Womens T20 World Cup; ಇಂಗ್ಲೆಂಡಿಗೆ 10 ವಿಕೆಟ್‌ ಭರ್ಜರಿ ಗೆಲುವು :ಯಾವ ತಂಡ ಸೆಮಿಗೆ?


Team Udayavani, Oct 14, 2024, 12:08 AM IST

1-engg

ಶಾರ್ಜಾ: ವನಿತಾ ಟಿ20 ವಿಶ್ವಕಪ್‌ ಕ್ರಿಕೆಟ್‌ ಕುತೂಹಲ ಘಟಕ್ಕೆ ತಲುಪಿದ್ದು ಯಾವ ತಂಡ ಸೆಮಿಫೈನಲಿಗೆ ತೇರ್ಗಡೆಯಾಗಬಹುದೆಂಬ ಲೆಕ್ಕಾಚಾರ ಆರಂಭವಾಗಿದೆ. ರವಿವಾರ ನಡೆದ “ಬಿ’ ಬಣದ ಪಂದ್ಯದಲ್ಲಿ ಸ್ಕಾಟ್ಲೆಂಡ್‌ ತಂಡವನ್ನು 10 ವಿಕೆಟ್‌ಗಳಿಂದ ಉರುಳಿಸಿದ ಇಂಗ್ಲೆಂಡ್‌ ತಂಡವು ಸದ್ಯ ಬಣದ ಅಗ್ರಸ್ಥಾನಕ್ಕೇರಿದ್ದು ಸೆಮಿಫೈನಲಿಗೇರುವ ಅವಕಾಶವನ್ನು ಹೆಚ್ಚಿಸಿಕೊಂಡಿದೆ.

ಮೊದಲು ಬ್ಯಾಟಿಂಗ್‌ ನಡೆಸಿದ ಸ್ಕಾಟ್ಲೆಂಡ್‌ ತಂಡವು ಇಂಗ್ಲೆಂಡಿನ ನಿಖರ ದಾಳಿಗೆ ಕುಸಿದು 6 ವಿಕೆಟಿಗೆ 109 ರನ್‌ ಗಳಿಸಲಷ್ಟೇ ಶಕ್ತವಾಯಿತು. ಇದಕ್ಕುತ್ತರವಾಗಿ ಭರ್ಜರಿ ಆಟದ ಪ್ರದರ್ಶನ ನೀಡಿದ ಇಂಗ್ಲೆಂಡ್‌ ಯಾವುದೇ ವಿಕೆಟ್‌ ಕಳೆದುಕೊಳ್ಳದೇ ಕೆವಲ 10 ಓವರ್‌ಗಳಲ್ಲಿ ಜಯಭೇರಿ ಬಾರಿಸಿತು. ಆರಂಭಿಕರಾದ ಮೈಯಾ ಬೌಶೀರ್‌ ಮತ್ತು ಡ್ಯಾನಿ ವೈಟ್‌ ಹಾಡ್ಜ್ ಅಮೋಘವಾಗಿ ಆಡಿದರಲ್ಲದೇ ವೈಯಕ್ತಿಕವಾಗಿ ಇಬ್ಬರೂ ಅರ್ಧಶತಕ ದಾಖಲಿಸಿ ಸಂಭ್ರಮಿಸಿದರು. ಬೌಶೀರ್‌ 62 ಮತ್ತು ಹಾಡ್ಜ್ 51 ರನ್‌ ಗಳಿಸಿ ಅಜೇಯರಾಗಿ ಉಳಿದರು.

ಈ ಗೆಲುವಿನಿಂದ ತಾನಾಡಿದ ಮೂರು ಪಂದ್ಯಗಳಿಂದ ಆರಂಕ ಪಡೆದ ಇಂಗ್ಲೆಂಡ್‌ ಬಣದ ಅಗ್ರಸ್ಥಾನಕ್ಕೇರಿತು. ರನ್‌ಧಾರಣೆಯಲ್ಲಿ ದ್ವಿತೀಯ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾ ತನ್ನ ಲೀಗ್‌ ಪಂದ್ಯಗಳನ್ನು ಮುಗಿಸಿದ್ದು ಆರಂಕ ಹೊಂದಿದೆ. ಅ. 15ರ ಮಂಗಳವಾರ ಇಂಗ್ಲೆಂಡ್‌ ಮತ್ತು ವೆಸ್ಟ್‌ಇಂಡೀಸ್‌ ನಡುವೆ ನಿರ್ಣಾಯಕ ಲೀಗ್‌ ಪಂದ್ಯ ನಡೆಯಲಿದೆ. ಸದ್ಯ ನಾಲ್ಕಂಕ ಹೊಂದಿರುವ ವೆಸ್ಟ್‌ಇಂಡೀಸ್‌ ಈ ಪಂದ್ಯ ಗೆದ್ದರೆ ದಕ್ಷಿಣ ಆಫ್ರಿಕಾ, ಇಂಗ್ಲೆಂಡ್ ಜತೆ ತಲಾ ಆರಂಕ ಹೊಂದಲಿದೆ. ಆಗ ಉತ್ತಮ ರನ್‌ಧಾರಣೆ ಲೆಕ್ಕಕ್ಕೆ ಬರಲಿದೆ. ಒಂದು ವೇಳೆ ಇಂಗ್ಲೆಂಡ್‌ ಗೆದ್ದರೆ ವೆಸ್ಟ್‌ಇಂಡೀಸ್‌ ಹೊರಬೀಳಲಿದ್ದು ಇಂಗ್ಲೆಂಡ್‌ ಮತ್ತು ದಕ್ಷಿಣ ಆಫ್ರಿಕಾ ಸೆಮಿಫೈನಲಿಗೇರಲಿದೆ.

ಟಾಪ್ ನ್ಯೂಸ್

Udupi: ಗೀತಾರ್ಥ ಚಿಂತನೆ-63: ಕುಲದ ಕೀರ್ತಿಗಾಗಿ ಹೋರಾಡಿದ ಪಾಂಡವರು

Udupi: ಗೀತಾರ್ಥ ಚಿಂತನೆ-63: ಕುಲದ ಕೀರ್ತಿಗಾಗಿ ಹೋರಾಡಿದ ಪಾಂಡವರು

Sullia: ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

Sullia: ಮಹಿಳೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ!

Cherkady: ರಾಷ್ಟ್ರೋತ್ಥಾನ ಪ.ಪೂ. ಕಾಲೇಜು: ಸಮಗ್ರ ಶಿಕ್ಷಣ, ಸಾಂಸ್ಕೃತಿಕ ಜಾಗೃತಿಗೆ ಸಿದ್ಧ

Cherkady: ರಾಷ್ಟ್ರೋತ್ಥಾನ ಪ.ಪೂ. ಕಾಲೇಜು: ಸಮಗ್ರ ಶಿಕ್ಷಣ, ಸಾಂಸ್ಕೃತಿಕ ಜಾಗೃತಿಗೆ ಸಿದ್ಧ

MAHE: 2ನೇ ರಾಷ್ಟ್ರೀಯ ಸಿಜಿಎಂಪಿ ದಿನಾಚರಣೆ; ಔಷಧ ಗುಣಮಟ್ಟ ಚರ್ಚೆ

MAHE: 2ನೇ ರಾಷ್ಟ್ರೀಯ ಸಿಜಿಎಂಪಿ ದಿನಾಚರಣೆ; ಔಷಧ ಗುಣಮಟ್ಟ ಚರ್ಚೆ

Mangaluru: ಮಂಗಳಾದೇವಿ ಮಹಾ ರಥೋತ್ಸವ

Mangaluru: ಮಂಗಳಾದೇವಿ ಮಹಾ ರಥೋತ್ಸವ

Road Mishap ಹೊಸಮಠ; ಕಾರುಗಳ ನಡುವೆ ಅಪಘಾತ: ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

Road Mishap ಹೊಸಮಠ; ಕಾರುಗಳ ನಡುವೆ ಅಪಘಾತ: ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯ

Manjeshwar: ದೇಶ ಸೇವೆಗೆ ಸಮಯ ಮೀಸಲಿಡಿ: ಡಾ| ಪ್ರಭಾಕರ ಭಟ್‌ ಕಲ್ಲಡ್ಕ

Manjeshwar: ದೇಶ ಸೇವೆಗೆ ಸಮಯ ಮೀಸಲಿಡಿ: ಡಾ| ಪ್ರಭಾಕರ ಭಟ್‌ ಕಲ್ಲಡ್ಕ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-M-J

IPL; ಮುಂಬೈಗೆ ಮತ್ತೆ ಜಯವರ್ಧನ ಕೋಚ್‌

TT

Asian Table Tennis: ಭಾರತಕ್ಕೆ ಮೂರು ಕಂಚು

1-aee-ddd

Ranji Trophy; ಮುಂಬಯಿ ಗೆಲುವಿಗೆ 262 ರನ್‌ ಗುರಿ

1-aee

Ranji Trophy;ಮಧ್ಯಪ್ರದೇಶ ಬೃಹತ್‌ ಮೊತ್ತ:ನಾಯಕ ಶುಭಂ ಶರ್ಮ 143, ಹರ್‌ಪ್ರೀತ್‌ 91 ರನ್‌

1-tennis-bg

Shanghai Masters Tennis; ಜೊಕೋವಿಕ್‌ಗೆ ಸೋಲು : ಜಾನ್ನಿಕ್‌ ಸಿನ್ನರ್‌ಗೆ ಪ್ರಶಸ್ತಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Udupi: ಗೀತಾರ್ಥ ಚಿಂತನೆ-63: ಕುಲದ ಕೀರ್ತಿಗಾಗಿ ಹೋರಾಡಿದ ಪಾಂಡವರು

Udupi: ಗೀತಾರ್ಥ ಚಿಂತನೆ-63: ಕುಲದ ಕೀರ್ತಿಗಾಗಿ ಹೋರಾಡಿದ ಪಾಂಡವರು

gold

ಪುರಿ ರತ್ನ ಭಂಡಾರದ ಸಮೀಕ್ಷಾ ವರದಿ ಶೀಘ್ರ ಲಭ್ಯ: ಸಚಿವ

police crime

Durga ಪೆಂಡಾಲ್‌ ಮೇಲೆ ಗುಂಡಿನ ದಾಳಿ: ನಾಲ್ವರಿಗೆ ಗಾಯ

train-track

Train; ಮತ್ತೊಂದು ಅವಘಡ: ಗೀತಾ ಜಯಂತಿ ಎಕ್ಸ್‌ಪ್ರೆಸ್‌ನಲ್ಲಿ ಬೆಂಕಿ

Pak 2

Pakistan; ದೌರ್ಜನ್ಯ ನಿಲ್ಲಿಸದಿದ್ದರೆ ಪಾಕಿಸ್ಥಾನಕ್ಕೆ ಮುತ್ತಿಗೆ: ಪಶ್ತೂನ್‌ ತಾಕೀತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.