ವಿಜಯ್ ಹಜಾರೆ ಟ್ರೋಫಿ: ಎನ್.ಜಗದೀಶನ್ ಇತಿಹಾಸ; ಕೊಹ್ಲಿ ದಾಖಲೆ ಪತನ

ಸತತ 5 ನೇ ಶತಕ, ಏಕದಿನ ಪಂದ್ಯದಲ್ಲಿ 277 ರನ್ ಚಚ್ಚಿದ ತಮಿಳುನಾಡಿನ ಬ್ಯಾಟ್ಸ್ ಮ್ಯಾನ್

Team Udayavani, Nov 21, 2022, 2:58 PM IST

1-asdsadad

ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ವಿಜಯ್ ಹಜಾರೆ ಟ್ರೋಫಿಯಲ್ಲಿ ತಮಿಳುನಾಡಿನ ಆರಂಭಿಕ ಆಟಗಾರ ಎನ್.ಜಗದೀಶನ್ ಅವರು ಅರುಣಾಚಲ ಪ್ರದೇಶದ ವಿರುದ್ಧ ಸ್ಪೋಟಕ ದ್ವಿಶತಕ ಗಳಿಸಿದ್ದು, ದಿಗ್ಗಜರ ಹಲವು ದಾಖಲೆಗಳು ಮುರಿಯಲ್ಪಟ್ಟಿವೆ. ತಮ್ಮ ಸತತ ಐದನೇ ಶತಕವನ್ನು ಗಳಿಸಿದ ಜಗದೀಶನ್ ಈಗ ಪ್ರಧಾನ ದೇಶೀಯ ಕ್ರಿಕೆಟ್ ನಲ್ಲಿ ಸತತ ಶತಕಗಳ ದಾಖಲೆ ಹೊಂದಿದ್ದ ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಮುರಿದಿದ್ದಾರೆ.

ಜಗದೀಶನ್ ನಿರ್ಗಮಿಸಿದಾಗ, ಅವರು ಬರೋಬ್ಬರಿ 277 ರನ್ ಗಳಿಸಿದ್ದರು. ತಮಿಳುನಾಡು 50 ಓವರ್‌ಗಳಲ್ಲಿ 506 ರನ್ ಗಳ ಹೊಸ ದಾಖಲೆಯ ಬೃಹತ್ ಮೊತ್ತ ಕಲೆ ಹಾಕಿತು.

ಜಗದೀಶನ್ ಸಿಡಿಲಬ್ಬರದ ಬ್ಯಾಟಿಂಗ್
ಟಾಸ್ ಗೆದ್ದ ನಂತರ ಅರುಣಾಚಲ ಪ್ರದೇಶ ಫೀಲ್ಡಿಂಗ್ ಆಯ್ದು ಕೊಂಡಿತು. ಈ ನಿರ್ಧಾರವು ಬೌಲರ್ ಗಳಿಗೆ ದೊಡ್ಡ ಸಂಕಟವನ್ನೇ ತಂದೊಡ್ಡಿತು. ಈ ಹಿಂದೆ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ನಾಲ್ಕು ಶತಕಗಳನ್ನು ಗಳಿಸಿದ್ದ ಜಗದೀಶನ್ ಅವರು ಪ್ರಭಾವಶಾಲಿ ಫಾರ್ಮ್‌ನೊಂದಿಗೆ ಮುಂದುವರಿದು 141 ಎಸೆತಗಳಲ್ಲಿ 277 ರನ್ ಗಳಿಸಿದರು. ಅವರ ಅದ್ಭುತ ಇನ್ನಿಂಗ್ಸ್‌ನಲ್ಲಿ ಅತ್ಯಮೋಘ 15 ಸಿಕ್ಸರ್ ಮತ್ತು ಆಕರ್ಷಕ 25 ಬೌಂಡರಿಗಳು ಒಳಗೊಂಡಿದ್ದವು.

ರೋಹಿತ್ ಶರ್ಮಾ ದಾಖಲೆಯೂ ಪತನ
ನವೆಂಬರ್ 2014 ರಲ್ಲಿ ಐಸಿಸಿ ಅಂತಾರಾಷ್ಟ್ರೀಯ ಏಕದಿನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ 264 ರನ್ ಗಳಿಸಿದ್ದ ರೋಹಿತ್ ಶರ್ಮಾ ಅವರ ದಾಖಲೆಯನ್ನು ಜಗದೀಶನ್ ಮುರಿದರು. 277 ರನ್ ಏಕದಿನ ಕ್ರಿಕೆಟ್ ನ ಒಂದು ಇನ್ನಿಂಗ್ಸ್‌ನಲ್ಲಿ  ಗರಿಷ್ಠ ಸ್ಕೋರ್ ಆಗಿದೆ.

ಲಿಸ್ಟ್ ಎ ಕ್ರಿಕೆಟ್‌ನಲ್ಲಿ ತಂಡವೊಂದು ಕಲೆ ಹಾಕಿದ ಅತ್ಯಧಿಕ ಮೊತ್ತ ಇದಾಗಿದೆ.
ಉಳಿದ ಅತ್ಯಧಿಕ ಮೊತ್ತಗಳು ಈ ಕೆಳಗಿನಂತೆ ಇವೆ
ಇಂಗ್ಲೆಂಡ್ 498/4 – ನೆದರ್ಲ್ಯಾಂಡ್ಸ್ ವಿರುದ್ಧ (2022)
ಸರ್ರೆ 496/4 – ಗ್ಲೌಸೆಸ್ಟರ್‌ಶೈರ್ ವಿರುದ್ಧ (2007)
ಇಂಗ್ಲೆಂಡ್ 481/6 – ಆಸ್ಟ್ರೇಲಿಯಾದ ವಿರುದ್ಧ (2018)
ಭಾರತ ಎ 458/4 – ಲೀಸೆಸ್ಟರ್‌ಶೈರ್  ವಿರುದ್ಧ (2018)

ಆರಂಭಿಕ ವಿಕೆಟ್‌ ದಾಖಲೆಯ ಜತೆಯಾಟ
ವಿರಾಟ್ ಕೊಹ್ಲಿ ಅವರ ದಾಖಲೆಯನ್ನು ಸುಲಭವಾಗಿ ಮುರಿದ ಜಗದೀಶನ್ ಮತ್ತು ಸಾಯಿ ಸುದರ್ಶನ್ ಅವರು 38.3 ಓವರ್‌ಗಳಲ್ಲಿ 416 ರನ್‌ಗಳ ಆರಂಭಿಕ ಜತೆಯಾಟದೊಂದಿಗೆ ಮತ್ತೊಂದು ದಾಖಲೆಯನ್ನು ಮುರಿದರು. ಇದು ಲಿಸ್ಟ್-ಎ ಕ್ರಿಕೆಟ್‌ನ ಇತಿಹಾಸದಲ್ಲಿ ಮೊದಲ ವಿಕೆಟ್‌ ಗೆ ಕಲೆ ಹಾಕಿದ ಗರಿಷ್ಠ ಮೊತ್ತಗಳ ದಾಖಲೆಯಾಗಿದೆ. ಜಗದೀಶನ್ 277 ರನ್ ಗಳಿಸಿದರೆ, ಸಾಯಿ ಸುದರ್ಶನ್ 102 ಎಸೆತಗಳಲ್ಲಿ 154 ರನ್ ಗಳಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 19 ಬೌಂಡರಿಗಳು ಮತ್ತು 2 ಸಿಕ್ಸರ್‌ಗಳು ಒಳಗೊಂಡಿದ್ದು, ಆರಂಭಿಕ ಜತೆಯಾಟಕ್ಕೆ ಟೆಕಿ ಡೋರಿಯಾ ಬ್ರೇಕ್ ಹಾಕಿದರು.

ಜಗದೀಶನ್ 42ನೇ ಓವರ್‌ನಲ್ಲಿ ಔಟಾದ ನಂತರ ಬಾಬಾ ಅಪರಜಿತ್ ಮತ್ತು ಅವರ ಸಹೋದರ ಇಂದ್ರಜಿತ್ ಆಟ ಮುಂದುವರಿಸಿ ತಮಿಳುನಾಡು 50 ಓವರ್‌ಗಳಲ್ಲಿ ಒಟ್ಟು 506 ರನ್‌ ಗಳಿಸಲು ಕಾರಣರಾದರು. ಇಬ್ಬರೂ ಸಹೋದರರು ತಮ್ಮ ಇನ್ನಿಂಗ್ಸ್‌ನಲ್ಲಿ ತಲಾ 31 ರನ್ ಗಳಿಸಿ ಅಜೇಯರಾಗಿ ಉಳಿದರು. ಕುತೂಹಲಕಾರಿಯಾಗಿ, 416 ರನ್ ಜತೆಯಾಟದಲ್ಲಿ ಜಗದೀಶನ್ 251 ರನ್‌ಗಳನ್ನು ಕೊಡುಗೆಯಾಗಿ ನೀಡಿದರು.

ಟಾಪ್ ನ್ಯೂಸ್

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

15-monalisa

Mahakumbh sensation: ಕೇರಳದಲ್ಲಿ ಕುಂಭಮೇಳದ ಮೊನಾಲಿಸಾ ಹವಾ

nagavalli bangale kannada movie

Sandalwood: ʼನಾಗವಲ್ಲಿ ಬಂಗಲೆ’ಯಿಂದ ಹಾಡು ಬಂತು

ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Namma Santhe: ಕಟಲ್‌ ಬೋನ್‌ನಲ್ಲಿ ಮೂಡಿಬಂದ ಕಲಾ ಮ್ಯಾಜಿಕ್

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Tollywood: ಚಿತ್ರರಂಗಕ್ಕೆ N.T ರಾಮರಾವ್ ಪರಿಚಯಿಸಿದ್ದ ಹಿರಿಯ ನಟಿ ಕೃಷ್ಣವೇಣಿ ನಿಧನ

Vitla: Bolanthur Narsha robbery case: Four more arrested including Kerala police

Vitla: ಬೋಳಂತೂರು ನಾರ್ಶ ದರೋಡೆ ಪ್ರಕರಣ: ಕೇರಳದ ಪೊಲೀಸ್‌ ಸೇರಿ ಮತ್ತೆ ನಾಲ್ವರ ಬಂಧನ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್‌

Team India: ‘We are not actors..’: Ashwin criticizes Team India’s superstar culture

Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್‌ಸ್ಟಾರ್‌ ಸಂಸ್ಕೃತಿ ಟೀಕಿಸಿದ ಅಶ್ವಿನ್

Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್‌ ಅಭಿಮಾನಿಗಳು ಕರೆ

Don’t hug players: ಭಾರತದ ಆಟಗಾರರ ಅಪ್ಪಿಕೊಳ್ಬೇಡಿ… ತಂಡಕ್ಕೆ ಪಾಕ್‌ ಅಭಿಮಾನಿಗಳು ಕರೆ

MUST WATCH

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

udayavani youtube

ಮುಕೇಶ್ ಅಂಬಾನಿ ಕುಟುಂಬದ ನಾಲ್ಕು ತಲೆಮಾರು ಮಹಾ ಕುಂಭಮೇಳದಲ್ಲಿ ಪವಿತ್ರ ಸ್ನಾನ

ಹೊಸ ಸೇರ್ಪಡೆ

15

Uv Fusion: ಹೇಮಂತ ಋತುವಿನಲ್ಲಿ ನೇತ್ರಾವತಿ ಶಿಖರದ ಚಾರಣ

14

Uv Fusion: ಸ್ನೇಹವೆಂಬ ತಂಗಾಳಿ…

13

Uv Fusion: ಅಪ್ಪ ಅಂದರೆ ಅನಂತ ಪ್ರೀತಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

12

Uv Fusion: ತ್ಯಾಗಜೀವಿಗಳಾಗೋಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.