
ಪಂಪನ ಊರಿಂದಲೇ 4 ಲಕ್ಷ ರೊಟ್ಟಿ ಬಂತು!
Team Udayavani, Feb 6, 2020, 3:05 AM IST

ಕಲಬುರಗಿ: ಪಂಪ ಅಂದ್ರೆ ಎಚ್ಚೆಸ್ವಿಗೆ ಕಾವ್ಯಪ್ರಾಣ. ಪಂಪಭಾರತ, ಆದಿಪುರಾಣವನ್ನು ಎಚ್ಚೆಸ್ವಿಯಷ್ಟು ಸೊಗಸಾಗಿ ವರ್ಣಿಸುವ ಮತ್ತೂಬ್ಬ ಕವಿ ಅಪರೂಪ. ಅದೇನು ಕಾಕತಾಳೀಯವೋ ಗೊತ್ತಿಲ್ಲ, ಎಚ್ಚೆಸ್ವಿ ಅಧ್ಯಕ್ಷತೆ ವಹಿಸಿದ ಸಮ್ಮೇಳನಕ್ಕೆ ಪಂಪನ ಹುಟ್ಟೂರಿನಿಂದಲೇ 4 ಲಕ್ಷ ರೊಟ್ಟಿ ಹರಿದು ಬಂದಿವೆ.
ಹೌದು, ಅಣ್ಣಿಗೇರಿ ಭಾಗದ ಮಹಿಳೆಯರಿಗೆ ಕಳೆದ 10 ದಿನಗಳಿಂದ ರೊಟ್ಟಿ ತಟ್ಟುವುದೇ ಕೆಲಸ. ಆ ತಟ್ಟುವಿಕೆ ಸದ್ದಿನಲ್ಲೇ ಅವರ ಕನ್ನಡದ ಸಂಗೀತ ಹೊಮ್ಮುತ್ತಿತ್ತು. ಸಮ್ಮೇಳನದ ಮೂರು ದಿನಕ್ಕೆ ಸುಮಾರು 8 ಲಕ್ಷ ರೊಟ್ಟಿ ಅಗತ್ಯವಿತ್ತು. ಅದರಲ್ಲಿ ಅರ್ಧದಷ್ಟು ರೊಟ್ಟಿಗಳನ್ನು ಪಂಪನ ಹುಟ್ಟೂರಿನಿಂದ ಬಂದರೆ, ಬಾಗಲಕೋಟೆ ಜಿಲ್ಲೆಯಿಂದ 3 ಲಕ್ಷ, ಕಲಬುರಗಿ ಜಿಲ್ಲೆಯಿಂದ 1 ಲಕ್ಷ ರೊಟ್ಟಿ ಮಾಡಿಸಲಾಗಿದೆ.
ಅಣ್ಣಿಗೇರಿಯ ಸುಮಾರು 600ಕ್ಕೂ ಅಧಿಕ ಮಂದಿ ರೊಟ್ಟಿ ತಯಾರಿಕೆಯಲ್ಲಿ ಪಾಲ್ಗೊಂಡಿದ್ದರು. ಲಾರಿಗಳ ಮೂಲಕ ರೊಟ್ಟಿಗಳನ್ನು ತರಲಾಗಿದ್ದು, ಮೊದಲ ದಿನವೇ 2 ಲಕ್ಷ ರೊಟ್ಟಿಗಳು ಕನ್ನಡಪ್ರೇಮಿಗಳ ಹಸಿವನ್ನು ನೀಗಿಸಿವೆ.
* ಸಿದ್ಧಯ್ಯಸ್ವಾಮಿ ಕುಕುನೂರು
ಟಾಪ್ ನ್ಯೂಸ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ

Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ

BSY: ಬಿಎಸ್ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್ಪಿಪಿ

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
MUST WATCH
ಹೊಸ ಸೇರ್ಪಡೆ

Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ

Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು

Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ

Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ

Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.