![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Aug 17, 2022, 9:06 PM IST
ತೀರ್ಥಹಳ್ಳಿ: ಪ್ರತಿಷ್ಠಿತ ದೇವಸ್ಥಾನವೊಂದರಲ್ಲಿ ಪ್ರಸಾದ ಸ್ವೀಕರಿಸಿದ ಮಗುವೊಂದು ಸಾವಿನ ದವಡೆಯಿಂದ ಪಾರಾದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ.
ಮೂಲತಃ ಭಾರತಿಪುರದ ಮಗುವೊಂದನ್ನು ಎಂದಿನಂತೆ ದೇವಸ್ಥಾನಕ್ಕೆ ಕರೆ ತಂದಿದ್ದಾರೆ. ದೇವಸ್ಥಾನದಲ್ಲಿ ವಿಶೇಷ ಅರ್ಚನೆ ಮಾಡಿ ಪ್ರಸಾದ ನೀಡಿದ್ದಾರೆ.
ಪ್ರಸಾದದ ರೂಪದಲ್ಲಿ ನೀಡಿದ ಗರಿಕೆಯನ್ನು ಮಗುವು ಆಟವಾಡುವ ಭರದಲ್ಲಿ ಬಾಯಿಗೆ ಹಾಕಿಕೊಂಡಿದ್ದು ಮಗುವಿನ ಗಂಟಲಿನಲ್ಲಿ ಗರಿಕೆ ಹುಲ್ಲು ಸಿಕ್ಕಿ ಹಾಕಿಕೊಂಡಿದ್ದು ಮಗುವು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದು ತಕ್ಷಣವೇ ಮಗುವನ್ನು ಖಾಸಗಿ ಆಸ್ಪತ್ರೆಗೆ ಕರೆದೋಯ್ದರಾದರೂ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿತ್ತು. ಮಣಿಪಾಲ ಆಸ್ಪತ್ರೆಯಲ್ಲಿ ಗರಿಕೆ ಹುಲ್ಲು ತೆಗೆಯಲಾಗಿದೆ. ಮಗುವು ಒಟ್ಟಿನಲ್ಲಿ ಗರಿಕೆ ಹುಲ್ಲಿನ ಗಂಡಾಂತರದಿಂದ ಸಾವಿನ ದವಡೆಯಿಂದ ಪಾರಾಗಿ ಚೇತರಿಸಿಕೊಂಡಿದೆ.
ಇದನ್ನೂ ಓದಿ: ಗದಗ: ಮಗನಿಂದಲೇ ತಂದೆಯ ಬರ್ಬರ ಹತ್ಯೆ
You seem to have an Ad Blocker on.
To continue reading, please turn it off or whitelist Udayavani.