ್ (0) ಇಲ್ಲಿ ವಿಫಲರಾದರು. ಹೀಗಾಗಿ ಪಡಿ ಕ್ಕಲ್ ಮೊದಲ ಓವರ್ನಲ್ಲೇ ಕ್ರೀಸ್ ಇಳಿಯಬೇಕಾಯಿತು. 38ನೇ ಓವರ್ ತನಕ ಬ್ಯಾಟಿಂಗ್ ವಿಸ್ತರಿಸಿದ ಅವರು 122 ಎಸೆತಗಳಿಂದ 117 ರನ್ ಬಾರಿಸಿ ದರು. ಈ ಪ್ರಚಂಡ ಬ್ಯಾಟಿಂಗ್ ವೇಳೆ 13 ಬೌಂಡರಿ, 5 ಸಿಕ್ಸರ್ ಸಿಡಿದವು.
ನಿಕಿನ್ ಜೋಸ್ ಅವರ 72 ರನ್ 82 ಎಸೆತಗಳಿಂದ ಬಂತು. ಸಿಡಿಸಿದ್ದು 3 ಫೋರ್, 3 ಸಿಕ್ಸರ್. ಪಡಿಕ್ಕಲ್-ಜೋಸ್ ಜತೆಯಾಟದಲ್ಲಿ 131 ರನ್ ಒಟ್ಟು ಗೂಡಿತು. ಮನೀಷ್ ಪಾಂಡೆ ಕೂಡ ಆಕ್ರಮಣಕಾರಿ ಆಟವಾಡಿದರು. 40 ಎಸೆತಗಳಿಂದ 56 ರನ್ ಬಂತು. 4 ಬೌಂಡರಿ, 3 ಸಿಕ್ಸರ್ ಬಾರಿಸಿ ಅಪಾಯ ಕಾರಿಯಾಗಿ ಗೋಚರಿಸಿದರು.
ಚೇಸಿಂಗ್ ವೇಳೆ ಉತ್ತರಾಖಂಡಕ್ಕೆ ದೊಡ್ಡ ಮಟ್ಟದ ಹೋರಾಟ ನೀಡಲು ಸಾಧ್ಯವಾಗಲಿಲ್ಲ. ಆದರೆ 8ನೇ ಕ್ರಮಾಂಕದಲ್ಲಿ ಆಡಲು ಬಂದ ಕುಣಾಲ್ ಚಂದೇಲಾ ಪ್ರಚಂಡ ಆಟವಾಡಿ 98 ರನ್ ಬಾರಿಸುವಲ್ಲಿ ಯಶಸ್ವಿಯಾದರು. ಕರ್ನಾಟಕದ ಮುಂದಿನ ಎದುರಾಳಿ ದಿಲ್ಲಿ. ಈ ಪಂದ್ಯ ಸೋಮವಾರ ನಡೆಯಲಿದೆ.
ಟಾಪ್ ನ್ಯೂಸ್
![0055](https://www.udayavani.com/wp-content/uploads/2024/12/0055-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ](https://www.udayavani.com/wp-content/uploads/2024/12/virat-150x87.jpg)
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
![28 cricketers who said goodbye in 2024; Here is the list](https://www.udayavani.com/wp-content/uploads/2024/12/retired-150x87.jpg)
Warner-Ashwin; 2024ರಲ್ಲಿ ವಿದಾಯ ಹೇಳಿದ್ದು ಬರೋಬ್ಬರಿ 28 ಕ್ರಿಕೆಟಿಗರು; ಇಲ್ಲಿದೆ ಪಟ್ಟಿ
![INDvAUS: Is captain Rohit Sharma standing against to Shami?; Aussie tour difficult for pacer!](https://www.udayavani.com/wp-content/uploads/2024/12/shami-1-150x87.jpg)
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
![WTC 25; India’s Test Championship finals road gets tough; Here’s the calculation](https://www.udayavani.com/wp-content/uploads/2024/12/rahul-2-150x87.jpg)
WTC 25; ಕಠಿಣವಾಯ್ತು ಭಾರತದ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಹಾದಿ; ಹೀಗಿದೆ ಲೆಕ್ಕಾಚಾರ
![R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…](https://www.udayavani.com/wp-content/uploads/2024/12/ashwin-150x100.jpg)
R.Ashwin retirement: ಅಶ್ವಿನ್ ವಿದಾಯದ ಸುತ್ತಮುತ್ತ…
MUST WATCH
ಹೊಸ ಸೇರ್ಪಡೆ
![0055](https://www.udayavani.com/wp-content/uploads/2024/12/0055-150x90.jpg)
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
![7(1](https://www.udayavani.com/wp-content/uploads/2024/12/71-4-150x80.jpg)
Udupi: ಉದ್ಘಾಟನೆ ಕಾಣದ ಸರಕಾರಿ ಕಟ್ಟಡಗಳು
![9-ullala](https://www.udayavani.com/wp-content/uploads/2024/12/9-ullala-150x90.jpg)
Ullala: ಸೇತುವೆಗೆ ತೇಪೆ ಹಚ್ಚುವ ಕಾಮಗಾರಿ; ರಾ. ಹೆದ್ದಾರಿಯಲ್ಲಿ ವಾಹನ ಸಂಚಾರ ವ್ಯತ್ಯಯ
![BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ](https://www.udayavani.com/wp-content/uploads/2024/12/virat-150x87.jpg)
BGT: ಆಸೀಸ್ ಮಾಧ್ಯಮದ ವಿರುದ್ದ ವಿರಾಟ್ ಗರಂ: ಏರ್ಪೋರ್ಟ್ ನಲ್ಲಿ ವರದಿಗಾರ್ತಿ ಜತೆ ಜಗಳ
![6](https://www.udayavani.com/wp-content/uploads/2024/12/6-36-150x80.jpg)
Mangaluru: ನಂತೂರು ವೃತ್ತ; ಸಂಚಾರ ಸ್ವಲ್ಪ ನಿರಾಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.