![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Jun 11, 2021, 7:10 PM IST
ಬೆಂಗಳೂರು: ರಾಜ್ಯದಲ್ಲಿಂದು ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಹಾಗೂ ಸಾವಿನ ಪ್ರಮಾಣ ಗಣನೀಯವಾಗಿ ಇಳಿಮುಖ ಕಂಡಿದೆ.
ಇಂದು ( ಜೂನ್ 11) ಸಂಜೆ ಕರ್ನಾಟಕ ಆರೋಗ್ಯ ಮತ್ತು ಕುಟುಂಬ ಕಲ್ಯಾಣನ ಇಲಾಖೆ ಬಿಡುಗಡೆ ಮಾಡಿರುವ ವರದಿಗಳ ಪ್ರಕಾರ ಕಳೆದ 24 ಗಂಟೆ ( ದಿನಾಂಕ : 10:06:2021, 00:00 ರಿಂದ 23:59 ರವರೆಗೆ)ಗಳ ಅವಧಿಯಲ್ಲಿ ಹೊಸದಾಗಿ 8249 ಜನರಿಗೆ ಕೋವಿಡ್ ಪಾಸಿಟಿವ್ ಸೋಂಕು ದೃಢ ಪಟ್ಟಿದೆ. ಹಾಗೂ ಇದೆ ಅವಧಿಯಲ್ಲಿ 159 ಜನರು ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ.
ಗುಣಮುಖರ ಸಂಖ್ಯೆ :
ಇನ್ನು ಮೇಲೆ ತಿಳಿಸಿದ ಅವಧಿಯಲ್ಲಿ 14975 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಈ ಮೂಲಕ ಸೋಂಕಿನಿಂದ ಗುಣಮುಖರಾದವರ ಸಂಖ್ಯೆ 2511105 ಏರಿಕೆಯಾಗಿದೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ :
ಬಾಗಲಕೋಟೆ-73, ಬಳ್ಳಾರಿ-189, ಬೆಳಗಾವಿ-436, ಬೆಂಗಳೂರು ಗ್ರಾಮಾಂತರ-234, ಬೆಂಗಳೂರು ನಗರ-1154, ಬೀದರ್-9, ಚಾಮರಾಜನಗರ-162, ಚಿಕ್ಕಬಳ್ಳಾಪುರ-168, ಚಿಕ್ಕಮಗಳೂರು-332, ಚಿತ್ರದುರ್ಗ-123, ದಕ್ಷಿಣ ಕನ್ನಡ-506, ದಾವಣಗೆರೆ-260, ಧಾರವಾಡ-217, ಗದಗ-66, ಹಾಸನ-733, ಹಾವೇರಿ-65, ಕಲಬುರಗಿ-29, ಕೊಡಗು-189, ಕೋಲಾರ-179, ಕೊಪ್ಪಳ-98, ಮಂಡ್ಯ-366, ಮೈಸೂರು-817, ರಾಯಚೂರು-61, ರಾಮನಗರ-57, ಶಿವಮೊಗ್ಗ-429, ತುಮಕೂರು-576, ಉಡುಪಿ-215, ಉತ್ತರ ಕನ್ನಡ-311, ವಿಜಯಪುರ-174, ಯಾದಗಿರಿ-21.
You seem to have an Ad Blocker on.
To continue reading, please turn it off or whitelist Udayavani.