Women’s T20 World Cup: ಇಂದಿನಿಂದ ಅರಬ್ ನಾಡಲ್ಲಿ ವನಿತಾ ಟಿ20 ವಿಶ್ವಕಪ್ ಹವಾ
Team Udayavani, Oct 3, 2024, 8:10 AM IST
ದುಬೈ: ಭಾರತದ ಪುರುಷರ ತಂಡ ಟಿ20 ವಿಶ್ವಕಪ್ ಗೆದ್ದ ಸಂಭ್ರಮ ಹಸಿರಾಗಿರುವಾಗಲೇ ಮಹಿಳೆಯರ ಟಿ20 ವಿಶ್ವಕಪ್ ಪಂದ್ಯಾವಳಿಗೆ ಕ್ಷಣಗಣನೆ ಆರಂಭಗೊಂಡಿದೆ.
ಗುರುವಾರದಿಂದ ದುಬೈ ಮತ್ತು ಶಾರ್ಜಾದಲ್ಲಿ 10 ತಂಡಗಳ ನಡುವಿನ 9ನೇ ಟಿ20 ವಿಶ್ವಕಪ್ ಅಬ್ಬರ ಮೊದಲ್ಗೊಳ್ಳಲಿದ್ದು, ಅ.20ರ ತನಕ ಸಾಗಲಿದೆ. ಸಹಜವಾಗಿಯೇ ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ತಂಡದ ಮೇಲೆ ನಿರೀಕ್ಷೆಗಳು ದಟ್ಟೈಸಿವೆ. ನಮ್ಮ ಮಹಿಳೆಯರು ಮೊದಲ ಸಲ ಕಪ್ಗೆ ಮುತ್ತಿಕ್ಕಲಿ ಎಂಬುದು ಎಲ್ಲರ ಬಯಕೆ ಹಾಗೂ ಹಾರೈಕೆ.
ಗುರುವಾರದ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ-ಸ್ಲಾಟ್ಲೆಂಡ್ ಮುಖಾಮುಖೀ ಆಗಲಿವೆ. ದಿನದ ಇನ್ನೊಂದು ಪಂದ್ಯ ಪಾಕಿಸ್ತಾನ-ಶ್ರೀಲಂಕಾ ನಡುವೆ ನಡೆಯಲಿದೆ. ಎರಡೂ ಪಂದ್ಯಗಳ ತಾಣ ಶಾರ್ಜಾ. ಭಾರತ ತನ್ನ ಮೊದಲ ಪಂದ್ಯವನ್ನು ಶುಕ್ರವಾರ ರಾತ್ರಿ ನ್ಯೂಜಿಲೆಂಡ್ ವಿರುದ್ಧ ದುಬೈನಲ್ಲಿ ಆಡಲಿದೆ.
ಆಸ್ಟ್ರೇಲಿಯಾ ಮೆಚ್ಚಿನ ತಂಡ, ಭಾರತ ಬಲಿಷ್ಠ: 6 ಬಾರಿ ಮಹಿಳಾ ಟಿ20 ವಿಶ್ವಕಪ್ ಗೆದ್ದಿರುವ ಆಸ್ಟ್ರೇಲಿಯಾ ತಂಡ ಪ್ರಶಸ್ತಿ ಗೆಲ್ಲುವ ಮೆಚ್ಚಿನ ತಂಡ. ಒಮ್ಮೆ ಮಾತ್ರ ಫೈನಲ್ಗೆ ಪ್ರವೇಶಿಸಿ, ಒಮ್ಮೆಯೂ ಕಪ್ ಗೆಲ್ಲದ ಭಾರತ ಈ ಬಾರಿ ಮೆಚ್ಚಿನ ತಂಡಗಳಲ್ಲೊಂದು. ಕಾರಣ ಹರ್ಮನ್ಪ್ರೀತ್ ಕೌರ್, ಸ್ಮತಿ ಮಂಧನಾ, ಜೆಮಿಮಾ ರೋಡ್ರಿಗ್ಸ್ ಇರುವ ತಂಡದ ಬಲಿಷ್ಠ ಬ್ಯಾಟಿಂಗ್. ಹಾಗೆಯೇ ಶ್ರೇಯಾಂಕಾ ಪಾಟೀಲ್, ದೀಪ್ತಿ ಶರ್ಮಾ ಅವರಿರುವ ಅತ್ಯುತ್ತಮ ಬೌಲಿಂಗ್ ವಿಭಾಗ. ಭಾರತಕ್ಕೆ ಪ್ರಬಲ ಎದುರಾಳಿಯಾಗಿರುವುದು ಕಳೆದ 3 ಆವೃತ್ತಿಗಳಲ್ಲೂ ಸತತವಾಗಿ ಪ್ರಶಸ್ತಿ ಗೆದ್ದಿರುವ ಆಸ್ಟ್ರೇಲಿಯಾ ತಂಡ. ಇದಕ್ಕೂ ಮುನ್ನ 2010-2014ರ ಅವಧಿಯಲ್ಲೂ ಅದು ಪ್ರಶಸ್ತಿಗಳ ಹ್ಯಾಟ್ರಿಕ್ ಸಾಧಿಸಿತ್ತು.
20 ಕೋಟಿ ರೂ. ನಗದು: ಪುರುಷರಿಗೆ ಸರಿಸಮ ನಗದು!
ಈ ಬಾರಿ ಪುರುಷರ ವಿಶ್ವಕಪ್ ತಂಡದಷ್ಟೇ ಬಹುಮಾನ ಮೊತ್ತವನ್ನು ವನಿತಾ ವಿಶ್ವಕಪ್ ವಿಜೇತರಿಗೂ ನೀಡುವುದು ಐಸಿಸಿಯ ಸಮಾನತೆಯ ದ್ಯೋತಕವಾಗಿದೆ. ಅದರಂತೆ ಈ ಬಾರಿಯ ವಿಜೇತ ತಂಡ 2.34 ಮಿಲಿಯನ್ ಡಾಲರ್, ಅಂದರೆ 19.6 ಕೋಟಿ ರೂ. ಮೊತ್ತ ಪಡೆಯಲಿದೆ. ರನ್ನರ್ ಅಪ್ ತಂಡ 1.17 ಮಿ.ಡಾಲರ್ ಅಂದರೆ 9.8 ಕೋಟಿ ರೂ. ಪಡೆಯಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Womens T20 World Cup: ಪುರುಷರು ಆಯ್ತು ಈಗ ವನಿತಾ ಕ್ರಿಕೆಟ್ ಸಮರ
Test Bowling Rankings: ಟೆಸ್ಟ್ ಬೌಲಿಂಗ್ ರ್ಯಾಂಕಿಂಗ್… ಬುಮ್ರಾ ಮರಳಿ ನಂಬರ್ 1
U-19 Test: ಆಸೀಸ್ ವಿರುದ್ಧ ಭಾರತಕ್ಕೆ 2 ವಿಕೆಟ್ ಜಯ
Trap Shooting: ಶಾಟ್ ಗನ್ ಟ್ರ್ಯಾಪ್ ಶೂಟಿಂಗ್… ಸ್ಯಾಮುಯೆಲ್ ಸಿಮ್ಸನ್ಗೆ ಚಿನ್ನ
ದ.ಕ. ಚೆಸ್ ಅಸೋಸಿಯೇಶನ್ ಮಂಗಳೂರು ರಾಷ್ಟ್ರೀಯ ಓಪನ್ ರಾಪಿಡ್ ಚೆಸ್ ಆರಂಭ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Vijayapura: ಗಣೇಶ ಮೂರ್ತಿಯ ಮಂಟಪದ ಗಾಜಿಗೆ ಕಿಡಿಗೇಡಿಗಳಿಂದ ಕಲ್ಲು ತೂರಿ ಹಾನಿ
Tragedy: ರೋಗಿಗಳಂತೆ ಆಸ್ಪತ್ರೆಗೆ ಬಂದು ವೈದ್ಯನನ್ನೇ ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು…
Contract Carriage: ಬೈಕ್ಗಳಿಗೂ ವಾಣಿಜ್ಯ ಸ್ಥಾನಮಾನಕ್ಕೆ ಕೇಂದ್ರ ಸಿದ್ಧತೆ
Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್ ಈಗ ಸ್ಫೋಟ!
World War 3…?: ಇಸ್ರೇಲ್ ಮೇಲೆ ಇರಾನ್ ದಾಳಿ 3ನೇ ಮಹಾಯುದ್ಧಕ್ಕೆ ಮುನ್ನುಡಿ: ಚರ್ಚೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.