Asia cup; ನೇಪಾಳ ವಿರುದ್ಧ ಪಂದ್ಯಕ್ಕೂ ಮಳೆ ಕಾಟ; ಸೂಪರ್ 4ಗೆ ಅರ್ಹತೆ ಪಡೆಯಲು ಏನು ಮಾಡಬೇಕು?
Team Udayavani, Sep 3, 2023, 6:32 PM IST
ಕ್ಯಾಂಡಿ: ಟೀಂ ಇಂಡಿಯಾವು ಏಷ್ಯಾ ಕಪ್ ಕೂಟದ ಎರಡನೇ ಪಂದ್ಯವನ್ನು ಸೋಮವಾರ ನೇಪಾಳ ವಿರುದ್ಧ ಆಡಲಿದೆ. ಶನಿವಾರದ ಪಾಕಿಸ್ತಾನದ ವಿರುದ್ಧದ ಪಂದ್ಯ ಮಳೆಯ ಕಾರಣದಿಂದ ರದ್ದಾದ ಕಾರಣ ಈ ಮುಖಾಮುಖಿ ಟೀಂ ಇಂಡಿಯಾದ ಪಾಲಿಗೆ ಮುಖ್ಯವಾಗಿದೆ. ಕ್ರಿಕೆಟ್ ಶಿಶು ನೇಪಾಳ ಭಾರತಕ್ಕೆ ಸುಲಭದ ತುತ್ತಾಗುವ ನಿರೀಕ್ಷೆಯಿದ್ದರೂ, ಮತ್ತೆ ವರುಣ ಅಡಚಣೆಯುಂಟು ಮಾಡುವ ಸಾಧ್ಯತೆಯಿದೆ.
ಈ ಪಂದ್ಯವು ಕೂಟದ ಮೇಲೆ ಗಮನಾರ್ಹ ಪರಿಣಾಮ ಹೊಂದಿದೆ. ಯಾಕೆಂದರೆ ಭಾರತಕ್ಕೆ ಒಂದು ಗೆಲುವು ಸೂಪರ್ ಫೋರ್ ನಲ್ಲಿ ಸ್ಥಾನವನ್ನು ಭದ್ರಪಡಿಸುತ್ತದೆ. ಆದರೆ ನೇಪಾಳ ವಿರುದ್ದ ಸೋಲನುಭವಿಸಿದರೆ ಭಾರತವು ಪಂದ್ಯಾವಳಿಯಿಂದ ಹೊರಬೀಳಲಿದೆ.
ಇದನ್ನೂ ಓದಿ:‘Jawan’ ನಮ್ಮ ಸುತ್ತ ಬದಲಾವಣೆ ಹೇಗೆ ಮಾಡಬಹುದು ಎಂಬುದರ ಪ್ರತಿಬಿಂಬ: ಶಾರುಖ್
ಭಾರತ ಮತ್ತು ನೇಪಾಳ ನಡುವಿನ ಹಣಾಹಣಿಯು ವಿಶೇಷ ಮಹತ್ವವನ್ನು ಹೊಂದಿದೆ. ಯಾಕೆಂದರೆ ಇದು ಈ ಎರಡು ತಂಡಗಳ ನಡುವಿನ ಮೊದಲ ಏಕದಿನ ಮುಖಾಮುಖಿಯಾಗಿರಲಿದೆ.
ಭಾರತ-ಪಾಕಿಸ್ತಾನ ಪಂದ್ಯದಂತೆಯೇ, ಭಾರತ ಮತ್ತು ನೇಪಾಳ ಪಂದ್ಯವು ಮಳೆಯ ಅಪಾಯವನ್ನು ಎದುರಿಸುತ್ತಿದೆ. ಮಧ್ಯಾಹ್ನ 3 ಗಂಟೆಗೆ ನಿಗದಿಯಾಗಿರುವ ಪಂದ್ಯದ ಆರಂಭದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿಗಳು ಸೂಚಿಸುತ್ತವೆ. ಮೂರು ಗಂಟೆ ಸಮಯಕ್ಕೆ 20% ಮಳೆಯಾಗುವ ಸಾಧ್ಯತೆಯಿದ್ದರೆ, ಆರು ಗಂಟೆಯ ವೇಳೆ 70% ರಷ್ಟು ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ವರದಿ ಸೂಚಿಸಿದೆ.
ಏಷ್ಯಾ ಕಪ್ 2023 ರ ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೂಪರ್ ಫೋರ್ ಗೆ ಮುನ್ನಡೆಯುತ್ತವೆ. ಪಾಕಿಸ್ತಾನವು ಈಗಾಗಲೇ ಎರಡು ಪಂದ್ಯಗಳಿಂದ ಮೂರು ಅಂಕಗಳೊಂದಿಗೆ ಮುಂದಿನ ಸುತ್ತಿನಲ್ಲಿ ತನ್ನ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಇನ್ನು ಎ ಗುಂಪಿನಲ್ಲಿ ಭಾರತ ಮತ್ತು ನೇಪಾಳದಿಂದ ಕೇವಲ ಒಂದು ತಂಡ ಮಾತ್ರ ಮುನ್ನಡೆಯಬಹುದು. ಒಂದು ವೇಳೆ ನೇಪಾಳ ವಿರುದ್ಧದ ಪಂದ್ಯ ಮಳೆಯಿಂದ ರದ್ದಾದರೆ ಭಾರತ ಮುಂದಿನ ಸುತ್ತಿಗೆ ಲಗ್ಗೆಯಿಡಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
INDvsBAN: ಕುಸಿದ ಭಾರತಕ್ಕೆ ಆಸರೆಯಾದ ಅಶ್ವಿನ್, ಜಡೇಜಾ; ಶತಕ ಬಾರಿಸಿದ ಲೋಕಲ್ ಬಾಯ್
INDvsBAN: ”ಈತ ಭಾರತದ ಬಾಬರ್ ಅಜಂ..”: ಟೀಂ ಇಂಡಿಯಾ ಆಟಗಾರನಿಗೆ ನೆಟ್ಟಿಗರ ತರಾಟೆ
Cricket: ಲಂಕಾ ಕ್ರಿಕೆಟಿಗನನ್ನು 20 ವರ್ಷಗಳ ಕಾಲ ಬ್ಯಾನ್ ಮಾಡಿದ ಕ್ರಿಕೆಟ್ ಆಸ್ಟ್ರೇಲಿಯಾ
Ricky Ponting: ಡೆಲ್ಲಿಯಿಂದ ಪಂಜಾಬ್ ಗೆ ಬಂದ ರಿಕಿ ಪಾಂಟಿಂಗ್
Test Series: ಭಾರತ-ಬಾಂಗ್ಲಾ ತಂಡಗಳಿಗೆ ರಿಯಲ್ ಟೆಸ್ಟ್
MUST WATCH
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು
ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.