![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
![Kuruburu-Shanta](https://www.udayavani.com/wp-content/uploads/2025/02/Kuruburu-Shanta-415x249.jpg)
Team Udayavani, Aug 14, 2023, 11:05 PM IST
ಪಟಿಯಾಲ: ವಿಶ್ವ ಕುಸ್ತಿ ಚಾಂಪಿಯನ್ಶಿಪ್ಗಾಗಿ ಆ. 25 ಮತ್ತು 26ರಂದು ಆಯ್ಕೆ ಟ್ರಯಲ್ಸ್ ನಡೆಯಲಿದೆ ಎಂದು ತಾತ್ಕಾಲಿಕ ಸಮಿತಿ ಸೋಮವಾರ ಪ್ರಕಟಿಸಿದೆ. ಈ ಮೂಲಕ ಆಯ್ಕೆ ಟ್ರಯಲ್ಸ್ ಬಗೆಗಿನ ಅನಿಶ್ಚಿತತೆ ದೂರವಾಗಿದೆ. ಆದರೆ ಬಜರಂಗ್ ಪೂನಿಯ ಮತ್ತು ವಿನೇಶ್ ಪೊಗಟ್ ಟ್ರಯಲ್ಸ್ನಲ್ಲಿ ಭಾಗವಹಿಸುವ ಬಗ್ಗೆ ದೃಢಪಡಿಸಿಲ್ಲ.
ಏಷ್ಯನ್ ಗೇಮ್ಸ್ ಟ್ರಯಲ್ಸ್ಗೆ ಪೂನಿಯ ಮತ್ತು ಪೊಗಟ್ ಅವರಿಗೆ ವಿನಾಯಿತಿ ನೀಡಿದ ತಾತ್ಕಾಲಿಕ ಸಮಿತಿಯ ನಿರ್ಧಾರವನ್ನು ಕುಸ್ತಿ ಸಮುದಾಯದ ಬಹುತೇಕ ಮಂದಿ ತೀವ್ರವಾಗಿ ಟೀಕಿಸಿದ್ದರಿಂದ ಕೋಲಾಹಲ ಸೃಷ್ಟಿಯಾಗಿತ್ತು.
ಐಒಎ ನೇಮಕ ಮಾಡಿದ ತಾತ್ಕಾಲಿಕ ಸಮಿತಿಯು ಮುಂಬರುವ ವಿಶ್ವ ಟ್ರಯಲ್ಸ್ಗೆ ಯಾವುದೇ ಕುಸ್ತಿಪಟುವಿಗೆ ವಿನಾಯಿತಿ ನೀಡದಿರಲು ನಿರ್ಧರಿಸಿದೆ.
ಆದರೆ ಇದೀಗ ಬಜರಂಗ್ ಅಥವಾ ವಿನೇಶ್ ಪಾಲ್ಗೊಳ್ಳುವ ಬಗ್ಗೆ ದೃಢಪಡಿಸದಿರುವುದು ಕಿರಿಕಿರಿಯಾಗಿದೆ.
ಒಂದು ವೇಳೆ ಇವರಿಬ್ಬರು ಟ್ರಯಲ್ಸ್ನಲ್ಲಿ ಸ್ಪರ್ಧಿಸದಿದ್ದರೆ ಉಳಿದ ಕುಸ್ತಿಪಟುಗಳಿಗೆ ಇನ್ನುಳಿದ ಆರು ಒಲಿಂಪಿಕ್ ಕೆ.ಜಿ. ತೂಕ ವಿಭಾಗಗಳಲ್ಲಿ ಟ್ರಯಲ್ಸ್ ನಡೆಸುವ ಅಗತ್ಯವಿಲ್ಲ. ಯಾಕೆಂದರೆ ಈ ಕುಸ್ತಿಪಟುಗಳು ಈಗಾಗಲೇ ಏಷ್ಯನ್ ಗೇಮ್ಸ್ಗಾಗಿ ನಡೆದ ಟ್ರಯಲ್ಸ್ನಲ್ಲಿ ಭಾಗವಹಿಸಿದ್ದಾರೆ ಎಂದು ಹೆಸರು ಹೇಳಲಿಚ್ಛಿಸದ ತಾತ್ಕಾಲಿಕ ಸಮಿತಿಯ ಸದಸ್ಯರೊಬ್ಬರು ಹೇಳಿದ್ದಾರೆ.
ವಿಶ್ವ ಕುಸ್ತಿ ಚಾಂಪಿಯನ್ಶಿಪ್ ಸೆ. 16ರಿಂದ ಆರಂಭವಾಗಲಿದೆ. ಇದು 2024ರ ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಗಳಿಸಲು ಮೊದಲ ಅರ್ಹತಾ ಕೂಟವೂ ಆಗಿರಲಿದೆ.
IPL 2025: ಐಪಿಎಲ್ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ
Team India: ಪಂತ್-ರಾಹುಲ್ ವಿಚಾರದಲ್ಲಿ ಗಂಭೀರ್- ಅಗರ್ಕರ್ ನಡುವೆ ಭಿನ್ನಾಭಿಪ್ರಾಯ
IPL 2025: ಮತ್ತೊಬ್ಬ ಅಫ್ಘಾನಿ ಬೌಲರ್ ಬದಲು ಮುಂಬೈ ಇಂಡಿಯನ್ಸ್ ತಂಡದ ಸೇರಿದ ಮುಜೀಬ್
ODI Ranking: ನಂ.1 ಸ್ಥಾನದಲ್ಲೇ ಉಳಿದ ಭಾರತ, 4ಕ್ಕೆ ಜಿಗಿದ ನ್ಯೂಜಿಲೆಂಡ್
Team India: ʼನಾವು ನಟರಲ್ಲ..ʼ: ಟೀಂ ಇಂಡಿಯಾದ ಸೂಪರ್ಸ್ಟಾರ್ ಸಂಸ್ಕೃತಿ ಟೀಕಿಸಿದ ಅಶ್ವಿನ್
Air Lift: ಪಂಜಾಬ್ನಲ್ಲಿ ರೈತ ಮುಖಂಡ ಶಾಂತಕುಮಾರ್ಗೆ ಅಪಘಾತ; ಬೆಂಗಳೂರಿಗೆ ಏರ್ಲಿಫ್ಟ್
Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?
Bharamasagara: ವಿದ್ಯುತ್ ಕಿಡಿಗೆ ಎರಡು ಮೇವಿನ ಬಣವೆ ಸಂಪೂರ್ಣ ಭಸ್ಮ
Udayavani-MIC ನಮ್ಮ ಸಂತೆ: ತೆಂಗಿನ ಗರಟೆಯಲ್ಲಿ ಅರಳಿದ ಕಲಾಕೃತಿ
Udayavani-MIC ನಮ್ಮ ಸಂತೆ:ಮಣ್ಣಿನಿಂದ ಮಾಡಿದ ನಾನಾ ಉತ್ಪನ್ನ
You seem to have an Ad Blocker on.
To continue reading, please turn it off or whitelist Udayavani.