![belagavi](https://www.udayavani.com/wp-content/uploads/2024/07/belagavi-415x249.jpg)
World Badminton ಚಾಂಪಿಯನ್ಶಿಪ್: ಎಚ್.ಎಸ್. ಪ್ರಣಯ್ಗೆ ಕಂಚಿನ ಪದಕ
Team Udayavani, Aug 26, 2023, 11:59 PM IST
![1-asdsad](https://www.udayavani.com/wp-content/uploads/2023/08/1-asdsad-3-620x420.jpg)
ಕೋಪನ್ಹೆಗನ್ (ಡೆನ್ಮಾರ್ಕ್): ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ನಲ್ಲಿ ಭಾರತದ ಎಚ್.ಎಸ್. ಪ್ರಣಯ್ ಕಂಚಿನ ಪದಕ ಜಯಿಸಿ ದ್ದಾರೆ. ಶನಿವಾರದ ಸೆಮಿಫೈನಲ್ನಲ್ಲಿ ಥಾಯ್ಲೆಂಡ್ನ ಕುನ್ಲವುತ್ ವಿಟಿಡ್ಸರ್ನ್ ವಿರುದ್ಧ ಪರಾಭವಗೊಂಡ ಅವರು ದೊಡ್ಡ ಪದಕದಿಂದ ವಂಚಿತರಾಗ ಬೇಕಾಯಿತು. ವಿಟಿಡ್ಸರ್ನ್ 18-21, 21-13, 21-14ರಿಂದ ಗೆದ್ದರು.
ಭಾರತಕ್ಕೆ 14ನೇ ಪದಕ
ಇದು ವಿಶ್ವ ಬ್ಯಾಡ್ಮಿಂಟನ್ ಸ್ಪರ್ಧೆ ಯಲ್ಲಿ ಪ್ರಣಯ್ಗೆ ಒಲಿದ ಮೊದಲ ಹಾಗೂ ಭಾರತ ಗೆದ್ದ 14ನೇ ಪದಕ.
ಪ್ರಸಕ್ತ ಸೀಸನ್ನಲ್ಲಿ ಪ್ರಚಂಡ ಫಾರ್ಮ್ ನಲ್ಲಿರುವ ಎಚ್.ಎಸ್. ಪ್ರಣಯ್ ಕಳೆದ ರಾತ್ರಿಯ ಕ್ವಾರ್ಟರ್ ಫೈನಲ್ನಲ್ಲಿ ಎರಡು ಬಾರಿಯ ಹಾಲಿ ಚಾಂಪಿಯನ್, ಆತಿಥೇಯ ಡೆನ್ಮಾರ್ಕ್ನ ವಿಕ್ಟರ್ ಅಕ್ಸೆಲ್ಸೆನ್ ಅವರನ್ನು ಮಣಿಸಿ ಪದಕವನ್ನು ಖಚಿತಗೊಳಿಸಿದ್ದರು. ತವರಿನ ಅಭಿಮಾನಿಗಳ ಅಪಾರ ಬೆಂಬಲದ ಹೊರತಾಗಿಯೂ ಅಕ್ಸೆಲ್ಸೆನ್ಗೆ ಮೇಲುಗೈ ಸಾಧಿಸಲಾಗಲಿಲ್ಲ. ಪ್ರಣಯ್ ಈ ಪಂದ್ಯ ವನ್ನು 68 ನಿಮಿಷಗಳ ಹೋರಾಟದ ಬಳಿಕ 13-21, 21-15, 21-16 ಅಂತರದಿಂದ ಗೆದ್ದರು.
ಕೇರಳದ 31 ವರ್ಷದ ಶಟ್ಲರ್ ಎಚ್.ಎಸ್. ಪ್ರಣಯ್ ಪ್ರಸಕ್ತ ಋತುವಿನಲ್ಲಿ ಮಲೇಷ್ಯಾ ಮಾಸ್ಟರ್ ಸೂಪರ್-500 ಚಾಂಪಿಯನ್ ಆಗಿ ಮೂಡಿಬಂದಿದ್ದರು. ಆಸ್ಟ್ರೇಲಿಯನ್ ಓಪನ್-500 ಫೈನಲ್ ಕೂಡ ಪ್ರವೇಶಿಸಿದ್ದರು. ಈಗ ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಶಿಪ್ ಸಾಧನೆ.
ಭಾರತದ ಈವರೆಗಿನ 13 ಪದಕ ಗಳಲ್ಲಿ ಅತೀ ಹೆಚ್ಚು 5 ಪದಕ ಗೆದ್ದ ಸಾಧನೆ ಪಿ.ವಿ. ಸಿಂಧು ಅವರದು. ಇದರಲ್ಲಿ ಒಂದು ಚಿನ್ನದ ಪದಕವೂ ಸೇರಿದೆ. ಜತೆಗೆ 2 ಬೆಳ್ಳಿ, 2 ಕಂಚು ಕೂಡ ಒಲಿದಿದೆ. ಸೈನಾ ನೆಹ್ವಾಲ್ ಎರಡು ಪದಕ (ಬೆಳ್ಳಿ, ಕಂಚು), ಕೆ. ಶ್ರೀಕಾಂತ್ (ಬೆಳ್ಳಿ), ಲಕ್ಷ್ಯ ಸೇನ್ (ಕಂಚು), ಬಿ. ಸಾಯಿ ಪ್ರಣೀತ್ (ಕಂಚು) ಮತ್ತು ಪ್ರಕಾಶ್ ಪಡುಕೋಣೆ (ಕಂಚು) ತಲಾ ಒಂದು ಪದಕ ಜಯಿಸಿದ್ದಾರೆ. ಡಬಲ್ಸ್ನಲ್ಲಿ ಜ್ವಾಲಾ ಗುಟ್ಟಾ-ಅಶ್ವಿನಿ ಪೊನ್ನಪ್ಪ ಮತ್ತು ಚಿರಾಗ್ ಶೆಟ್ಟಿ-ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಜೋಡಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಟಾಪ್ ನ್ಯೂಸ್
![belagavi](https://www.udayavani.com/wp-content/uploads/2024/07/belagavi-415x249.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Potchefstroom ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಬೋಳ ಅಕ್ಷತಾ ಪೂಜಾರಿ](https://www.udayavani.com/wp-content/uploads/2024/07/akshata-150x83.jpg)
Potchefstroom ಪವರ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಚಿನ್ನ ಗೆದ್ದ ಬೋಳ ಅಕ್ಷತಾ ಪೂಜಾರಿ
![john-cena](https://www.udayavani.com/wp-content/uploads/2024/07/john-cena-150x83.jpg)
John Cena; ರಸ್ಲಿಂಗ್ ವೃತ್ತಿಜೀವನಕ್ಕೆ ವಿದಾಯ ಘೋಷಿಸಿದ WWE ಸೂಪರ್ ಸ್ಟಾರ್ ಜಾನ್ ಸೀನ
![India W vs Sa W: ಗೆಲ್ಲಬೇಕಾದ ಒತ್ತಡದಲ್ಲಿ ಕೌರ್ ಬಳಗ](https://www.udayavani.com/wp-content/uploads/2024/07/18-1-150x90.jpg)
India W vs Sa W: ಗೆಲ್ಲಬೇಕಾದ ಒತ್ತಡದಲ್ಲಿ ಕೌರ್ ಬಳಗ
![Champions Trophy: ಚಾಂಪಿಯನ್ಸ್ ಟ್ರೋಫಿಗಾಗಿ ಪಾಕ್ಗೆ ಭಾರತ ಹೋಗಲ್ಲ; ವರದಿ](https://www.udayavani.com/wp-content/uploads/2024/07/16-2-150x90.jpg)
Champions Trophy: ಚಾಂಪಿಯನ್ಸ್ ಟ್ರೋಫಿಗಾಗಿ ಪಾಕ್ಗೆ ಭಾರತ ಹೋಗಲ್ಲ; ವರದಿ
![Wimbledon: ಜ್ವೆರೇವ್, ಶೆಲ್ಟನ್ ಮುನ್ನಡೆ](https://www.udayavani.com/wp-content/uploads/2024/07/20-150x90.jpg)
Wimbledon: ಜ್ವೆರೇವ್, ಶೆಲ್ಟನ್ ಮುನ್ನಡೆ
MUST WATCH
ಹೊಸ ಸೇರ್ಪಡೆ
![belagavi](https://www.udayavani.com/wp-content/uploads/2024/07/belagavi-150x90.jpg)
Belagavi; ಮಳೆಯ ನಡುವೆಯೂ ವಿವಾದಿತ ಕಳಸಾ ನಾಲಾ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ
![Kalaburagi; ವ್ಯಕ್ತಿತ್ವ ನಿರ್ಮಾಣ ದಾಸ ಸಾಹಿತ್ಯದ ಧ್ಯೇಯ: ಡಾ.ಅಗ್ನಿಹೋತ್ರಿ](https://www.udayavani.com/wp-content/uploads/2024/07/sahitya-150x83.jpg)
Kalaburagi; ವ್ಯಕ್ತಿತ್ವ ನಿರ್ಮಾಣ ದಾಸ ಸಾಹಿತ್ಯದ ಧ್ಯೇಯ: ಡಾ.ಅಗ್ನಿಹೋತ್ರಿ
![6-kalburgi](https://www.udayavani.com/wp-content/uploads/2024/07/6-kalburgi-150x90.jpg)
Kalaburagi: ವೈದ್ಯಕೀಯ ದ್ರವ ಆಮ್ಲಜನಕ ಸೋರಿಕೆ ಬಗ್ಗೆ ಡಿ.ಎಚ್.ಓ ಸ್ಪಷ್ಟನೆ
![5-vitla](https://www.udayavani.com/wp-content/uploads/2024/07/5-vitla-150x90.jpg)
Vitla: ಚಾಲಕನ ನಿಯಂತ್ರಣ ತಪ್ಪಿ ಚರಂಡಿಗೆ ಬಿದ್ದ ಕಾರು
![Hit & run: ದಂಪತಿಗೆ ಢಿಕ್ಕಿ ಹೊಡೆದ ಬಿಎಂಡಬ್ಲ್ಯು ಕಾರು; ಪತ್ನಿ ಸಾವು, ಪತಿಗೆ ಗಾಯ](https://www.udayavani.com/wp-content/uploads/2024/07/3-8-150x90.jpg)
Hit & run: ದಂಪತಿಗೆ ಢಿಕ್ಕಿ ಹೊಡೆದ ಬಿಎಂಡಬ್ಲ್ಯು ಕಾರು; ಪತ್ನಿ ಸಾವು, ಪತಿಗೆ ಗಾಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.