![Rain Heavy](https://www.udayavani.com/wp-content/uploads/2024/07/Rain-Heavy-415x276.jpg)
ವಿಶ್ವ ಕುಸ್ತಿ ಚಾಂಪಿಯನ್ಶಿಪ್: ವಿನೇಶ್ಗೆ ಆಘಾತಕಾರಿ ಸೋಲು
Team Udayavani, Sep 13, 2022, 11:18 PM IST
![ವಿಶ್ವ ಕುಸ್ತಿ ಚಾಂಪಿಯನ್ಶಿಪ್: ವಿನೇಶ್ಗೆ ಆಘಾತಕಾರಿ ಸೋಲು](https://www.udayavani.com/wp-content/uploads/2022/09/World-Wrestling-Championship-620x344.jpg)
ಬೆಲ್ಗ್ರೇಡ್ : ಕಾಮನ್ವೆಲ್ತ್ ಗೇಮ್ಸ್ನಲ್ಲಿ ತ್ರಿವಳಿ ಚಿನ್ನ ಗೆದ್ದಿರುವ ವಿನೇಶ್ ಪೊಗಟ್ ವಿಶ್ವ ಕುಸ್ತಿ ಚಾಂಪಿಯನ್ಶಿಪ್ ನಲ್ಲಿ ಆಘಾತಕಾರಿ ಸೋಲನ್ನು ಕಂಡಿದ್ದಾರೆ. ಮಂಗೋಲಿಯದ ಎದುರಾಳಿ ಖುಲನ್ ಅವರೆದುರು ನಿರೀಕ್ಷಿತ ನಿರ್ವಹಣೆ ನೀಡಲು ವಿಫಲರಾದ ವಿನೇಶ್ 0-7 ಅಂತರದಿಂದ ಸೋತು ಹೊರಬಿದ್ದರು.
ಕಾಮನ್ವೆಲ್ತ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ವಿನೇಶ್ ಇಲ್ಲಿ ನೀರಸವಾಗಿ ಕಂಡರು. 10ನೇ ಶ್ರೇಯಾಂಕದ ಅವರು ಸ್ಪರ್ಧೆಯ ವೇಳೆ ಸಮತೋಲನವನ್ನು ಕಾಯ್ದುಕೊಳ್ಳಲು ವಿಫಲರಾದರು. 53 ಕೆ.ಜಿ. ಫ್ರೀಸ್ಟೈಲ್ ವಿಭಾಗದಲ್ಲಿ ಏಷ್ಯನ್ ಬೆಳ್ಳಿ ವಿಜೇತೆ ಖುಲನ್ ಅವರು ವಿನೇಶ್ ಅವರನ್ನು ಸುಲಭವಾಗಿ ನೆಲಕ್ಕೆ ಬೀಳಿಸುವಲ್ಲಿ ಯಶಸ್ವಿಯಾದರು.
ಆರಂಭದಲ್ಲಿ 3-0 ಮುನ್ನಡೆ ಸಾಧಿಸಿದ್ದ ಖುಲನ್ ಅವರು ಸ್ಪರ್ಧೆಯಲ್ಲಿ ಪ್ರಾಬಲ್ಯ ಸ್ಥಾಪಿಸಿದರಲ್ಲದೇ ಅಂತಿಮ ಹಂತದಲ್ಲಿ ವಿನೇಶ್ ಅವರನ್ನು ಕೆಡಹಿ ನಾಲ್ಕು ಅಂಕ ಪಡೆದು ಸಂಭ್ರಮಿಸಿದರು. ಆಯ್ಕೆ ಟ್ರಯಲ್ಸ್ ವೇಳೆ ವಿನೇಶ್ ಕೈಯಲ್ಲಿ ಸೋತಿದ್ದ ಭಾರತದ ಜೂನಿಯರ್ ಕುಸ್ತಿಪಟು ಆಂಟಿಮ್ ಕಳೆದ ತಿಂಗಳು ನಡೆದಿದ್ದ ಅಂಡರ್ 23 ಏಷ್ಯನ್ ಸ್ಪರ್ಧೆಯಲ್ಲಿ ಖುಲನ್ ಅವರನ್ನು ಸೋಲಿಸಿದ್ದರು.
ಮಾಜಿ ಬೆಳ್ಳಿ ವಿಜೇತೆ ಅಂಶು ಮಲಿಕ್ ಅವರ ಅನುಪಸ್ಥಿತಿಯಲ್ಲಿ ವಿನೇಶ್ ಪದಕ ಗೆಲ್ಲುವ ಫೇವರಿಟ್ ಕುಸ್ತಿಪಟು ಆಗಿದ್ದರು. ಹಾಲಿ ಚಾಂಪಿಯನ್ ಮತ್ತು ಜಪಾನಿಯ ತಾರೆ ಅಕಾರಿ ಫುಜಿನಮಿ ಗಾಯಗೊಂಡು ಸ್ಪರ್ಧೆಯಿಂದ ಹಿಂದೆ ಸರಿದ ಕಾರಣ ವಿನೇಶ್ಗೆ ಉತ್ತಮ ಅವಕಾಶವಿತ್ತು. ಆದರೆ ಅವರು ಆರಂಭದಲ್ಲಿಯೇ ಸೋತು ನಿರ್ಗಮಿಸಿದರು.
ವನಿತೆಯರ 50 ಕೆ.ಜಿ. ವಿಭಾಗದಲ್ಲಿ ಭರಾತದ ನೀಲಂ ಸಿರೋಹಿ ಕೂಡ ಸೋತಿದ್ದಾರೆ. ಅವರು ಎರಡು ಬಾರಿಯ ವಿಶ್ವ ಬೆಳ್ಳಿ ಪದಕ ವಿಜೇತೆ ರುಮಾನಿಯದ ಎಮಿಲಿಯಾ ಅಲಿನಾ ವುಸಿ ಅವರೆದುರು 0-10 ಅಂಕಗಳಿಂದ ಸೋಲನ್ನು ಕಂಡರು. 65 ಕೆ.ಜಿ. ವಿಭಾಗದಲ್ಲಿ ಶಫಾಲಿ ಫ್ರಾನ್ಸಿನ ಕೌಂಬ ಲಾರೋಖೀ ಕೈಯಲ್ಲಿ ಸೋತಿದ್ದಾರೆ.
ಟಾಪ್ ನ್ಯೂಸ್
![Rain Heavy](https://www.udayavani.com/wp-content/uploads/2024/07/Rain-Heavy-415x276.jpg)
![](https://www.udayavani.com/wp-content/uploads/2024/03/IndianClicks_GVega_300x250_03212024_1_3.gif)
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
![Why did he ignore the BCCI instruction to play Ranji? Ishaan replied](https://www.udayavani.com/wp-content/uploads/2024/07/ishan-150x83.jpg)
IshanKishan; ರಣಜಿ ಆಡಬೇಕೆಂಬ ಬಿಸಿಸಿಐ ಸೂಚನೆ ನಿರ್ಲಕ್ಷ್ಯ ಮಾಡಿದ್ದೇಕೆ? ಉತ್ತರಿಸಿದ ಇಶಾನ್
![Team India: How much money is given to whom by BCCI in ₹125 crore?](https://www.udayavani.com/wp-content/uploads/2024/07/bcci-1-150x83.jpg)
Team India: ಅಗರ್ಕರ್ ಗೆ 1 ಕೋಟಿ!; ಬಿಸಿಸಿಐ ನೀಡಿದ ₹125 ಕೋಟಿಯಲ್ಲಿ ಯಾರಿಗೆ ಎಷ್ಟು ಹಣ?
![1-paris](https://www.udayavani.com/wp-content/uploads/2024/07/1-paris-150x99.jpg)
Paris Olympics; ಅಲ್ಡ್ರಿನ್, ಅಂಕಿತಾ ಧ್ಯಾನಿಗೆ ಒಲಿಂಪಿಕ್ಸ್ ಟಿಕೆಟ್
![1-eweweqw](https://www.udayavani.com/wp-content/uploads/2024/07/1-eweweqw-150x100.jpg)
Wrestling; ವಿನೇಶ್ ಫೋಗಾಟ್ ಗೆ ಸ್ವರ್ಣ ಪದಕ
![1-a-chinna](https://www.udayavani.com/wp-content/uploads/2024/07/1-a-chinna-150x87.jpg)
Asian ಪೆಸಿಫಿಕ್ ಬೆಂಚ್ ಪ್ರಸ್ ಚಾಂಪಿಯನ್ಶಿಪ್: ವಿಜಯ ಕಾಂಚನ್ಗೆ 2 ಚಿನ್ನ
MUST WATCH
ಹೊಸ ಸೇರ್ಪಡೆ
![Rain Heavy](https://www.udayavani.com/wp-content/uploads/2024/07/Rain-Heavy-150x100.jpg)
Heavy Rain ಅಬ್ಬರ; ಜು.9 ರಂದು ಉಡುಪಿ ಜಿಲ್ಲಾದ್ಯಂತ ಪಿಯುಸಿವರೆಗೆ ರಜೆ
![1-asaas](https://www.udayavani.com/wp-content/uploads/2024/07/1-asaas-150x100.jpg)
Manipur; ಪರಿಹಾರ ಶಿಬಿರಗಳಿಗೆ ರಾಹುಲ್ ಗಾಂಧಿ ಭೇಟಿ: ಅಚಲ ಬದ್ಧತೆ ಎಂದ ಕಾಂಗ್ರೆಸ್
![Sandeshkhali Case:ಸಿಬಿಐ ತನಿಖೆ ಎತ್ತಿಹಿಡಿದ ಸುಪ್ರೀಂ,ಪಶ್ಚಿಮಬಂಗಾಳ ಸರ್ಕಾರದ ಅರ್ಜಿ ವಜಾ!](https://www.udayavani.com/wp-content/uploads/2024/07/Apex-150x84.jpg)
Sandeshkhali Case:ಸಿಬಿಐ ತನಿಖೆ ಎತ್ತಿಹಿಡಿದ ಸುಪ್ರೀಂ,ಪಶ್ಚಿಮಬಂಗಾಳ ಸರ್ಕಾರದ ಅರ್ಜಿ ವಜಾ!
![Shirva; ವಿಜಯಾ ಬ್ಯಾಂಕ್ ನಿವೃತ್ತ ಚೀಫ್ ಮ್ಯಾನೇಜರ್ ಕೆ. ದಿವಾಕರ ಮಾರ್ಲ ನಿಧನ](https://www.udayavani.com/wp-content/uploads/2024/07/shirva-150x83.jpg)
Shirva; ವಿಜಯಾ ಬ್ಯಾಂಕ್ ನಿವೃತ್ತ ಚೀಫ್ ಮ್ಯಾನೇಜರ್ ಕೆ. ದಿವಾಕರ ಮಾರ್ಲ ನಿಧನ
![SSMB29: ಮಹೇಶ್ – ಪ್ರಭಾಸ್ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್ ನೀಡಲಿದ್ದಾರೆ ಹಿರಿಯ ನಟ](https://www.udayavani.com/wp-content/uploads/2024/07/15-4-150x90.jpg)
SSMB29: ಮಹೇಶ್ – ಪ್ರಭಾಸ್ ಚಿತ್ರದ ಕಲಾವಿದರಿಗೆ ನಟನೆಯ ಟಿಪ್ಸ್ ನೀಡಲಿದ್ದಾರೆ ಹಿರಿಯ ನಟ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.