![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Dec 29, 2019, 11:03 PM IST
ಕೋಲ್ಕತಾ: ಪಾಕಿಸ್ಥಾನ ಕ್ರಿಕೆಟ್ ಸರಣಿಗೆ ತೆರಳಿದ್ದ ಸೌರವ್ ಗಂಗೂಲಿ ಅಲ್ಲಿನ ಭದ್ರತಾ ಪಡೆಗಳ ಕಣ್ತಪ್ಪಿಸಿ ಪಾಕ್ ಬೀದಿಯಲ್ಲಿ ಓಡಾಡಿ ತನಗಿಷ್ಟವಾದ ತಿಂಡಿ ತಿನಿಸನ್ನು ತಿಂದು ಸ್ನೇಹಿತರ ಜತೆಗೆ ಮಜಾ ಮಾಡಿರುವ ಕುತೂಹಲಕಾರಿ ಕತೆಯನ್ನು ಬಿಚ್ಚಿಟ್ಟಿದ್ದಾರೆ.
“2004ರಲ್ಲಿನ ಭಾರತ ಕ್ರಿಕೆಟ್ ತಂಡ ಪಾಕಿಸ್ಥಾನ ಪ್ರವಾಸಕ್ಕೆ ತೆರಳಿದಾಗ ನಡೆದ ಘಟನೆ ಇದು. ಉಳಿಯಲು ಪಾಕ್ನ ಖ್ಯಾತ ಪಂಚತಾರಾ ಹೊಟೇಲ್ನಲ್ಲಿ ವ್ಯವಸ್ಥೆ ಮಾಡಲಾಗಿತ್ತು. ನಮ್ಮ ರಕ್ಷಣೆಗಾಗಿ ಭದ್ರತಾ ಪಡೆಗಳನ್ನು ಹೊಟೇಲ್ ಸುತ್ತಲೂ ನಿಯೋಜಿಸಲಾಗಿತ್ತು. “ಟೈಗರ್’ ಎಂದು ಈ ಭದ್ರತಾ ಪಡೆಗಳನ್ನು ಕರೆಯಲಾಗುತ್ತಿತ್ತು. ಮೊದಲ ದಿನ ಕೊಠಡಿ ಬಾಗಿಲಲ್ಲೇ ಟೈಗರ್ ನಿಂತಿದ್ದರು. ಇಬ್ಬರು ಸಿಬಂದಿಗಳ ಕೈಯಲ್ಲಿ ಎಕೆ 47 ಗನ್ಗಳಿದ್ದವು. ನಾನು ಸ್ಥಳೀಯ ಮ್ಯಾನೇಜರ್ಗೆ ತಿಳಿಸಿ, ಭದ್ರತಾ ಸಿಬಂದಿಗಳನ್ನು ಕೊಠಡಿಯ ಎದುರಲ್ಲೇ ನಿಲ್ಲಿಸುವುದು ಬೇಡ, ಇವರನ್ನು ಹೊಟೇಲ್ ಲಾಬಿಯಲ್ಲಿ ಹಾಕಿ. ಬೆಳಗ್ಗೆ ಎದ್ದೊಡನೆ ಎಕೆ 47 ಗನ್ ನೋಡುವುದಕ್ಕೆ ಕಷ್ಟವಾಗುತ್ತಿದೆ. ಎಲ್ಲಾದರೂ ಮಿಸ್ ಫೈಯರ್ ಆದರೆ ನಮ್ಮ ಗತಿ ಏನು ಎಂದು ತಮಾಷೆಯಾಗಿಯೇ ಹೇಳಿದ್ದೆ…’
“ಅವರು ನನ್ನ ಮಾತನ್ನು ನಗುಮೊಗದಿಂದಲೇ ಪುರಸ್ಕರಿಸಿ ಹೊಟೇಲ್ ಲಾಬಿಗೆ ಭದ್ರತಾ ಪಡೆಯನ್ನು ವರ್ಗಾಯಿಸಿದರು. ಅನಂತರ ಹೊಟೇಲ್ನಿಂದ ತಪ್ಪಿಸಿಕೊಂಡು ಪಾಕ್ ಬೀದಿಗೆ ಬಂದು ಕಬಾಬ್ ತಿನ್ನತೊಡಗಿದೆ. ಆಗ ಟೀವಿ ಆ್ಯಂಕರ್ ರಾಜ್ದೀಪ್ ಸರ್ದೇಸಾಯಿ ಕೈಗೆ ಸಿಕ್ಕಿಬಿದ್ದೆ. ಪಾಕ್ ಬೀದಿಯಲ್ಲಿ ಕಬಾಬ್ ತಿಂದ ಭಾರತದ ನಾಯಕ ಎಂದು ಅವರು ನನ್ನನ್ನು ಸಂದರ್ಶನ ಮಾಡಿದ ಸಂದರ್ಭದಲ್ಲಿ ಹೇಳಿದ್ದರು’ ಎಂದು ಗಂಗೂಲಿ ಅಂದಿನ ಘಟನೆಯನ್ನು ಬಿಚ್ಚಿಟ್ಟರು.
Pro Hockey: ಇಂಗ್ಲೆಂಡ್ ವಿರುದ್ಧ ಭಾರತ ವನಿತೆಯರಿಗೆ ಸೋಲು
WPL: ಮುಂಬೈ-ಡೆಲ್ಲಿ ಪಂದ್ಯದಲ್ಲಿ ರನೌಟ್ ವಿವಾದ
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.