ಭಾರತವನ್ನು ಮಗುಚಿದ ಹೆಟ್ ಮೈರ್ – ಹೋಪ್ ಶತಕದಾಟ ; 8 ವಿಕೆಟ್ ಗಳಿಂದ ಗೆದ್ದ ವೆಸ್ಟ್ ಇಂಡೀಸ್

ಎರಡನೇ ವಿಕೆಟಿಗೆ 218 ರನ್ ಜೊತೆಯಾಟ ನೀಡಿದ ಸೂಪರ್ ಜೋಡಿ

Team Udayavani, Dec 15, 2019, 9:51 PM IST

One-Day-Match-WI-730

ಚೆನ್ನೈ: ವೆಸ್ಟ್ ಇಂಡೀಸ್ ತಂಡದ ವಿರುದ್ಧದ ಟಿ20 ಸರಣಿಯನ್ನು 2-1 ಅಂತರದಿಂದ ಗೆದ್ದು ಬೀಗಿದ್ದ ಟೀಂ ಇಂಡಿಯಾಗೆ ಪ್ರಥಮ ಏಕದಿನ ಪಂದ್ಯದಲ್ಲಿ ಸೋಲಿನ ಬಿಸಿ ಮುಟ್ಟಿದೆ. ಭಾರತ ನೀಡಿದ 288 ರನ್ ಸವಾಲನ್ನು ಆತ್ಮವಿಶ್ವಾಸದಿಂದಲೇ ಬೆನ್ನಟ್ಟಿದ ಪೊಲಾರ್ಡ್ ಪಡೆ 08 ವಿಕೆಟ್ ಗಳ ಅಧಿಕಾರಯುತ ಜಯವನ್ನು ತನ್ನದಾಗಿಸಿಕೊಂಡಿತು.

ಆರಂಭಿಕ ಆಟಗಾರ ಶೈ ಹೋಪ್ ಅವರ ತಾಳ್ಮೆಯ ಶತಕ ಮತ್ತು ಒನ್ ಡೌನ್ ಬ್ಯಾಟ್ಸ್ ಮನ್ ಶಿಮ್ರನ್ ಹೈಟ್ ಮೇರ್ ಅವರ ಭರ್ಜರಿ ಶತಕ ಮತ್ತು ಎರಡನೇ ವಿಕೆಟಿಗೆ ಈ ಜೋಡಿ ನೀಡಿದ 218 ರನ್ ಗಳ ಭರ್ಜರಿ ಜೊತೆಯಾಟ ಪ್ರವಾಸಿಗರಿಗೆ ಚಿಪಾಕ್ ಅಂಗಳದಲ್ಲಿ ಭರ್ಜರಿ ಗೆಲುವನ್ನು ತಂದುಕೊಡುವಲ್ಲಿ ನೆರವಾಯಿತು.

ಅಂತಿಮವಾಗಿ ವೆಸ್ಟ್ ಇಂಡೀಸ್ 47.5 ಓವರ್ ಗಳಲ್ಲಿ 2 ವಿಕೆಟ್ ಗಳನ್ನು ಕಳೆದುಕೊಂಡು 291 ರನ್ ಗಳಿಸುವ ಮೂಲಕ ಗೆಲುವಿನ ಗುರಿಯನ್ನು ತಲುಪಿತು. ಭರ್ಜರಿ ಶತಕ ಬಾರಿಸಿದ ಶಿಮ್ರನ್ ಹೆಟ್ ಮೆರ್ (139) ಪಂದ್ಯಶ್ರೇಷ್ಠ ಪುರಸ್ಕಾರಕ್ಕೆ ಪಾತ್ರರಾದರು.

ಭಾರತ-ವೆಸ್ಟ್ ಇಂಡೀಸ್ ಏಕದಿನ: ಅಯ್ಯರ್, ಪಂತ್ ಹೋರಾಟ ; ವೆಸ್ಟ್ ಇಂಡೀಸ್ ಗೆಲುವಿಗೆ 288 ಗುರಿ


ವೆಸ್ಟ್ ಇಂಡೀಸ್ ಗೆ ಆರಂಭಿಕ ಹೊಡೆತ ನೀಡುವಲ್ಲಿ ಭಾರತೀಯ ಬೌಲರ್ ಗಳು ಯಶಕಂಡರು. ಓಪನರ್ ಸುನೀಲ್ ಆ್ಯಂಬ್ರಿಸ್ (09) ಅವರನ್ನು ಚಾಹರ್ ಎಲ್.ಬಿ. ಬಲೆಗೆ ಕೆಡವಿದರು. ಆದರೆ ಆ ಬಳಿಕ ಜೊತೆಯಾದ ಹೋಪ್ (ಅಜೇಯ 102) ಮತ್ತು ಹೆಟ್ ಮೈರ್ (139) ಜೋಡಿ ಭಾರತೀಯ ಬೌಲರ್ ಗಳಿಗೆ ಮತ್ಯಾವುದೇ ಮೇಲುಗೈ ದೊರೆಯದಂತೆ ನೋಡಿಕೊಂಡರು.

ವಿಕೆಟ್ ಕೀಪರ್ ಶೈ ಹೋಪ್ ನಿಧಾನಗತಿಯ ಆಟಕ್ಕೆ ತೊಡಗಿದರೆ ಹೇಟ್ ಮೇರ್ ಭಾರತೀಯ ಬೌಲರ್ ಗಳನ್ನು ಮುಲಾಜಿಲ್ಲದೇ ದಂಡಿಸುತ್ತಾ ಹೋದರು. ಈ ಪರ್ಫೆಕ್ಟ್ ಕಾಂಬಿನೇಷನ್ ಮುರಿಯುವ ಕ್ಯಾಪ್ಟನ್ ಕೊಹ್ಲಿಯ ಯಾವ ತಂತ್ರವೂ ಫಲನೀಡಲಿಲ್ಲ. ಹೆಟ್ ಮೈರ್ ಕೇವಲ 106 ಎಸೆತಗಳಲ್ಲಿ 139 ರನ್ ಬಾರಿಸಿದರು. ಇದರಲ್ಲಿ 11 ಬೌಂಡರಿ ಹಾಗೂ 07 ಭರ್ಜರಿ ಸಿಕ್ಸರ್ ಗಳು ಒಳಗೊಂಡಿತ್ತು.

39ನೇ ಓವರಿನಲ್ಲಿ ಹೆಟ್ ಮೈರ್ ಔಟಾದರು, ಅಂದರೆ ಈ ಜೋಡಿ ಸುಮಾರು 28 ಓವರುಗಳವರೆಗೆ ಕ್ರೀಸ್ ಆಕ್ರಮಿಸಿಕೊಂಡು ಭಾರತೀಯ ಬೌಲರ್ ಗಳನ್ನು ಕಾಡಿದರು. ಹೋಪ್ ಅವರು 151 ಎಸೆತಗಳಲ್ಲಿ 102 ರನ್ ಬಾರಿಸಿ ಅಜೇಯರಾಗಿ ಉಳಿದರು. ಹೆಟ್ ಮೇರ್ ಔಟಾದ ಬಳಿಕ ಹೋಪ್ ಜೊತೆಗೂಡಿದ ನಿಕೋಲಸ್ ಪೂರಣ್ ಅವರು (29) ಬಿರುಸಿನ ಆಟವಾಡಿ ತಂಡದ ಜಯವನ್ನು ಸರಾಗಗೊಳಿಸಿದರು. ಪೂರಣ್ 23 ಎಸೆತಗಳಲ್ಲಿ 29 ರನ್ ಬಾರಿಸಿದರು.

ವೆಸ್ಟ್ ಇಂಡೀಸ್ ಬೌಲಿಂಗ್ ಗೆ ಹೋಲಿಸಿದರೆ ಭಾರತದ ಬೌಲಿಂಗ್ ಇಂದು ಮೊನಚು ಕಳೆದುಕೊಂಡಿತ್ತು. ದೀಪಕ್ ಚಹರ್ ಮತ್ತ ಕುಲದೀಪ್ ಯಾದವ್ ಅವರ ಬೌಲಿಂಗ್ ಮಾತ್ರ ಇದ್ದುದರಲ್ಲೇ ಸ್ವಲ್ಪ ಪರಿಣಾಮಕಾರಿಯಾಗಿತ್ತು. ಎರಡು ವಿಕೆಟ್ ಗಳನ್ನು ಚಹರ್ ಮತ್ತು ಮಹಮ್ಮದ್ ಶಮಿ ಹಂಚಿಕೊಂಡರು.

ಟಾಪ್ ನ್ಯೂಸ್

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

DKSHi (3)

Water; ಗೌಡರು ಅಧಿಕಾರದಲ್ಲಿದ್ದಾಗ ನೀರಿನ ಹೋರಾಟ ಏಕೆ: ಡಿಕೆಶಿ

Beer

ಶಾಲೆ ಸಮೀಪ ಮದ್ಯದಂಗಡಿ ಇದ್ದರೆ ದೂರು ನೀಡಿ

1-dee

ಕಾಲೇಜುಗಳಲ್ಲಿ ಜಾನಪದ ಉತ್ಸವ: ಇಲಾಖೆ ಸೂಚನೆ

arrested

CM ಕಚೇರಿಯ ಟಿಪ್ಪಣಿ ನಕಲು: ಬಂಧನ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.