Womens Asia Cup;ಯುಎಇ ವಿರುದ್ಧ ದಾಖಲೆ ಮೊತ್ತ ; ಸೆಮಿ ಬಾಗಿಲಲ್ಲಿ ಭಾರತದ ವನಿತೆಯರು


Team Udayavani, Jul 21, 2024, 11:38 PM IST

1-crick-1

ಡಂಬುಲ: ಯುಎಇ ವಿರುದ್ಧ ದಾಖಲೆ ಮೊತ್ತ ಪೇರಿಸಿ 78 ರನ್ನುಗಳಿಂದ ಗೆದ್ದುಬಂದ ಹಾಲಿ ಚಾಂಪಿಯನ್‌ ಭಾರತ, ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ವನಿತಾ ಏಷ್ಯಾ ಕಪ್‌ ಪಂದ್ಯಾವಳಿಯ ಸೆಮಿಫೈನಲ್‌ ಖಚಿತಪಡಿಸಿದೆ.
ಭಾರತ ಮೊದಲ ಮುಖಾಮುಖೀಯಲ್ಲಿ ಪಾಕಿಸ್ಥಾನವನ್ನು 7 ವಿಕೆಟ್‌ಗಳಿಂದ ಮಣಿಸಿತ್ತು. ಇದರೊಂದಿಗೆ “ಎ’ ವಿಭಾಗದ ಎರಡೂ ಪಂದ್ಯಗಳನ್ನು ಜಯಿಸಿತು. 3.298ರಷ್ಟು ಉತ್ಕೃಷ್ಟ ರನ್‌ರೇಟ್‌ ಹೊಂದಿರುವ ಕೌರ್‌ ಬಳಗ, ಮಂಗಳವಾರ ನೇಪಾಲ ವಿರುದ್ಧ ಕೊನೆಯ ಲೀಗ್‌ ಪಂದ್ಯ ಆಡಲಿದೆ.

ರವಿವಾರದ ಮುಖಾಮುಖೀಯಲ್ಲಿ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತ 5 ವಿಕೆಟಿಗೆ 201 ರನ್‌ ಪೇರಿಸಿತು. ಜವಾಬಿತ್ತ ಯುಎಇ 7 ವಿಕೆಟಿಗೆ 123 ರನ್‌ ಮಾಡಿ ಸತತ ಎರಡನೇ ಸೋಲನ್ನು ಹೊತ್ತುಕೊಂಡಿತು.

ಮೊದಲ ಸಲ 200 ರನ್‌
ಭಾರತದ ವನಿತೆಯರು ಮೊದಲ ಸಲ ಟಿ20 ಕ್ರಿಕೆಟ್‌ನಲ್ಲಿ ಇನ್ನೂರರ ಗಡಿ ದಾಟಿದರು. ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಮತ್ತು ಕೀಪರ್‌ ರಿಚಾ ಘೋಷ್‌ ಅವರ ಬಿರುಸಿನ ಅರ್ಧ ಶತಕದಿಂದ ಇದು ಸಾಧ್ಯವಾಯಿತು. ಓಪನರ್‌ ಶಫಾಲಿ ವರ್ಮ ಕೂಡ ಸಿಡಿದು ನಿಂತರು. ಆದರೆ ಸ್ಮತಿ ಮಂಧನಾ (13), ದಯಾಳನ್‌ ಹೇಮಲತಾ (2) ಮತ್ತು ಜೆಮಿಮಾ ರೋಡ್ರಿಗಸ್‌ (14) ಅವರಿಂದ ಹೆಚ್ಚಿನ ಕೊಡುಗೆ ಸಂದಾಯವಾಗಲಿಲ್ಲ. ಮಂಧನಾ ಒಂದು ಸಿಕ್ಸರ್‌, ಒಂದು ಬೌಂಡರಿ ಬಾರಿಸಿ ಅಬ್ಬರಿಸಿದರೂ ಇನ್ನಿಂಗ್ಸ್‌ ಬೆಳೆಸುವಲ್ಲಿ ವಿಫ‌ಲರಾದರು. 52 ರನ್ನಿಗೆ ಭಾರತದ 3 ವಿಕೆಟ್‌ ಬಿತ್ತು.

ಹರ್ಮನ್‌ಪ್ರೀತ್‌ ಕೌರ್‌ 47 ಎಸೆತಗಳಿಂದ 66 ರನ್‌ ಬಾರಿಸಿದರು. ಇದರಲ್ಲಿ 7 ಫೋರ್‌, ಒಂದು ಸಿಕ್ಸರ್‌ ಸೇರಿತ್ತು. ಸಮೈರಾ ಅವರೆಸೆದ 19ನೇ ಓವರ್‌ನಲ್ಲಿ ಸತತ 2 ಬೌಂಡರಿ ಹಾಗೂ ಒಂದು ಸಿಕ್ಸರ್‌ ಬಾರಿಸುವ ಮೂಲಕ ಕೌರ್‌ 12ನೇ ಅರ್ಧ ಶತಕದ ಸಂಭ್ರಮ ಆಚರಿಸಿದರು. ಅಂತಿಮವಾಗಿ ರನೌಟ್‌ ಆಗಿ ವಾಪಸಾದರು.
ಕೌರ್‌ 2 ಉಪಯುಕ್ತ ಜತೆಯಾಟಗಳಲ್ಲಿ ಭಾಗಿಯಾದರು. ಮೊದಲು ಜೆಮಿಮಾ ಜತೆಗೂಡಿ 4ನೇ ವಿಕೆಟಿಗೆ 54 ರನ್‌ ಒಟ್ಟುಗೂಡಿಸಿದರು. ಬಳಿಕ ರಿಚಾ ಘೋಷ್‌ ಜತೆಗೂಡಿ 5ನೇ ವಿಕೆಟಿಗೆ 75 ರನ್‌ ರಾಶಿ ಹಾಕಿದರು.

ರಿಚಾ ಘೋಷ್‌ ಬ್ಯಾಟಿಂಗ್‌ ಅತ್ಯಂತ ಸ್ಫೋಟಕವಾಗಿತ್ತು. ಇವರ ಗಳಿಕೆ 29 ಎಸೆತಗಳಿಂದ ಅಜೇಯ 64 ರನ್‌ (12 ಬೌಂಡರಿ, ಒಂದು ಸಿಕ್ಸರ್‌). ಇದು ರಿಚಾ ಅವರ ಮೊದಲ ಟಿ20 ಅರ್ಧ ಶತಕ. ಹೀನಾ ಹೊಚಾಂದನಿ ಪಾಲಾದ ಅಂತಿಮ ಓವರ್‌ ಕೊನೆಯ 5 ಎಸೆತಗಳನ್ನು ಬೌಂಡರಿಗೆ ಬಡಿದಟ್ಟುವ ಮೂಲಕ ರಿಚಾ ಅಬ್ಬರಿಸಿದರು. ಇದರಿಂದ ಅವರ ಅರ್ಧ ಶತಕ ಹಾಗೂ ತಂಡದ ದ್ವಿಶತಕವೆರಡೂ ಪೂರ್ತಿಗೊಂಡಿತು.

ಯುಎಇ ವೈಫ‌ಲ್ಯ
ಚೇಸಿಂಗ್‌ ವೇಳೆ ನಾಯಕಿ ಇಶಾ ರೋಹಿತ್‌ ಓಜಾ (38) ಮತ್ತು ಮಧ್ಯಮ ಕ್ರಮಾಂಕದ ಆಟಗಾರ್ತಿ ಕವಿಶಾ (ಔಟಾಗದೆ 40) ಮಾತ್ರ ಒಂದಿಷ್ಟು ಹೋರಾಟ ತೋರಿದರು. ಭಾರತದ ಐವರು ಬೌಲರ್ ವಿಕೆಟ್‌ ಪಡೆಯುವಲ್ಲಿ ಯಶಸ್ವಿಯಾದರು. ದೀಪ್ತಿಗೆ ಹೆಚ್ಚಿನ ಯಶಸ್ಸು ಸಿಕ್ಕಿತು. ಶ್ರೇಯಾಂಕಾ ಸ್ಥಾನ ತುಂಬಿದ ತನುಜಾ ಅತ್ಯಂತ ಮಿತವ್ಯಯಿಯಾಗಿದ್ದರು (4-0-14-1).

ಸಂಕ್ಷಿಪ್ತ ಸ್ಕೋರ್‌
ಭಾರತ-5 ವಿಕೆಟಿಗೆ 201 (ಕೌರ್‌ 66, ರಿಚಾ ಔಟಾಗದೆ 64, ಶಫಾಲಿ 37, ಕವಿಶಾ 36ಕ್ಕೆ 2). ಯುಎಇ-7 ವಿಕೆಟಿಗೆ 123 (ಕವಿಶಾ ಔಟಾಗದೆ 40, ಇಶಾ 38, ದೀಪ್ತಿ 23ಕ್ಕೆ 2, ತನುಜಾ 14ಕ್ಕೆ 1, ಪೂಜಾ 27ಕ್ಕೆ 1, ರಾಧಾ 29ಕ್ಕೆ 1, ರೇಣುಕಾ 30ಕ್ಕೆ 1).
ಪಂದ್ಯಶ್ರೇಷ್ಠ: ರಿಚಾ ಘೋಷ್‌.

ಪಾಕಿಸ್ಥಾನಕ್ಕೆ ಗೆಲುವು
ದಿನದ ದ್ವಿತೀಯ ಪಂದ್ಯದಲ್ಲಿ ಪಾಕಿಸ್ಥಾನ 9 ವಿಕೆಟ್‌ಗಳಿಂದ ನೇಪಾಲವನ್ನು ಮಣಿಸಿ ಅಂಕದ ಖಾತೆ ತೆರೆಯಿತು. ನೇಪಾಲ 6 ವಿಕೆಟಿಗೆ ಕೇವಲ 108 ರನ್‌ ಗಳಿಸಿದರೆ, ಪಾಕಿಸ್ಥಾನ 11.5 ಓವರ್‌ಗಳಲ್ಲಿ ಒಂದೇ ವಿಕೆಟಿಗೆ 110 ರನ್‌ ಮಾಡಿತು.

ಟಾಪ್ ನ್ಯೂಸ್

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

PM Modi ಜನ್ಮದಿನ: ಬಿಜೆಪಿಯಿಂದ ಸೇವಾಪಾಕ್ಷಿಕ: ಹರತಾಳು ಹಾಲಪ್ಪ

anHassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!

Hassan ಬೇಲೂರು: ಕುರಿಮಂದೆಯಂತೆ ಕಾಡಾನೆ ಹಿಂಡು ಸಂಚಾರ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

Asian Champions Trophy: ಕೊರಿಯಾ ವಿರುದ್ದ ಗೆದ್ದು ಫೈನಲ್‌ ಪ್ರವೇಶಿಸಿದ ಭಾರತ ಹಾಕಿ ತಂಡ

1-eee

International ಕರಾಟೆ ಚಾಂಪಿಯನ್ ಶಿಪ್; ಸುಜಲ್ ಜೆ ಶೆಟ್ಟಿಗೆ ಬೆಳ್ಳಿ,ಕಂಚು

ENGvsAUS: ಏಕದಿನ ಸರಣಿಗೂ ಬಟ್ಲರ್‌ ಅಲಭ್ಯ; ಎಸ್‌ಆರ್‌ಎಚ್ ಆಟಗಾರನಿಗೆ ನಾಯಕತ್ವ

ENGvsAUS: ಏಕದಿನ ಸರಣಿಗೂ ಬಟ್ಲರ್‌ ಅಲಭ್ಯ; ಎಸ್‌ಆರ್‌ಎಚ್ ಆಟಗಾರನಿಗೆ ನಾಯಕತ್ವ

ಈತನೇ ಭಾರತದ ಮುಂದಿನ ಸೂಪರ್‌ ಸ್ಟಾರ್‌ ಎಂದ ಸ್ಟೀವ್‌ ಸ್ಮಿತ್‌, ಸ್ಟಾರ್ಕ್‌

B–G Trophy: ಈತನೇ ಭಾರತದ ಮುಂದಿನ ಸೂಪರ್‌ ಸ್ಟಾರ್‌ ಎಂದ ಸ್ಟೀವ್‌ ಸ್ಮಿತ್‌, ಸ್ಟಾರ್ಕ್‌

1-trrr

Asian Champions Trophy ಸೆಮಿಫೈನಲ್‌ : ಕೊರಿಯಾ ವಿರುದ್ಧ ಭಾರತ ಫೇವರಿಟ್‌

MUST WATCH

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

ಹೊಸ ಸೇರ್ಪಡೆ

1-iran

Hijab ಧರಿಸದೆ, ಕೇಶ ಕಟ್ಟದೇ ಬೀದಿಗಿಳಿದ ಇರಾನ್‌ ಮಹಿಳೆಯರು!

Kasaragodu

Kasaragodu: ಬೆಂಕಿ ಹೊತ್ತಿಕೊಂಡು ಕಾರು ಸಂಪೂರ್ಣ ನಾಶ

1-kota-shivanand

Yakshagana ಕಾಳಿಂಗ ನಾವಡ ಪ್ರಶಸ್ತಿಗೆ ಶಿವಾನಂದ ಆಯ್ಕೆ

Suside-Boy

Surathkal: ಚಿಕ್ಕಬಳ್ಳಾಪುರ ಮೂಲದ ವೈದ್ಯಕೀಯ ವಿದ್ಯಾರ್ಥಿ ಆತ್ಮಹತ್ಯೆ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

BJP MLA Munirathna ಧ್ವನಿ ಖಚಿತವಾದರೆ ಕಾನೂನು ಕ್ರಮ: ಪರಂ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.