Vijay Hazare Trophy: ಪಡಿಕ್ಕಲ್ ಶತಕ; ಕರ್ನಾಟಕ ವಿಜಯ
ಉತ್ತರಾಖಂಡ ವಿರುದ್ಧ 52 ರನ್ ಗೆಲುವು
Team Udayavani, Nov 25, 2023, 11:52 PM IST
ಅಹ್ಮದಾಬಾದ್: ದೇವದತ್ತ ಪಡಿಕ್ಕಲ್ ಅವರ ಶತಕ ಪರಾಕ್ರಮ ಹಾಗೂ ವಾಸುಕಿ ಕೌಶಿಕ್ ಅವರ ಘಾತಕ ಬೌಲಿಂಗ್ ನೆರವಿನಿಂದ “ವಿಜಯ್ ಹಜಾರೆ ಟ್ರೋಫಿ’ ಏಕದಿನ ಪಂದ್ಯಾವಳಿಯಲ್ಲಿ ಕರ್ನಾಟಕ ಸತತ 2ನೇ ಗೆಲುವು ಸಾಧಿಸಿದೆ. ಶನಿವಾರ ಇಲ್ಲಿನ “ನರೇಂದ್ರ ಮೋದಿ ಸ್ಟೇಡಿಯಂ’ನಲ್ಲಿ ನಡೆದ ಪಂದ್ಯದಲ್ಲಿ ರಾಜ್ಯ ತಂಡ ಉತ್ತರಾಖಂಡವನ್ನು 52 ರನ್ನುಗಳಿಂದ ಮಣಿಸಿತು.
ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಕರ್ನಾಟಕ 7 ವಿಕೆಟಿಗೆ 284 ರನ್ ಪೇರಿಸಿದರೆ, ಇದಕ್ಕೆ ದಿಟ್ಟ ಉತ್ತರ ನೀಡುವಲ್ಲಿ ವಿಫಲವಾದ ಉತ್ತರಾಖಂಡ 9 ವಿಕೆಟ್ ನಷ್ಟಕ್ಕೆ 232 ರನ್ ಬಾರಿಸಿ ಶರಣಾಯಿತು.
“ಸಿ’ ವಿಭಾಗದ ಮೊದಲ ಪಂದ್ಯದಲ್ಲಿ ಕರ್ನಾಟಕ 222 ರನ್ನುಗಳ ಬೃಹತ್ ಅಂತರದಿಂದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಮಣಿಸಿತ್ತು. ಇನ್ನೊಂದೆಡೆ ಉತ್ತರಾಖಂಡ ಮೊದಲ ಲೀಗ್ ಪಂದ್ಯದಲ್ಲಿ ಹರ್ಯಾಣಕ್ಕೆ 6 ವಿಕೆಟ್ಗಳಿಂದ ಶರಣಾಗಿತ್ತು.
ಪಡಿಕ್ಕಲ್ ಶತಕ ಪರಾಕ್ರಮ
ವನ್ಡೌನ್ ಬ್ಯಾಟರ್ ದೇವದತ್ತ ಪಡಿಕ್ಕಲ್ ಅವರ 117 ರನ್ ಸಾಹಸ ಕರ್ನಾಟಕ ಸರದಿಯ ಆಕರ್ಷಣೆ ಆಗಿತ್ತು. ನಿಕಿನ್ ಜೋಸ್ (72) ಮತ್ತು ಮನೀಷ್ ಪಾಂಡೆ (56) ಅರ್ಧ ಶತಕದ ಕೊಡುಗೆ ಸಲ್ಲಿಸಿದರು.
ಜಮ್ಮು ಮತ್ತು ಕಾಶ್ಮೀರ ವಿರುದ್ಧ ಅಮೋಘ ಶತಕ ಬಾರಿಸಿ ಮೊದಲ ವಿಕೆಟಿಗೆ 267 ರನ್ ಪೇರಿಸಿದ್ದ ಆರ್. ಸಮರ್ಥ್ (11) ಮತ್ತು ನಾಯಕ ಮಾಯಾಂಕ್ ಅಗರ್ವಾಲ್ (0) ಇಲ್ಲಿ ವಿಫಲರಾದರು. ಹೀಗಾಗಿ ಪಡಿ ಕ್ಕಲ್ ಮೊದಲ ಓವರ್ನಲ್ಲೇ ಕ್ರೀಸ್ ಇಳಿಯಬೇಕಾಯಿತು. 38ನೇ ಓವರ್ ತನಕ ಬ್ಯಾಟಿಂಗ್ ವಿಸ್ತರಿಸಿದ ಅವರು 122 ಎಸೆತಗಳಿಂದ 117 ರನ್ ಬಾರಿಸಿ ದರು. ಈ ಪ್ರಚಂಡ ಬ್ಯಾಟಿಂಗ್ ವೇಳೆ 13 ಬೌಂಡರಿ, 5 ಸಿಕ್ಸರ್ ಸಿಡಿದವು.
ನಿಕಿನ್ ಜೋಸ್ ಅವರ 72 ರನ್ 82 ಎಸೆತಗಳಿಂದ ಬಂತು. ಸಿಡಿಸಿದ್ದು 3 ಫೋರ್, 3 ಸಿಕ್ಸರ್. ಪಡಿಕ್ಕಲ್-ಜೋಸ್ ಜತೆಯಾಟದಲ್ಲಿ 131 ರನ್ ಒಟ್ಟು ಗೂಡಿತು. ಮನೀಷ್ ಪಾಂಡೆ ಕೂಡ ಆಕ್ರಮಣಕಾರಿ ಆಟವಾಡಿದರು. 40 ಎಸೆತಗಳಿಂದ 56 ರನ್ ಬಂತು. 4 ಬೌಂಡರಿ, 3 ಸಿಕ್ಸರ್ ಬಾರಿಸಿ ಅಪಾಯ ಕಾರಿಯಾಗಿ ಗೋಚರಿಸಿದರು.
ಚೇಸಿಂಗ್ ವೇಳೆ ಉತ್ತರಾಖಂಡಕ್ಕೆ ದೊಡ್ಡ ಮಟ್ಟದ ಹೋರಾಟ ನೀಡಲು ಸಾಧ್ಯವಾಗಲಿಲ್ಲ. ಆದರೆ 8ನೇ ಕ್ರಮಾಂಕದಲ್ಲಿ ಆಡಲು ಬಂದ ಕುಣಾಲ್ ಚಂದೇಲಾ ಪ್ರಚಂಡ ಆಟವಾಡಿ 98 ರನ್ ಬಾರಿಸುವಲ್ಲಿ ಯಶಸ್ವಿಯಾದರು. ಕರ್ನಾಟಕದ ಮುಂದಿನ ಎದುರಾಳಿ ದಿಲ್ಲಿ. ಈ ಪಂದ್ಯ ಸೋಮವಾರ ನಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.