![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Mar 11, 2023, 10:23 AM IST
ದೋಹಾ: ಲೆಜೆಂಡ್ಸ್ ಲೀಗ್ ಕ್ರಿಕೆಟ್ ಶುಕ್ರವಾರದಿಂದ ಕತಾರ್ ನ ದೋಹಾದಲ್ಲಿ ಆರಂಭವಾಗಿದೆ. ಮೂರು ಲೆಜೆಂಡ್ಸ್ ತಂಡಗಳನ್ನು ಒಳಗೊಂಡಿರುವ ಲೀಗ್ ನ ಆರಂಭಿಕ ಪಂದ್ಯದಲ್ಲಿ ಗೌತಮ್ ಗಂಭೀರ್ ನಾಯಕತ್ವದ ಇಂಡಿಯಾ ಮಹಾರಾಜಸ್ ಹಾಗೂ ಶಾಹಿದ್ ಅಫ್ರಿದಿ ನಾಯಕತ್ವದ ಏಷ್ಯಾ ಲಯನ್ಸ್ ತಂಡಗಳು ಮುಖಾಮುಖಿಯಾಗಿದೆ.
12 ಓವರ್ ನಲ್ಲಿ ಅಬ್ದುಲ್ ರಜಾಕ್ ಎಸೆದ ಎಸೆತ ಗೌತಮ್ ಗಂಭೀರ್ ಅವರ ಹೆಲ್ಮೆಟ್ ಗೆ ಬಡಿಯಿತು. ಕೂಡಲೇ ಶಾಹಿದ್ ಅಫ್ರಿದಿ ಗಂಭೀರ್ ಅವರ ಬಳಿ ತೆರಳಿ ಅವರ ಹೆಗಲು ಮುಟ್ಟಿ ಏಟಾಯಿತೇ? ಎಂದು ಕೇಳಿ ಅವರನ್ನು ವಿಚಾರಿಸಿದ್ದಾರೆ.
ಈ ಕ್ಷಣ ಮಾತ್ರದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕಾರಣ ಕ್ರಿಕೆಟ್ ಲೋಕದಲ್ಲಿ ಗಂಭೀರ್ – ಅಫ್ರಿದಿ ಅವರ ಬಗ್ಗೆ ಅನೇಕ ವಿವಾದತ್ಮಕ ವಿಚಾರಗಳು ನಡೆದಿದೆ. 2007 ರಲ್ಲಿ ಭಾರತ – ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಗಂಭೀರ್ – ಅಫ್ರಿದಿ ಇಬ್ಬರೂ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರು. ಇದಾದ ಬಳಿಕ ಯಾವಾಗೆಲ್ಲ ಗಂಭೀರ್ – ಅಫ್ರಿದಿ ಎದುರಾದರೆ ಮೈದಾನದಲ್ಲಿ ಕೆಲ ಹೊತ್ತು ಕಿಚ್ಚು ಏಳುವ ಸನ್ನಿವೇಶಗಳು ಆಗುತ್ತಿತ್ತು.
ನಿನ್ನೆ ನಡೆದ ಲೆಜೆಂಡ್ಸ್ ಲೀಗ್ ಕ್ರಿಕೆಟ್ ಟಾಸ್ ನ ಸಂದರ್ಭದಲ್ಲಿ ಗಂಭೀರ್ ಅಫ್ರಿದಿ ಅವರಿಗೆ ಹಸ್ತಲಾಘವ ಮಾಡುವ ವೇಳೆ ಕೊಟ್ಟ ರಿಯಕ್ಷನ್ ಕೂಡ ವೈರಲ್ ಆಗಿದೆ.
ಈ ಮುಖಾಮುಖಿಯಲ್ಲಿ ಅಫ್ರಿದಿ ಅವರ ತಂಡ 9 ರನ್ ಗಳ ಅಂತರದಿಂದ ಗೆದ್ದುಕೊಂಡಿದೆ. ಪಂದ್ಯ ರೋಮಂಚನಕಾರಿಯಾಗಿ ಸಾಗಿತ್ತು. ಮೊದಲು ಏಷ್ಯಾ ಲಯನ್ಸ್ 20 ಓವರ್ ನಲ್ಲಿ 165 ರನ್ ಗಳಿಸಿತು. ಸವಾಲು ಪಡೆದು ಬ್ಯಾಟಿಂಗ್ ಗಳಿದ ಇಂಡಿಯಾ ಮಹಾರಾಜಸ್ ರಾಬಿನ್ ಉತ್ತಪ್ಪ, ಮುರಳಿ ವಿಜಯ್, ಯೂಸೂಫ್ ಪಠಾಣ್, ಕೈಫ್ ನಂತಹ ಅನುಭವಿ ಆಟಗಾರರನ್ನು ಬಹುಬೇಗನೇ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು.
ಆದರೆ ನಾಯಕ ಗಂಭೀರ್ 39 ಎಸೆತಗಳಲ್ಲಿ 54 ರನ್ ಗಳನ್ನು ಸಿಡಿಸಿ ತಂಡಕ್ಕೆ ಚೇತರಿಕೆಯ ಆಟವನ್ನು ನೀಡಿದರೂ ಅವರ ಜೊತೆಯಾಗಿ ಬೇರೊಬ್ಬ ಆಟಗಾರ ನಿಲ್ಲದೇ ತಂಡ 8 ವಿಕೆಟ್ ಕಳೆದುಕೊಂಡು 156 ರನ್ ಗಳಿಸಿ ಸೋಲಿಗೆ ಶರಣಾಯಿತು.
‘Big-hearted’ Shahid Afridi inquires if Gautam Gambhir is ok after that blow ❤️#Cricket pic.twitter.com/EqEodDs52f
— Cricket Pakistan (@cricketpakcompk) March 10, 2023
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!
Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
You seem to have an Ad Blocker on.
To continue reading, please turn it off or whitelist Udayavani.