Women’s T20 World Cup: ಭಾರತಕ್ಕಿಂದು ಆಸೀಸ್‌ವಿರುದ್ಧ ನಿರ್ಣಾಯಕ ಪಂದ್ಯ


Team Udayavani, Oct 13, 2024, 7:30 AM IST

15

ಶಾರ್ಜಾ: ಪ್ರಸ್ತುತ ನಡೆಯುತ್ತಿರುವ ಮಹಿಳಾ ಟಿ20 ವಿಶ್ವಕಪ್‌ನಲ್ಲಿ ಭಾರತ ನಿರ್ಣಾಯಕ ಪಂದ್ಯವೊಂದಕ್ಕೆ ಸಜ್ಜಾಗಿದೆ.

ಭಾನುವಾರ ಭಾರತ ತಂಡ ಎ ವಿಭಾಗದ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಬಲಿಷ್ಠ ಆಸ್ಟ್ರೇಲಿಯಾವನ್ನು ಎದುರಿಸಲಿದೆ. 2ನೇ ಸ್ಥಾನದಲ್ಲಿರುವ ಭಾರತ ಈ ಪಂದ್ಯವನ್ನು ಉತ್ತಮ ರನ್‌ರೇಟ್‌ನಿಂದ ಗೆದ್ದರೆ ಮಾತ್ರ ಸೆಮಿಫೈನಲ್‌ ಸ್ಥಾನಕ್ಕೆ ಸನಿಹವಾಗಲಿದೆ. ಇನ್ನೊಂದು ಕಡೆ ಅ.14ರಂದು ನ್ಯೂಜಿಲೆಂಡ್‌-ಪಾಕಿಸ್ತಾನ ಪಂದ್ಯವಿದೆ. ಇಲ್ಲಿ ನ್ಯೂಜಿಲೆಂಡ್‌ ಏನು ಮಾಡುತ್ತದೆ ಅನ್ನುವುದೂ ಭಾರತದ ಸ್ಥಿತಿಯನ್ನು ನಿರ್ಧರಿಸಲಿದೆ.

ನ್ಯೂಜಿಲೆಂಡ್‌ ವಿರುದ್ಧ ಮೊದಲ ಪಂದ್ಯವನ್ನು ಸೋತ ನಂತರ ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಭಾರತ ಭರ್ಜರಿಯಾಗಿ ಸೋಲಿಸಿದೆ. ಇದರಿಂದ ರನ್‌ ದರ ಏರಿಕೆಯಾಗಿದೆ. ಭಾನುವಾರ ಆಸ್ಟ್ರೇಲಿಯಾವನ್ನು ಸೋಲಿಸಬೇಕಾದ ಅನಿವಾರ್ಯತೆಯೊಂದು ತಂಡದ ಎದುರಿದೆ.

ತಂಡಕ್ಕೆ ಅಗತ್ಯವಿರುವ ಸಂದರ್ಭದಲ್ಲೇ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಲಯಕ್ಕೆ ಬಂದಿದ್ದಾರೆ. ಹಿಂದಿನ ಪಂದ್ಯದಲ್ಲಿ ಅವರು ಸ್ಫೋಟಕ ಅರ್ಧಶತಕ ಬಾರಿಸಿದ್ದಾರೆ. ಬ್ಯಾಟಿಂಗ್‌ ಬೆನ್ನೆಲುಬುಗಳಾದ ಶಫಾಲಿ ವರ್ಮಾ, ಸ್ಮತಿ ಮಂಧನಾ ಕೂಡ ಲಯದಲ್ಲಿದ್ದಾರೆ. ಜೆಮಿಮಾ ರೋಡ್ರಿಗಸ್‌ ಯಾವಾಗಲೂ ಭರವಸೆಯ ಆಟಗಾರ್ತಿ.

ತಂಡದ ಬೌಲಿಂಗ್‌ ಕೂಡ ಪ್ರಬಲವಾಗಿದೆ. ವೇಗಿಗಳಾದ ರೇಣುಕಾ ಸಿಂಗ್‌, ಅರುಂಧತಿ ರೆಡ್ಡಿ ಮಿಂಚುತ್ತಿದ್ದಾರೆ. ಸ್ಪಿನ್ನರ್‌ಗಳಾದ ಶ್ರೇಯಾಂಕಾ ಪಾಟೀಲ್‌, ದೀಪ್ತಿ ಶರ್ಮಾ, ಆಶಾ ಶೋಭನಾ ಕೂಡ ತಮ್ಮ ದಾಳಿಯ ಮೂಲಕ ಎದುರಾಳಿಗೆ ಆತಂಕ ಮೂಡಿಸಿದ್ದಾರೆ. ಭಾನುವಾರ ತಂಡದ ಎಲ್ಲರೂ ಸಂಘಟಿತವಾಗಿ ಯಶಸ್ಸು ಸಾಧಿಸಿದರೆ, ಗೆಲುವು ಖಚಿತ.

ಆಸೀಸ್‌ಗೆ ಗಾಯಾಳುಗಳದ್ದೇ ಚಿಂತೆ: ಆಸ್ಟ್ರೇಲಿಯಾ ಸತತ ಮೂರೂ ಪಂದ್ಯ ಗೆದ್ದು ಅಮೋಘ ಪ್ರದರ್ಶನ ನೀಡಿದೆ. ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ತಂಡ ಉತ್ತಮವಾಗಿದೆ. ರನ್‌ರೇಟ್‌ ಅಂತೂ 2ನ್ನು ದಾಟಿರುವುದರಿಂದ ಎ ಗುಂಪಿನಿಂದ ಬಹುತೇಕ ಅಗ್ರಸ್ಥಾನಿಯಾಗೇ ಸೆಮಿಫೈನಲ್‌ಗೇರುವುದು ಖಚಿತ. ಭಾನುವಾರ ಅದು ಸೋತರೂ ಅದರ ಉಪಾಂತ್ಯಕ್ಕೇನು ಧಕ್ಕೆಯಿಲ್ಲ. ಆದರೆ ತಂಡಕ್ಕೆ ಗಾಯಾಳುಗಳ ಸಮಸ್ಯೆ ಕಾಡಿದೆ. ನಾಯಕಿ ಅಲಿಸ್ಸಾ ಹೀಲಿ ಬಲಪಾದಕ್ಕೆ ಬಲವಾದ ಏಟು ಮಾಡಿಕೊಂಡಿದ್ದಾರೆ. ವೇಗಿ ಟಯಾÉ  ವ್ಲಾಮಿಂಕ್‌ ಭುಜದ ಮೂಳೆಗೆ ಏಟು ಬಿದ್ದಿದೆ. ಇಬ್ಬರೂ ಭಾನುವಾರ ಆಡುವುದು ಅನುಮಾನ. ಗಾಯ ತೀವ್ರವಾದರೆ ಕೂಟದಿಂದಲೇ ಹೊರಬೀಳಬಹುದು.

ಸಂಭಾವ್ಯ ತಂಡ:

ಅಂಕಣ ಗುಟ್ಟು:

ಶಾರ್ಜಾ ಅಂಕಣ ಹಿಂದಿನಿಂದಲೂ ಮೊದಲು ಬ್ಯಾಟಿಂಗ್‌ ಮಾಡುವ ತಂಡಕ್ಕೆ ಗರಿಷ್ಠ ನೆರವು ನೀಡಿದೆ. ಟಾಸ್‌ ಗೆದ್ದ ತಂಡ ಮೊದಲು ಬ್ಯಾಟಿಂಗ್‌ ಆಯ್ದುಕೊಳ್ಳುವುದೇ ಜಾಸ್ತಿ. ವೇಗಿಗಳಿಗೆ ನೆರವು ಕಡಿಮೆ. ಪಂದ್ಯ ಮುಂದುವರಿದಂತೆಲ್ಲ ನಿಧಾನಗತಿಯ ಎಸೆತಗಳಿಗೆ ನೆರವು ಜಾಸ್ತಿ. ಸ್ಪಿನ್ನರ್‌ಗಳು ಹೆಚ್ಚು ಹಿಡಿತ ಸಾಧಿಸಲಿದ್ದಾರೆ. ಅಂಕಣ ಸಣ್ಣದಾಗಿರುವುದರಿಂದ ಬ್ಯಾಟರ್‌ಗಳಿಗೆ ಜಾಸ್ತಿ ಅನುಕೂಲ.

ಸೆಮಿಫೈನಲ್‌ ಲೆಕ್ಕಾಚಾರ: ಇಂದು ಭಾರತ ಗೆಲ್ಲಬೇಕು, ನಾಳೆ ಕಿವೀಸ್‌ ಸೋಲಬೇಕು:

ಪ್ರಸ್ತುತ ಭಾರತ 3 ಪಂದ್ಯಗಳಲ್ಲಿ 2 ಗೆಲುವು, 1 ಸೋಲಿನೊಂದಿಗೆ 0.576 ರನ್‌ರೇಟ್‌ ಹೊಂದಿದೆ. ಭಾರತದ ಸೆಮಿಫೈನಲ್‌ ಲೆಕ್ಕಾಚಾರದಲ್ಲಿ ದೊಡ್ಡ ಸವಾಲಾಗಿರುವುದು ನ್ಯೂಜಿಲೆಂಡ್‌. ಶನಿವಾರ ಶ್ರೀಲಂಕಾವನ್ನು ಭರ್ಜರಿಯಾಗಿ ಸೋಲಿಸಿರುವ ನ್ಯೂಜಿಲೆಂಡ್‌ 3 ಪಂದ್ಯಗಳಲ್ಲಿ 2 ಜಯ, 1 ಸೋಲಿನೊಂದಿಗೆ 0.282 ರನ್‌ರೇಟ್‌ ಸಾಧಿಸಿ 3ನೇ ಸ್ಥಾನದಲ್ಲಿದೆ. ಎರಡೂ ತಂಡಗಳ ಅಂಕ ಸಮನಾಗಿದೆ. ಭಾರತ ಭಾನುವಾರ ಆಸೀಸ್‌ ವಿರುದ್ಧ ಗೆದ್ದು, ರನ್‌ರೇಟನ್ನು ಇನ್ನಷ್ಟು ಏರಿಸಿಕೊಂಡರೆ, ನ್ಯೂಜಿಲೆಂಡ್‌ಗೆ ಸಂಕಷ್ಟ ಖಾತ್ರಿ.  ಆಗ ಕಿವೀಸ್‌ ಸೋಮವಾರ ಪಾಕಿಸ್ತಾನದ ವಿರುದ್ಧ ಬರೀ ಗೆಲ್ಲುವುದು ಮಾತ್ರವಲ್ಲ, ರನ್‌ ದರದಲ್ಲಿ ಭಾರತವನ್ನು ಮೀರಿಸಬೇಕಾಗುತ್ತದೆ. ಭಾನುವಾರ ಭಾರತ ಗೆದ್ದು, ಸೋಮವಾರ ಕಿವೀಸ್‌ ಸೋತರೆ ಭಾರತ ಉಪಾಂತ್ಯಕ್ಕೇರಲಿದೆ. ಇದರೊಂದಿಗೆ ಇನ್ನೂ ಒಂದು ಸಾಧ್ಯತೆಯಿದೆ. ಭಾನುವಾರ ಭಾರತ ಸೋತು, ಸೋಮವಾರ ಕಿವೀಸ್‌ ಕೂಡ ಸೋತರೆ ಆಗಲೂ ಅಂಕ ಸಮವಾಗುವುದರಿಂದ, ರನ್‌ರೇಟ್‌ ಜಾಸ್ತಿಯಿರುವ ತಂಡ ಉಪಾಂತ್ಯಕ್ಕೇರಲಿದೆ. ಪ್ರಸ್ತುತ ರನ್‌ರೇಟ್‌ ನಿರ್ಣಾಯಕ ಪಾತ್ರ ವಹಿಸಲಿದೆ.

ಭಾರತ: ಶಫಾಲಿ, ಸ್ಮತಿ, ಹರ್ಮನ್‌ (ನಾಯಕಿ), ಜೆಮಿಮಾ, ರಿಚಾ, ದೀಪ್ತಿ, ಸಜನಾ, ಅರುಂಧತಿ, ಶ್ರೇಯಾಂಕಾ, ಆಶಾ, ರೇಣುಕಾ.

ಆಸ್ಟ್ರೇಲಿಯಾ: ಮೂನಿ, ಹೀಲಿ, ಪೆರ್ರಿ, ಗಾಡ್ನರ್‌, ಲಿಚ್‌ಫೀಲ್ಡ್‌, ಟಹ್ಲಿಯಾ, ವೇರ್‌ಹ್ಯಾಮ್‌, ಸದರ್ಲೆಂಡ್‌, ಮೊಲಿನೆಕ್ಸ್‌, ಶಟ್‌, ವ್ಲಾಮಿಂಕ್‌

ಮುಖಾಮುಖಿ: 

ಒಟ್ಟು ಪಂದ್ಯ           34

ಆಸ್ಟ್ರೇಲಿಯಾ ಜಯ           25

ಭಾರತ ಜಯ            7

ಫ‌ಲಿತಾಂಶವಿಲ್ಲ       1

ಟೈ       1

ಆರಂಭ: ರಾ.7.30

ನೇರಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್ (ಟೀವಿ), ಹಾಟ್‌ಸ್ಟಾರ್‌ (ಆ್ಯಪ್‌)

ಟಾಪ್ ನ್ಯೂಸ್

Martin movie review

Martin Movie Review: ಆ್ಯಕ್ಷನ್‌ ಅಬ್ಬರದಲ್ಲಿ ಮಾರ್ಟಿನ್‌ ಮಿಂಚು

Baba Siddique Case:‌ ಲಾರೆನ್ಸ್‌ ಬಿಷ್ಣೋಯ್ ಕೈವಾಡ ಶಂಕೆ; ಇಬ್ಬರು ಶೂಟರ್‌ ಗಳ ಬಂಧನ

Baba Siddique Case:‌ ಲಾರೆನ್ಸ್‌ ಬಿಷ್ಣೋಯ್ ಕೈವಾಡ ಶಂಕೆ; ಇಬ್ಬರು ಶೂಟರ್‌ ಗಳ ಬಂಧನ

Fake-docu

Udupi: ನಕಲಿ ದಾಖಲೆಗಳ ಪೂರೈಕೆಯ ಫ್ಯಾಕ್ಟರಿ ಕರಾವಳಿಯಲ್ಲಿ?

DK-police

Bangla Illegal immigrants: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪೊಲೀಸರ ಕಟ್ಟೆಚ್ಚರ

15

Women’s T20 World Cup: ಭಾರತಕ್ಕಿಂದು ಆಸೀಸ್‌ವಿರುದ್ಧ ನಿರ್ಣಾಯಕ ಪಂದ್ಯ

Rain-Agri

Udupi: ಉಭಯ ಜಿಲ್ಲೆಯಲ್ಲಿ ದಿಢೀರ್‌ ಮಳೆ: ರೈತರಲ್ಲಿ ಹೆಚ್ಚಿದ ಆತಂಕ

Kudroli-sanjay-dutt

Mangaluru: ದಸರಾ ಸಂಭ್ರಮ: ಇಂದು ವೈಭವದ ಬೃಹತ್‌ ಶೋಭಾಯಾತ್ರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1–wwewqewq

Bodybuilding competition; ದಿನೇಶ್‌ ಆಚಾರ್ಯ ಮಿಸ್ಟರ್‌ ಉಚ್ಚಿಲ ದಸರಾ

1-ewss

T20 series; ಕ್ಲೀನ್‌ಸ್ವೀಪ್‌ ಸಾಧನೆ: ಬಾಂಗ್ಲಾ ಎದುರು ಭಾರತಕ್ಕೆ ಬೃಹತ್‌ ಗೆಲುವು

Mohammed Siraj: ತೆಲಂಗಾಣ ಡಿಎಸ್‌ಪಿಯಾಗಿ ವೇಗಿ ಮೊಹಮ್ಮದ್‌ ಸಿರಾಜ್‌ ಆಯ್ಕೆ

Mohammed Siraj: ತೆಲಂಗಾಣ ಡಿಎಸ್‌ಪಿಯಾಗಿ ವೇಗಿ ಮೊಹಮ್ಮದ್‌ ಸಿರಾಜ್‌ ಆಯ್ಕೆ

17

Women’s T20 World Cup: ಶ್ರೀಲಂಕಾ ವಿರುದ್ಧ ಕಿವೀಸ್‌ಗೆ 8 ವಿಕೆಟ್‌ ಜಯಭೇರಿ

Women’s T20 World Cup: ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾಕ್ಕೆ 9 ವಿಕೆಟ್‌ ಸುಲಭ ಜಯ

Women’s T20 World Cup: ಪಾಕಿಸ್ತಾನ ವಿರುದ್ಧ ಆಸ್ಟ್ರೇಲಿಯಾಕ್ಕೆ 9 ವಿಕೆಟ್‌ ಸುಲಭ ಜಯ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Martin movie review

Martin Movie Review: ಆ್ಯಕ್ಷನ್‌ ಅಬ್ಬರದಲ್ಲಿ ಮಾರ್ಟಿನ್‌ ಮಿಂಚು

Baba Siddique Case:‌ ಲಾರೆನ್ಸ್‌ ಬಿಷ್ಣೋಯ್ ಕೈವಾಡ ಶಂಕೆ; ಇಬ್ಬರು ಶೂಟರ್‌ ಗಳ ಬಂಧನ

Baba Siddique Case:‌ ಲಾರೆನ್ಸ್‌ ಬಿಷ್ಣೋಯ್ ಕೈವಾಡ ಶಂಕೆ; ಇಬ್ಬರು ಶೂಟರ್‌ ಗಳ ಬಂಧನ

Fake-docu

Udupi: ನಕಲಿ ದಾಖಲೆಗಳ ಪೂರೈಕೆಯ ಫ್ಯಾಕ್ಟರಿ ಕರಾವಳಿಯಲ್ಲಿ?

DK-police

Bangla Illegal immigrants: ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಪೊಲೀಸರ ಕಟ್ಟೆಚ್ಚರ

15

Women’s T20 World Cup: ಭಾರತಕ್ಕಿಂದು ಆಸೀಸ್‌ವಿರುದ್ಧ ನಿರ್ಣಾಯಕ ಪಂದ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.