![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Nov 24, 2023, 12:08 AM IST
ಅಹ್ಮದಾಬಾದ್: ಆರಂಭಿಕ ಆಟಗಾರರಾದ ಮಾಯಾಂಕ್ ಅಗರ್ವಾಲ್ ಮತ್ತು ರವಿಕುಮಾರ್ ಸಮರ್ಥ ಅವರ ಆಕರ್ಷಕ ಶತಕದಿಂದಾಗಿ ಕರ್ನಾಟಕ ತಂಡವು “ಸಿ’ ಬಣದ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ತಂಡವನ್ನು 222 ರನ್ನುಗಳಿಂದ ಸೋಲಿಸಿ ವಿಜಯ ಹಜಾರೆ ಟ್ರೋಫಿ ಕ್ರಿಕೆಟ್ ಕೂಟದಲ್ಲಿ ಭರ್ಜರಿ ಗೆಲುವಿನೊಂದಿಗೆ ಶುಭಾರಂಭ ಮಾಡಿದೆ.
ಅಗರ್ವಾಲ್ (157) ಮತ್ತು ಸಮರ್ಥ (123) ಅವರ ಶತಕದಿಂದಾಗಿ ಕರ್ನಾಟಕ ತಂಡವು 2 ವಿಕೆಟಿಗೆ 402 ರನ್ ಪೇರಿಸಿತು. ಇದಕ್ಕುತ್ತರವಾಗಿ ಜಮ್ಮು ಮತ್ತು ಕಾಶ್ಮೀರ ತಂಡವು ವೈಶಾಖ್ ವಿಜಯಕುಮಾರ್ ದಾಳಿಗೆ ಕುಸಿದು 30.4 ಓವರ್ಗಳಲ್ಲಿ 180 ರನ್ನಿಗೆ ಆಲೌಟಾಯಿತು. ವೈಶಾಖ್ 57 ರನ್ನಿಗೆ 4 ವಿಕೆಟ್ ಪಡೆದರು.
ಮುಂಬಯಿ ಜಯಭೇರಿ
ಬೆಂಗಳೂರಿನ ಆಲೂರಿನಲ್ಲಿ ನಡೆದ “ಎ’ ಬಣದ ಪಂದ್ಯದಲ್ಲಿ ಮುಂಬಯಿ ತಂಡವು ಸಿಕ್ಕಿಂ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿದೆ. ತುಷಾರ್ ದೇಶಪಾಂಡೆ ದಾಳಿಗೆ ಕುಸಿದ ಸಿಕ್ಕಿಂ ತಂಡವು 89 ರನ್ನಿಗೆ ಆಲೌಟಾಯಿತು. ತುಷಾರ್ 19 ರನ್ನಿಗೆ 3 ವಿಕೆಟ್ ಕಿತ್ತರು. ಇದಕ್ಕುತ್ತರವಾಗಿ ಮುಂಬಯಿ ತಂಡವು 12 ಓವರ್ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 90 ರನ್ ಗಳಿಸಿ ಜಯಭೇರಿ ಬಾರಿಸಿತು.
ಚಹಲ್ಗೆ ಆರು ವಿಕೆಟ್
ಆಸ್ಟ್ರೇಲಿಯ ವಿರುದ್ಧದ ಟಿ20 ಸರಣಿಗೆ ಆಯ್ಕೆಯಾಗಲು ವಿಫಲರಾದ ಯಜುವೇಂದ್ರ ಚಹಲ್ ವಿಜಯ ಹಜಾರೆ ಪಂದ್ಯದಲ್ಲಿ ಅಮೋಘ ಬೌಲಿಂಗ್ ದಾಳಿ ಸಂಘಟಸಿ ಗಮನ ಸೆಳೆದಿದ್ದಾರೆ. ಅವರ ಈ ಸಾಧನೆಯಿಂದ ಹರಿಯಾಣ ತಂಡ ಆರು ವಿಕೆಟ್ಗಳಿಂದ ಜಯ ಸಾಧಿಸಿತು. ಚಹಲ್ ದಾಳಿಗೆ ತತ್ತರಿಸಿದ ಉತ್ತರಖಂಡ ತಂಡವು 207 ರನ್ನಿಗೆ ಆಲೌಟಾಯಿತು. ಚಹಲ್ 26 ರನ್ನಿಗೆ 6 ವಿಕೆಟ್ ಪಡೆದರು. ಹರಿಯಾಣ ತಂಡವು 45 ಓವರ್ಗಳಲ್ಲಿ 4 ವಿಕೆಟಿಗೆ 208 ರನ್ ಗಳಿಸಿ ಜಯ ಸಾಧಿಸಿತು. ಯುವರಾಜ್ ಸಿಂಗ್ 68, ಅಂಕಿತ್ ಕುಮಾರ್ 49 ಮತ್ತು ಅಶೋಕ್ ಮನೇರಿಯ ಅಜೇಯ 44 ರನ್ ಹೊಡೆದರು.
ಇನ್ನೊಂದು ಪಂದ್ಯದಲ್ಲಿ ದಿಲ್ಲಿ ತಂಡವು ಬಿಹಾರ ತಂಡವನ್ನು 8 ವಿಕೆಟ್ಗಳಿಂದ ಸೋಲಿಸಿದೆ. ಬಿಹಾರ ತಂಡವು 39 ಓವರ್ಗಳಲ್ಲಿ 149 ರನ್ನಿಗೆ ಆಲೌಟಾಯಿತು. ಇಶಾಂತ್ ಶರ್ಮ 30ಕ್ಕೆ 3 ಮತ್ತು ಹರ್ಷಿತ್ ರಾಣ 17 ರನ್ನಿಗೆ 4 ವಿಕೆಟ್ ಉರುಳಿಸಿದರು. ದಿಲ್ಲಿ ತಂಡವು 22.1 ಓವರ್ಗಳಲ್ಲಿ ಎರಡು ವಿಕೆಟಿಗೆ 150 ರನ್ ಗಳಿಸಿ ಜಯ ಸಾಧಿಸಿತು.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
You seem to have an Ad Blocker on.
To continue reading, please turn it off or whitelist Udayavani.