![7-uv-fusion](https://www.udayavani.com/wp-content/uploads/2025/02/7-uv-fusion-1-415x249.jpg)
![7-uv-fusion](https://www.udayavani.com/wp-content/uploads/2025/02/7-uv-fusion-1-415x249.jpg)
Team Udayavani, Jan 30, 2025, 7:23 AM IST
ಬೆಂಗಳೂರು: ರಾಜ್ಯ ಬಿಜೆಪಿಯ 23 ಸಂಘಟನ ಜಿಲ್ಲೆಗಳಿಗೆ ಅವಿರೋಧವಾಗಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, ನಿರೀಕ್ಷೆ ಯಂತೆ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ತಟಸ್ಥ ಬಣ ಮೇಲುಗೈ ಸಾಧಿಸಿದೆ. ಆದಾಗಿಯೂ ಜಿಲ್ಲಾಧ್ಯಕ್ಷರ ಆಯ್ಕೆಯಲ್ಲಿ ಏಕಪಕ್ಷೀಯ ನಿರ್ಧಾರ ವಾಗಿದೆ ಎಂದು ಅಲ್ಲಲ್ಲಿ ಆಕ್ಷೇಪ ವ್ಯಕ್ತವಾಗಿದ್ದು, ಚಿಕ್ಕಬಳ್ಳಾಪುರ ಸಂಸದ ಡಾ| ಕೆ. ಸುಧಾಕರ್ ಅವರು ವಿಜಯೇಂದ್ರ ವಿರುದ್ಧ ಸಿಡಿದೆದ್ದಿದ್ದಾರೆ.
ರಾಷ್ಟ್ರೀಯ ಮಾನದಂಡದ ಪ್ರಕಾರವೇ ಎಲ್ಲ ಜಿಲ್ಲಾಧ್ಯಕ್ಷರನ್ನು 45ರಿಂದ 60 ವರ್ಷದೊಳಗಿನವರನ್ನು ಮಾತ್ರ ನೇಮಕ ಮಾಡಲಾಗಿದ್ದು, ಜಾತಿ ಸಮೀಕರಣ, ಸಾಮಾಜಿಕ ನ್ಯಾಯ, ಸಂಘಟನೆಯ ಹಿನ್ನೆಲೆ ಸೇರಿದಂತೆ ಹಲವು ವಿಚಾರಗಳನ್ನು ಪರಿಗಣಿಸಲಾಗಿತ್ತು. ಬಿಜೆಪಿ ಮೂಲಗಳ ಪ್ರಕಾರ ಸರ್ವಸಮ್ಮತ ಅಭ್ಯರ್ಥಿಗೆ ಮಾತ್ರ ನಾಮಪತ್ರ ಸಲ್ಲಿಸಲು ಸೂಚನೆ ನೀಡಲಾಗಿತ್ತು. ಹೀಗಾಗಿ ಯಾವ ಜಿಲ್ಲೆಯಲ್ಲೂ ಮತದಾನ ನಡೆಸುವ ಪ್ರಮೇಯ ಸೃಷ್ಟಿಯಾಗಲಿಲ್ಲ.
ಜಿಲ್ಲಾಧ್ಯಕ್ಷರ ನೇಮಕಕ್ಕೆ ಸಂಬಂಧ ಪಟ್ಟಂತೆ ಕೋರ್ ಕಮಿಟಿ ಸಭೆಯಲ್ಲಿ ಆಕ್ಷೇಪ ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸಭೆ ನಡೆಸಿದ ಕೋರ್ ಕಮಿಟಿ ಸದಸ್ಯರು 3 ಜನ ಸಂಭಾವ್ಯರ ಹೆಸರನ್ನು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರಿಗೆ ಕಳುಹಿಸಿದ್ದರು. ಅಲ್ಲಿ ಪರಿಶೀಲಿಸಿ ಕ್ರಿಮಿನಲ್ ಮೊಕದ್ದಮೆ ಹೊಂದಿರುವ ಕೆಲವರನ್ನು ಹೊರತುಪಡಿಸಿ ಉಳಿದೆಲ್ಲ ದಕ್ಕೂ ಸಮ್ಮತಿ ಸೂಚಿಸಿದ್ದರು.
ಯಾವ ಸಮುದಾಯದವರು ಎಷ್ಟಿದ್ದಾರೆ?
ಜಿಲ್ಲಾಧ್ಯಕ್ಷರ ಪಟ್ಟಿಯಲ್ಲಿ ಹಿಂದುಳಿದ ವರ್ಗಕ್ಕೆ ಹೆಚ್ಚಿನ ಆದ್ಯತೆ ಲಭಿಸಿದೆ. 3ರಲ್ಲಿ 7 ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದಾರೆ. 9 ಜನ ಲಿಂಗಾಯಿತರು, 3 ಒಕ್ಕಲಿಗರು, 2 ಪರಿಶಿಷ್ಟ ಸಮುದಾಯ, ಇಬ್ಬರು ಬ್ರಾಹ್ಮಣರು ಈ ಪಟ್ಟಿಯಲ್ಲಿದ್ದಾರೆ. ಇವ ರಲ್ಲಿ 3 ಮಾಜಿ ಶಾಸಕರು, ಒಬ್ಬರು ಹಾಲಿ ಶಾಸಕರು ಹಾಗೂ ಒಬ್ಬರು ಮಹಿಳೆ ಸೇರಿದ್ದಾರೆ. ಬೆಳಗಾವಿ ಗ್ರಾಮಾಂತರ ಜಿಲ್ಲೆಯಲ್ಲಿ ಪಂಚಮಸಾಲಿ ಲಿಂಗಾಯತ ಸಮುದಾಯಕ್ಕೆ ಮಣೆ ಹಾಕಲಾಗಿದೆ. ಬೆಂಗಳೂರು ನಗರದ ಹಾಲಿ ಅಧ್ಯಕ್ಷರಾದ ಕೆ.ಸಿ. ರಾಮಮೂರ್ತಿ, ಎಸ್. ಹರೀಶ್ ಹಾಗೂ ಸಪ್ತಗಿರಿ ಗೌಡ ಅವರನ್ನು ಮುಂದುವರಿಸಲಾಗಿದೆ. 23ರಲ್ಲಿ 5 ಮಂದಿ ಹೊಸ ಮುಖಗಳಾಗಿವೆ.
ಒಟ್ಟು 25 ಸಂಘಟನಾ ಜಿಲ್ಲೆಗಳ ಜಿಲ್ಲಾಧ್ಯಕ್ಷರ ಆಯ್ಕೆ ನಡೆಸುವುದಕ್ಕೆ ಎಲ್ಲ ರೀತಿಯ ಸಿದ್ಧತೆ ನಡೆದಿತ್ತು. ಆದರೆ, ಚಿತ್ರದುರ್ಗ ಜಿಲ್ಲಾಧ್ಯಕ್ಷರ ಪಟ್ಟಿಗೆ ಅಂತಿಮಗೊಂಡ ಹೆಸರಿಗೆ ಹಿರಿಯ ಸಂಸದ ಗೋವಿಂದ ಕಾರಜೋಳ ಅಸಮ್ಮತಿ ವ್ಯಕ್ತಪಡಿಸಿದ್ದರಿಂದ ತಡೆ ಹಿಡಿಯಲಾಗಿದೆ.
Maha kumbh 2025: ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ ಸಚಿವ ಪ್ರಹ್ಲಾದ ಜೋಶಿ
ಪುನೀತ್ ರಾಜಕುಮಾರ್ ಹೃದಯ ಜ್ಯೋತಿ ಯೋಜನೆ ವಿಸ್ತರಣೆಗೆ ಚಿಂತನೆ: ದಿನೇಶ್ ಗುಂಡೂರಾವ್
Davanagere: ಕೆಪಿಸಿಸಿ ಅಧ್ಯಕ್ಷರ ಹುದ್ದೆ ಖಾಲಿ ಇಲ್ಲ: ಸಚಿವ ಕೆ.ಜೆ. ಜಾರ್ಜ್
ಭೀಕರ ಅಪಘಾತ: ಎರಡು ಕಾರುಗಳು ನುಜ್ಜುಗುಜ್ಜು, ಪವಾಡ ಸದೃಶ್ಯ ರೀತಿಯಲ್ಲಿ ಪಾರಾದ ಪ್ರಯಾಣಿಕರು
ದೇಶದ ಅಭಿವೃದ್ಧಿಗಾಗಿ ಪ್ರಧಾನಿ ಹುದ್ದೆಯನ್ನು ಬೇರೆಯವರಿಗೆ ಬಿಟ್ಟುಕೊಡಲಿ: ಸಂತೋಷ್ ಲಾಡ್
You seem to have an Ad Blocker on.
To continue reading, please turn it off or whitelist Udayavani.