West Indies: ಕಿವೀಸ್ಗೆ ಕಾದಿದೆ ವಿಂಡೀಸ್ ಟೆಸ್ಟ್
Team Udayavani, Jun 12, 2024, 11:20 PM IST
ಟರೂಬ: ಅಫ್ಘಾನಿಸ್ಥಾನ ವಿರುದ್ಧ 75ಕ್ಕೆ ಕುಸಿದು ಆಘಾತಕಾರಿ ಸೋಲುಂಡ ನ್ಯೂಜಿಲ್ಯಾಂಡ್ಗೆ ಗುರುವಾರ ವೆಸ್ಟ್ ಇಂಡೀಸ್ ಟೆಸ್ಟ್ ಕಾದಿದೆ. ಟರೂಬದಲ್ಲಿ ಈ ಪಂದ್ಯ ನಡೆಯಲಿದ್ದು, ಬೇಗನೇ ನಿರ್ಗಮಿಸುವ ಸಂಕಟದಿಂದ ಪಾರಾಗಬೇಕಾದರೆ ಕೇನ್ ವಿಲಿಯಮ್ಸನ್ ಪಡೆ ಇಲ್ಲಿ ಗೆಲ್ಲುವುದು ಅನಿವಾರ್ಯ.
“ಸಿ’ ವಿಭಾಗದಲ್ಲಿ ಅಫ್ಘಾನಿಸ್ಥಾನ ಮತ್ತು ವೆಸ್ಟ್ ಇಂಡೀಸ್ ಆಡಿದ ಎರಡೂ ಪಂದ್ಯ ಗಳನ್ನು ಗೆದ್ದು ಮುಂದಿನ ಸುತ್ತಿಗೇರುವ ನೆಚ್ಚಿನ ತಂಡಗಳಾಗಿ ಗೋಚರಿಸುತ್ತಿವೆ. 5.225ರಷ್ಟು ಉತ್ಕೃಷ್ಟ ರನ್ರೇಟ್ ಹೊಂದಿರುವ ಕಾರಣ ಅಫ್ಘಾನ್ ಅಗ್ರಸ್ಥಾನ ಅಲಂಕರಿಸಿದೆ. ಈ ಕೂಟ ದಲ್ಲಿ ಐದಕ್ಕಿಂತ ಹೆಚ್ಚಿನ ರನ್ರೇಟ್ ಹೊಂದಿರುವ ಮತ್ತೂಂದು ತಂಡವಿಲ್ಲ. ವಿಂಡೀಸ್ ರನ್ರೇಟ್ 3.574.
ಏಕದಿನ ಸೇರಿದಂತೆ ಕಳೆದ ಆರೂ ವಿಶ್ವಕಪ್ ಪಂದ್ಯಾವಳಿಗಳಲ್ಲಿ ಸೆಮಿಫೈನಲ್ ಪ್ರವೇಶಿಸಿರುವ ನ್ಯೂಜಿಲ್ಯಾಂಡ್ನದ್ದು ಈ ಬಾರಿ ಆಘಾತಕಾರಿ ಆರಂಭ. ಆದರೆ ಟಿ20 ಸ್ಪೆಷಲಿಸ್ಟ್ ಗಳನ್ನು ಹೊಂದಿರುವ ಅದಿನ್ನೂ 3 ಪಂದ್ಯಗಳನ್ನು ಆಡಲಿಕ್ಕಿದೆ. ಮೂರನ್ನೂ ಗೆದ್ದರೆ ಸೂಪರ್-8 ಟಿಕೆಟ್ ಸಿಗಲಿದೆ. ಆದರೆ ಆತಂಕಕ್ಕೆ ಕಾರಣವಾಗಿರುವುದು, ಅಫ್ಘಾನ್ ವಿರುದ್ಧ ಆಡಿದ ರೀತಿ.
ಅಫ್ಘಾನ್ ವಿರುದ್ಧ ನ್ಯೂಜಿಲ್ಯಾಂಡ್ನ
ಬ್ಯಾಟಿಂಗ್ ಮಾತ್ರವಲ್ಲ, ಫೀಲ್ಡಿಂಗ್ ಕೂಡ ಕಳಪೆ ಆಗಿತ್ತು. ಸ್ಟಂಪಿಂಗ್, ರನೌಟ್ ಅವಕಾಶಗಳನ್ನೂ ವ್ಯರ್ಥಗೊಳಿ ಸಿತ್ತು. ಗುರ್ಬಜ್-ಜದ್ರಾನ್ ಆರಂಭಿಕ ವಿಕೆಟಿಗೆ 103 ರನ್ ಪೇರಿಸಿ ಮೆರೆದಿದ್ದರು.
ವಿಂಡೀಸ್ಗೂ ದೊಡ್ಡ ಪಂದ್ಯ
ವೆಸ್ಟ್ ಇಂಡೀಸ್ ಈವರೆಗೆ ಎದುರಿಸಿದ್ದು ಪಪುವಾ ನ್ಯೂ ಗಿನಿಯ (ಪಿಎನ್ಜಿ) ಮತ್ತು ಉಗಾಂಡದಂಥ ಸಾಮಾನ್ಯ ತಂಡಗಳನ್ನು ಮಾತ್ರ. ಪಿಎನ್ಜಿ ವಿರುದ್ಧ ಸಾಕಷ್ಟು ಪರದಾಟ ನಡೆಸಿ ಜಯಿಸಿತ್ತು. ಆದರೆ ಉಗಾಂಡ ವಿರುದ್ಧ 134 ರನ್ನುಗಳ ಭರ್ಜರಿ ಜಯ ಸಾಧಿಸುವಲ್ಲಿ ಯಶಸ್ವಿಯಾಯಿತು. ಉಗಾಂಡವನ್ನು 39 ರನ್ನಿಗೆ ಉದುರಿಸಿದ ವಿಂಡೀಸ್ಗೆ ಮೊದಲ ಸಲ ಕಠಿನ ಸವಾಲು ಎದುರಾಗಿದೆ ಎನ್ನಬಹುದು. ಗೆದ್ದರೆ ಪೊವೆಲ್ ಪಡೆ ಮುಂದಿನ ಸುತ್ತು ಪ್ರವೇಶಿಸಲಿದೆ. ಒಂದು ವೇಳೆ ನ್ಯೂಜಿಲ್ಯಾಂಡ್ ಲಯಕ್ಕೆ ಮರಳಿದರೆ ಸ್ಪರ್ಧೆ ತೀವ್ರಗೊಳ್ಳಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
IPL retention: ಚೆನ್ನೈ-ಮುಂಬೈಗೆ ಗುಡ್ ನ್ಯೂಸ್ ನೀಡಿದ ಐಪಿಎಲ್ ಹೊಸ ನಿಯಮ
Musheer Khan: ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡ ಯುವ ಬ್ಯಾಟರ್ ಮುಶೀರ್ ಖಾನ್
Kanpur Test: ಪಂದ್ಯ ಬಿಟ್ಟು ಹೋಟೆಲ್ ಗೆ ತೆರಳಿದ ಭಾರತೀಯ ಆಟಗಾರರು
ENGvsAUS: ಇಂಗ್ಲೆಂಡ್ ಆಟಕ್ಕೆ ಸೋತ ಆಸೀಸ್; ಸರಣಿ ಸಮಗೊಳಿಸಿದ ಬ್ರೂಕ್ ಪಡೆ
Test ವಿವಾದ : ಹಲ್ಲೆಯಾಗಿಲ್ಲ, ಬಾಂಗ್ಲಾ ಹುಲಿ ‘ಅಸ್ವಸ್ಥ’
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
MUDA Case: ಸಿದ್ದರಾಮಯ್ಯ 2011ರ ಹೇಳಿಕೆ ವಿಡಿಯೋ ಹಾಕಿ ಟಾಂಗ್ ಕೊಟ್ಟ ಸ್ನೇಹಮಯಿ ಕೃಷ್ಣ!
Shiruru ದುರಂತ; ಹುಟ್ಟೂರಲ್ಲಿ ಅರ್ಜುನ್ ಅಂತಿಮ ವಿಧಿ: ಹರಿದು ಬಂದ ಜನಸಾಗರ
Food street ನಲ್ಲಿ ಅರೆಬಟ್ಟೆಯಲ್ಲಿ ಸುತ್ತಾಡಿದ ಯುವತಿ ವಿರುದ್ಧ ಪ್ರಕರಣ ದಾಖಲು!
BBK11: ಬಿಗ್ ಬಾಸ್ ಮನೆಯ 2ನೇ ಸ್ಪರ್ಧಿ ರಿವೀಲ್.. ಯಾರೂ ನಿರೀಕ್ಷೆ ಮಾಡದ ಸ್ಪರ್ಧಿ ಇವರು
Sullia: ಅಂಗಡಿ, ಹೊಟೇಲ್ನಿಂದ ನಗದು ಕಳವು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.