WPL; ಯುಪಿ ವಾರಿಯರ್ ವಿರುದ್ದ ಆರ್ಸಿಬಿಗೆ 23 ರನ್ನುಗಳ ಜಯ
Team Udayavani, Mar 4, 2024, 11:07 PM IST
ಬೆಂಗಳೂರು: ತವರಿನಂಗಳದಲ್ಲಿ ಕೊನೆಯ ಲೀಗ್ ಪಂದ್ಯವಾಡಿದ ಆರ್ಸಿಬಿ ದೊಡ್ಡ ಮೊತ್ತದ ರೋಚಕ ಹೋರಾಟದಲ್ಲಿ ಯುಪಿ ವಾರಿಯರ್ ವಿರುದ್ಧ 23 ರನ್ನುಗಳ ಜಯ ಸಾಧಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಆರ್ಸಿಬಿ 3 ವಿಕೆಟಿಗೆ 198 ರನ್ ಪೇರಿಸಿದರೆ, ಬೆನ್ನಟ್ಟಿ ಬಂದ ಯುಪಿ 8 ವಿಕೆಟಿಗೆ 175 ರನ್ ಮಾಡಿತು. ಇದು 5 ಪಂದ್ಯಗಳಲ್ಲಿ ಆರ್ಸಿಬಿಗೆ ಒಲಿದ 3ನೇ ಜಯ. ಯುಪಿ ಇಷ್ಟೇ ಪಂದ್ಯಗಳಿಂದ 3ನೇ ಸೋಲನುಭವಿಸಿತು.
ಮಂಧನಾ, ಪೆರ್ರಿ ಫಿಫ್ಟಿ
ನಾಯಕಿ ಸ್ಮತಿ ಮಂಧನಾ ಮತ್ತು ವನ್ಡೌನ್ ಆಟಗಾರ್ತಿ ಎಲ್ಲಿಸ್ ಪೆರ್ರಿ ಅವರ ಬಿರುಸಿನ ಅರ್ಧ ಶತಕಗಳ ನೆರವಿನಿಂದ ಆರ್ಸಿಬಿ ಬೃಹತ್ ಮೊತ್ತ ದಾಖಲಿಸಿತು. ಭರ್ತಿ 50 ಎಸೆತಗಳನ್ನು ಎದುರಿಸಿದ ಮಂಧನಾ 10 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 80 ರನ್ ಸಿಡಿಸಿದರು. ಸ್ಮತಿ ಮಂಧನಾ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಪೆರ್ರಿ ಗಳಿಕೆ 37 ಎಸೆತಗಳಿಂದ 58 ರನ್ (10 ಬೌಂಡರಿ, 4 ಸಿಕ್ಸರ್). ಮಂಧನಾ ಮತ್ತು ಎಸ್. ಮೇಘನಾ (28) ಮೊದಲ ವಿಕೆಟಿಗೆ 5.3 ಓವರ್ಗಳಿಂದ 51 ರನ್ ರಾಶಿ ಹಾಕಿದರು. ಬಳಿಕ ಮಂಧನಾ-ಪೆರ್ರಿ ಜೋಡಿಯಿಂದ 2ನೇ ವಿಕೆಟಿಗೆ 95 ರನ್ ಒಟ್ಟುಗೂಡಿತು. ರಿಚಾ ಘೋಷ್ ಅಜೇಯ 21 ರನ್ ಹೊಡೆದರು.
ಯುಪಿ ವಾರಿಯರ್ ಪರ ನಾಯಕಿ ಅಲಿಸ್ಸಾ ಹೀಲಿ ಅರ್ಧ ಶತಕದ ಮೂಲಕ ಮಿಂಚಿದರು. 38 ಎಸೆತಗಳಿಂದ 55 ರನ್ ಬಾರಿಸಿದರು (7 ಫೋರ್, 3 ಸಿಕ್ಸರ್). ಕಿರಣ್ ನವಿYರೆ (18), ದೀಪ್ತಿ ಶರ್ಮ (33) ಕೂಡ ಬಿರುಸಿನ ಆಟವಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ICC Womens T20 World Cup; ಪಾಕಿಸ್ಥಾನ ವಿರುದ್ಧ ಗೆಲುವಿನ ನಗೆ ಬೀರಿದ ಭಾರತ
Womens T20 World Cup: ಪಾಕ್ ವಿರುದ್ದದ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಟಾಸ್ ಸೋತ ಭಾರತ
INDvsBAN: ಟಿ20ಯಲ್ಲಿ ಭಾರತಕ್ಕೆ ಹೊಸ ಆರಂಭಿಕರು; ಶರ್ಮಾ ಜತೆ ಓಪನರ್ ಯಾರು?
T20 series: ಬಾಂಗ್ಲಾ ವಿರುದ್ಧ ಯುವ ದರ್ಬಾರ್
Women’s T20 World Cup: ಭಾರತಕ್ಕೆ ಎದುರಾಗಿದೆ ಪಾಕ್ ಸವಾಲು
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Bantwala: ಕೇಪು, ಅಳಿಕೆಯಲ್ಲಿ ಸಿಡಿಲು ಬಡಿದು ಮನೆಗೆ ಹಾನಿ
Railway: ಶೀಘ್ರವೇ ಬೆಂಗಳೂರು-ಮೈಸೂರು, ತುಮಕೂರು ನಮೋ ರ್ಯಾಪಿಡ್ ರೈಲು: ರೈಲ್ವೆ ಸಚಿವ
Padubidri: ರಸ್ತೆ ಅಪಘಾತ; ಗಾಯಾಳು ಸಾವು
Mangaluru: ಇಂಧನ ಸ್ಥಾಯಿ ಸಮಿತಿ ಸದಸ್ಯರಾಗಿ ಸಂಸದ ಕ್ಯಾ.ಬ್ರಿಜೇಶ್ ಚೌಟ ನೇಮಕ
PM Modi ನಾನು ಹೇಳಿದ್ದನ್ನು ಮಾಡಿ ತೋರಿಸಿದರೆ ಬಿಜೆಪಿ ಪರ ಪ್ರಚಾರ ಮಾಡುತ್ತೇನೆ: ಕೇಜ್ರಿವಾಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.