Women’s Asia Cup ಕ್ರಿಕೆಟ್‌ ಇಂದಿನಿಂದ: ಆರಂಭದಲ್ಲೇ ಭಾರತ-ಪಾಕ್ ಮುಖಾಮುಖಿ


Team Udayavani, Jul 19, 2024, 6:30 AM IST

1-asia

ಡಂಬುಲ: ಏಷ್ಯಾದಲ್ಲಿ ವನಿತೆಯರ ಕ್ರಿಕೆಟ್‌ ಪ್ರಭುತ್ವವನ್ನು ಸಾರುವ ಏಷ್ಯಾ ಕಪ್‌ ಕ್ರಿಕೆಟ್‌ ಪಂದ್ಯಾ ವಳಿ ಶುಕ್ರವಾರ ಶ್ರೀಲಂಕಾ ಆತಿಥ್ಯದಲ್ಲಿ ಆರಂಭವಾಗಲಿದೆ. 8 ತಂಡಗಳು ಭಾಗವಹಿಸಲಿದ್ದು, ಎಲ್ಲ ಪಂದ್ಯಗಳು ಡಂಬುಲದಲ್ಲಿ ನಡೆಯಲಿವೆ. ಭಾರತ- ಪಾಕಿಸ್ಥಾನ ಆರಂಭದಲ್ಲೇ ಮುಖಾ ಮುಖಿ ಆಗುವ ಮೂಲಕ ಕೂಟದ ರೋಮಾಂಚನ ಮೊದಲ ದಿನವೇ ಗರಿಗೆದರುವುದರಲ್ಲಿ ಅನುಮಾನವಿಲ್ಲ. ಉದ್ಘಾಟನ ಪಂದ್ಯದಲ್ಲಿ ಯುಎಇ- ನೇಪಾಲ ಎದುರಾಗಲಿವೆ.

ಏಷ್ಯಾ ಕಪ್‌ ಅಂದರೆ ಅದು ಭಾರತೀಯ ನಾರಿಯರ ಸ್ವತ್ತು ಎಂಬಷ್ಟರ ಮಟ್ಟಿಗೆ ಖ್ಯಾತಿ ಗಳಿಸಿದೆ. ಈವರೆಗಿನ 8 ಏಷ್ಯಾ ಕಪ್‌ ಕೂಟಗಳಲ್ಲಿ 7 ಸಲ ಚಾಂಪಿಯನ್‌ ಆಗಿ ಮೂಡಿ ಬಂದಿರುವುದೇ ಇದಕ್ಕೆ ಸಾಕ್ಷಿ. ಇದ ರಲ್ಲಿ ಏಕದಿನ ಮಾದರಿಯ ಎಲ್ಲ 4 ಪಂದ್ಯಾವಳಿಗಳಲ್ಲೂ ಭಾರತವೇ ಪ್ರಶಸ್ತಿ ಎತ್ತಿತ್ತು. ಹಾಗೆಯೇ 4 ಟಿ20 ಮಾದರಿಗಳ ಟೂರ್ನಿಯ ವೇಳೆ ಮೂರರಲ್ಲಿ ಚಾಂಪಿಯನ್‌ ಆಗಿತ್ತು. ಒಮ್ಮೆ ಮಾತ್ರ ಬಾಂಗ್ಲಾದೇಶ ವಿರುದ್ಧ ಪ್ರಶಸ್ತಿ ಸಮರದಲ್ಲಿ ಸೋಲು ಕಂಡಿತ್ತು. ಅರ್ಥಾತ್‌, ಈವರೆಗಿನ ಎಲ್ಲ 8 ಕೂಟಗಳಲ್ಲೂ ಭಾರತ ಫೈನಲ್‌ ತಲುಪಿತ್ತು.

ಏಷ್ಯಾ ಕಪ್‌ ಟಿ20 ಮಾದರಿಯಲ್ಲಿ ಆಡಿದ 20 ಪಂದ್ಯಗಳಲ್ಲಿ ಭಾರತ 17ರಲ್ಲಿ ಜಯಭೇರಿ ಮೊಳಗಿಸಿದೆ. 2022ರ ಕೂಟದಲ್ಲಿ ಬಾಂಗ್ಲಾದೇಶವನ್ನು ಮಣಿಸಿ ಚಾಂಪಿಯನ್‌ ಆಗಿತ್ತು.

ಪಾಕ್‌ ವಿರುದ್ಧ ಉತ್ತಮ ದಾಖಲೆ
ಪಾಕಿಸ್ಥಾನ ವಿರುದ್ಧವೂ ಭಾರತದ ದಾಖಲೆ ಅಮೋಘ ಮಟ್ಟದಲ್ಲಿದೆ. 14 ಟಿ20 ಪಂದ್ಯಗಳಲ್ಲಿ 11ರಲ್ಲಿ ಗೆಲುವು ಸಾಧಿಸಿದೆ. ಏಷ್ಯಾ ಕಪ್‌ನಲ್ಲಿ ಒಟ್ಟು 6 ಸಲ ಮುಖಾಮುಖೀಯಾಗಿದ್ದು, ಭಾರತ ಐದನ್ನು ಗೆದ್ದಿದೆ. ಈ ಸಲವೂ ನೆಚ್ಚಿನ ತಂಡವಾಗಿ ಗೋಚರಿಸುತ್ತಿದೆ.ಏಷ್ಯಾ ಕಪ್‌ನಲ್ಲಿ ಪಾಕಿಸ್ಥಾನ ವಿರುದ್ಧ ಹರ್ಮನ್‌ಪ್ರೀತ್‌ ಕೌರ್‌ 5 ಸಲ ಭಾರತವನ್ನು ಮುನ್ನಡೆಸಿದ್ದು, ನಾಲ್ಕರಲ್ಲಿ ಜಯ ಸಾಧಿಸಿದ್ದಾರೆ. ಒಂದು ಗೆಲುವು ಮಿಥಾಲಿ ರಾಜ್‌ ನಾಯಕತ್ವದಲ್ಲಿ ಒಲಿದಿದೆ.

ಭಾರತ ಇತ್ತೀಚೆಗೆ ತವರಿನ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿತ್ತು. 3 ಪಂದ್ಯಗಳ ಟಿ20 ಸರಣಿಯನ್ನು 1-1ರಿಂದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇನ್ನೊಂದೆಡೆ ಪಾಕಿಸ್ಥಾನ ತಂಡ ಇಂಗ್ಲೆಂಡ್‌ಗೆ ಪ್ರವಾಸ ಗೈದು ಅಲ್ಲಿ 3-0 ಮುಖಭಂಗ ಅನುಭವಿಸಿ ಬಂದಿದೆ.

ಅಮೋಘ ಫಾರ್ಮ್
ಭಾರತದ ಎಲ್ಲ ಆಟಗಾರ್ತಿಯರೂ ಅತ್ಯುತ್ತಮ ಫಾರ್ಮ್ನಲ್ಲಿದ್ದಾರೆ. ಅದರಲ್ಲೂ ಸ್ಮೃತಿ ಮಂಧನಾ ಫಾರ್ಮ್ ಅಂತೂ ಅಮೋಘ. ಇವರ ಜತೆಗಾರ್ತಿ ಶಫಾಲಿ ವರ್ಮ ಕೂಡ ಉತ್ತಮ ಲಯದಲ್ಲಿದ್ದಾರೆ. ಶಫಾಲಿ ಸಿಡಿದು ನಿಂತರೆ ದೊಡ್ಡ ಮೊತ್ತ ದಾಖ ಲಾಗುವುದರಲ್ಲಿ ಅನುಮಾನವಿಲ್ಲ.
ನಾಯಕಿ ಕೌರ್‌, ಜೆಮಿಮಾ ರೋಡ್ರಿಗಸ್‌, ರಿಚಾ ಘೋಷ್‌ ಮಧ್ಯಮ ಕ್ರಮಾಂಕವನ್ನು ಆಧರಿಸಲು ಶಕ್ತರು.

ಬೌಲಿಂಗ್‌ನಲ್ಲಿ ಪೇಸ್‌ ಹಾಗೂ ಸ್ಪಿನ್‌ ವಿಭಾಗಗಳೆರಡೂ ಬಲಿಷ್ಠ. ಪೂಜಾ ವಸ್ತ್ರಾಕರ್‌, ರಾಧಾ ಯಾದವ್‌, ಶ್ರೇಯಾಂಕಾ ಪಾಟೀಲ್‌, ಆಲ್‌ರೌಂಡರ್‌ ದೀಪ್ತಿ ಶರ್ಮ ಭಾರತದ ಬೌಲಿಂಗ್‌ ಅಸ್ತ್ರವಾಗಿದ್ದಾರೆ.

ನಿದಾ ದರ್‌ ಮೇಲೆ ವಿಶ್ವಾಸ
ಇಂಗ್ಲೆಂಡ್‌ನ‌ಲ್ಲಿ ಸೋಲನುಭವಿಸಿ ಬಂದರೂ ನಿದಾ ದರ್‌ ಅವರನ್ನು ಪಾಕಿಸ್ಥಾನ ತಂಡದ ನಾಯಕಿಯಾಗಿ ಉಳಿಸಿಕೊಳ್ಳಲಾಗಿದೆ. ಇರಮ್‌ ಜಾವೇದ್‌, ಒಮೈಮಾ ಸೊಹೈಲ್‌, ಸಯ್ಯದ್‌ ಅರೂಬ್‌ ಶಾ ಈ ವರ್ಷ ಯಾವುದೇ ಪಂದ್ಯವಾಡಿಲ್ಲ. ತಸ್ಮಿಯಾ ರುಬಾಬ ಸೇರಿದಂತೆ 6 ಆಟಗಾರ್ತಿಯರನ್ನು ಕೈಬಿಡಲಾಗಿದೆ.

ಭಾರತದ ಪಂದ್ಯಗಳ ವೇಳಾಪಟ್ಟಿ
ಜು. 19 ಭಾರತ – ಪಾಕಿಸ್ಥಾನ
ಜು. 21 ಭಾರತ – ಯುಎಇ
ಜು.23 ಭಾರತ – ನೇಪಾಲ

ಟಾಪ್ ನ್ಯೂಸ್

Delhi Govt: ದೆಹಲಿ ಸಿಎಂ ರೇಸ್‌ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ

Delhi Govt: ದೆಹಲಿ ಸಿಎಂ ರೇಸ್‌ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ

Uttar Pradesh: ಭಾರೀ ಮಳೆಗೆ 14 ಮಂದಿ ಮೃತ್ಯು… ಅಪಾಯದ ಮಟ್ಟ ಮೀರಿ ಹರಿಯುವ ನದಿ

Uttar Pradesh: ಭಾರೀ ಮಳೆಗೆ 14 ಮಂದಿ ಮೃತ್ಯು… ಅಪಾಯದ ಮಟ್ಟ ಮೀರಿ ಹರಿಯುವ ನದಿ

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

4

Kadambari Jethwani: ನಟಿಯನ್ನು ಅಕ್ರಮವಾಗಿ ಬಂಧಿಸಿದ ಆರೋಪ; 3 ಐಪಿಎಸ್ ಅಧಿಕಾರಿಗಳು ಅಮಾನತು

1-vaya-big

Wayanad; ಲಯನಾಡಿನಲ್ಲಿ ಕಣ್ಣೀರಿನ ಓಣಂ, ಈದ್‌!

ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ… ಫ್ಲೋರಿಡಾ ಗಾಲ್ಫ್ ಕ್ಲಬ್‌ನಲ್ಲಿ ಘಟನೆ, ಆರೋಪಿ ಬಂಧನ

ಟ್ರಂಪ್ ಮೇಲೆ ಮತ್ತೆ ಗುಂಡಿನ ದಾಳಿ… ಫ್ಲೋರಿಡಾ ಗಾಲ್ಫ್ ಕ್ಲಬ್‌ನಲ್ಲಿ ಘಟನೆ, ಆರೋಪಿ ಬಂಧನ

Suratkal: ಕಿಡಿಗೇಡಿಗಳಿಂದ ಮಸೀದಿಗೆ ಕಲ್ಲು ತೂರಾಟ, ಪ್ರಕರಣದಾಖಲು

Surathkal: ಬೈಕ್ ನಲ್ಲಿ ಬಂದು ಮಸೀದಿಗೆ ಕಲ್ಲು ಬಿಸಾಡಿದ ಕಿಡಿಗೇಡಿಗಳು… ಪ್ರಕರಣ ದಾಖಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-trrr

Asian Champions Trophy ಸೆಮಿಫೈನಲ್‌ : ಕೊರಿಯಾ ವಿರುದ್ಧ ಭಾರತ ಫೇವರಿಟ್‌

1-qe-weqeqqe

Bangla T20; ಶುಭಮನ್‌ ಗಿಲ್‌ ಸೇರಿದಂತೆ ಕೆಲವರಿಗೆ ವಿಶ್ರಾಂತಿ

tennis

Davis Cup: ಸ್ವೀಡನ್‌ ವಿರುದ್ಧ ಭಾರತಕ್ಕೆ 6ನೇ ಸೋಲು

1-reee

Test; ಹೆಚ್ಚುವರಿ ಆತ್ಮವಿಶ್ವಾಸದೊಂದಿಗೆ ಚೆನ್ನೈಗೆ ಬಂದ ಬಾಂಗ್ಲಾ ತಂಡ

1-acd

Duleep Trophy ಕ್ರಿಕೆಟ್‌ : ಅಗರ್ವಾಲ್‌ ಬಳಗಕ್ಕೆ ಜಯ

MUST WATCH

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

udayavani youtube

ಈಟ್ ರಾಜಾ ಶಾಪ್ ನಲ್ಲಿ ಜ್ಯೂಸ್ ಕುಡಿಯೋದಷ್ಟೇ ಅಲ್ಲ ತಿನ್ನಲೂ ಬಹುದು

udayavani youtube

ಅಯ್ಯೋ…ಸಂತೆಕಟ್ಟೆ ಅಂಡರ್ ಪಾಸ್ ಪ್ರಯಾಣ ನಿತ್ಯ ನರಕ!

udayavani youtube

ನಾಗಮಂಗಲ ಗಣಪತಿ ಗಲಾಟೆ ಪ್ರಕರಣ ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ

udayavani youtube

ಉಡುಪಿ ಕೃಷ್ಣ ಮಠದಲ್ಲಿರುವ ಸುಬ್ರಹ್ಮಣ್ಯ ಸನ್ನಿಧಿ

ಹೊಸ ಸೇರ್ಪಡೆ

Delhi Govt: ದೆಹಲಿ ಸಿಎಂ ರೇಸ್‌ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ

Delhi Govt: ದೆಹಲಿ ಸಿಎಂ ರೇಸ್‌ ನಲ್ಲಿದ್ದಾರೆ ಹಲವರು..: ಇಲ್ಲಿದೆ ವಿವರ

Uttar Pradesh: ಭಾರೀ ಮಳೆಗೆ 14 ಮಂದಿ ಮೃತ್ಯು… ಅಪಾಯದ ಮಟ್ಟ ಮೀರಿ ಹರಿಯುವ ನದಿ

Uttar Pradesh: ಭಾರೀ ಮಳೆಗೆ 14 ಮಂದಿ ಮೃತ್ಯು… ಅಪಾಯದ ಮಟ್ಟ ಮೀರಿ ಹರಿಯುವ ನದಿ

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

Jani Master: ಲೈಂಗಿಕ ಕಿರುಕುಳ ಆರೋಪ; ಖ್ಯಾತ ನೃತ್ಯ ಸಂಯೋಜಕ ಜಾನಿ ಮಾಸ್ಟರ್‌ ವಿರುದ್ಧ FIR

4

Kadambari Jethwani: ನಟಿಯನ್ನು ಅಕ್ರಮವಾಗಿ ಬಂಧಿಸಿದ ಆರೋಪ; 3 ಐಪಿಎಸ್ ಅಧಿಕಾರಿಗಳು ಅಮಾನತು

1-vaya-big

Wayanad; ಲಯನಾಡಿನಲ್ಲಿ ಕಣ್ಣೀರಿನ ಓಣಂ, ಈದ್‌!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.