Women’s Asia Cup; ಚಾಮರಿ ಅತ್ತಪಟ್ಟು ಸೆಂಚುರಿ; ಲಂಕಾ ಜಯಭೇರಿ
Team Udayavani, Jul 22, 2024, 11:26 PM IST
ಡಂಬುಲ: ಶ್ರೀಲಂಕಾದ ನಾಯಕಿ ಚಾಮರಿ ಅತ್ತಪಟ್ಟು ವನಿತಾ ಏಷ್ಯಾ ಕಪ್ ಕ್ರಿಕೆಟ್ನಲ್ಲಿ ಸೆಂಚುರಿ ಬಾರಿಸಿದ ಮೊದಲ ಆಟಗಾರ್ತಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಸೋಮವಾರ ಮಲೇಷ್ಯಾ ವಿರುದ್ಧ ನಡೆದ “ಬಿ’ ವಿಭಾಗದ ಮುಖಾಮುಖಿಯಲ್ಲಿ ಅವರು 119 ರನ್ ಹೊಡೆದರು. ಇದರೊಂದಿಗೆ 144 ರನ್ನುಗಳ ಅಮೋಘ ಗೆಲುವು ಸಾಧಿಸಿದ ಲಂಕಾ ಸೆಮಿಫೈನಲ್ಗೆ ಒಂದು ಕಾಲಿರಿಸಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಶ್ರೀಲಂಕಾ 4 ವಿಕೆಟಿಗೆ 184 ರನ್ ಮಾಡಿದರೆ, ಮಲೇಷ್ಯಾ 19.5 ಓವರ್ಗಳಲ್ಲಿ 40 ರನ್ನಿಗೆ ಸರ್ವಪತನ ಕಂಡಿತು.
ಚಾಮರಿ ಅತ್ತಪಟ್ಟು 69 ಎಸೆತಗಳಿಂದ 119 ರನ್ ಬಾರಿಸಿದರು. ಇದರೊಂದಿಗೆ ಏಷ್ಯಾ ಕಪ್ನಲ್ಲಿ ಅತ್ಯಧಿಕ 97 ರನ್ ಮಾಡಿದ ಮಿಥಾಲಿ ರಾಜ್ ಅವರ ದಾಖಲೆಯನ್ನು ಮುರಿದರು. ಮಿಥಾಲಿ 2018ರಲ್ಲಿ ಮಲೇಷ್ಯಾ ವಿರುದ್ಧವೇ ಈ ಅಜೇಯ ಪ್ರದರ್ಶನ ನೀಡಿದ್ದರು.
ಚಾಮರಿ 14 ಬೌಂಡರಿ ಹಾಗೂ 7 ಸಿಕ್ಸರ್ ಬಾರಿಸಿದರು. ವನಿತಾ ಏಷ್ಯಾ ಕಪ್ ಪಂದ್ಯವೊಂದರಲ್ಲಿ ಅತ್ಯಧಿಕ ಸಿಕ್ಸರ್ ಹೊಡೆದ ದಾಖಲೆಯೂ ಚಾಮರಿ ಪಾಲಾಯಿತು. ಶಫಾಲಿ ವರ್ಮ ಅವರ 3 ಸಿಕ್ಸರ್ ದಾಖಲೆಯನ್ನು ಅಳಿಸಿದರು.
ಮಲೇಷ್ಯಾ ಪರ ಎಲ್ಸಾ ಹಂಟರ್ 10 ರನ್ ಗಳಿಸಿದ್ದೇ ಹೆಚ್ಚಿನ ವೈಯಕ್ತಿಕ ಗಳಿಕೆ. ನಾಲ್ವರು ಖಾತೆ ತೆರೆಯಲಿಲ್ಲ. ಲಂಕಾ ಪರ ಎಲ್ಲ ಆರು ಬೌಲರ್ ವಿಕೆಟ್ ಉರುಳಿಸಿದರು.
ಸಂಕ್ಷಿಪ್ತ ಸ್ಕೋರ್: ಶ್ರೀಲಂಕಾ-4 ವಿಕೆಟಿಗೆ 184 (ಚಾಮರಿ 119, ಅನುಷ್ಕಾ 31, ಹರ್ಷಿತಾ 26, ವಿನಿಫ್ರೆಡ್ 34ಕ್ಕೆ 2). ಮಲೇಷ್ಯಾ-19.5 ಓವರ್ಗಳಲ್ಲಿ 40 (ಹಂಟರ್ 10, ಶಾಶಿನಿ 9ಕ್ಕೆ 3, ಕವಿಶಾ 4ಕ್ಕೆ 2, ಕಾವ್ಯಾ 7ಕ್ಕೆ 2). ಪಂದ್ಯಶ್ರೇಷ್ಠ: ಚಾಮರಿ ಅತ್ತಪಟ್ಟು.
ಬಾಂಗ್ಲಾದೇಶಕ್ಕೆ 7 ವಿಕೆಟ್ ಜಯ
ಸೋಮವಾರದ ದ್ವಿತೀಯ ಪಂದ್ಯದಲ್ಲಿ ಬಾಂಗ್ಲಾದೇಶ 7 ವಿಕೆಟ್ಗಳಿಂದ ಥಾಯ್ಲೆಂಡನ್ನು ಮಣಿಸಿತು. ಥಾಯ್ಲೆಂಡ್ 9 ವಿಕೆಟಿಗೆ 96 ರನ್ ಗಳಿಸಿದರೆ, ಬಾಂಗ್ಲಾ 17.3 ಓವರ್ಗಳಲ್ಲಿ 3 ವಿಕೆಟಿಗೆ 100 ರನ್ ಮಾಡಿತು. ಓಪನರ್ ಮುರ್ಷಿದಾ ಖಾತುನ್ 50 ರನ್ ಹೊಡೆದರು.
ಬಾಂಗ್ಲಾ ಬೌಲಿಂಗ್ ಸರದಿಯಲ್ಲಿ ಮಿಂಚಿದವರೆಂದರೆ ರಬೇಯಾ ಖಾನ್ (14ಕ್ಕೆ 4), ರಿತು ಮೋನಿ (10ಕ್ಕೆ 2) ಮತ್ತು ಸಬಿಕ್ ಉನ್ ನಹರ್ (28ಕ್ಕೆ 2).
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Pro Kabaddi League: ಇಂದಿನಿಂದ ಕಬಡ್ಡಿ ಮಹಾಜಾತ್ರೆ
Womens Cricket: ನ್ಯೂಜಿಲ್ಯಾಂಡ್ ಎದುರಿನ ಏಕದಿನ ಸರಣಿಗೆ ನಾಯಕತ್ವ ಉಳಿಸಿಕೊಂಡ ಕೌರ್
Pro Kabaddi League: ಇಂದಿನಿಂದ 11ನೇ ಆವೃತ್ತಿಯ ಪ್ರೊ ಕಬಡ್ಡಿ ಲೀಗ್ ಹವಾ
Womens T20 World Cup: 6 ಬಾರಿ ಚಾಂಪಿಯನ್ ಆಸ್ಟ್ರೇಲಿಯಾ ಮಣಿಸಿ ಫೈನಲ್ಗೇರಿದ ದ.ಆಫ್ರಿಕಾ
Virat Kohli ಸಮಸ್ಯೆಗಳನ್ನು ಜಟಿಲಗೊಳಿಸಿದ್ದಾರೆ!; ಖ್ಯಾತ ಕ್ರಿಕೆಟ್ ವಿಶ್ಲೇಷಕ ಟೀಕೆ
MUST WATCH
ಹೊಸ ಸೇರ್ಪಡೆ
Salman Khan: 5 ಕೋಟಿ ನೀಡಿ, ಇಲ್ಲದಿದ್ದರೆ… ಸಲ್ಮಾನ್ ಖಾನ್ ಗೆ ಮತ್ತೆ ಜೀವ ಬೆದರಿಕೆ
Vijayapura: ಗ್ರಾಮಕ್ಕೆ ನುಗ್ಗಿದ ಮೊಸಳೆ ಸೆರೆ
Canada Vs India: ನಿಜ್ಜರ್ ಹತ್ಯೆ ಕೇಸಲ್ಲಿ ಸತ್ಯ ಒಪ್ಪಿದ ಕೆನಡಾ ಪ್ರಧಾನಿ: ಕೇಂದ್ರ ಸರಕಾರ
Helping Nature: ಭಾರತ ದಾಳಿ ಮಾಡಲ್ಲ, ತನ್ನ ಮೇಲಿನ ದಾಳಿಯನ್ನೂ ಸಹಿಸಲ್ಲ: ಭಾಗವತ್
Kanakapura: ಪ್ರವಾಸ ಸಂದರ್ಭ ವಿದ್ಯಾರ್ಥಿನಿಯರಿಗೆ ಉಪನ್ಯಾಸಕರಿಂದ ಮದ್ಯಪಾನ: ದೂರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.