Vijay Hazare; ವಿದರ್ಭ ವಿರುದ್ಧ ವಿಜಯ: ಸೆಮಿಫೈನಲ್‌ ಪ್ರವೇಶಿಸಿದ ಕರ್ನಾಟಕ

ರಾಜಸ್ಥಾನ ಭರ್ಜರಿ ಜಯ

Team Udayavani, Dec 11, 2023, 10:56 PM IST

BCCI

ರಾಜ್‌ಕೋಟ್‌: ವಿದ ರ್ಭವನ್ನು ಸುಲಭದಲ್ಲಿ ಮಣಿಸಿದ ಕರ್ನಾಟಕ “ವಿಜಯ್‌ ಹಜಾರೆ ಟ್ರೋಫಿ’ ಏಕದಿನ ಕ್ರಿಕೆಟ್‌ ಪಂದ್ಯಾವಳಿಯ ಸೆಮಿಫೈನಲ್‌ ಪ್ರವೇಶಿಸಿದೆ. ಸೋಮವಾರ ರಾಜ್‌ಕೋಟ್‌ನಲ್ಲಿ ಏಕಪಕ್ಷೀಯವಾಗಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ಕರ್ನಾಟಕ 7 ವಿಕೆಟ್‌ಗಳ ಜಯ ಸಾಧಿಸಿತು. ವಿದರ್ಭ 44.5 ಓವರ್‌ಗಳಲ್ಲಿ 173ಕ್ಕೆ ಕುಸಿದರೆ, ಕರ್ನಾಟಕ 40.3 ಓವರ್‌ಗಳಲ್ಲಿ 3 ವಿಕೆಟಿಗೆ 177 ರನ್‌ ಬಾರಿಸಿ ಗೆದ್ದು ಬಂದಿತು. ಗುರುವಾರದ ಸೆಮಿ ಫೈನಲ್‌ನಲ್ಲಿ ಕರ್ನಾಟಕ- ರಾಜಸ್ಥಾನ ಎದುರಾಗಲಿವೆ.

ಘಾತಕ ಬೌಲಿಂಗ್‌ ದಾಳಿ
ವಿದರ್ಭವನ್ನು ಸಾಮಾನ್ಯ ಮೊತ್ತಕ್ಕೆ ನಿಯಂತ್ರಿಸುವಲ್ಲಿ ವಿಜಯ್‌ಕುಮಾರ್‌ ವೈಶಾಖ್‌ (44ಕ್ಕೆ 4), ಮನೋಜ್‌ ಭಾಂಡಗೆ (27ಕ್ಕೆ 2) ಮತ್ತು ಜಗದೀಶ್‌ ಸುಚಿತ್‌ (30ಕ್ಕೆ 2) ಪ್ರಮುಖ ಪಾತ್ರ ವಹಿಸಿದರು. 70 ರನ್‌ ಆಗುವಷ್ಟರಲ್ಲಿ ಐವರನ್ನು ಕಳೆದುಕೊಂಡ ವಿದರ್ಭಕ್ಕೆ ಕೆಳ ಸರದಿಯ ಆಟಗಾರರಾದ ಶುಭಂ ದುಬೆ (41), ಯಶ್‌ ಕದಂ (38), ದರ್ಶನ್‌ ನಲ್ಕಂಡೆ (20) ಆಧಾರ ವಾದರು. ಆರಂಭಕಾರ ಅಕ್ಷಯ್‌ ವಾಡ್ಕರ್‌ ಕುಸಿತಕ್ಕೆ ತಡೆಯೊಡ್ಡಿ 32 ರನ್‌ ಗಳಿಸಿದರು.

ಚೇಸಿಂಗ್‌ ವೇಳೆ ಕರ್ನಾಟಕ ಯಾವುದೇ ಒತ್ತಡಕ್ಕೆ ಸಿಲುಕಲಿಲ್ಲ. ಆರಂಭಕಾರ ಆರ್‌. ಸಮರ್ಥ್ ಕೂಟದಲ್ಲಿ ಮೊದಲ ಸಲ ಮಿಂಚಿ ಸರ್ವಾಧಿಕ 71 ರನ್‌ ಹೊಡೆದರು. 113 ಎಸೆತಗಳ ಈ ಅಜೇಯ ಇನ್ನಿಂಗ್ಸ್‌ನಲ್ಲಿ 7 ಬೌಂಡರಿ ಸೇರಿತ್ತು. ನಾಯಕ ಮಾಯಾಂಕ್‌ ಅಗರ್ವಾಲ್‌ 51 ರನ್‌ ಕೊಡುಗೆ ಸಲ್ಲಿಸಿದರು (64 ಎಸೆತ, 6 ಬೌಂಡರಿ, 1 ಸಿಕ್ಸರ್‌). ಈ ಜೋಡಿಯಿಂದ 20.1 ಓವರ್‌ಗಳಲ್ಲಿ 82 ರನ್‌ ಒಟ್ಟುಗೂಡಿತು. ನಿಕಿನ್‌ ಜೋಸ್‌ 31, ಕೀಪರ್‌ ಕೃಷ್ಣನ್‌ ಶ್ರೀಜಿತ್‌ 15 ರನ್‌ ಮಾಡಿದರು.

ಸಂಕ್ಷಿಪ್ತ ಸ್ಕೋರ್‌: ವಿದರ್ಭ-44.5 ಓವರ್‌ಗಳಲ್ಲಿ 173 (ಶುಭಂ ದುಬೆ 41, ಯಶ್‌ ಕದಂ 38, ಅಕ್ಷಯ್‌ ವಾಡ್ಕರ್‌ 32, ದರ್ಶನ್‌ ನಲ್ಕಂಡೆ 20, ವೈಶಾಖ್‌ 44ಕ್ಕೆ 4, ಮನೋಜ್‌ ಭಾಂಡಗೆ 27ಕ್ಕೆ 2, ಜಗದೀಶ್‌ ಸುಚಿತ್‌ 30ಕ್ಕೆ 2). ಕರ್ನಾಟಕ-40.3 ಓವರ್‌ಗಳಲ್ಲಿ 3 ವಿಕೆಟಿಗೆ 177 (ಆರ್‌. ಸಮರ್ಥ್ ಔಟಾಗದೆ 72, ಅಗರ್ವಾಲ್‌ 51, ನಿಕಿನ್‌ ಜೋಸ್‌ 31, ಹರ್ಷ್‌ ದುಬೆ 32ಕ್ಕೆ 2).

ರಾಜಸ್ಥಾನ ಭರ್ಜರಿ ಜಯ
ಕರ್ನಾಟಕದ ಎದುರಾಳಿಯಾಗಿ ಕಾಣಿಸಿಕೊಂಡಿರುವ ರಾಜಸ್ಥಾನ 200 ರನ್ನುಗಳ ಭರ್ಜರಿ ಅಂತರದಿಂದ ಕೇರಳವನ್ನು ಕೆಡವಿತು. ಎಡಗೈ ಬ್ಯಾಟರ್‌ ಮಹಿಪಾಲ್‌ ಲೊನ್ರೋರ್‌ ಅವರ ಆಕರ್ಷಕ ಶತಕದ ನೆರವಿನಿಂದ (122) ರಾಜಸ್ಥಾನ 8 ವಿಕೆಟಿಗೆ 267 ರನ್‌ ಪೇರಿಸಿದರೆ, ಕೇರಳ 21 ಓವರ್‌ಗಳಲ್ಲಿ 9 ವಿಕೆಟಿಗೆ 67 ರನ್‌ ಗಳಿಸಿ ಶರಣಾಯಿತು. ವಿಷ್ಣು ವಿನೋದ್‌ ಗಾಯಾಳಾದ ಕಾರಣ ನಿವೃತ್ತರಾದರು.

ಶಾಬಾಜ್‌, ಅಂಕಿತ್‌ ಶತಕ
ಮೊದಲ ಕ್ವಾರ್ಟರ್‌ ಫೈನಲ್‌ನಲ್ಲಿ ಹರ್ಯಾಣ 4 ವಿಕೆಟ್‌ಗಳಿಂದ ಬಂಗಾಲವನ್ನು ಪರಾಭವಗೊಳಿಸಿತು. ಬಂಗಾಲ 225 ರನ್‌ ಗಳಿಸಿದರೆ, ಹರ್ಯಾಣ 45.1 ಓವರ್‌ಗಳಲ್ಲಿ 6 ವಿಕೆಟ್‌ ಕಳೆದುಕೊಂಡು 226 ರನ್‌ ಬಾರಿಸಿತು. ಎರಡೂ ತಂಡಗಳಲ್ಲಿ ಶತಕ ದಾಖಲಾದದ್ದು ಈ ಪಂದ್ಯದ ವಿಶೇಷ. ಬಂಗಾಲ ಪರ ಶಾಬಾಜ್‌ ಅಹ್ಮದ್‌ 100 ರನ್‌ ಮತ್ತು ಹರ್ಯಾಣದ ಚೇಸಿಂಗ್‌ ವೇಳೆ ಆರಂಭಕಾರ ಅಂಕಿತ್‌ ಕುಮಾರ್‌ 102 ರನ್‌ ಬಾರಿಸಿದರು.

ಮುಂಬಯಿ ಪರಾಭವ
4ನೇ ಕ್ವಾರ್ಟರ್‌ ಫೈನಲ್‌ ಮುಖಾಮುಖಿಯಲ್ಲಿ ಮುಂಬಯಿ 7 ವಿಕೆಟ್‌ಗಳಿಂದ ತಮಿಳುನಾಡಿಗೆ ಶರಣಾಯಿತು. ಮುಂಬಯಿ 48.3 ಓವರ್‌ಗಳಲ್ಲಿ ಕೇವಲ 227 ರನ್‌ ಮಾಡಿದರೆ, ತಮಿಳುನಾಡು 43.2 ಓವರ್‌ಗಳಲ್ಲಿ 3 ವಿಕೆಟಿಗೆ 229 ರನ್‌ ಬಾರಿಸಿ ಗೆದ್ದು ಬಂದಿತು.

ಟಾಪ್ ನ್ಯೂಸ್

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

MRPL: ಕರಾವಳಿಗೆ ಮೊದಲ “ಗ್ರೀನ್‌ ಹೈಡ್ರೋಜನ್‌’ ಘಟಕ

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮುಲ್ ಸ್ಪಷ್ಟನೆ

Laddoo Row: ಲಡ್ಡು ತಯಾರಿಸಲು ತಿರುಪತಿಗೆ ನಾವು ತುಪ್ಪ ಪೂರೈಕೆ ಮಾಡಿಲ್ಲ: ಅಮೂಲ್ ಸ್ಪಷ್ಟನೆ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

Kuki: ಮಣಿಪುರಕ್ಕೆ ಅಕ್ರಮ ಪ್ರವೇಶಿಸಿದ 900 ಕುಕಿ ಉಗ್ರರು: ಭದ್ರತಾ ಸಂಸ್ಥೆ ಮಾಹಿತಿ

atishi

Atishi: ದೆಹಲಿ ನೂತನ ಸಿಎಂ ಆಗಿ ಆತಿಶಿ ಇಂದು ಅಧಿಕಾರ ಸ್ವೀಕಾರ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

AFGvsSA; ಐತಿಹಾಸಿಕ ಸರಣಿ ಗೆದ್ದ ಅಫ್ಘಾನ್:‌ ದ.ಆಫ್ರಿಕಾಗೆ 177 ರನ್‌ ಅಂತರದ ಸೋಲು

1-ashwin

147-year ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಹೊಸದೊಂದು ದಾಖಲೆ ಬರೆದ ಆರ್.ಅಶ್ವಿನ್

IPL 2025: Vikram Rathour joined Rahul Dravid again in Rajastan Royals

IPL 2025: ಮತ್ತೆ ರಾಹುಲ್‌ ದ್ರಾವಿಡ್‌ ಜತೆ ಸೇರಿದ ವಿಕ್ರಮ್‌ ರಾಥೋರ್‌

INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್‌ ಗೆ ಆಲೌಟ್‌

INDvsBAN: ಭಾರತದ ಬಿಗು ದಾಳಿಗೆ ಬೆದರಿದ ಬಾಂಗ್ಲಾ: 149 ರನ್‌ ಗೆ ಆಲೌಟ್‌

INDvsBAN: Bangladesh team in fear of ICC punishment

INDvsBAN: ಟೆಸ್ಟ್‌ ಮೊದಲ ದಿನವೇ ಪ್ರಮಾದ; ಐಸಿಸಿ ಶಿಕ್ಷೆಯ ಭಯದಲ್ಲಿ ಬಾಂಗ್ಲಾದೇಶ ತಂಡ

MUST WATCH

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

ಹೊಸ ಸೇರ್ಪಡೆ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Mangaluru: “ಜಾತ್ಯತೀತ’ ಬದಲು “ನಾಸ್ತಿಕ ಭಾರತ’ವಾಗಲಿ: ತುಷಾರ್‌ ಗಾಂಧಿ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Thirthahalli: ಬಾಳೆಬೈಲು ಬೈಪಾಸ್ ಗೆ ಮತ್ತೆ ಬ್ಯಾರಿಕೇಡ್ ಅಳವಡಿಕೆ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Sullia: ತೋಟಕ್ಕೆ ಕಾಡಾನೆ ಲಗ್ಗೆ… ಬಾಳೆ, ಅಡಿಕೆ, ತೆಂಗು ಕೃಷಿಗೆ ಹಾನಿ

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

Ramanagara: ತಾನು ಸಿದ್ದರಾಮಯ್ಯ ಸಂಬಂಧಿ ಎಂದು ಸೆಕ್ಯೂರಿಟಿ ಗಾರ್ಡ್‌ ಗೆ ಹೊಡೆದ ಯುವಕ!

ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್‌ ಅಸಮಾಧಾನ

ಕುಶಾಲನಗರ ಪ.ಪಂ ಚುನಾವಣೆ ಗೊಂದಲ: ವಿಪಕ್ಷ ನಾಯಕ ಅಶೋಕ್‌ ಅಸಮಾಧಾನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.