ಬಾಂಗ್ಲಾಕ್ಕೆ ವೈಟ್‌ವಾಶ್‌ ಮಾಡಿದ ವಿಂಡೀಸ್‌

2ನೇ ಟೆಸ್ಟ್‌ನಲ್ಲಿ 17 ರನ್‌ ಜಯ, 2-0 ಸರಣಿ ಪರಾಕ್ರಮ, 2012ರ ಬಳಿಕ ಬಾಂಗ್ಲಾದೇಶದಲ್ಲಿ ಮೊದಲ ಸಲ ಸರಣಿ ಗೆಲುವು

Team Udayavani, Feb 15, 2021, 6:30 AM IST

ಬಾಂಗ್ಲಾಕ್ಕೆ  ವೈಟ್‌ವಾಶ್‌ ಮಾಡಿದ ವಿಂಡೀಸ್‌

ಢಾಕಾ: ಮತ್ತೂಂದು “ಥ್ರಿಲ್ಲಿಂಗ್‌ ಫೈಟ್‌’ನಲ್ಲಿ ಆತಿಥೇಯ ಬಾಂಗ್ಲಾದೇಶವನ್ನು 17 ರನ್ನುಗಳಿಂದ ಮಣಿಸಿದ ವೆಸ್ಟ್‌ ಇಂಡೀಸ್‌ 2 ಪಂದ್ಯಗಳ ಟೆಸ್ಟ್‌ ಸರಣಿಯನ್ನು ಕ್ಲೀನ್‌ ಸ್ವೀಪ್‌ ಆಗಿ ವಶಪಡಿಸಿಕೊಂಡಿದೆ.

230 ರನ್ನುಗಳ ಗೆಲುವಿನ ಗುರಿ ಪಡೆದ ಬಾಂಗ್ಲಾದೇಶ, ದಢೂತಿ ಸ್ಪಿನ್ನರ್‌ ರಖೀಂ ಕಾರ್ನ್ವಾಲ್‌ ದಾಳಿಗೆ ಕುಸಿದು 213ಕ್ಕೆ ಇನ್ನಿಂಗ್ಸ್‌ ಮುಗಿಸಿತು. ಕಾರ್ನ್ವಾಲ್‌ 105 ರನ್‌ ವೆಚ್ಚದಲ್ಲಿ 4 ವಿಕೆಟ್‌ ಕಿತ್ತರು. ಮೊದಲ ಸರದಿಯಲ್ಲಿ ಅವರ ಸಾಧನೆ 74ಕ್ಕೆ 5 ವಿಕೆಟ್‌. ಪ್ರಥಮ ಟೆಸ್ಟ್‌ ಪಂದ್ಯವನ್ನು ಕೈಲ್‌ ಮೇಯರ್ ಅವರ ದ್ವಿಶತಕ ಪರಾಕ್ರಮದಿಂದ ವಿಂಡೀಸ್‌ 3 ವಿಕೆಟ್‌ಗಳಿಂದ ಗೆದ್ದಿತ್ತು. ಏಕದಿನ ಸರಣಿಯಲ್ಲಿ ಅನುಭವಿಸಿದ 3-0 ಸೋಲಿಗೆ ವಿಂಡೀಸ್‌ ಟೆಸ್ಟ್‌ ಸರಣಿಯಲ್ಲಿ ಭರ್ಜರಿಯಾಗಿ ಸೇಡು ತೀರಿಸಿಕೊಂಡಿತು.

ಜಾಸನ್‌ ಹೋಲ್ಡರ್‌ ಸಹಿತ ತಂಡದ ಅನೇಕ ಪ್ರಮುಖ ಆಟಗಾರರು ಕೊರೊನಾ ಕಾರಣವನ್ನು ಮುಂದೊಡ್ಡಿ ಬಾಂಗ್ಲಾ ಪ್ರವಾಸದಿಂದ ಹೊರಗುಳಿದಿದ್ದರು. ಕ್ರೆಗ್‌ ಬ್ರಾತ್‌ವೇಟ್‌ ಸಾರಥ್ಯದಲ್ಲಿ ಕೆರಿಬಿಯನ್ನರು ಕಣಕ್ಕಿಳಿದಿದ್ದರು.

230 ರನ್‌ ಚೇಸಿಂಗ್‌ ಹಾದಿಯಲ್ಲಿ ತಮಿಮ್‌ ಇಕ್ಬಾಲ್‌ ಮಾತ್ರ ಭರವಸೆ ಮೂಡಿಸಿದರು. ಇವರ ಬ್ಯಾಟಿನಿಂದ ಭರ್ತಿ 50 ರನ್‌ ಹರಿದು ಬಂತು. ಕೊನೆಯಲ್ಲಿ ಮೆಹಿದಿ ಹಸನ್‌ ಹೋರಾಟ ನಡೆಸಿದರೂ ಅವರಿಗೆ ತಂಡವನ್ನು ದಡ ಸೇರಿಸಲಾಗಲಿಲ್ಲ. 31 ರನ್‌ ಮಾಡಿದ ಹಸನ್‌ ಕೊನೆಯವರಾಗಿ ಪೆವಿಲಿಯನ್‌ ಸೇರಿಕೊಂಡರು.

ಸಂಕ್ಷಿಪ್ತ ಸ್ಕೋರ್‌: ವೆಸ್ಟ್‌ ಇಂಡೀಸ್‌-409 ಮತ್ತು 117. ಬಾಂಗ್ಲಾದೇಶ-296 ಮತ್ತು 231 (ತಮಿಮ್‌ ಇಕ್ಬಾಲ್‌ 50, ಮೆಹಿದಿ ಹಸನ್‌ 31, ಲಿಟನ್‌ ದಾಸ್‌ 22, ಕಾರ್ನಿವಾಲ್‌ 105ಕ್ಕೆ 4, ಬ್ರಾತ್‌ವೇಟ್‌ 25ಕ್ಕೆ 3, ವ್ಯಾರಿಕ್ಯಾನ್‌ 47ಕ್ಕೆ 3).

ಸರಣಿಶ್ರೇಷ್ಠ: ಎನ್‌ಕ್ರುಮಾಹ್‌ ಬಾನರ್‌.

 

  • ವೆಸ್ಟ್‌ ಇಂಡೀಸ್‌ ರನ್‌ ಅಂತರದ 2ನೇ ಸಣ್ಣ ಗೆಲುವು ದಾಖಲಿಸಿತು (17 ರನ್‌). ಇದಕ್ಕೂ ಮೊದಲು ಆಸ್ಟ್ರೇಲಿಯ ಎದುರಿನ 1993ರ ಅಡಿಲೇಡ್‌ ಟೆಸ್ಟ್‌ ಪಂದ್ಯವನ್ನು ಒಂದು ರನ್ನಿನಿಂದ ಜಯಿಸಿತ್ತು.
  • ವಿಂಡೀಸ್‌ 2012ರ ಬಳಿಕ ಬಾಂಗ್ಲಾದೇಶದಲ್ಲಿ ಮೊದಲ ಸಲ ಟೆಸ್ಟ್‌ ಸರಣಿ ಜಯಿಸಿತು. ಅಂದಿನ ಅಂತರವೂ 2-0.
  • ಈ ಪಂದ್ಯದ 4ನೇ ಇನ್ನಿಂಗ್ಸ್‌ನ ಎಲ್ಲ ವಿಕೆಟ್‌ಗಳೂ ಸ್ಪಿನ್ನರ್‌ಗಳ ಪಾಲಾದವು. ವೆಸ್ಟ್‌ ಇಂಡೀಸ್‌ ಸ್ಪಿನ್ನರ್ ಈ ಸಾಧನೆಗೈದ 3ನೇ ನಿದರ್ಶನ ಇದಾಗಿದೆ.
  • ರಖೀಂ ಕಾರ್ನಿವಾಲ್‌ ಈ ಪಂದ್ಯದಲ್ಲಿ 9 ವಿಕೆಟ್‌ ಕಿತ್ತರು. ಇದು ಬಾಂಗ್ಲಾದಲ್ಲಿ ವಿಂಡೀಸ್‌ ಬೌಲರ್‌ ಒಬ್ಬನ ಶ್ರೇಷ್ಠ ಸಾಧನೆಯಾಗಿದೆ.
  • ಮೆಹಿದಿ ಹಸನ್‌ ಮಿರಾಜ್‌ 100 ವಿಕೆಟ್‌ ಉರುಳಿಸಿದರು. ಅವರು ಈ ಸಾಧನೆಗೈದ ಬಾಂಗ್ಲಾದೇಶದ ಅತೀ ಕಿರಿಯ ಬೌಲರ್‌. ಜತೆಗೆ ಅತೀ ಕಡಿಮೆ 24 ಟೆಸ್ಟ್‌ಗಳಲ್ಲಿ “ವಿಕೆಟ್‌ ಶತಕ’ ಪೂರೈಸಿದರು. ಬಾಂಗ್ಲಾದ ಹಿಂದಿನ ದಾಖಲೆ ತೈಜುಲ್‌ ಇಸ್ಲಾಮ್‌ ಅವರದಾಗಿತ್ತು (25 ಟೆಸ್ಟ್‌ಗಳಲ್ಲಿ 100 ವಿಕೆಟ್‌).

ಟಾಪ್ ನ್ಯೂಸ್

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Delhi-Stamp

Mahakumbh Rush: ಗೊಂದಲಕಾರಿ ಪ್ರಕಟಣೆಯಿಂದ ರೈಲು ನಿಲ್ದಾಣದಲ್ಲಿ ಕಾಲ್ತುಳಿತ: ಪೊಲೀಸರು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

ಜರ್ಮನಿ ಅಧ್ಯಕ್ಷರ ಎಕ್ಸ್‌ ಖಾತೆ ಹ್ಯಾಕ್‌: ಬಿಹಾರ ಇಲಾಖೆ ಹೆಸರಿಟ್ಟ ಕಿಡಿಗೇಡಿಗಳು

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

16

Pro Hockey: ಇಂಗ್ಲೆಂಡ್‌ ವಿರುದ್ಧ ಭಾರತ ವನಿತೆಯರಿಗೆ ಸೋಲು

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್‌ ವಿವಾದ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Gambhir-Agarkar have differences of opinion on Pant-Rahul issue

Team India: ಪಂತ್-ರಾಹುಲ್‌ ವಿಚಾರದಲ್ಲಿ ಗಂಭೀರ್-‌ ಅಗರ್ಕರ್‌ ನಡುವೆ ಭಿನ್ನಾಭಿಪ್ರಾಯ

Mujeeb joins Mumbai Indians team in place of another Afghan bowler

‌IPL 2025: ಮತ್ತೊಬ್ಬ ಅಫ್ಘಾನಿ ಬೌಲರ್‌ ಬದಲು ಮುಂಬೈ ಇಂಡಿಯನ್ಸ್‌ ತಂಡದ ಸೇರಿದ ಮುಜೀಬ್

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Gun-Fire

Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್‌: 3 ವರ್ಷದ ಮಗು ಮೃತ್ಯು!

accident

Kaup: ಸ್ಕೂಟಿ, ಕಾರಿಗೆ ಬಸ್‌ ಢಿಕ್ಕಿ; ಸವಾರನಿಗೆ ಗಾಯ

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್‌ ಸಿಬ್ಬಂದಿ!

1

Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್‌ ಹಲ್ಲೆ; ದೂರು

BR-Hills

Restriction: ನಿಷೇಧವಿದ್ದರೂ ಗೂಡ್ಸ್‌ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.